ಬೌಂಡ್ ಲೆಸ್ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ

ವಿ. ಎಸ್ . ನಾಯಕ

ಕಲಾವಿದನಾದವನಿಗೆ ಕಲೆಯು ಯಾವ ರೀತಿಯಲ್ಲಿ ಆದರೂ ಆಕರ್ಷಿಸಬಹುದು. ತಾನು ನೋಡಿದ್ದನ್ನು ಅನುಭವಿಸಿದ್ದನ್ನು ತಿಳಿದಿದ್ದನ್ನು ತನಗೆ ಅರಿವಿಲ್ಲದೆ ಕುಂಚದಲ್ಲಿ ಚಿತ್ರಿಸಿ ವಿಭಿನ್ನವಾದ ಕಲಾಕೃತಿಗಳನ್ನು ರಚಿಸಿ ಒಂದು ವಿಸ್ಮಯಕಾರಿ ತಾಣಕ್ಕೆ ನಮ್ಮನ್ನು ಕೊಂಡಯ್ಯುತ್ತಾನೆ . ಅದೇ ರೀತಿ ಇಲ್ಲಿ ಒಂದು ಅಚ್ಚರಿಯ ಕಲಾ ಲೋಕವೇ ಧರೆಗಿಳಿದು ಬಂದಂತೆ ಕಾಣುತ್ತಿದೆ.

ಗಿಳಿಯಾಲ್ ಜಯರಾಮ್ ಭಟ್

ಪ್ರಖ್ಯಾತ ಕಲಾವಿದರಾದ ಗಿಳಿಯಾಲ್ ಜಯರಾಮ್ ಭಟ್ ರವರ ಕುಂಚದಲ್ಲಿ ಯಾರು ಊಹಿಸಲಾಗದ ಒಂದಕ್ಕಿಂತ ಒಂದು ವಿಭಿನ್ನ ಕಲಾಕೃತಿಗಳು ರಚಿಸಲ್ಪಟ್ಟಿವೆ. ಇವರಿಗೆ ಪ್ರಕೃತಿ ವಿಭಿನ್ನವಾಗಿ ಕಂಡಿದೆ. ಪ್ರಕೃತಿಯ ಬಗ್ಗೆ ಇವರ ಮನಸ್ಸಿನಲ್ಲಿ ಮೂಡಿದ ಹಲವಾರು ವಿಚಾರಧಾರೆಗಳನ್ನು ತಮ್ಮ ಕಲಾಕೃತಿಗಳಲ್ಲಿ ಬಿಂಬಿಸಿದ್ದಾರೆ.

ಒಂದಕ್ಕಿಂತ ಒಂದು ವಿಭಿನ್ನ ಕಲಾಕೃತಿಗಳು ವಿಶಿಷ್ಟ ಸಂದೇಶವನ್ನು ಕೊಡುತ್ತವೆ. ಇವರ ಕಲಾಕೃತಿಗಳು ನಿಸರ್ಗ ದಲ್ಲಿರುವ ಕಾಡು ಬೆಟ್ಟ ಗುಡ್ಡ ಅಲ್ಲಿಯ ವೈವಿಧ್ಯತೆ ಆನಂದ ಸಂತೋಷ ಸಾಮಾನ್ಯವಾಗಿ ಅಲ್ಲಿಯ ರಮಣೀಯ ದೃಶ್ಯಗಳನ್ನು ತನ್ನ ಮನಸ್ಸಿಗೆ ಬಂದ ಹಾಗೆ ವಿಭಿನ್ನ ರೀತಿಯಲ್ಲಿ ಚಿತ್ರಿಸಿರುವುದು ವಿಶೇಷ. ಕ್ಷಣ ಕಲಾಸಕ್ತರಿಗೆ ಇವರ ಕಲಾಕೃತಿಗಳು ನೋಡಿದಾಗ ವಿನೂತನವಾದ ಒಂದು ಲೋಕಕ್ಕೆ ಅಡಿ ಇಟ್ಟ ಅನುಭವವಾಗುತ್ತದೆ. ಇವರ ಬಣ್ಣಗಳ ಸಂಯೋಜನೆ ಮೆರೆಗು ಬೆಳಕು ನೆರಳಿನ ನಡುವೆ ನೋಡಿದರೆ ಪ್ರಕೃತಿಯ ಜೊತೆಗೆ ಇದ್ದಂತಹ ಅನುಭವವಾಗುತ್ತದೆ.

ಸುಮಾರು 50 ಕ್ಕಿಂತಲೂ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ. ಕಲಾವಿದರಾದ ಜಯರಾಮ್ ಭಟ್ ರವರು ಹೇಳುವಂತೆ ಪ್ರಕೃತಿಯಲ್ಲಿ ನಾನು ನೋಡಿದ ಅನುಭವಿಸಿದ ಹಲವಾರು ವಿಚಾರಧಾರೆಗಳನ್ನ ಕಲಾಕೃತಿಗಳ ಮೂಲಕವಾಗಿ ಬಿಂಬಿಸಿದ್ದೇನೆ. ಎಂದು ಹೇಳುತ್ತಾರೆ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಆರಂಭಗೊಂಡಿರುವ ಇವರ ಕಲಾಪ್ರದರ್ಶನವು ಡಿಸೆಂಬರ್ 13ರವರೆಗೆ ನಡೆಯಲಿದ್ದು ಕಲಾ ಸಕ್ತರು ತಮ್ಮ ಬಿಡುವಿನ ಸಮಯದಲ್ಲಿ ಬಂದು ವೀಕ್ಷಿಸಬಹುದು.

ಕಲಾ ಪ್ರದರ್ಶನದ ಸ್ಥಳ
ಕರ್ನಾಟಕ ಚಿತ್ರಕಲಾ ಪರಿಷತ್ತಿನ ಗ್ಯಾಲರಿ ಒಂದು ಮತ್ತು ಎರಡು
ಕುಮಾರ ಕೃಪಾರಸ್ತೆ ಬೆಂಗಳೂರು
ಸಮಯ: ಬೆಳಿಗ್ಗೆ 10 ಗಂಟೆಯಿಂದ ಸಂಜೆ 7:00ವರೆಗೆ
ಪ್ರವೇಶ ಉಚಿತ

This image has an empty alt attribute; its file name is V-S-NAIK.jpg

ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಉಪನ್ಯಾಸಕರಾಗಿರುವ ವಿ. ಎಸ್ . ನಾಯಕರ ಪೂರ್ಣ ಹೆಸರು ವೆಂಕಟದಾಸ್ ಎಸ್ . ನಾಯಕ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಅನೇಕ ಸಂಸ್ಥೆಗಳಲ್ಲಿ ಕಾರ್ಯಕ್ರಮ ಸಂಯೋಜಕರಾಗಿಯೂ ಪರಿಚಿತರು. ದೂರದರ್ಶನದಲ್ಲಿ ಗಾಂಧೀ ವಿಚಾರಧಾರೆ ಕುರಿತು ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ಹಲವಾರು ಸಂಸ್ಥೆಗಳ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.

LEAVE A REPLY

Please enter your comment!
Please enter your name here