22.7 C
Karnataka
Monday, May 20, 2024

    ವೇದಾಂತ ಸಾಮ್ರಾಜ್ಯ ಚಕ್ರವರ್ತಿ ಆಚಾರ್ಯ ಮಧ್ವರು

    Must read

    ದ್ವೈತ ಸಿದ್ಧಾಂತದ ಪ್ರತಿಪಾದಕ ಆಚಾರ್ಯ ಮಧ್ವರು ಅದೃಶ್ಯರಾಗಿರುವ ದಿನವನ್ನು
    ಮಧ್ವನವಮಿ” ಎಂದು ಆಚರಿಸಲಾಗುತ್ತದೆ.ಶ್ರೀ ಮಧ್ವಾಚಾರ್ಯರು 79 ವರ್ಷಗಳ ಸಾರ್ಥಕ ಬದುಕನ್ನು ಸಮಾಪ್ತಿಗೊ ಳಿ ಸಿದ ಪುಣ್ಯದಿನವೇ ಮಧ್ವನವಮಿ.

    ವೇ ದಾಂತ ದರ್ಶನದ ಪ್ರವರ್ತಕರಲ್ಲಿ ದಕ್ಷಿಣ ಭಾರತದ ಮೂವರು ಯತಿವರೇ ಣ್ಯರು ಪ್ರಮುಖರು. ಆದಿಶಂಕಾರಾಚಾ ರ್ಯರು, ರಾಮಾನುಜಾಚಾರ್ಯರು ಮತ್ತು ಮಧ್ವಾಚಾರ್ಯರು.ಈ ಮೂವರು ಯತಿವರೇ ಣ್ಯರ ನ್ನು “ಆಚಾರ್ಯ ತ್ರಯ ರೆಂದು” ಪರಿಗಣಿಸಿ ದ್ದಾರೆ.

    ಈ ಮೂವರು ಯತಿಗಳು ಬ್ರಹ್ಮ ಸೂತ್ರಗಳು,ಉಪನಿಷತ್ ಗಳು ಹಾಗು ಭಗವದ್ಗೀತೆಯೆಂಬ ಪ್ರಸ್ಥಾನತ್ರಯೀಗಳಿಗೆ ತಮ್ಮ ತಮ್ಮ ಸಿದ್ಧಾಂತದ ಅನುಗುಣವಾಗಿ ಭಾಷ್ಯ ಗಳನ್ನು ರಚಿಸಿದ್ದಾರೆ.
    ದ್ವೈತ ಸಿದ್ದಾಂತವೆಂದು ಪ್ರಸಿದ್ಧವಾಗಿರುವ ಮಧ್ವಾಚಾರ್ಯರಿಂದ ಪ್ರತಿಪಾದಿಸಲ್ಪಟ್ಟ ಮಾಧ್ವ ಸಿದ್ದಾಂತದ ಹೆಸರು ಬ್ರಂಹಮೀಮಾಂಸ ಶಾಸ್ತ್ರ ಅಥವಾ ತತ್ತ್ವವಾದ.

    ಕ್ರಿ.ಶ .1238 ರಲ್ಲಿ ಉಡುಪಿಯ ಹತ್ತಿರ ಇರುವ ಪಾಜಕ ಎಂಬಲ್ಲಿ ಮಧ್ಯಗೇ ಹ ಭಟ್ಟರು(ನಾರಾಯಣಾ ಚಾ ರ್ಯರು) ಮತ್ತು ವೇ ದಾವತಿ ದಂಪತಿಗಳಿಗೆ ವಿಜಯದಶಮಿಯಂದು ಜನಿಸಿದರು.ಈ ಗಂಡು ಮಗುವಿಗೆ “ವಾಸುದೇವ ಎಂದು ನಾಮಕರಣ ಮಾಡಿದರು. ತೋಟಿಮ್ ತಿಲ್ಲಾಯ ರ್ ಗುರುಕುಲದಲ್ಲಿ ವೇದ ವಿದ್ಯೆ ಕಲಿತರು. ಗುರುಕುಲಾಭ್ಯಾಸ ಪೂರ್ಣಗೊ ಳಿ ಸಿದ ನಂತರ ಉಡುಪಿಯ ಅಚ್ಯುತ ಪ್ರೇಕ್ಷಾಚಾರ್ಯ ರಿಂದ ಸನ್ಯಾಸ ದೀಕ್ಷೆ ಪಡೆದರು.ಆಗ ಅವರಿಗೆ “ಪೂರ್ಣ ಪ್ರಜ್ಞ “ಎಂದು ಮರುನಾಮಕರಣ ವಾಯಿತು.

    ಸನ್ಯಾಸ ದೀಕ್ಷೆ ಪಡೆದುಕೊಂಡ ನಂತರ ಹಲವಾರು ಪಂಡಿತರನ್ನು ವೇ ದಾಂತ ತರ್ಕದಲ್ಲಿ ಸೋಲಿಸಿದರು.ಇದರಿಂದ ಸಂತೊಷ ಗೊಂಡ ಅಚ್ಯುತ ಪ್ರೇ ಕ್ಷಕರು ಪೂರ್ಣ ಪ್ರಜ್ಞ ರಿಗೆ ” ವೇ ದಾಂತ ಸಾಮ್ರಾಜ್ಯ ಚಕ್ರವರ್ತಿ ” ಎಂಬ ಬಿರುದನ್ನು ಕೊಟ್ಟರು.ಆನಂತರ
    ವೇದದ ಬಲಿಷ್ಠ ಸೂಕ್ತದಲ್ಲಿ ಇರುವ ಮಧ್ವ ಹೆಸರನ್ನು ಆಯ್ದುಕೊಂಡು ಆ ಹೆಸರಿನಲ್ಲಿಯೇ ಗ್ರಂಥ ರಚಿಸಿದ ಕಾರಣ ಅವರು”ಮಧ್ವಾಚಾರ್ಯರೆಂದು”ಪ್ರಸಿದ್ಧ ರಾದರು.
    ಮೊದಲು ತ್ರೇತಾಯುಗ ದಲ್ಲಿ ಹನುಮಂತನಾಗಿ ರಾಮಬಂ ಟ ನೆನಿಸಿ ,ದ್ವಾಪರ ಯುಗದಲ್ಲಿ ಭೀಮಸೇನರಾಗಿ ಈ ಕಲಿಯುಗದಲ್ಲಿ ಪೂರ್ಣ ಪ್ರಜ್ಞ ರೆನಿಸಿ ವೇ ದವ್ಯಾಸರ ಸೇ ವೆಮಾಡಿ ಭಾಗವತ್ ಕಾರ್ಯ ಸಾಧನೆಗಳ ನ್ನು ಮಾಡಿದವರು ಶ್ರೀಮಧ್ವಾಚಾರ್ಯರು.ಇದನ್ನೇ ಪುರಂದರದಾಸರು “ಹನುಮ ಭೀಮ ಮಧ್ವ ಮುನಿಯ ನೆನೆದು ಬದುಕಿರೊ. ಹನುಮ ನಮ್ಮ ತಾಯಿ-ತಂದೆ, ಭೀಮ ನಮ್ಮ ಬಂಧು ಬಳ ಗ ಆನಂದತೀರ್ಥರೆ ನಮ್ಮ ಗತಿಗೋತ್ರ ವಯ್ಯಾ” ಎಂದು ಹೇಳಿ ದ್ದಾರೆ.

    ಶ್ರೀ ಮಧ್ವಾಚಾರ್ಯರು ತಮ್ಮ ಕೃತಿಗಳನ್ನು ಸಂಸ್ಕೃತ ದಲ್ಲಿ ರಚಿಸಿದ್ದಾರೆ.ಅವರ ಗ್ರಂಥಗಳನ್ನು ಸರ್ವಮೂಲಗ್ರಂಥಗ ಳು ಎಂದು ಕರೆಯಲಾಗಿದೆ.ಗೀತಾಭಾಷ್ಯ,ಗೀತತಾತ್ಪರ್ಯ, ಅನು ವ್ಯಾಖ್ಯಾನ,ನ್ಯಾಯ ವಿವರಣ ,ಅಣು ಭಾಷ್ಯ,ಮಹಾಭಾರತ ತಾತ್ಪರ್ಯ ನಿ ರ್ಣಯ,ತಂತ್ರಸಾರ ಸಂಗ್ರಹ,ಸದಾ ಚಾರ ಸ್ಮೃತಿ ಮುಂತಾದ 38 ಗ್ರಂಥಗಳನ್ನು ರಚಿಸಿದ್ದಾರೆ.

    ದ್ವೈತ ಅಂದರೆ ಎರಡು ಎಂಬುದನ್ನು ತೋರಿಸಿ ಪರಮಾತ್ಮ-ಜೀವಾತ್ಮ ಬೇರೆ ಬೇರೆ ಎಂದು ಸಾರಿದರು.ಹರಿಯೇ ಸರ್ವೋತ್ತಮ ಉಳಿದ ದೇ ವತೆಗಳೆಲ್ಲಾ ಅವನ ಅಧೀನರಾಗಿದ್ದು ಅವರವರ ಜ್ಞಾನಕ್ಕನುಗುಣವಾಗಿ ವಿವಿಧ ಕಕ್ಷೆಯಲ್ಲಿ ಬರುವ ಕಾರಣ ಅದಕ್ಕನುಗುಣ ವಾಗಿ ಅವರ ಉಪಾಸನೆ ಮಾಡಬೇ ಕೆಂಬುದು ಮಧ್ವಾಚಾರ್ಯರ ವಾದವಾಗಿತ್ತು.

    ದೇವರು ಬಿಂಬ ಮತ್ತು ಜೀವ ಅವನ ಪ್ರತಿಬಿಂಬ ಹಾಗಾಗಿ ಆಚಾರ್ಯರು ” ಹರಿ ಸರ್ವೂತ್ತಮ ವಾಯು ಜೀವೋತ್ತಮ ” ಎಂಬ ದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದರು.
    ಭಕ್ತಿ ಹಾಗು ದೇ ವರ ಬಗ್ಗೆ ಜ್ಞಾನ ದಿಂದ ಎಲ್ಲರೂ ಮೋ ಕ್ಷ ಹೊಂದ ಬಹುದೆಂದು ಪ್ರತಿಪಾದಿಸಿದರು.

    ಆಚಾರ್ಯ ಮಧ್ವರುದ್ವೈತ ವೇ ದಾಂತ ತತ್ವ ಶಾಸ್ತ್ರವನ್ನು ವಿಕಸನಗೊ ಳಿ ಸಲು ಹಲವಾರು ಬಾರಿ ಭಾರತದಲ್ಲಿ ಸಂಚ ರಿಸಿದರು.ಹಿಂದೂ ಪವಿತ್ರ ಸ್ಥಳಗಳಿಗೆ, ಹಿಂದೂ ಕಲಿಕಾ ಕೇಂದ್ರ ಗಳಿ ಗೆ ಭೇಟಿ ನೀಡಿ ತತ್ತ್ವ ಜ್ಞಾನಿಗಳ ಜೊತೆ ಚರ್ಚೆ ನಡೆಸಿದರು.ಕ್ರಿ.ಶ . 1285 ರಲ್ಲಿ ಶ್ರೀ ಕೃಷ್ಣನ ಮೂರ್ತಿಯನ್ನು ಉಡುಪಿಯಲ್ಲಿ ಪ್ರತಿಷ್ಟಾಪಿಸಿ ಅಷ್ಠ ಮಠ ವನ್ನುಸ್ಥಾಪಿಸಿದರು.

    79 ವರ್ಷಗಳ ಕಾಲ ಸಾರ್ಥಕ ಬದುಕನ್ನುಬಾಳಿ ದರು.ಪಿಂಗಳ ಸಂವತ್ಸರ ಮಾಘ ಶುದ್ಧ ನವಮಿದಿನ ಉಡುಪಿಯ ಅನಂತೇಶ್ವರ ಗುಡಿಯಲ್ಲಿ ಶಿಷ್ಯರಿಗೆ ಪಾಠ ಮಾಡಿದರು.ಪಾಠ ಮುಗಿಯುತ್ತಿದ್ದಂತೆ ಮುಸಲಧಾರೆಯಂತೆ ಪುಷ್ಪವೃಷ್ಟಿ ಯಾಯಿತು.ನಂತರ ಶಿಷ್ಯರಿಗೆ ಗುರುಗಳು ಕಾಣಿ ಸಲಿಲ್ಲ ಅದೃಶ್ಯ ರಾಗಿದ್ದರು. ಇಂದಿಗೂ ಸಹ ಬದರಿಯಲ್ಲಿ ಮಧ್ವಾಚಾರ್ಯರು ವೇದ ವ್ಯಾಸರ ಸೇವೆ ಮಾಡಿ ಕೊಂಡಿದ್ದಾರೆ ಎಂದು ಮಧ್ವಾಚಾರ್ಯರ ಅನುಯಾಯಿಗಳ ನಂಬಿಕೆ.ಹಾಗಾಗಿ ಮಘ ಶುದ್ಧ ನವಮಿಯನ್ನು ಮಧ್ವ ಜಯಂತಿ, ಮಧ್ವ ನವಮಿ ಎಂದು ಆಚರಿಸುತ್ತಾರೆ.

    ಕ್ರಿ.ಶ .1238 ರಲ್ಲಿ ಕರ್ನಾಟಕದಲ್ಲಿ ಅವತರಿಸಿದ ಮಧ್ವಾಚಾರ್ಯರು “ಹರಿ ಸರ್ವೂತ್ತಮ ವಾಯು ಜೀವೂತ್ತಮ” ಎಂಬ ದ್ವೈತ ತತ್ವ ವನ್ನು ಪ್ರತಿಪಾದಿಸುವ ಮೂಲಕ ನಮ್ಮ ದೇ ಶ ದಲ್ಲಿ ಹಿಂದೂ ಧರ್ಮವನ್ನು ಎತ್ತಿ ಹಿಡಿದ ಪ್ರಾಥ:ಸ್ಮರಣೀಯ ಮಹಾನುಭಾವರು.

    ರತ್ನಾ ಶ್ರೀನಿವಾಸ್ ಅವರು ಮೂಲತಃ ಹಾಸನ ಜಿಲ್ಲೆ ಅರಸೀಕೆರೆ ಯವರು.  ಪ್ರಾಥಮಿಕ ಪದವಿಯನ್ನು ಅರಸೀಕೆರೆಯಲ್ಲಿ ಪಡೆದು ಮುಂಬಯಿನಲ್ಲಿ  ಎಂ.ಎ ಎಂ.ಫಿಲ್  ಪಡೆದು ಪ್ರಸ್ತುತ ಆದಿತ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ & ರಿಸರ್ಚ್, ಯಲಹಂಕ, ಇಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.  ಇವರ ಚಾರುವಸಂತದ ಆಯಾಮ ಅನನ್ಯತೆ ಸಂಪ್ರಬಂಧದ  ಪುಸ್ತಕವಾಗಿ ಅಭಿಜಿತ್ ಪ್ರಕಾಶನ ಮುಂಬೈನಿಂದ ಪ್ರಕಟವಾಗಿದೆ.

    spot_img

    More articles

    1 COMMENT

    LEAVE A REPLY

    Please enter your comment!
    Please enter your name here

    Latest article

    error: Content is protected !!