BENGALURU AUG 8
ಬಯೋಕಾನ್ ಸಂಸ್ಥೆಯ ಅಧ್ಯಕ್ಷೆ ಕಿರಣ ಮುಜುಮದಾರ್ ಷಾ ಬೆಂಗಳೂರಿನ ದಿ ಒಬೆರಾಯ್ ಹೊಟೇಲ್ ನಲ್ಲಿ ಆಯೋಜಿಸಿದ್ದ ಭೋಜನ ಕೂಟದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಭಾಗವಹಿಸಿದ್ದರು . ಈ ಸಂದರ್ಭದಲ್ಲಿ ಬೆಂಗಳೂರಿನ ಅಭಿವೃದ್ಧಿಯ ಕುರಿತು ಚರ್ಚಿಸಲಾಯಿತು ಎಂದು ಅವರು ಟ್ವೀಟ್ ಮಾಡಿದ್ದಾರೆ.
ಭೋಜನಕೂಟದಲ್ಲಿ ವಿಪ್ರೋ ಅಧ್ಯಕ್ಷ ಅಜಿಮ್ ಪ್ರೇಮ್ಜಿ, ಮೋಹನ್ ದಾಸ್ ಪೈ, ಕ್ರಿಸ್ ಗೋಪಾಲಕೃಷ್ಣನ್ ಮತ್ತು ಇತರರು ಇದ್ದರು.
ಸಭೆ ಫಲಪ್ರದವಾಗಿತ್ತು ಮೂಲ ಸೌಲಭ್ಯ ಮತ್ತು ಆರ್ಥಿಕ ವಿಚಾರಗಳ ಬಗ್ಗೆ ಒಳ್ಳೆಯ ಮಾತುಕತೆಯಾಯಿತು ಎಂದು ಕಿರಣ ಮುಜುಮದಾರ್ ಷಾ ಟ್ವೀಟ್ ಮಾ್ಡಿದ್ದಾರೆ.


