25.4 C
Karnataka
Wednesday, May 20, 2026
    Home Blog Page 11

    CET ಸಿಇಟಿ: ಪರಿಷ್ಕೃತ ರ್‍ಯಾಂಕಿಂಗ್ ಬಿಡುಗಡೆ ಮೊದಲ 500 ರ್‍ಯಾಂಕಿಂಗ್‌ನಲ್ಲಿ ವ್ಯತ್ಯಾಸವಾಗಿಲ್ಲ: ಅಶ್ವತ್ಥನಾರಾಯಣ

    BENGALURU OCT 1

    ಹೈಕೋರ್ಟ್ ಏಕಸದಸ್ಯ ಪೀಠದ ಆದೇಶದಂತೆ ಸಿಇಟಿ ರ್‍ಯಾಂಕಿಂಗ್‌ನ ಪರಿಷ್ಕೃತ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಶನಿವಾರ ಬಿಡುಗಡೆ ಮಾಡಿದೆ. ಜುಲೈ 30ರಂದು ಹೊರಡಿಸಿದ್ದ ರ್‍ಯಾಂಕಿಂಗ್ ಪಟ್ಟಿ ಮತ್ತು ಈಗಿನ ಪರಿಷ್ಕೃತ ಪಟ್ಟಿಯಲ್ಲಿ ಮೊದಲ 500 ರ್‍ಯಾಂಕಿಂಗ್‌ನಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.

    ಈ ಬಗ್ಗೆ ಮಾಹಿತಿ ನೀಡಿರುವ ಅವರು, ಹೋದ ವರ್ಷವೇ ದ್ವಿತೀಯ ಪಿಯುಸಿ ತೇರ್ಗಡೆ ಹೊಂದಿ ಈ ವರ್ಷವೂ ಸಿಇಟಿ ಬರೆದಿದ್ದ 24 ಸಾವಿರ ಅಭ್ಯರ್ಥಿಗಳು 2021ರಲ್ಲಿ ಗಳಿಸಿದ್ದ ಅಂಕಗಳಲ್ಲಿ ಶೇಕಡ 6ರಷ್ಟು ಅಂಕಗಳನ್ನು ಕಡಿತಗೊಳಿಸಿದ ನಂತರ ಆ ವರ್ಷದ ಅಂಕಗಳ ಶೇಕಡ 50ರಷ್ಟು ಮತ್ತು ಸಿಇಟಿಯಲ್ಲಿ ಪಡೆದ ಅಂಕಗಳ ಶೇಕಡ 50ರಷ್ಟನ್ನು ಪರಿಗಣಿಸಿ ಈ ಪರಿಷ್ಕೃತ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ ಹೋದ ವರ್ಷದ 14 ವಿದ್ಯಾರ್ಥಿಗಳು ಮಾತ್ರ 500ರಿಂದ 1,000ನೇ ರ್‍ಯಾಂಕ್ ಮಧ್ಯೆ ಸ್ಥಾನ ಪಡೆದಿದ್ದಾರೆ ಎಂದು ವಿವರಿಸಿದರು.

    ಹಾಗೆಯೇ, 501ರಿಂದ 10,000ನೇ ರ್‍ಯಾಂಕಿಂಗ್‌ನಲ್ಲಿ ಹೋದ ವರ್ಷದ 2,063 ಅಭ್ಯರ್ಥಿಗಳು ಮತ್ತು 22,022 ಅಭ್ಯರ್ಥಿಗಳು 10,001ದಿಂದ 1 ಲಕ್ಷದವರೆಗಿನ ರ್‍ಯಾಂಕಿಂಗ್‌ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಈ ಪರಿಷ್ಕೃತ ಪಟ್ಟಿಯು ಎಂಜಿನಿಯರಿಂಗ್, ಕೃಷಿ, ಯೋಗ, ನ್ಯಾಚುರೋಪತಿ ಕೋರ್ಸುಗಳಿಗೆ ಮಾತ್ರ ಅನ್ವಯವಾಗುತ್ತದೆ. ವೆಟರ್ನರಿ ಮತ್ತು ಫಾರ್ಮಸಿ ಕೋರ್ಸುಗಳಿಗೆ ಈ ಹಿಂದೆ ನೀಡಿರುವಂತೆ ಸಿಇಟಿ ಅಂಕಗಳನ್ನು ಮಾತ್ರ ಪರಿಗಣಿಸಿ ರ್‍ಯಾಂಕಿಂಗ್ ನಿರ್ಧರಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

    2021ರಲ್ಲಿ ಕೊರೋನಾ ಹಿನ್ನೆಲೆಯಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪ್ರಥಮ ಪಿಯುಸಿ ಅಂಕಗಳನ್ನು ಪರಿಗಣಿಸಿ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಪರೀಕ್ಷೆ ನಡೆಸದೆ ತೇರ್ಗಡೆಗೊಳಿಸಲಾಗಿತ್ತು. ಬಳಿಕ, ದ್ವಿತೀಯ ಪಿಯುಸಿ ಅಂಕಗಳನ್ನು ಮಾತ್ರ ಪರಿಗಣಿಸಿ ಅವರಿಗೆ ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಕೊಡಲಾಗಿತ್ತು. ಅಂಥವರ ಪೈಕಿ 24 ಸಾವಿರ ವಿದ್ಯಾರ್ಥಿಗಳು ಈ ವರ್ಷವೂ ಸಿಇಟಿ ಬರೆದಿದ್ದರು. ಇವರೆಲ್ಲ, ತಮ್ಮ ಸಿಇಟಿ ಅಂಕವನ್ನೂ ಪರಿಗಣಿಸಬೇಕೆಂದು ಕೋರಿ ಹೈಕೋರ್ಟಿನ ಮೆಟ್ಟಿಲು ಹತ್ತಿದ್ದನ್ನು ಇಲ್ಲಿ ಸ್ಮರಿಸಬಹುದು.

    ಅಕ್ಟೋಬರ್ 1 ರಂದುಮೈಸೂರಿನಲ್ಲಿ ಸ್ಟಾರ್ ಸುವರ್ಣ ವಾಹಿನಿಯ ಸುವರ್ಣೋತ್ಸವ

    ಕನ್ನಡ ಕಿರುತೆರೆಯಲ್ಲಿ ಸ್ಟಾರ್ ಸುವರ್ಣ ವಾಹಿನಿಯು ವೀಕ್ಷಕರನ್ನು ತನ್ನೆಡೆಗೆ ಸೆಳೆಯಲು , ವಿಭಿನ್ನ ರೀತಿಯ ಸದಾಭಿರುಚಿಯುಳ್ಳ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ. ಈಗಾಗಲೇ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಎಡೆಯೂರು ಶ್ರೀ ಸಿದ್ದಲಿಂಗೇಶ್ವರ , ಜೇನುಗೂಡು , ಮರಳಿಮನಸಾಗಿದೆ , ಬೆಟ್ಟದ ಹೂ ಧಾರಾವಾಹಿಗಳು ಪ್ರೇಕ್ಷಕರ ಮನಗೆದ್ದು ಮನೆಮಾತಾಗಿದೆ. ಈ ನಿಟ್ಟಿನಲ್ಲಿ ಸ್ಟಾರ್ ಸುವರ್ಣ ವಾಹಿನಿಯು ಆಯೋಜಿಸುತ್ತಿರುವ ‘ಸುವರ್ಣೋತ್ಸವ’ ಕಾರ್ಯಕ್ರಮವು ಈ ಬಾರಿಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುತ್ತಿದೆ.ಅಕ್ಟೋಬರ್ 1 ರಂದು ಶನಿವಾರ ಸಂಜೆ 5 ಗಂಟೆಗೆ ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಮೈದಾನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

    ಈ ಅದ್ದೂರಿ ಸಂಭ್ರಮಾಚರಣೆಯಲ್ಲಿ ‘ಬೊಂಬಾಟ್ ಭೋಜನ’ ಕಾರ್ಯಕ್ರಮ ಖ್ಯಾತಿಯ ಸಿಹಿ ಕಹಿ ಚಂದ್ರು, ‘ಮುದ್ದುಮಣಿಗಳು’ ಧಾರಾವಾಹಿ ಖ್ಯಾತಿಯ ಶಿವು ಹಾಗು ದೃಷ್ಟಿ , ‘ಬೆಟ್ಟದ ಹೂ’ ಧಾರಾವಾಹಿ ಕಲಾವಿದರಾದ ಹೂವಿ, ಸುನೇತ್ರ ಪಂಡಿತ್, ನಾರಾಯಣ ಸ್ವಾಮಿ ಮತ್ತಿತರ ಕಲಾವಿದರು ಒಂದೇ ವೇದಿಕೆ ಮೇಲೆ ಒಟ್ಟಾಗಿ ಬರುತ್ತಿದ್ದಾರೆ. ಸುವರ್ಣ ಪರಿವಾರದ ತಾರೆಯರೊಂದಿಗೆ ಹಾಡು, ಹರಟೆ, ಆಟಗಳ ಜೊತೆಗೆ ಮನೋರಂಜನೆಯ ಮಹಾಮೇಳವೇ ನಡೆಯಲಿದೆ.

    KCET: ಸಿಇಟಿ: ಪರಿಷ್ಕೃತ ರಾಂಕಿಂಗ್ ಶನಿವಾರ ಪ್ರಕಟ

    BENGALURU SEPT 30

    ಹೈಕೋರ್ಟ್ ಆದೇಶವನ್ನು ಮನ್ನಿಸಿ ಸಿದ್ಧಪಡಿಸಿರುವ ಸಿಇಟಿ ಪರಿಷ್ಕೃತ ರಾಂಕಿಂಗ್ ಪಟ್ಟಿಯನ್ನು ಶನಿವಾರ (ಅಕ್ಟೋಬರ್ 1) ಮಧ್ಯಾಹ್ನ 2 ಗಂಟೆಗೆ ಪ್ರಕಟಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ಅವರು ತಿಳಿಸಿದ್ದಾರೆ.

    ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ ಸೈಟ್ karresults.nic.in ನಲ್ಲಿ ನೋಡಬಹುದು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

    DASARA DOLLS:ನೋಡಲೆರಡು ಕಣ್ಣು ಸಾಲದು ದಸರಾ ಗೊಂಬೆಗಳ ನೋಡಲು..

    ಕನ್ನಡಪ್ರೆಸ್ ಕಾಮ್ ದಸರಾ ಗೊಂಬೆ ಹಬ್ಬಕ್ಕೆ ಪೋಟೋಗಳು ಹರಿದು ಬರುತ್ತಲೇ ಇವೆ. ಆಯ್ದ ಗೊಂಬೆ ಮನೆಯ ಮೊದಲ ಕಂತು ಇಲ್ಲಿದೆ.

    DASARA :ಇಂದಿನಿಂದ ದಸರಾ; ಎಲ್ಲೆಲ್ಲೂ ಸಡಗರ

    ಇಂದಿನಿಂದ ನಾಡಹಬ್ಬ. ಒಂಭತ್ತು ದಿನಗಳ ನವರಾತ್ರಿ ಆರಂಭ. ಮನೆ ಮನೆಗಳಲ್ಲೂ ಹಬ್ಬದ ಸಡಗರ. ಮೈಸೂರಿನಲ್ಲಿ ವಿಶ್ವ ವಿಖ್ಯಾತ ದಸರೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಚಾಲನೆ.

    ಈ ಒಂಭತ್ತು ದಿನಗಳು ಪೌರಾಣಿಕವಾಗಿ , ಐತಿಹಾಸಿಕವಾಗಿ ತನ್ನದೇ ಆದ ಪ್ರಾಮುಖ್ಯತೆ ಹೊಂದಿವೆ. ಗಮಕ ವ್ಯಾಖ್ಯಾನದ ಮೂಲಕ ಕನ್ನಡಿಗರ ಮನೆ ಮಾತಾಗಿರುವ ಕರ್ನಾಟಕ ಕಲಾಶ್ರೀ ಸತ್ಯವತಿ ರಾಮನಾಥ ಅವರು ಕನ್ನಡಪ್ರೆಸ್ ಯೂ ಟ್ಯೂಬ್ ಚಾನಲ್ ನಲ್ಲಿ ನವರಾತ್ರಿ ಆಚರಣೆಯ ಹಿಂದಿನ ಉದ್ದೇಶವನ್ನು ವಿವರವಾಗಿ ಚರ್ಚಿಸಿದ್ದಾರೆ. ಈ ಕೆಳಗಿನ ಲಿಂಕ್ ಮೂಲಕ ಆ ವಿಡಿಯೋ ನೋಡಬಹುದು. ಇದರ ಜೊತೆಗೆ ಲತಾ ಶ್ರೀಕಾಂತ್ ಮತ್ತು ನಯನಾ ಶ್ರೀಕಾಂತ್ ಅವರು ಹಾಡಿರುವ ಹಾಡುಗಳು ದಸರಾ ಸಂಭ್ರಮ ಹೆಚ್ಚಿಸಿವೆ.

    ಇದರ ಜೊತಗೆ ಆ ಒಂಭತ್ತು ದಿನವೂ ಕನ್ನಡಪ್ರೆಸ್ ಯೂ ಟ್ಯೂಬ್ ಚಾನಲ್ ನಲ್ಲಿ ದಸರಾ ಸಂಗೀತೋತ್ಸವ ನಡೆಯುತ್ತಿದೆ. ನಮ್ಮ ಚಾನಲ್ ಗೆ ಸಬ್ ಸ್ಕ್ರೈಬ್ ಆಗುವ ಮೂಲಕ ವೀಕ್ಷಿಸ ಬಹುದಾಗಿದೆ.

    ನಮ್ಮೆಲ್ಲಾ ಓದುಗರಿಗೂ ನವರಾತ್ರಿಯ ಶುಭಾಶಯಗಳು.

    MYSURU DASARA :ನಾಳೆ ದಸರಾ ಉದ್ಘಾಟನೆಗೆ ರಾಷ್ಟ್ರಪತಿಗಳ ಆಗಮನ; ಸಚಿವ ಎಸ್.ಟಿ.ಸೋಮಶೇಖರ್ ರವರಿಂದ ಪೂರ್ವಸಿದ್ಧತೆ ಪರಿಶೀಲನೆ

    MYSURU SEP 25

    ದಸರಾ ಮಹೋತ್ಸವದ ಉದ್ಘಾಟನೆ ಹಾಗೂ ರಾಷ್ಟ್ರಪತಿಯವರ ಆಗಮನದ ಹಿನ್ನೆಲೆಯಲ್ಲಿ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಇಂದು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ಪೂರ್ವಸಿದ್ಧತೆ ಪರಿಶೀಲಿಸಿದರು.

    ವೇದಿಕೆ ಸಿದ್ಧತೆ, ಗಣ್ಯರು, ಅಧಿಕಾರಿಗಳು, ಸಾರ್ವಜನಿಕರಿಗೆ ಆಸನದ ವ್ಯವಸ್ಥೆ, ಭದ್ರತಾ ವ್ಯವಸ್ಥೆ ಸೇರಿದಂತೆ ಎಲ್ಲಾ ರೀತಿಯ ಸಿದ್ಧತೆಗಳ ಪರಿಶೀಲನೆ ನಡೆಸಿದರು. ಜಿಲ್ಲಾಧಿಕಾರಿಗಳು ಕಾರ್ಯಕ್ರಮದ ಸಂಪೂರ್ಣ ಮಾಹಿತಿ ನೀಡಿದರು.

    ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ದಸರಾದ ಎಲ್ಲಾ ಸಿದ್ಧತೆ ಅಂತಿಮವಾಗಿದೆ. ರಾಷ್ಟ್ರಪತಿ ಕಚೇರಿಯಿಂದ ಬಂದ ಸೂಚನೆಯಂತೆ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮ ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ. ಸಾವಿರಕ್ಕೂ ಅಧಿಕ ಮಂದಿ ಕಾರ್ಯಕ್ರಮ ವೀಕ್ಷಿಸಬಹುದಾಗಿದೆ ಎಂದರು.

    ವೇದಿಕೆ ಮೇಲೆ ರಾಷ್ಟ್ರಪತಿಗಳು ಸೇರಿದಂತೆ 13 ಗಣ್ಯರು ಇರಲಿದ್ದಾರೆ. ಸೋಮವಾರ ಬೆಳಗ್ಗೆ 9 ಗಂಟೆಗೆ ಮೈಸೂರಿಗೆ ಆಗಮಿಸುವ ರಾಷ್ಟ್ರಪತಿಗಳು, ದೇವಸ್ಥಾನಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯಲಿದ್ದಾರೆ. ನಂತರ ವೇದಿಕೆಗೆ ಆಗಮಿಸಿ ದಸರಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬಳಿಕ ಬುಡಕಟ್ಟು ಸಮುದಾಯವರನ್ನು ಭೇಟಿ ಮಾಡಿ ಹುಬ್ಬಳ್ಳಿಗೆ ತೆರಳಲಿದ್ದಾರೆ ಎಂದು ಹೇಳಿದರು.

    ದಸರಾ ಮಹೋತ್ಸವದ ಉದ್ಘಾಟನೆ ಹಾಗೂ ರಾಷ್ಟ್ರಪತಿಯವರ ಆಗಮನದ ಹಿನ್ನೆಲೆಯಲ್ಲಿ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಇಂದು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ಪೂರ್ವಸಿದ್ಧತೆ ಪರಿಶೀಲಿಸಿದರು.

    ಬುಡಕಟ್ಟು ಜನರ ಭೇಟಿ, ರಾಷ್ಟ್ರಪತಿಗಳೊಂದಿಗೆ ಫೋಟೋ ತೆಗೆಸಿಕೊಳ್ಳುವುದಕ್ಕೆ
    ದೇವಸ್ಥಾನದ ಬಲಭಾಗದಲ್ಲಿ ವ್ಯವಸ್ಥೆ ಮಾಡಲಾಗಿದೆ. ಹುಣಸೂರು, ಪಿರಿಯಾಪಟ್ಟಣ, ಎಚ್.ಡಿ.ಕೋಟೆ ಭಾಗದಿಂದ ಬುಡಕಟ್ಟು ಸಮುದಾಯದ 14 ಜನರು ಆಗಮಿಸಲಿದ್ದಾರೆ ಎಂದು ಹೇಳಿದರು.

    ರಾಷ್ಟ್ರಪತಿಗಳೊಂದಿಗೆ ವೇದಿಕೆ ಹಂಚಿಕೊಳ್ಳಬಾರದೆಂದು ಆಪ್ ಪತ್ರ ಬರೆದಿರುವ ವಿಚಾರ ಕುರಿತ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಇದರಲ್ಲಿ ಅನಾವಶ್ಯಕವಾಗಿ ನನ್ನ ಹೆಸರನ್ನು ಪ್ರಸ್ತಾಪಿಸಲಾಗಿದೆ. ಇದರಲ್ಲಿ ರಾಜಕೀಯ ಮಾಡುತ್ತಿದ್ದು, ಅದನ್ನು ರಾಜಕೀಯವಾಗಿ ಎದುರಿಸುತ್ತೇನೆ ಎಂದರು.

    ನಾವು ಬಿಡಿಎ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ವರ್ಕ್ ಆರ್ಡರ್‌ ನೀಡಿದ್ದಾರೆ. ಇದರಲ್ಲಿ ನಮ್ಮ ಪಾತ್ರ ಇಲ್ಲ, ಯಾವುದೇ ವ್ಯವಹಾರ ಇಲ್ಲ. ಕಡತಗಳು ಅಧ್ಯಕ್ಷರಿಗೆ ಬರಲ್ಲ ಮತ್ತು ಯಾವ ಕಡತಕ್ಕೂ ಸಹಿ ಕೂಡ ಹಾಕಿಲ್ಲ. ಹಣಕಾಸಿನ ಯಾವುದೇ ವ್ಯವಹಾರ ಮಾಡಿಲ್ಲ. ರಾಜಕೀಯವಾಗಿ ಮಾಡಿದ್ದಾರೆ, ರಾಜಕೀಯವಾಗಿ ಎದುರಿಸುತ್ತೇನೆ ಎಂದು ಹೇಳಿದರು.

    ಈ ಸಂದರ್ಭದಲ್ಲಿ ಸಂಸದರಾದ ಪ್ರತಾಪ್ ಸಿಂಹ, ಮೈಸೂರು ಮೇಯರ್ ಶಿವಕುಮಾರ್, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಪೊಲೀಸ್ ಕಮಿಷನರ್ ಚಂದ್ರಗುಪ್ತ, ಅಪರ ಜಿಲ್ಲಾಧಿಕಾರಿ ಮಂಜುನಾಥ್ ಸ್ವಾಮಿ ಸೇರಿದಂತೆ ಹಲವಾರು ಅಧಿಕಾರಿಗಳು ಉಪಸ್ಥಿತರಿದ್ದರು.

    ಹಿರಿಯ ನಾಯಕ ಎಸ್.ಎಂ ಕೃಷ್ಣ ಆರೋಗ್ಯವಾಗಿದ್ದಾರೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

    BENGALURU SEP 25

    ರಾಜ್ಯದ ಹಿರಿಯ ನಾಯಕರು, ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರು ಆರೋಗ್ಯ ಚೇತರಿಕೆಯಾಗಿದೆ. ಎರಡು, ‌ಮೂರು ದಿನಗಳಲ್ಲಿ ಆಸ್ಪತ್ರೆಯಿಂದ ಅವರು ಮನೆಗೆ ತೆರಳಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ತಿಳಿಸಿದರು.

    ಇಂದು ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ, ಹಿರಿಯ ನಾಯಕ ಎಸ್.ಎಂ ಕೃಷ್ಣ ಅವರ ಆರೋಗ್ಯ ವಿಚಾರಿಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

    ರಾಜ್ಯದ ಹಿರಿಯ ನಾಯಕ ಎಸ್ ಎಂ ಕೃಷ್ಣ ಜ್ವರದಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ವೈದೇಹಿ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರಿಂದ ಮಣಿಪಾಲ್ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ‌ ಹೇಳಿದರು.

    ನಿರಂತರ ಚಿಕಿತ್ಸೆಯಿಂದ ಈಗ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಎರಡು ಮೂರು ದಿನಗಳಲ್ಲಿ ಅವರು ಡಿಸ್ಚಾರ್ಜ್ ಆಗುತ್ತಾರೆ. ರಾಜ್ಯದ ಜನರು ಯಾವುದೇ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದರು.

    ರಾಷ್ಟ್ರಪತಿಗಳಿಂದ ನಾಳೆ ದಸರಾ ಉದ್ಘಾಟನೆ

    ನಾಳೆಯ ದಸರಾ ಉದ್ಘಾಟನೆಗೆ ಗೌರವಾನ್ವಿತ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರು ಆಗಮಿಸುತ್ತಿದ್ದಾರೆಮ ಅವರಿಂದ ಚಾಮುಂಡೇಶ್ವರಿ ದೇವಿ ಪೂಜೆ ಮತ್ತು ದಸರಾ ಉದ್ಘಾಟನೆ ನಡೆಯಲಿದೆ. ರಾಜ್ಯದಲ್ಲಿ ವಿಜೃಂಭಣೆಯಿಂದ ದಸರಾ ಆಚರಣೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

    ಯಾರನ್ನೋ ಅನುಸರಿಸುವುದಕ್ಕಿಂತ ಅರಿತು ಹೂಡಿಕೆ ಮಾಡಬೇಕು

    ಷೇರುಪೇಟೆ ಹೂಡಿಕೆ ಎಂದರೆ ಹೆಚ್ಚಿನವರಿಗೆ ಬಹು ಆಕರ್ಷಣೀಯವಾಗಿರುತ್ತದೆ.  ಕಾರಣ ಹೆಚ್ಚಿನ ಶ್ರಮವಿಲ್ಲದೆ ಸುಲಭವಾಗಿ ಹಣ ಸಂಪಾದಿಸಬಹುದೆಂಬ ಭ್ರಮೆ.  ಷೇರುಪೇಟೆಯು ಸಧ್ಯದ ಮಟ್ಟಿಗೆ ಹೇಳಬೇಕಾದರೆ ಅದು ಒಂದು ರೀತಿಯ ಬ್ರಾಂತುಲೋಕವಾಗಿದೆ.  ಕಾರಣ ಹೆಚ್ಚಿನ ಬೆಳವಣಿಗೆಗಳು ಸಾಮಾನ್ಯರ ಕಲ್ಪನೆಗೂ ಎಟುಕದ ರೀತಿಯಲ್ಲಿರುತ್ತವೆ.  ಆದರೂ ಇಲ್ಲಿ ಸ್ವಲ್ಪಮಟ್ಟಿನ ಸಾಮಾನ್ಯ ಜ್ಞಾನವನ್ನು ಬಳಸಿ ಅಧ್ಯಯನಾಧಾರಿತವಾಗಿ ಚಟುವಟಿಕೆ ನಡೆಸಿದಲ್ಲಿ ಯಶಸ್ಸು ಕಾಣಬಹುದಾಗಿದೆ.  

    ಷೇರುಪೇಟೆಯ ನಿಯಂತ್ರಕರಾದ ʼ ಸೆಬಿ ʼ ಹೇಳುವಂತೆ  ಯಾರನ್ನೋ ಅನುಸರಿಸುವುದಕ್ಕಿಂತ ಅರಿತು ಹೂಡಿಕೆ ಮಾಡಬೇಕು,  ಅದೇ ಯಶಸ್ಸಿನ ಮೂಲ ಮಂತ್ರ.  ಕೇವಲ ಕೆಲವು ದಿನಗಳು,  ತಿಂಗಳು ಹೂಡಿಕೆ ಮಾಡಲಿರುವುದಕ್ಕೆ ಇಷ್ಟೆಲ್ಲಾ ಯೋಚನೆ ಏಕೆ? ಎಂದು ನಿರ್ಲಕ್ಷಿಸುವಂತಿಲ್ಲ.   ಕಾರಣ, ಹೂಡಿಕೆ ಮಾಡಲಿರುವ ಕಂಪನಿಯ ಬಗ್ಗೆ ಅರಿಯದೆ  ನಾವು ನಿರ್ಧರಿಸಿದರೆ ಯಾವ ರೀತಿಯ ಗೊಂದಲದ ಪರಿಸ್ಥಿತಿ ಉಂಟಾಗಬಹುದೆಂಬುದು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ.  ಅಲ್ಪಕಾಲೀನ ಹೂಡಿಕೆ ಎಂದು ನಿರ್ಧರಿಸಿದರೂ ಕೆಲವೊಮ್ಮೆ ವರ್ಷಗಟ್ಟಲೆ ಹೂಡಿಕೆ ಮುಂದುವರೆಸಿಕೊಳ್ಳಬೇಕಾದ ಪರಿಸ್ಥಿತಿ ಉಂಟಾಗಬಹುದು, ಕೆಲವೊಮ್ಮೆ ಕಂಪನಿ ರೋಗಗ್ರಸ್ಥವಾಗಿ ಲಿಸ್ಟಿಂಗ್‌ ನಿಂದ ನಿರ್ಗಮಿಸಿದರೆ ಶಾಶ್ವತ ಹೂಡಿಕೆದಾರರಾಗಬೇಕಾಗಬಹುದು.

    ಒಂದು ಮನೆಯನ್ನು ಖರೀದಿಸುವಾಗ ಅದು ಇರುವ ಸ್ಥಳ, ವಾತಾವರಣ, ಮಾರಾಟಗಾರರ ಮಾಲಿಕತ್ವ ದಾಖಲೆಗಳು,   ಕಟ್ಟಡದ ಗುಣಮಟ್ಟ, ಕಟ್ಟಡಕ್ಕೆ ಹಾಕಿರುವ ಬುನಾದಿ, ಎಲ್ಲಕ್ಕೂ ಮಿಗಿಲಾಗಿ ಆ ಮನೆಯನ್ನು ಯಾವ ಗಾತ್ರದ ನಿವೇಶನದಲ್ಲಿ ಕಟ್ಟಲಾಗಿದೆ, ಮುಂತಾದವುಗಳನ್ನು ಪರಿಶೀಲಿಸುತ್ತೇವೆ.  ಅದರಂತೆಯೇ ಒಂದು ಷೇರು ಖರೀದಿಗೆ ಮುನ್ನ ಆ ಕಂಪನಿಯ ಯೋಗ್ಯತಾ ಮಟ್ಟವನ್ನು ಮಾಪನಮಾಡಿ ನಿರ್ಧರಿಸುವುದು ಅತ್ಯವಶ್ಯಕ.   ಆರಂಭದಲ್ಲಿ ಕೇವಲ ಪೇಟೆಯ ಬೆಲೆಯೊಂದೇ ಮುಖ್ಯವಲ್ಲ  ಖರೀದಿಸುವ ಷೇರಿನ ಮುಖಬೆಲೆ ಏನು ಅದಕ್ಕನುಗುಣವಾಗಿ ಷೇರಿನ ಬೆಲೆಯನ್ನು ಮಾಪನ ಮಾಡಬೇಕು.   ನಂತರ ಇತರೆ ಮಾನದಂಡಗಳಾದ ಕಂಪನಿಯ ಸಾಧನೆ, ಚಟುವಟಿಕೆಯ ವಲಯ, ಆ ವಲಯಕ್ಕಿರುವ ಭವಿಷ್ಯ, ಕಂಪನಿಯ ಆಡಳಿತ ಮಂಡಳಿಯ ಗುಣಮಟ್ಟ, ಅವರು ಹೂಡಿಕೆದಾರಿ ಸ್ನೇಹ ಚಿಂತನಾ ಮನಸ್ಕರೇ ಮುಂತಾದವುಗಳನ್ನರಿಯಬೇಕು.  ಏನೂ ಅರಿಯದೆ ಕೇವಲ ಅಲಂಕಾರಿಕ ಪ್ರಚಾರ,  ವಿಚಾರಗಳ ಮೇಲೆ ನಿರ್ಧರಿಸಿದಲ್ಲಿ ಅಪಾಯಕ್ಕೆ ಆಹ್ವಾನವಿತಂತೆ.  ಹೂಡಿಕೆ ಮಾಡುವಾಗ ಕಂಪನಿಗಳ ಆಂತರಿಕ ಸದೃಢ ಗುಣಗಳ ಬಗ್ಗೆ ತಿಳಿವಳಿಕೆ ಅತ್ಯವಶ್ಯ.  ಕಂಪನಿಗಳು ಉತ್ಪಾದನಾ ವಲಯದಲ್ಲಿದ್ದು, ಉತ್ತಮ ಸ್ಥಿರ ಮತ್ತು ಚರ ಆಸ್ತಿಯನ್ನು ಹೊಂದಿರುವುದು ಉತ್ತಮ.

    ಕೆಲವು ನಿದರ್ಶನಗಳನ್ನು ಪರಿಶೀಲಿಸೋಣ:

    1.  2015: ಯು ಪಿ ಹೋಟೆಲ್ಸ್  ಲಿಮಿಟೆಡ್‌   ಕಂಪನಿಯು 2001 ರಲ್ಲಿ ಬಾಂಬೆ ಸ್ಟಾಕ್ಎಕ್ಸ್ಚೇಂಜ್  ನಲ್ಲಿ ವಹಿವಾಟಿಗೆ ಲಿಸ್ಟಿಂಗ್  ಮಾಡಿಕೊಂಡಿತು.  ಈ ಕಂಪನಿಯು 2011 ರಲ್ಲಿ ಪ್ರತಿ ಷೇರಿಗೆ ರೂ.10 ರಂತೆ, 2012 ಮತ್ತು 2013 ರಲ್ಲಿ ಪ್ರತಿ ಷೇರಿಗೆ ರೂ.5 ರಂತೆ ಲಾಭಾಂಶವನ್ನು ವಿತರಿಸಿದ ಕಂಪನಿಯಾಗಿದೆ.  ಕಾರಣಾಂತರಗಳಿಂದ  2015 ರಲ್ಲಿ ಕಂಪನಿಯ ಷೇರುಗಳನ್ನು ವಹಿವಾಟಿನಿಂದ ಅಮಾನತುಗೊಳಿಸುವ ಮೂಲಕ ಹೂಡಿಕೆದಾರರ ಹಣವು ನಿಶ್ಕ್ರಿಯಗೊಂಡಿತು.     ಆದರೆ ಸುಮಾರು 7 ವರ್ಷಗಳ ನಂತರ ಕಂಪನಿಯು ಎಲ್ಲಾ ಲೋಪಗಳನ್ನು ಸರಿಪಡಿಸಿಕೊಂಡು ಈ ವರ್ಷದ ಮಾರ್ಚ್ ನಲ್ಲಿ ಲಿಸ್ಟಿಂಗ್ ಮಾಡಿಕೊಂಡು ವಹಿವಾಟಾಗಲು  ಆರಂಭಿಸಲಾಯಿತು.  60 ವರ್ಷಗಳ ಇತಿಹಾಸವುಳ್ಳ ಈ ಕಂಪನಿ  ಈಗ  ರೂ.500 ರ ಸಮೀಪ ವಹಿವಾಟಾಗುತ್ತಿದೆ. ಅಂದರೆ ಸಂಪೂರ್ಣ ನಶಿಸಿ ಹೋಗಿದ್ದ ಮೌಲ್ಯವು ಪುಟಿದೆದ್ದು ಉತ್ತಮ ಲಾಭ ಗಳಿಸಿಕೊಟ್ಟಿರುವುದು ಕಂಪನಿಯಲ್ಲಡಗಿರುವ ಆಂತರಿಕ ಸ್ವತ್ತು ಮತ್ತು ಆಡಳಿತ ಮಂಡಳಿಯ ಚಿಂತನೆಯಾಗಿದೆ.

    2.  2001 : ಬರೋಡಾ ರೆಯಾನ್  ಕಾರ್ಪೊರೇಷನ್   ಲಿಮಿಟೆಡ್ಕಂಪನಿಯು 2001 ರಿಂದಲೂ ಕಾರಣಾಂತರಗಳಿಂದ ಅಮಾನತುಗೊಂಡಿದ್ದು, ಹೂಡಿಕೆದಾರರ ಹಣವು ನಿಶ್ಕ್ರಿಯಗೊಂಡು ಪೂರ್ತಿಯಾಗಿ ನಶಿಸಿದೆ ಎಂದು ಭಾವಿಸಿದ್ದರೆ  20 ವರ್ಷಗಳ ನಂತರ ಈ ವರ್ಷ ಜೂನ್1 ರಿಂದ  ಅಮಾನತ್ತನ್ನು ತೆರವುಗೊಳಿಸಿಕೊಂಡು  ಪುನ: ಲೀಸ್ಟಿಂಗ್  ಮಾಡಿಕೊಂಡಿತು. ಆರಂಭದ ದಿನ ರೂ.4.42 ರಲ್ಲಿದ್ದ ಷೇರಿನ ದರವು ರೂ.160 ಕ್ಕೆ ಕೇವಲ ಮೂರೇ ತಿಂಗಳ ಅಂತರದಲ್ಲಿ ಪುಟಿದೆದ್ದಿರುವ ನಿದರ್ಶನವು  ಷೇರುಪೇಟೆಯ ವಿಸ್ಮಯಕಾರಿ ಗುಣ.

    3. ಹಿಂದೂಸ್ಥಾನ್‌ಫುಡ್ಸ್‌  ಲಿಮಿಟೆಡ್‌1997 ರಲ್ಲಿ ಅಮಾನತುಗೊಂಡಿತ್ತು.  2012 ರಲ್ಲಿ ಆ ಕಂಪನಿಯು ಮತ್ತೊಮ್ಮೆ ವಹಿವಾಟಿಗೆ ಬಿಡುಗಡೆಯಾಯಿತು.    ಜುಲೈ 2022 ರಲ್ಲಿ ಷೇರಿನ ಮುಖಬೆಲೆಯನ್ನು ರೂ.10 ರಿಂದ ರೂ.2 ಕ್ಕೆ ಸೀಳಿದೆ. ಈಗಲೂ  ರೂ.460 ರ ಸಮೀಪದಲ್ಲಿ ವಹಿವಾಟಾಗುತ್ತಿದೆ.

    4. ,   ಆರ್ಟೆಕ್‌ ಪವರ್‌ ಪ್ರಾಡಕ್ಟ್ಸ್‌ ಲಿಮಿಟೆಡ್‌ ಕಂಪನಿಯು 2001 ರಲ್ಲಿ ಅಮಾನತುಗೊಂಡಿತ್ತು.  2012 ರಲ್ಲಿ ಅಮಾನತನ್ನು ತೆರವುಗೊಳಿಸಿಕೊಂಡು ಪುನ: ವಹಿವಾಟಿಗೆ ಬಿಡುಗಡೆಯಾಯಿತು.   2015 ರಲ್ಲಿ ಕಂಪನಿ ಹೆಸರನ್ನು  ಆರ್ಟೆಕ್‌ಪವರ್‌ ಅಂಡ್‌ ಟ್ರೇಡಿಂಗ್‌ ಲಿಮಿಟೆಡ್‌ಎಂದು ಬದಲಿಸಿಕೊಂಡಿತು. 2020 ರಲ್ಲಿ ಮತ್ತೆ ವಹಿವಾಟಿನಿಂದ ಅಮಾನತುಗೊಂಡಿತು.


    5.  ನೈಲೋಫಿಲ್ಸ್‌ ಲಿಮಿಟೆಡ್‌ ಕಂಪನಿಯು 2002 ರಿಂದಲೂ ವಿಧಿಸಿದ್ದ   ಅಮಾನತನ್ನು 2012 ರಲ್ಲಿ  ತೆರವುಗೊಳಿಸಿಕೊಂಡು ಪೇಟೆಯನ್ನು ಮರು ಪವೇಶಿಸಿತು.   ಈ ಕಂಪನಿಯ ಹೆಸರನ್ನು ಆರ್ವ್‌ ಇನ್‌ಫ್ರಾಟೆಲ್‌ ಲಿಮಿಟೆಡ್‌ ಎಂದು 2016 ರಲ್ಲಿ ಬದಲಾಯಿಸಿಕೊಂಡಿತು.
    6. ಐ ಎಫ್‌ಎಂ ಇಂಪೆಕ್ಸ್‌ ಗ್ಲೋಬಲ್‌ ಲಿಮಿಟೆಡ್‌ ಕಂಪನಿಯ ಮೇಲೆ 2002 ರಲ್ಲಿ ವಿಧಿಸಿದ್ದ ಅಮಾನತು  ತೆರವುಗೊಳಿಸಿಕೊಂಡು 2012 ರಲ್ಲಿ ರಿಲೀಸ್ಟಿಂಗ್‌ ಮಾಡಿಕೊಂಡಿತು.  ಈ  ಕಂಪನಿ ತನ್ನ ಹೆಸರನ್ನು 2018 ರಲ್ಲಿ ಎನ್‌ ಎಂ ಎಸ್‌ ರಿಸೋರ್ಸಸ್‌ಗ್ಲೋಬಲ್‌  ಲಿಮಿಟೆಡ್‌ಎಂದು ಬದಲಿಸಿಕೊಂಡಿದೆ.


    7. 2005 ರಲ್ಲಿ ಅಮಾನತುಗೊಂಡಿದ್ದ ಕಂಪನಿಯಾದ  ಸೀಕ್ವೆಲ್ ಇ ರೂಟರ್ಸ್ ಲಿಮಿಟೆಡ್,  2012 ರಲ್ಲಿ ಎಲ್ಲಾ ನ್ಯೂನ್ಯತೆಗಳನ್ನು ತೆರವುಗೊಳಿಸಿಕೊಂಡು ರಿಲೀಸ್ಟ್‌ ಮಾಡಿಕೊಂಡಿತು.   ಈ ಕಂಪನಿ 2017 ರಲ್ಲಿ ತನ್ನ ಹೆಸರನ್ನು ಕ್ರಾಫ್ಟನ್ಡೆವೆಲಪರ್ಸ್ಲಿಮಿಟೆಡ್( KKRRAFTON Developers Ltd) ಎಂದು ಬದಲಿಸಿಕೊಂಡು  ವಹಿವಾಟಾಗುತ್ತಿತ್ತು, ಸೆಪ್ಟೆಂಬರ್2022 ರಲ್ಲಿ ಕಂಪನಿಯು ಷೇರುವಿನಿಮಯ ಕೇಂದ್ರಕ್ಕ ಪಾವತಿಸ ಬೇಕಾದ ಲೀಸ್ಟಿಂಗ್ಫೀಸ್ಪಾವತಿಸಲು ಅಸಮರ್ಥವಾದ ಕಾರಣ ಅಮಾನತುಗೊಳಿಸಲಾಯಿತು.


    8. 1983 ರಿಂದಲೂ ಬಾಂಬೆ ಸ್ಟಾಕ್‌ ಎಕ್ಸ್‌ ಚೇಂಜ್‌ ನಲ್ಲಿ ಲೀಸ್ಟಿಂಗ್‌ ಮಾಡಿಕೊಂಡು ಹಲವಾರು ವರ್ಷ ಆಕರ್ಷಣೀಯ ಮಟ್ಟದಲ್ಲಿ ವಿಜೃಂಭಿಸಿದ ಓಸ್ವಾಲ್‌ ಆಗ್ರೋ ಮಿಲ್ಸ್‌ ನ ಪ್ರವರ್ತಕರಾದ  ಅಭಯ್‌ ಓಸ್ವಾಲ್‌  ರವರ ಓಸ್ವಾಲ್‌ ಗ್ರೀನ್‌ ಟೆಕ್‌ ( ಹಿಂದೆ ಈ ಕಂಪನಿ ಹೆಸರು ಬಿಂದಾಲ್‌ ಆಗ್ರೋ ಲಿಮಿಟೆಡ್‌ ಎಂದಿತ್ತು)  ಕಂಪನಿಯು 2011 ರಲ್ಲಿ 14.17% ರಷ್ಟು ಭಾಗಿತ್ವವನ್ನು ಎನ್‌ ಡಿ ಟಿ ವಿ ಕಂಪನಿಯಲ್ಲಿ ರೂ.24.4 ಕೋಟಿ ಹೂಡಿಕೆಯ ಮೂಲಕ ಪಡೆದುಕೊಂಡಿದ್ದರು.  2016 ರಲ್ಲಿ 9.75% ಭಾಗಿತ್ವವನ್ನು ರೂ.51 ಕೋಟಿಗೆ ಮಾರಾಟಮಾಡಿದರು. ಉಳಿದ 4.42% ಭಾಗಿತ್ವವನ್ನು ಶೀಘ್ರವೇ ಮಾರಾಟಮಾಡುವುದಾಗಿ ಕಂಪನಿ ತಿಳಿಸಿತ್ತು.


    ಈ ರೀತಿಯ ಅನಿರೀಕ್ಷಿತ ಬೆಳವಣಿಗೆಗಳು, ಹಲವಾರು ಬಾರಿ ಅಸಹಜಮಯ ಘಟನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿವೆ.   ಇದಕ್ಕೆ ಮುಖ್ಯ ಕಾರಣ ಷೇರುಪೇಟೆ ಬಗ್ಗೆ ಮಾಹಿತಿ ಇಲ್ಲದೆ, ಇತ್ತೀಚೆಗೆ ಪೇಟೆ ಪ್ರವೇಶಿಸುತ್ತಿರುವವರ ಸಂಖ್ಯೆಯು ಅತಿ ಹೆಚ್ಚಾಗುತ್ತಿದೆ.  ಕಳೆದ ಎರಡು ತಿಂಗಳುಗಳಲ್ಲಿ ಬಾಂಬೆ ಸ್ಟಾಕ್‌ ಎಕ್ಸ್‌ ಚೇಂಜ್‌ ನ ಅಂಕಿ ಅಂಶಗಳ ಪ್ರಕಾರ,  ಸುಮಾರು 46 ಲಕ್ಷ ಹೊಸ ಹೂಡಿಕೆದಾರರು ಪೇಟೆ ಪ್ರವೇಶಿಸಿದ್ದಾರೆ, ಅದಕ್ಕನುಗುಣವಾಗಿ ಹೂಡಿಕೆಗೆ ಲಭ್ಯವಿರುವ ಕಂಪನಿಗಳ ಸಂಖ್ಯೆ ಏರಿಕೆ ಕಂಡಿಲ್ಲ.  ಈ ಹೂಡಿಕೆದಾರರ ದಟ್ಟಣೆಯೂ ಸಹ ಈ ರೀತಿಯ ಅಸಹಜಮಯ ಏರಿಳಿತಗಳಿಗೆ ಕಾರಣವಾಗಿ, ಪೇಟೆಯನ್ನು ಬೇಗ ಬೇಗ ಡ್ರಾ- ಬೇಗ ಬೇಗ ಬಹುಮಾನ ಎಂಬುವ ಪರಿಸ್ಥಿತಿಗೆ ತಳ್ಳಿದೆ.  ಆದರೆ ಹೂಡಿಕೆ ಎಂದು ಪರಿಶೀಲಿಸಿದಾಗ VALUE PICK – PRAFIT BOOK ಸುಲಭ ಸಮೀಕರಣವು  RTMM ( real time market movement ) ಪದ್ಧತಿ ಮೂಲಕ ಸ್ವಲ್ಪ ಮಟ್ಟಿನ ಯಶಸ್ಸು ತಂದು ಕೊಡಬಹುದಾಗಿದೆ.

    Disclaimer: ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    Doll festival:ಕನ್ನಡಪ್ರೆಸ್ ಗೊಂಬೆ ಹಬ್ಬ-2022

    ನವರಾತ್ರಿ-dasara- ಬಂತೆಂದರೆ ಮನೆ ಮನೆಯಲ್ಲಿ ಗೊಂಬೆ -doll festival-ಕೂಡಿಸುವ ಸಂಭ್ರಮ. ಹಳೇ ಮೈಸೂರು ಭಾಗದಲ್ಲಿ ಇದರ ಸಂಭ್ರಮ ಹೆಚ್ಚು. ಒಂದೊಂದು ಮನೆಯಲ್ಲೂ ನೂರಾರು ಗೊಂಬೆಗಳು. ಮಹಾಭಾರತ, ರಾಮಾಯಣ, ಶ್ರೀನಿವಾಸ ಕಲ್ಯಾಣ, ಗಿರಿಜಾ ಕಲ್ಯಾಣ ಎಲ್ಲವೂ ಗೊಂಬೆ ರೂಪದಲ್ಲಿ ಜೀವ ತಾಳುವುದುಂಟು.

    ಎಲ್ಲರೂ ಎಲ್ಲರ ಮನೆಯ ಗೊಂಬೆ ಹಬ್ಬವನ್ನು ಕಣ್ತುಂಬಿಕೊಳ್ಳಲಿ ಎಂಬ ಉದ್ದೇಶದಿಂದ ಕನ್ನಡಪ್ರೆಸ್.ಕಾಮ್ ವೇದಿಕೆ ಕಲ್ಪಿಸಿದೆ. ನಿಮ್ಮ ಮನೆಯಲ್ಲಿ ಕೂಡಿಸಿರುವ ಗೊಂಬೆಗಳ ಫೋಟೋವನ್ನು ಕೆಳಗಿನ ನಂಬರಿಗೆ ವಾಟ್ಸಾಪ್ ಮಾಡಿ ಅಥವಾ ಇ ಮೇಲ್ ಮಾಡಿ. ನಾವದನ್ನು ಸುಂದರ ಆಲ್ಬಂ ಮಾಡಿ ಪ್ರಕಟಿಸುತ್ತೇವೆ. ಆ ಮೂಲಕ ನಿಮ್ಮ ಮನೆಯ ಗೊಂಬೆ ಅಲಂಕಾರ ಎಲ್ಲರ ಮನೆ ಮನವನ್ನು ಮುಟ್ಟುತ್ತದೆ. ವಾಟ್ಸಪ್ ನಂಬರ್ 7483010618 ಇ ಮೇಲ್ [email protected]

    CET RANKING ಬಿಕ್ಕಟ್ಟು ಶಮನ: ಸೆ.29ರಂದು ಪರಿಷ್ಕೃತ RANKING ಪ್ರಕಟ, ಅ.3ರಿಂದ ಕೌನ್ಸೆಲಿಂಗ್

    BENGALURU SEP 23

    ವೃತಿಪರ ಕೋರ್ಸ್ ಗಳ ಸಿಇಟಿ RANKINGಗೆ ಸಂಬಂಧಿಸಿದಂತೆ ಉಂಟಾಗಿದ್ದ ಬಿಕ್ಕಟ್ಟನ್ನು ಬಗೆಹರಿಸಲು ರಾಜ್ಯ ಸರಕಾರ ನೇಮಿಸಿದ್ದ ಸಮಿತಿಯ ವರದಿಯನ್ನು ಹೈಕೋರ್ಟ್ ಒಪ್ಪಿಕೊಂಡಿದೆ. ಇದು ಸ್ವಾಗತಾರ್ಹವಾಗಿದ್ದು, ಪರಿಷ್ಕೃತ ಸಿಇಟಿ RANKING ಪಟ್ಟಿಯನ್ನು ಇದೇ 29ರಂದು ಬಿಡುಗಡೆ ಮಾಡಲಾಗುವುದು. ಜತೆಗೆ ಅಕ್ಟೋಬರ್‌ 3ರಿಂದ ಪ್ರವೇಶಾತಿ ಮೊದಲ ಸುತ್ತಿನ ಕೌನ್ಸೆಲಿಂಗ್ ಆರಂಭಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

    ಶುಕ್ರವಾರ ಈ ಬಗ್ಗೆ ಮಾತನಾಡಿರುವ ಅವರು, ಸಮಸ್ಯೆಯನ್ನು ಬಗೆಹರಿಸಲು ಒಂದು ಸಮನ್ವಯ ಸೂತ್ರ ರೂಪಿಸುವಂತೆ ಸೂಚಿಸಿತ್ತು. ಅದರಂತೆ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ಬಿ. ತಿಮ್ಮೇಗೌಡರ ಅಧ್ಯಕ್ಷತೆಯಲ್ಲಿ ಐವರ ಸಮಿತಿ ರಚಿಸಿ, ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದೆವು. ನ್ಯಾಯಾಲಯವು ಸಮಿತಿ ಕೊಟ್ಟ ವರದಿಯನ್ನು ಪುರಸ್ಕರಿಸಿರುವುದು ಸಂತಸ ತಂದಿದೆ ಎಂದಿದ್ದಾರೆ.

    error: Content is protected !!