33.6 C
Karnataka
Friday, May 10, 2024

    ಅಕ್ಟೋಬರ್ 1 ರಂದುಮೈಸೂರಿನಲ್ಲಿ ಸ್ಟಾರ್ ಸುವರ್ಣ ವಾಹಿನಿಯ ಸುವರ್ಣೋತ್ಸವ

    Must read

    ಕನ್ನಡ ಕಿರುತೆರೆಯಲ್ಲಿ ಸ್ಟಾರ್ ಸುವರ್ಣ ವಾಹಿನಿಯು ವೀಕ್ಷಕರನ್ನು ತನ್ನೆಡೆಗೆ ಸೆಳೆಯಲು , ವಿಭಿನ್ನ ರೀತಿಯ ಸದಾಭಿರುಚಿಯುಳ್ಳ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ. ಈಗಾಗಲೇ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಎಡೆಯೂರು ಶ್ರೀ ಸಿದ್ದಲಿಂಗೇಶ್ವರ , ಜೇನುಗೂಡು , ಮರಳಿಮನಸಾಗಿದೆ , ಬೆಟ್ಟದ ಹೂ ಧಾರಾವಾಹಿಗಳು ಪ್ರೇಕ್ಷಕರ ಮನಗೆದ್ದು ಮನೆಮಾತಾಗಿದೆ. ಈ ನಿಟ್ಟಿನಲ್ಲಿ ಸ್ಟಾರ್ ಸುವರ್ಣ ವಾಹಿನಿಯು ಆಯೋಜಿಸುತ್ತಿರುವ ‘ಸುವರ್ಣೋತ್ಸವ’ ಕಾರ್ಯಕ್ರಮವು ಈ ಬಾರಿಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುತ್ತಿದೆ.ಅಕ್ಟೋಬರ್ 1 ರಂದು ಶನಿವಾರ ಸಂಜೆ 5 ಗಂಟೆಗೆ ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಮೈದಾನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

    ಈ ಅದ್ದೂರಿ ಸಂಭ್ರಮಾಚರಣೆಯಲ್ಲಿ ‘ಬೊಂಬಾಟ್ ಭೋಜನ’ ಕಾರ್ಯಕ್ರಮ ಖ್ಯಾತಿಯ ಸಿಹಿ ಕಹಿ ಚಂದ್ರು, ‘ಮುದ್ದುಮಣಿಗಳು’ ಧಾರಾವಾಹಿ ಖ್ಯಾತಿಯ ಶಿವು ಹಾಗು ದೃಷ್ಟಿ , ‘ಬೆಟ್ಟದ ಹೂ’ ಧಾರಾವಾಹಿ ಕಲಾವಿದರಾದ ಹೂವಿ, ಸುನೇತ್ರ ಪಂಡಿತ್, ನಾರಾಯಣ ಸ್ವಾಮಿ ಮತ್ತಿತರ ಕಲಾವಿದರು ಒಂದೇ ವೇದಿಕೆ ಮೇಲೆ ಒಟ್ಟಾಗಿ ಬರುತ್ತಿದ್ದಾರೆ. ಸುವರ್ಣ ಪರಿವಾರದ ತಾರೆಯರೊಂದಿಗೆ ಹಾಡು, ಹರಟೆ, ಆಟಗಳ ಜೊತೆಗೆ ಮನೋರಂಜನೆಯ ಮಹಾಮೇಳವೇ ನಡೆಯಲಿದೆ.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!