28.8 C
Karnataka
Friday, May 10, 2024

    ಅಮ್ಮ ತುಂಬಿದ ಆತ್ಮಸ್ಥೈರ್ಯ

    Must read


    ಕೋವಿಡ್ ಎರಡನೇ ಅಲೆ ಕಡಿಮೆಯಾಗುತ್ತಿದೆ.ಈ ಅಲೆಯನ್ನು ಅನೇಕರು ಮೆಟ್ಟಿನಿಂತು ಎದುರಿಸಿ ಬಂದಿದ್ದಾರೆ. ಗೆದ್ದವರ ಪಾಸಿಟಿವ್ ಕಥೆಗಳನ್ನು ಇಲ್ಲಿ ಸಾದರ ಪಡಿಸುತ್ತಿದ್ದೇವೆ. ಈ ಗೆಲವು ಇನ್ನೊಬ್ಬರಿಗೆ ಸ್ಫೂರ್ತಿಯಾಗಲಿ. ಕರೋನಾ ಒಂದೇ ಅಲ್ಲ ಯಾವ ರೋಗ ಬಂದರು ಧೈರ್ಯದಿಂದ ಎದುರಿಸಿದಾಗ ಜಯಿಸಲು ಸಾಧ್ಯ.


    60 ಸೆಕೆಂಡ್ ನಲ್ಲಿ 60 ಯೋಚನೆ

    ಹೋದ ವರ್ಷ (2020) ಲಾಕ್ ಡೌನ್ ನಲ್ಲಿ ನಾವೆಲ್ಲಾ ತರಹ ತರಹದ ಅಡಿಗೆ  ಮಾಡಿದ್ವಿ  ಅಲ್ವಾ. ಹಾಗೆ ನಾನು ಮಾಡಿದ್ದೆ ಪಾನಿಪುರಿ ! ಆ ದಿನ  ಭಾನುವಾರ  ಸಂಜೆ ಎಲ್ಲರೂ ಖುಷಿ ಯಾಗಿ  ಪಾನಿಪುರಿ ತಿನ್ನೋಕೆ  ರೆಡಿ ಆದ್ವಿ. ನಾನು ಪಾನಿಪುರಿ ಎಲ್ಲ ರೆಡಿ ಮಾಡಿಕೊಂಡು  ಒಬ್ಬೊಬ್ರಿಗೆ ಪ್ಲೇಟ್ ನಲ್ಲಿ ಹಾಕಿ ಕೊಟ್ಟೆ. ಮನೋಜ್( ನನ್ನ ಪತಿ), ಕ್ಷಿತಿಜ್,  ಆರ್ಯ ( ಮಗ, ಮಗಳು) ಎಲ್ರೂ ” ತುಂಬಾ   ಚೆನ್ನಾಗಿದೆ ಅಮ್ಮ” ಅಂತ ತಿಂದರು.  ಕೊನೆಗೆ ನಾನು ಒಂದು ಪ್ಲೇಟ್  ಮಾಡಿಕೊಂಡೆ . ಒಂದು ಪಾನಿಪುರಿ ಬಾಯಲ್ಲಿ ಇಟ್ಕೊಂಡೆ ಯಾಕೊ ಏನೋ  ಮಿಸ್ಸಿಂಗ್  ಅನ್ನಿಸ್ತು.   ಇನ್ನ ಸ್ವಲ್ಪ  ಚಟ್ನಿ ಹಾಕೋಬೇಕೇನೋ ಅಂತ ಸ್ವಲ್ಪ ಚಟ್ನಿ  ಹಾಕಿಕೊಂಡೆ,  ಆದ್ರೆ ಏನು ರುಚಿ ಆಗ್ಲಿಲ್ಲ.  ಕೊನೆಗೆ ಸ್ವೀಟ್ ಹಾಕೊಂಡೆ ಅದೂ ಯಾಕೋ ರುಚಿ ಆಗ್ಲಿಲ್ಲ.  ಎಲ್ಲಾ ಕಡೆ  ಕೊರೋನ ಇರೋದರಿಂದ  ಸ್ವಲ್ಪ ಯೋಚನೆ ಶುರು ಆಯಿತು.  ಏನೊ ಹೊಗ್ಲಿ ಬಿಡು  ನಾಳೆ  ಸರಿ ಹೋಗಬಹುದು ಅಂದುಕೊಂಡೆ.

    ಮರುದಿನ ಸ್ನಾನ ಮಾಡಿ   ದೇವರ ಪೂಜೆ  ಮಾಡೋವಾಗ  ಊದಿನ ಕಡ್ಡಿ ಹಚ್ಚಿದೆ.  ಪ್ರತಿ ದಿನ ಘಮ ಘಮ ವಾಸನೆ ಬರೋ  ಊದಿನ ಕಡ್ಡಿ  ಏನೂ ವಾಸನೆಯೇ  ಬರಲಿಲ್ಲ. ಏನಪ್ಪ ಇದು ಅಂತ  ಕ್ಷಿತಿಜ್ ನ   ಕರೆದು ಕೇಳಿದೆ ನಿನಗೆ ಊದಿನ್ಕಡ್ಡಿ  ವಾಸನೆ  ಬರ್ತಿದೆಯ ಅಂತ,  ಆವನು ಹೌದು  ಅಂದ.  ಸರಿ ನನ್ನ ಡೌಟ್  ಇನ್ನೂ  ಜಾಸ್ತಿ ಆಯ್ತು . ನಮ್ಮ ಸ್ನೇಹಿತರೊಬ್ಬರು ನಮ್ಮ ಊರಿನ ಪ್ರಖ್ಯಾತ ಡಾಕ್ಟರ್ ಜಿತೇಂದ್ರ ಗುಪ್ತ ಅಂತ ( ಜಿತೇನ್ ಅಂತ ಕರೀತೀವಿ) .ಅವರು ಇಲ್ಲಿ ಕೊರೊನ ಪೇಷಂಟ್ ಗಳನ್ನ  ಟ್ರೀಟ್ ಮಾಡ್ತಾರೆ.   ಆವರಿಗೆ  ಮೊದಲು ಟೆಕ್ಸ್ಟ್ ಮೆಸೇಜ್ ಮಾಡ್ದೆ , ನಾನು ಟೆಸ್ಟ್ ಮಾಡಿಸಿಕೊಳ್ಳಲಾ ಅಂತ.      ನನ್ಗೆ ಬೇರೆ ಏನೂ symptoms  ಇರಲಿಲ್ಲ, ಜ್ವರ,  ನೆಗಡಿ, ಕೆಮ್ಮು, ಏನೂ ಇಲ್ಲ. ಅವರು ಟೇಸ್ಟ್ ಮತ್ತೆ ಸ್ಮೆಲ್ ಇಲ್ಲ ಅಂದ್ರೆ ಕೊರೋನ ಟೆಸ್ಟ್ ಮಾಡಿಸಿಬಿಡು ಅಂದ್ರು.

    ಪಾಸಿಟೀವ್ ಅಂತ ಗೊತ್ತಾದ ಆ ಕ್ಷಣ

    ಆಮೇಲೆ 3  ದಿನದಲ್ಲಿ ಬಂತು  ನೋಡಿ ರಿಸಲ್ಟ್ ! ಪಾಸಿಟೀವ್!! ಒಂದೇ  ಸಲ ಶಾಕ್ ಆಯಿತು.. ಒಂದು  ನಿಮಿಷದಲ್ಲಿ ಮುಂದೆ  ಏನಪ್ಪ ಅಂತ  ಯೋಚನೆ ಬಂತು. ಟಿವಿ ನ್ಯೂಸ್ ಚಾನೆಲ್ ಗಳಲ್ಲಿ ಒನ್ ಮಿನಿಟ್ ನಲ್ಲಿ  60 ನ್ಯೂಸ್ ಅಂತ   ತೋರಿಸ್ತಾರಲ್ಲ ಹಂಗೆ ಒಂದೇ ಒಂದು  ಮಿನಟ್ ನಲ್ಲಿ    ಏನ್ ಏನ್ ಮಾಡ್ಬೇಕು ಅಂತ ಎಲ್ಲಾ ಯೋಚನೆಗಳು flash ಆಗೋಕೆ ಶುರು ಆಯಿತು.  ಯಾವ ರೂಂ ನಲ್ಲಿ quarantine ಆಗಬೇಕು? ಆಸ್ಪತ್ರೆಗೆ ಅಡ್ಮಿಟ್ ಆಗಬೇಕಾ? ಹುಡುಗರನ್ನ ಯಾರು ನೋಡಿಕೊಳ್ಳುತ್ತಾರೆ?  ಅವರಿಗೆ ಅಡಿಗೆ ಹೇಗೆ  ಮಾಡೋದು? ಅಣ್ಣ ಅಮ್ಮನ್ಗೆ ಹೇಳಬೇಕಾ ಬೇಡವಾ?ಆಫೀಸ್ ಕೆಲಸ ಹೇಗೆ ಮಾಡೋದು? ಅಕಸ್ಮಾತ್ ಜಾಸ್ತಿ ಆದರೆ ಏನ್ ಮಾಡ್ಬೇಕು? ಮೆಡಿಕಲ್ ಇನ್ಶುರೆನ್ಸ್ ಕವರ್ ಆಗುತ್ತಾ? ಹೀಗೆ 28 ಪ್ರಶ್ನೆ ಗಳು ತಲೆಯಲ್ಲಿ .

    ಮನೋಜ್ ನಂಗೆ ಧೈರ್ಯ ಕೊಟ್ಟು ನೀನು ಏನೂ ಯೋಚ್ನೆ ಮಾಡ್ಬೇಡ ನಾನು ಎಲ್ಲಾ ನೋಡ್ಕೋತೀನಿ ಅಂದ್ರು. ಜಿತೇನ್  ಅವರು ಫೋನ್ ಮಾಡಿ ಹೇಳಿದ್ರು ಏನೂ ಯೋಚನೆ ಮಾಡಬೇಡ ನಾನು ಎಲ್ಲಾ ನೋಡ್ಕೊತೀನಿ.  ಏನೂ ಸಿಂಪ್ಟಮ್ಸ್ ಇಲ್ಲವಾದ್ದರಿಂದ ಮನೆಯಲ್ಲಿ ಕ್ವಾರಂಟೈನ್ ಆಗು ಅಂದ್ರು. ಏನಾದ್ರೂ ವ್ಯತ್ಯಾಸ ಅನ್ನಿಸಿದ್ರೆ ನಂಗೆ ಫೋನ್ ಮಾಡು ಅಂದ್ರು.

    ಇಷ್ಟರಲ್ಲಿ ನನ್ನ ತಮ್ಮ ಪವನ್ ಫೋನ್ ಮಾಡಿದ. ನಮ್ಮ ತಳಮಳ ನೋಡಿ ಅವನಿಗೆ ಗೊತ್ತಾಗಿರ್ಬೇಕು. ಅಷ್ಟರಲ್ಲಿ ಅಮ್ಮನ ಫೋನ್ ಕೂಡ ಬಂತು ಅವರಿಂದಲೂ ನಮಗೆ ಮುಚ್ಚಿಡಲು ಆಗಲಿಲ್ಲ ಅವರೆಲ್ಲ ಸ್ವಲ್ಪ ಹೆದರಿದರು ಆದ್ರೆ ನಾನೇ ಅವರಿಗೆ ಸಮಾಧಾನ ಮಾಡಿದೆ.

    ಇನ್ನು ನೆಕ್ಟ್ ಸ್ಟೆಪ್ ಅಂದ್ರೆ ಒಂದು ರೂಂ ನಲ್ಲಿ ನನಗೆ ಬೇಕಾಗುವ ಎಲ್ಲಾ ಸಾಮಾನನ್ನು ರೆಡಿ ಮಾಡಿಕೊಂಡು ಅಲ್ಲೇ ವಾಸ ಶುರು ಮಾಡಿದೆ.  ಹುಡುಗರಿಗೆ ನನ್ನ ಹತ್ತಿರ ಬರಬೇಡಿ ಅಂತ ಹೇಳಿದೆ.  ಪಾಪ ಅವರೇ ನನಗೆ ಸಮಾಧಾನ ಮಾಡಿದ್ರು ” ಅಮ್ಮಾ ನಿನಗೆ ಏನು ಬೇಕು ನಮಗೆ ಹೇಳು ಅಂದ್ರು” ಆರ್ಯ 5 ವರ್ಷದವಳು, ಅವಳು ನನ್ನ ಬಿಟ್ಟು ಇರಲೇ ಇಲ್ಲ ಇಲ್ಲಿಯ ತನಕ. ಅವಳದೇ ಯೋಚನೆ ಇತ್ತು ಆದ್ರೆ ಅವಳು ತುಂಬಾನೇ ಸಹಕರಿಸಿದಳು. ನನ್ನ ಹತ್ರ ಮಾತಾಡ್ಬೇಕು ಅನ್ಸಿದ್ರೆ ಫೇಸ್ ಟೈಮ್ ಮಾಡ್ತಿದ್ಲು.

    ಅಮ್ಮ ಅಣ್ಣ ನಂಗೋಸ್ಕರ  ಎಲ್ಲಾ ದೇವರಿಗೆ  ಪ್ರಾರ್ಥಿಸಿದ್ರು.
    ದಿನಾ ರಾತ್ರಿ ನನ್ನ ಬಗ್ಗೆ ವಿಚಾರಿಸುತ್ತ ಇದ್ರು.  ಪವನ್, ನಯನಾ ಕೂಡ ದಿನವೂ ನಮ್ಮ ಬಗ್ಗೆ ವಿಚಾರಿಸ್ತಿದ್ರು. ನಮ್ಮ ಫ್ರೆಂಡ್ಸ್ ದಿನಾ ಅಡಿಗೆ ಮಾಡಿ ನಮ್ಮ ಮನೆ ಬಾಗಿಲಿಗೆ ತಂದು ಇಡುತ್ತಿದ್ದರು.  ಮನೋಜ್ ನಂಗೆ  ಮೂರು ಹೊತ್ತೂ ಟೆಂಪ್ರೇಚರ್ ಚೆಕ್ ಮಾಡು,  ಆಕ್ಸಿ ಮೀಟರ್ ಚೆಕ್ ಮಾಡು ಅಂತ ವಿಚಾರಿಸ್ತಿದ್ರು.  ಟೈಮ್ ಟೈಮ್ ಗೆ ಊಟ ತಿಂಡಿ ಕೊಡ್ತಿದ್ರು.  ಎಲ್ಲರೂ ನನಗೆ ತುಂಬಾ ಧೈರ್ಯ ಕೊಟ್ರು.

    ನನಗೆ ಬೇರೆ ಯಾವ ಸಿಂಪ್ಟಮ್ಸ್ ಗಳು ಇಲ್ಲವಾದುದರಿಂದ ಬರೀ ವಿಟಮಿನ್ D  ವಿಟಮಿನ್ C ಮತ್ತು ಝಿಂಕ್ ಟ್ಯಾಬ್ಲೆಟ್ ತಗೋಳ್ಳಿಕ್ಕೆ ಹೇಳಿದ್ರು ಡಾಕ್ಟ್ರು . ಅಮ್ಮಾ ಕೆಲವು ಮನೆ ಔಷಧಿ ಗಳನ್ನು ಹೇಳಿದ್ರು. ದಿನ ಸ್ವಲ್ಪ ಸ್ಟೀಮ್ ಮಾಡಿ ಕೊಳ್ತಿದ್ದೆ. ಹಣ್ಣುಹಂಪಲು ತಿಂತಿದ್ದೆ. ಆಫೀಸ್ ಕೆಲ್ಸ ಮಾಡಿಕೊಳ್ತಿದ್ದೆ.  ಅರಿಶಿನ ಬಳಸ್ತಿದ್ದೆ.  ಬೇಜಾರಾದ್ರೆ Nerflix ನೋಡ್ತಿದ್ದೆ, ಇಲ್ಲ ಹಾಡು ಕೇಳ್ತಿದ್ದೆ.  ಒಂದು ರೀತಿಯ staycation   ಆಗಿತ್ತು ನನಗೆ.  ಟೈಮ್ ಟೈಮ್ ಕಾಫಿ ,ತಿಂಡಿ ,ಊಟ ಸಪ್ಲೆ ಬರ್ತಿತ್ತು. ಮತ್ತಿನ್ನೇನು ಮಜವೋ ಮಜಾ…..:-) ಮಕ್ಕಳು ಪಾಪ ಫೇಸ್ ಟೈಮ್ ಮಾಡಿ ಮಾತಾಡಿಸ್ತಿದ್ರು.  ಅವರುಗಳನ್ನು ಮನೋಜ್
    ಚೆನ್ನಾಗಿ ನೋಡ್ಕೊಂಡ್ರು. ಒಂದು ದಿನ ಆರ್ಯ ನನಗೆ ಅಮ್ಮ… ಡ್ಯಾಡಿಗೆ ಜಡೆ ಹಾಕೋಕೆ ಬರೋದಿಲ್ಲ ಅಂತ ಪಿಸುಗುಟ್ಟಿದ್ದಳು. ನಾನು ಅದನ್ನ ಕೇಳಿ ಜೋರಾಗಿ ನಕ್ಕೆ . ಹೀಗೇ ತಮಾಷೆಯಾಗಿ ಟೈಂ ಪಾಸ್ ಮಾಡಿಸ್ತಾ ಇದ್ರು ಹುಡುಗರು.

    quarantine ನಡುವೆಯೇ ಬಂತು ಮಗನ ಬರ್ತ್ ಡೇ

    ಇಷ್ಟರಲ್ಲಿ ನನ್ನ ಮಗನ ಬರ್ತಡೇ ಬಂತು ಇದೇ ಮೊದಲ ಸಲ  ನಾನು ಅವನ ಬರ್ತಡೇ ಗೆ ಏನೂ ಮಾಡೋಕೆ ಆಗೋಲ್ಲ ವಲ್ಲಪ್ಪಾ ಅಂತ ಬೇಜಾರಾಯ್ತು.  ಏನ್ ಮಾಡೋದು ಅಂತ ಯೋಚನೆ ಮಾಡ್ಬೇಕಾದ್ರೆ ಒಂದು  ಐಡಿಯಾ ಬಂತು.  ಯಾಕೆ  Drive through birthday  ಮಾಡ್ಬಾರ್ದು ಅಂತ. ಸ್ವಲ್ಪ ಯಾರ್ಡ್ ಡೆಕೊರೇಶನ್ಸ್ ಗಳನ್ನ  ಅಮೆಜಾನ್ ನಿಂದ ಆರ್ಡರ್ ಮಾಡಿದೆ. ಮನೋಜ್  ಅವುಗಳನ್ನು ನಮ್ಮ ಮನೆ ಮುಂದೆ ಡೆಕೊರೇಟ್ ಮಾಡಿದ್ರು.  ಒಂದು ಬೋರ್ಡ್ ಹಾಕಿದ್ವಿ ” ಇವತ್ತು ನಮ್ಮ ಮಗನ ಬರ್ತ್ ಡೇ ವಿಶ್ ಮಾಡೋಕೆ ಹಾರ್ನ್ ಮಾಡಿ” ಅಂತ ( USA ನಲ್ಲಿ ಯಾರೂ  ಕಾರ್  ಹಾರ್ನ್  ಮಾಡಲ್ಲ ಹೆಚ್ಚಾಗಿ )  ಆದ್ರೆ ಅವತ್ತು ಎಲ್ಲಾ ಕಾರುಗಳು ನಮ್ಮ ಮನೆ ಮುಂದೆ ಹಾರನ್ ಮಾಡಿ ಕ್ಷಿತಿಜ್ ಗೆ ವಿಶ್ ಮಾಡಿದ್ರು.

    ನಮ್ಮ ಫ್ರೆಂಡ್ಸ್ ಕೇಕ್ ಮತ್ತೆ  ಗಿಫ್ಟ್ ತೊಗೊಂಡು ಬಂದ್ರು. ಎಲ್ಲಾ ಮನೆಯ ಹೊರಗಿನ ಗಾರ್ಡನ್ ನಲ್ಲಿ ಸಣ್ಣ ಸೆಲೆಬ್ರೇಷನ್ ಮಾಡಿದ್ರು.  ನಾನು ದೂರದಿಂದ  ಎಲ್ಲಾ ನೋಡಿದೆ .ಕ್ಷಿತಿಜ್ ಗೆ ಈ ರೀತಿಯ ಹೊಸ ತರಹ  ಬರ್ತಡೇ ಸೆಲೆಬ್ರೇಷನ್ ತುಂಬಾ ಇಷ್ಟ ಆಯ್ತು. ಅವನ ಫ್ರೆಂಡ್ಸೆಲ್ಲಾ ಕಾರ್ ನಿಂದ  ವಿಶ್ ಮಾಡಿ ಮಾತಾಡ್ಸಿ ಹೋದ್ರು. ಹೀಗೆ ಮುಗಿಯಿತು ಹದಿನಾಲ್ಕು ದಿನ.

    ಹಿರಿಯರ ಆಶೀರ್ವಾದ,  ಕಿರಿಯರ ಪ್ರೀತಿ, ಎಲ್ಲರ ಪ್ರಾರ್ಥನೆ, ಸಹಕಾರದಿಂದ ನಂಗೆ ಹೆಚ್ಚು ಏನೂ ತೊಂದರೆ ಆಗದೆ ಬೇಗ ಕ್ವಾರಂಟೈನ್ ಮುಗಿಸಿ ಹೊರಬಂದೆ.  ಆಮೇಲೆ CT ಸ್ಕ್ಯಾನ್ ಮತ್ತು ಎಕ್ಸ್ ರೇ ಎಲ್ಲಾ ಮಾಡಿಸಿ ನನಗೆ ಸಂಪೂರ್ಣ ಗುಣ ಆಗಿದೆ ಅಂತ ಖಚಿತಪಡಿಸಿಕೊಂಡ್ವಿ.

    ಒಟ್ಟಿನಲ್ಲಿ ಧೈರ್ಯ  ಒಂದು ಇದ್ದರೆ ಎಲ್ಲವನ್ನೂ ಸಾಧಿಸಬಹುದು  ಅಂತಾರಲ್ಲ ಹಾಗೆ.  ಅಮ್ಮ ಹೇಳಿದ ಹಾಗೆ ಆತ್ಮಸ್ಥೈರ್ಯ, ಒಳ್ಳೆಯ ಆಲೋಚನೆ ಮಾಡಿ ಎಲ್ಲಾ ಸರಿ ಹೋಗುತ್ತೆ.  ಎಂತಹ ಶತ್ರುಗಳನ್ನು ಬೇಕಾದರೂ ಸದೆ ಬಡಿಯಬಹುದು. ನಾನು ನನ್ನನ್ನು ಚೆನ್ನಾಗಿ ನೋಡಿಕೊಂಡ ನನ್ನ ಗಂಡ, ಮಕ್ಕಳಿಗೆ , ಅಣ್ಣ , ಅಮ್ಮ,  ತಮ್ಮನಿಗೆ,  ನಮ್ಮ ಸ್ನೇಹಿತರಿಗೆ ಹಾಗೂ ನಮ್ಮ ಡಾಕ್ಟರಿಗೆ ಸದಾ ಚಿರರುಣಿ. 


    ಕೊರೋನಾ ಗೆದ್ದವರು ತಮ್ಮ ಅನುಭವದ ಕಥೆಯನ್ನು [email protected] ಗೆ ಇ ಮೇಲ್ ಮಾಡಿ. ಸೂಕ್ತವಾದುವನ್ನು ಪ್ರಕಟಿಸಲಾಗುವುದು

    spot_img

    More articles

    11 COMMENTS

    1. ಕೊರೊನಾದಿಂದ ನೊಂದು, ಹಿಂಸೆ ಪಡುತ್ತಿ ರುವವರಿಗೆ
      ಸಾಂತ್ವನ ದ ನುಡಿಗಳು ನೆಮ್ಮದಿ ಕೊಡುತ್ತವೆ.
      ಶುಭ ಕೃಷ್ಣಮೂರ್ತಿಯವರು ತಮ್ಮ ಅನುಭವವನ್ನುಹಂಚಿಕೊಂದು ಎಲ್ಲರಲ್ಲು ಭರವಸೆ ತುಂಬಿದ್ದಾರೆ.
      ಧನ್ಯವಾದಗಳು 👏

    2. Shubha Krishnamurti narration is just like a film script in which she has taken the readers through the experience of much feared covid. By support of family especially dear life partner Manoj and timely medical treatment the challenge of decease has been fought. Brave girl Shubha keep it up the spirit

    3. ಶುಭಾ… ಬಹಳ ಚೆನ್ನಾಗಿ ಬರೆದಿದ್ದೀರಾ.. ಒಳ್ಳೆಯದಾಗಲಿ..

    4. Congrats to Shubha for facing Covid boldly & successfully. Her story is an inspirational event to others to face this pandimic with positive attitude& self determination

    5. ಶುಭ ತುಂಬಾ ಚೆನ್ನಾಗಿ ನಿನ್ನ ಕರೊನಾನುಭವ ವನ್ನು ಬರೆದಿರುವೆ….ಮತ್ತು ಕರೋನಾ ಪೀಡಿ ರಿಗೆ ಸ್ಪೂರ್ತಿದಾಯಕ ವಾಗಿ ಭರವಸೆ ಮೂಡಿ ಸಿರುವೆ…!! ಎಲ್ಲಕ್ಕೂ ಮೊದಲು ಕನ್ನಡ ಪ್ರೆಸ್ ನ ವರಿಗೆ ಧ ಧನ್ಯವಾದ ಹೇಳ ಬೇಕು, ಕರೊನ ಗೆದ್ದ ಅನುಭವಿಗಳಿಂದ ಲೇಖನ ಬರೆಯಿಸಿ ಜನಗಳಿಗೆ ಭರವಸೆ ಮೂಡಿಸಿರುವು ದಕ್ಕಾಗಿ..🙏🙏

    6. Thank you very much 🙏 . Nimmellara preeti Ashirvada sada hege idalli , bari Covid enu, yella jayesabahudu. Thank you for giving me an opportunity to share my experiences. Stay safe, take care🙏Jai Hind

    7. Ranjita and Shubha are young and all are in good health without any serious health issues. Their experience is different from others with health issues attacked by COVID. Other people especially Seniors with health issues like heart problems, diabetes should not take COVID casually. It is a serious decease and should be treated carefully. I agree you should not fear but face with determination. Please take all precautions not to come in contact with any one suspicious of COVID.

    LEAVE A REPLY

    Please enter your comment!
    Please enter your name here

    Latest article

    error: Content is protected !!