25 C
Karnataka
Tuesday, May 14, 2024
    Home Blog Page 2

    ಕನ್ನಡಿಯೊಳಗಿನ ಗಂಟು

    ಸುಮಾ ವೀಣಾ

    ಕನಸಿನ ಭತ್ತಕ್ಕೆ ಗೋಣಿಯಾಂತಂತೆ– ನಯಸೇನನ  ವಿಡಂಬನಾತ್ಮಕ ಕಾವ್ಯ  ‘ಧರ್ಮಾಮೃತ’ದಲ್ಲಿ  ಬರುವ  ಮಾತಿದು.  ಕನ್ನಡಿಯೊಳಗಿನ ಗಂಟು   ಎಂಬ  ನುಡಿಗಟ್ಟನ್ನು   ಇದಕ್ಕೆ ಪೂರಕವಾಗಿ ತೆಗೆದುಕೊಳ್ಳಬಹುದು. 

    ಕನ್ನಡಿಯೊಳಗಿನ ಗಂಟು  ನಮ್ಮ ಸಮಕ್ಷಮ ಇದ್ದರೂ  ಅದನ್ನು ನೋಡಬಹುದೆ ವಿನಃ ಅದರ ಅನುಭೂತಿ ಪಡೆಯಲು  ಸಾಧ್ಯವಿಲ್ಲ  ಅದು ಬರೀ ಭ್ರಾಮಕ ಹಾಗೆಯೇ ಕನಸಿನಲ್ಲಿ ಭತ್ತದ ರಾಶಿಯನ್ನೆ ಕಂಡರೆ ಅದನ್ನು  ಚೀಲದಲ್ಲಿ ತುಂಬಿಸಿಕೊಳ್ಳಲು ಸಾಧ್ಯವಿಲ್ಲ.  ಸಿಕ್ಕಂತೆ  ಅಷ್ಟೇ  ಅನುಭವಿಸಲು ಬಾರದು.  ಇದು ಹೇಗೆ ಅಂದರೆ ತಾನೇ ಬಾಯಲ್ಲಿ ಕಚ್ಚಿಕೊಂಡ ಮೂಳೆಯನ್ನು ನೀರಿನ ಬಿಂಬದಲ್ಲಿ ನೋಡಿ ಅದನ್ನೂ ಬಯಸ ಹೋಗಿ ಇರುವುದನ್ನು  ಕಳೆದುಕೊಂಡು ನಿರಾಸೆ ಅನುಭವಿಸಿದ ನಾಯಿಯಂತಾಗುತ್ತದೆ. 

    ಕನಸುಗಳು ಇರಬೇಕು ಆದರೆ ಕನಸಿನ ಕೋಟೆಯಲ್ಲಿಯೇ ಬಂಧಿಯಾಗಬಾರದು. ನಾವು  ಕಂಡ ಕನಸನ್ನು ವಾಸ್ತವದಲ್ಲಿ ಈಡೇರಿಸಿಕೊಳ್ಳುವ  ಛಲ ಇರಬೇಕು. . ಪುರಂದರದಾಸರು  ಕನ್ನಡಿಯೊಳಗಿನ  ಗಂಟ ಕಂಡು  ಕಳ್ಳ ಕನ್ನವಿಕ್ಕುವನ ವಶವಹುದೇ? ಎಂದಿದ್ದಾರೆ ಇದು ಒಂದು   ಭ್ರಾಮಕ ಸ್ಥಿತಿಯನ್ನು ಹೇಳುತ್ತದೆ. ವಾಸ್ತವದ ತಿಳಿವಿರಬೇಕೆಂಬುದು ಮುಖ್ಯ.  

    ‘ಕನಸಿನ ಭತ್ತಕ್ಕೆ ಗೋಣಿಯಾಂತಂತೆ’ ಎಂಬ ಮಾತನ್ನು  ಸಂಪೂರ್ಣ ನಿರ್ಲಕ್ಷ್ಯ ಮಾಡುವಂತಿಲ್ಲ. ದೂರದ ಬೆಟ್ಟ ನುಣ್ಣಗೆ ಕೈಗೆ ಸಿಗದ  ದ್ರಾಕ್ಷಿ ಹುಳಿ ಎಂದು ತೀರ್ಮಾನಕ್ಕೂ ಬರಬಾರದು ಅದರ ಬೆನ್ನು ಹತ್ತ ಬೇಕು ಅಂದರೆ ಪರಿಶ್ರಮ ಪಡ ಬೇಕು . ಆಗ ಪ್ರತಿಫಲ ಸಿಗುತ್ತದೆ . ಆದರೆ ಸಿಕ್ಕೇ ಸಿಗುವುದು ಅನ್ನುವ ಹುಂಬತನವಿರಬಾರದು   ಪ್ರಾಮಾಣಿಕ ಪ್ರಯತ್ನ ಮಾಡಬೇಕು.    ಅಂದರೆ ಅಭಾವದಲ್ಲೂ ಅನುಭಾವ ಪಡೆಯುವ ಜೀವ ಚೈತನ್ಯ ಇರಬೇಕು.  ಇರುವುದನ್ನು ಬಿಟ್ಟು ಸಿಗದೆ ಇರುವುದರ ಕಡೆಗೆ ನಮ್ಮ ಮನಸ್ಸು ಹೊರಳುವುದು   ಇದನ್ನೆ ಗೊಪಾಲಕೃಷ್ಣ  ಅಡಿಗರು ಇದ್ದುದೆಲ್ಲವ ಬಿಟ್ಟು ಇರದುದರರೆಡೆಗೆ ತುಡಿವುದೇ ಜೀವನ  ಎಂದಿರುವುದು.  

     ಭ್ರಾಮಕ ಸ್ಥಿತಿಯಿಂದ ಹೊರ ಬಂದು ಅಸಾಧ್ಯವನ್ನು ಸಾಧ್ಯ ಮಾಡಿಕೊಳ್ಳಬೇಕು  ಸಮಸ್ಯೆಗಳಿಗೆ ಮುಖಾಮುಖಿಯಾಗಬೇಕು ಅದನ್ನು ಹೊರತು ಪಡಿಸಿ ವಾಮಮಾರ್ಗ ಸಂಚಾರ ವ್ಯರ್ಥ ಎಂಬುದನ್ನು ಕನಸಿನ ಭತ್ತಕ್ಕೆ ಗೋಣಿಯಾಂತಂತೆ ಎಂಬ ಮಾತು ಹೇಳುತ್ತದೆ.

    ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ

    ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಒಂದು ವರ್ಷದ ಉದ್ಯೋಗ ತರಬೇತಿ ಹುದ್ದೆಗಳಿಗೆ ಅರ್ಜಿ ಆಹ್ವಾನ

    ದೇಶದ ಪ್ರತಿಷ್ಠಿತ ಬ್ಯಾಂಕ್ ಭಾರತೀಯ ಸ್ಟೇಟ್ ಬ್ಯಾಂಕ್‌ (ಎಸ್ ಬಿ ಐ) ನಲ್ಲಿ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಅಪ್ರೆಂಟಿಸ್ ಶಿಪ್(ಉದ್ಯೋಗ ತರಬೇತಿ) ಹುದ್ದೆಗಳಿಗೆ ಅಪ್ರೆಂಟಿಸ್ ಕಾಯಿದೆ 1961 ಅಡಿಯಲ್ಲಿ ಅಪ್ರೆಂಟಿಸ್‌ಗಳಾಗಿ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಒಂದು ರಾಜ್ಯದಲ್ಲಿ ಮಾತ್ರ  ಅರ್ಜಿ ಸಲ್ಲಿಸಬಹುದು.ಈ  ಯೋಜನೆಯಡಿಯಲ್ಲಿ ಅಭ್ಯರ್ಥಿಗಳು ಒಮ್ಮೆ ಮಾತ್ರ ಪರೀಕ್ಷೆಗೆ ಹಾಜರಾಗಬಹುದು. ಇದು ಒಂದು ವರ್ಷದ ಉದ್ಯೋಗ ತರಬೇತಿ ಯಾಗಿದೆ.ಈ ಹಿನ್ನೆಲೆಯಲ್ಲಿ, ಬ್ಯಾಂಕಿಂಗ್ ವಲಯದಲ್ಲಿ ಉದ್ಯೋಗ ಪಡೆಯಲು ಆಸಕ್ತಿ ಇರುವ ಅಭ್ಯರ್ಥಿಗಳು ಕೆಳಗೆ ನೀಡಲಾದ ಮಾಹಿತಿ ಆಧರಿಸಿ ಅರ್ಜಿ ಸಲ್ಲಿಸಬಹುದು.

    ಕೇಂದ್ರಾಡಳಿತ ಪ್ರದೇಶಗಳ ಸಹಿತ ಅನೇಕ ರಾಜ್ಯಗಳಲ್ಲಿ ಅಪ್ರೆಂಟಿಸ್ ಶಿಪ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು. ಒಟ್ಟು ಹುದ್ದೆಗಳ ಸಂಖ್ಯೆ 6160. ಈ ಪೈಕಿ ಕರ್ನಾಟಕದಲ್ಲಿ 175 ಹುದ್ದೆಗಳಿದ್ದು 71 ಸಾಮಾನ್ಯ ವಿಭಾಗ, ಎಸ್ಸಿ 28, ಎಸ್ಟಿ 12, ಒಬಿಸಿ 47 ಹಾಗೂ ಆರ್ಥಿಕವಾಗಿ ಹಿಂದುಳಿದವರಿಗಾಗಿ 17 ಹುದ್ದೆಗಳನ್ನು ಮೀಸಲಿರಿಸಲಾಗಿದೆ.

    ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆ?

    ಜಿಲ್ಲಾವಾರು ಹುದ್ದೆಗಳ ಸಂಖ್ಯೆ ಹೀಗಿದೆ:

    ಬಾಗಲಕೋಟ-6, ಬಳ್ಳಾರಿ-9, ಬೆಳಗಾವಿ-8, ಬೆಂಗಳೂರು ಗ್ರಾಮಾಂತರ-2, ಬೆಂಗಳೂರು Urban-3,ಬೀದರ್-8, ಚಾಮರಾಜ ನಗರ-7, ಚಿಕ್ಕಮಗಳೂರು-4, ಚಿಕ್ಕಬಳ್ಳಾಪುರ-5, ಚಿತ್ರದುರ್ಗ-3, ದಕ್ಷಿಣ ಕನ್ನಡ-6, ದಾವಣಗೆರೆ-6, ಧಾರವಾಡ-3,ಗದಗ-3 ,ಹಾಸನ-8, ಹಾವೇರಿ-4 ,ಕಲ್ಬುರ್ಗಿ-8, ಕೊಡಗು-1,ಕೋಲಾರ-4, ಕೊಪ್ಪಳ-6, ಮಂಡ್ಯ-10,ಮೈಸೂರು-8,ರಾಯಚೂರು-8, ರಾಮನಗರ-4,ಶಿವಮೊಗ್ಗ-6, ತುಮಕೂರು-18,ಉಡುಪಿ-3,ಉತ್ತರಕನ್ನಡ-5,ವಿಜಯಪುರ-4,ಯಾದಗಿರಿ-5

    ಅರ್ಜಿ ಸಲ್ಲಿಕೆಯ ವಿಧಾನ:

    ಎಸ್‌ಬಿಐ ನ ಅಧೀಕೃತ ವೆಬ್‌ಸೈಟ್ https://bank.sbi/web/careers ಲಾಗಿನ್ ಮಾಡಿಕೊಂಡು ಆನ್‌ಲೈನ್ ನಲ್ಲಿಯೆ ಸೂಕ್ತ ಮಾಹಿತಿಗಳನ್ನ ಭರ್ತಿ ಮಾಡಬೇಕು ಹಾಗೂದಾಖಲೆಗಳ ಪ್ರತಿಗಳನ್ನು ಲಗತ್ತಿಸಬೇಕು ಲಿಖಿತ ಧೃಢೀಕರಣ ಅಪ್ ಲೋಡ್ ಮಾಡಿ ಶುಲ್ಕ ಪಾವತಿಸಬೇಕು.

    ಶೈಕ್ಷಣಿಕ ಅರ್ಹತೆ ಏನಿರಬೇಕು?:

    ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ  ಅಂದರೆ ಕಲೆ, ವಾಣಿಜ್ಯ ವಿಜ್ಞಾನ ಅಥವಾ ಇನ್ನಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು.

    ವಯೋಮಿತಿ:

    01.08.2023 ಕ್ಕೆ, 20 ವರ್ಷಕ್ಕಿಂತ ಕಡಿಮೆ ಇರಬಾರದು. ಮತ್ತು  28 ವರ್ಷಗಳಿಗಿಂತ ಹೆಚ್ಚಿರಬಾರದು. ಅಂದರೆ 20 ವರ್ಷದಿಂದ 28 ವರ್ಷದೊಳಗಿನವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅಭ್ಯರ್ಥಿಯು 02.08.1995 ಕ್ಕಿಂತ ಮೊದಲು ಮತ್ತು 01.08.2023 ಕ್ಕಿಂತ ನಂತರ ಹುಟ್ಟಿರಬಾರದು( ಎರಡೂ ದಿನಾಂಕಗಳು ಒಳಗೊಂಡಂತೆ) ಸರಕಾರದ ನಿಯಮದಂತೆ ಎಸ್‌ಸಿ/ ಎಸ್‌ಟಿ ಅಭ್ಯರ್ಥಿಗಳಿಗೆ/ ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ/ ಮತ್ತು ವಿಕಲಚೇತನರಿಗೆ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

    ಅರ್ಜಿ ಶುಲ್ಕವೆಷ್ಟು?:

    ಸಾಮಾನ್ಯ, ಒಬಿಸಿ ಮತ್ತು ಆರ್ಥಿಕ ದುರ್ಬಲ ವರ್ಗದ ಅಭ್ಯರ್ಥಿಗಳಿಗೆ 300 ರೂ. ಹಾಗೂ ಎಸ್ಸಿ/ ಎಸ್ ಟಿ /ವಿಶೇಷ ಚೇತನ ಅಭ್ಯರ್ಥಿಗಳಿಗೆ ಸಂಪೂರ್ಣ ವಿನಾಯಿತಿ ನೀಡಲಾಗಿದೆ.

    ರಾಜ್ಯದಲ್ಲಿ ಪರೀಕ್ಷಾ ಕೇಂದ್ರಗಳೆಲ್ಲಿ?

    ರಾಜ್ಯದಲ್ಲಿ 9 ಪರೀಕ್ಷಾ ಕೇಂದ್ರಗಳಿವೆ: ಬೆಂಗಳೂರು, ಬೆಳಗಾವಿ, ಕಲಬುರಗಿ ಹುಬ್ಬಳ್ಳಿ-ಧಾರವಾಡ, ಮಂಗಳೂರು, ಮೈಸೂರು, ಶಿವಮೊಗ್ಗ ಹಾಗೂ ಉಡುಪಿ

    ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಸೆಪ್ಟೆಂಬರ್ 21, 2023

    ಆನ್ ಲೈನ್ ನಲ್ಲಿ ಪರೀಕ್ಷೆ ನಡೆಯುವ ದಿನಾಂಕ: ಅಕ್ಟೋಬರ್/ನವೆಂಬರ್, 2023.

    ಕನ್ನಡದಲ್ಲಿ ಪರೀಕ್ಷೆ:

    ಕರ್ನಾಟಕದ ಅಭ್ಯರ್ಥಿಗಳು ಹಿಂದಿ ಅಥವಾ ಇಂಗ್ಲಿಷ್ ಜೊತೆಗೆ ಕನ್ನಡ ಭಾಷೆಯಲ್ಲೂ ಪರೀಕ್ಷೆ ಬರೆಯುವ ಅವಕಾಶವನ್ನು ಎಸ್ ಬಿ ಆಯ್ ನೀಡಿದೆ. ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವಾಗ ಭಾಷೆ ನಮೂದಿಸಬೇಕು. (ಪರೀಕ್ಷಾ ಸಂದರ್ಭದಲ್ಲಿ ಬದಲಾವಣೆಗೆ ಅವಕಾಶವಿಲ್ಲ ಎಂಬುದನ್ನ ಮರೆಯದಿರಿ.)

    ನೆನಪಿಡಿ:

    ಲಿಖಿತ ದೃಢೀಕರಣ:

    ಕೈಬರಹದ ಘೋಷಣೆಯ ಪಠ್ಯ ಈ ರೀತಿಯಲ್ಲಿ ಬರೆದು ಅಪ್ಲೋಡ್ ಮಾಡಬೇಕು,_______ (ಅಭ್ಯರ್ಥಿಯ ಹೆಸರು),ಈ ಮೂಲಕ  ಅರ್ಜಿಯಲ್ಲಿ ಸಲ್ಲಿಸಿದ ಎಲ್ಲಾ ಮಾಹಿತಿಯು ಸರಿಯಾಗಿದೆ.ನಿಜ ಮತ್ತು ಮಾನ್ಯವಾಗಿದೆ ಎಂದು ಘೋಷಿಸುತ್ತೇನೆ. ಅಗತ್ಯವಿದ್ದಾಗ ನಾನು ಪೂರಕ ದಾಖಲೆಗಳನ್ನು ಪ್ರಸ್ತುತಪಡಿಸುತ್ತೇನೆ.”

    ಮೇಲೆ ತಿಳಿಸಿದ ಕೈಯಲ್ಲಿ ಬರೆದ ಲಿಖಿತ ಘೋಷಣೆಯು ಅಭ್ಯರ್ಥಿಯ ಕೈ ಬರಹದಲ್ಲಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಇರಬೇಕು ಮತ್ತು ಕ್ಯಾಪಿಟಲ್ ಲೆಟರ್ಸ್‌ನಲ್ಲಿ ಇರಬಾರದು. ಇದನ್ನು ಬೇರೆಯವರು ಅಥವಾ ಬೇರೆ ಯಾವುದೇ ಭಾಷೆಯಲ್ಲಿ ಬರೆದಿದ್ದರೆ, ಅರ್ಜಿಯನ್ನು ಅಮಾನ್ಯವೆಂದು ಪರಿಗಣಿಸಲಾಗುತ್ತದೆ. ಕ್ಯಾಪಿಟಲ್ ಲೆಟರಗಳಲ್ಲಿ ಹಾಕಿದ ಸಹಿಯನ್ನು ಸ್ವೀಕರಿಸಲಾಗುವುದಿಲ್ಲ. ಎಡ ಹೆಬ್ಬೆರಳಿನ ಗುರುತು ಸರಿಯಾಗಿ ಸ್ಕ್ಯಾನ್ ಮಾಡಬೇಕು ಮತ್ತು ಮಸುಕಾಗಿರಬಾರದು.

    ಅಪ್ರೆಂಟಿಸ್ ಶಿಪ್ ನಲ್ಲಿ ಆಯ್ಕೆಯಾದರೆ ಲಾಭವೇನು?

    ಅಪ್ರೆಂಟಿಸ್ ಗಳಾಗಿ ನೇಮಕಗೊಂಡರೆ ಅದು ಬ್ಯಾಂಕ್‌ನಲ್ಲಿ ಉದ್ಯೋಗ ನೀಡಿದೆ ಎಂದರ್ಥವಲ್ಲ. ಭವಿಷ್ಯದಲ್ಲಿ ಬ್ಯಾಂಕ್‌ನಲ್ಲಿ ಉದ್ಯೋಗ ಪಡೆಯಲು ಇದು ಸಹಾಯವಾಗುತ್ತದೆ.

    ಕಾಲಕಾಲಕ್ಕೆ ತಿದ್ದುಪಡಿ ಮಾಡಿದಂತೆ ಬ್ಯಾಂಕಿನ ನೇಮಕಾತಿ ನೀತಿಯ ಪ್ರಕಾರ ಜೂನಿಯರ್ ಅಸೋಸಿಯೇಟ್‌ಗಳ ನೇಮಕಾತಿಯಲ್ಲಿ ಅಪ್ರೆಂಟಿಸ್‌ಗಳಿಗೆ weightage /ಕೆಲ ಸಡಿಲಿಕೆಯನ್ನು ನೀಡಲಾಗುತ್ತದೆ. ಅಪ್ರೆಂಟಿಸ್‌ಶಿಪ್ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಮತ್ತು ಅಭ್ಯರ್ಥಿಯ ಸಂಪೂರ್ಣ ತರಬೇತಿ ಅವಧಿಯಲ್ಲಿ ತೃಪ್ತಿದಾಯಕ ನಡವಳಿಕೆಗೆ ಒಳಪಟ್ಟಿರುವ ಅಪ್ರೆಂಟಿಸ್‌ಗಳಿಗೆ ಜೂನಿಯರ್ ಅಸೋಸಿಯೇಟ್‌ಗಳ ನೇಮಕಾತಿಯಲ್ಲಿ ಸಡಿಲಿಕೆಯನ್ನು ನೀಡಲಾಗುವುದು. ಅಪ್ರೆಂಟಿಸ್‌ಶಿಪ್ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ  ಕೌಶಲ್ಯ ಮೌಲ್ಯಮಾಪನ ಪರೀಕ್ಷೆ (ಟ್ರೇಡ್ ಪರೀಕ್ಷೆ) ಮತ್ತು ಜಂಟಿ ರಾಷ್ಟ್ರೀಯತೆಯ ಅಪ್ರೆಂಟಿಸ್ ಶಿಪ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. SBI-NSDC/ BFSI-SSC ಜಂಟಿಯಾಗಿ ನೀಡಿದ ಅಪ್ರೆಂಟಿಸ್‌ಶಿಪ್ ಪ್ರಮಾಣಪತ್ರ ಅಗತ್ಯ.

    ತರಬೇತಿಯ ಅವಧಿ: ಒಂದು ವರ್ಷ ತರಬೇತಿಯ ಅವಧಿಯಲ್ಲಿ ಅಭ್ಯರ್ಥಿಗಳಿಗೆ ತಿಂಗಳಿಗೆ 15,000 ರೂ. ಸ್ಟೈಪೆಂಡ್ ನೀಡಲಾಗುತ್ತದೆ. ಇದರ ಹೊರತಾಗಿ ಯಾವುದೇ ಭತ್ಯೆಯನ್ನು ನೀಡಲಾಗುವುದಿಲ್ಲ.

    ಭಾಷಾವಾರು ನೇಮಕಾತಿ:

    ರಾಜ್ಯದ  ಸೀಟುಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳುಓದುವುದು,ಬರೆಯುವುದು, ಮಾತನಾಡುವುದು ಮತ್ತು ಅರ್ಥಮಾಡಿಕೊಳ್ಳುವುದರಲ್ಲಿ ಪ್ರವೀಣ ರಾಗಿರಬೇಕು  ಕನ್ನಡ ಸ್ಥಳೀಯ ಜ್ಞಾನದ ಪರೀಕ್ಷೆ ಆಯ್ಕೆ ಪ್ರಕ್ರಿಯೆಯ ಭಾಗವಾಗಿ ನಡೆಸಲಾಗುವುದು. ಆನ್‌ಲೈನ್ ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದ ನಂತರ ಇದನ್ನು ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆಯಲು ವಿಫಲರಾದ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲಾಗುವುದಿಲ್ಲ.10ನೇ ಅಥವಾ 12ನೇ ತರಗತಿಯ ಮಾರ್ಕ್ ಶೀಟ್/ಪ್ರಮಾಣ ಪತ್ರದಲ್ಲಿ ಅಭ್ಯರ್ಥಿಗಳು ನಿರ್ದಿಷ್ಟ ಪಡಿಸಿದ ಸ್ಥಳೀಯ ಭಾಷೆಯನ್ನು ಅಧ್ಯಯನ ಮಾಡಿದ್ದರೆ ಭಾಷೆಯ ಪರೀಕ್ಷೆಗೆ ಒಳಗಾಗುವ ಅಗತ್ಯವಿಲ್ಲ ಈ ಕಾರಣದಿಂದ. ಅಭ್ಯರ್ಥಿಗಳನ್ನು ಸ್ಥಳೀಯ ಭಾಷೆಯ ನಿರರ್ಗಳತೆ ಆಧಾರದಲ್ಲಿ ಕೂಡ ನೇಮಕಾತಿ ನಡೆಸಲಾಗುತ್ತಿದೆ ಎಂದು ಎಸ್‌ಬಿಐ ತಿಳಿಸಿದೆ.

    ಆಯ್ಕೆ ಹೇಗಿರಲಿದೆ?

    ಆನ್‌ಲೈನ್‌ ನಲ್ಲಿ ಲಿಖಿತ ಪರೀಕ್ಷೆ ಮತ್ತು ಸ್ಥಳೀಯ ಭಾಷಾ ಪರೀಕ್ಷೆ ದಾಖಲೆ ಪರಿಶೀಲನೆ,ವೈದ್ಯಕೀಯ ಪರೀಕ್ಷೆ, ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯುತ್ತದೆ. ಆನ್‌ಲೈನ್ ಪರೀಕ್ಷೆಯಲ್ಲಿ ಜನರಲ್ /ಫೈನಾನ್ಶಿಯಲ್ ಅವೇರ್ನೆಸ್, ಜನರಲ್ ಇಂಗ್ಲಿಷ್, ಕ್ವಾಂಟಿಟೇಟಿವ್ ಅಪ್ಟಿಟ್ಯೂಡ್ ಹಾಗೂ ರೀಸನಿಂಗ್ ಎಬಿಲಿಟಿ ಮತ್ತು ಕಂಪ್ಯೂಟರ್ ಅಪ್ಟಿಟ್ಯೂಡ್ ವಿಷಯಗಳಿಗೆ ತಲಾ 25 ಅಂಕಗಳಂತೆ 25 ಪ್ರಶ್ನೆಗಳನ್ನು ನೀಡಲಾಗುತ್ತದೆ. ಇದನ್ನು ಬರೆಯಲು ಪ್ರತಿ ಪತ್ರಿಕೆಗೆ 15 ನಿಮಿಷಗಳಂತೆ ಒಟ್ಟಾರೆ 1 ಗಂಟೆಯ ಅವಧಿ ನೀಡಲಾಗುತ್ತದೆ. ಇಂಗ್ಲಿಷ್‌ನಲ್ಲಿ ಪ್ರಶ್ನೆ ಇರುತ್ತದೆ. ಅಭ್ಯರ್ಥಿಗಳು ಕನ್ನಡ, ಇಂಗ್ಲಿಷ್ ಅಥವಾ ಹಿಂದಿ ಯಾವುದೇ ಮಾಧ್ಯಮದಲ್ಲಿ ಪರೀಕ್ಷೆ ಬರೆಯಬಹುದಾಗಿದೆ. ಆಬ್ಜೆಕ್ಟಿವ್ ಮಾದರಿಯಲ್ಲಿ ಪರೀಕ್ಷೆ ನಡೆಯಲಿದ್ದು ತಪ್ಪು ಉತ್ತರಕ್ಕೆ ¼  ರಷ್ಟು ಋಣಾತ್ಮಕ  ಮೌಲ್ಯ ಮಾಪನದಂತೆ ಅಂಕದ ಕಡಿತ ಕೂಡ ಇರಲಿದೆ.

    ಗಮನಿಸಿ

    ಒಮ್ಮೆ ಆಯ್ಕೆ ಮಾಡಿದ ಬಳಿಕ ಪರೀಕ್ಷಾ ಕೇಂದ್ರ ಬದಲಾಯಿಸಲು ಅವಕಾಶವಿಲ್ಲ

    ಸ್ವಂತ ಖರ್ಚಿನಲ್ಲಿಯೇ ಅಭ್ಯರ್ಥಿಗಳು ನೇಮಕ ಪ್ರಕ್ರಿಯೆಗಳಿಗೆಹಾಜರಾಗಬೇಕು.

    ಪರೀಕ್ಷೆಯಲ್ಲಿ ತೇರ್ಗಡೆಯಾದ ಬಳಿಕ

    ವೈದ್ಯಕೀಯ ಪರೀಕ್ಷೆಯಲ್ಲಿ ಅರ್ಹತೆ

    ಪಡೆಯುವುದು ಕಡ್ಡಾಯ.

    ಅಂತಿಮವಾಗಿ ದಾಖಲಾತಿ ಪರಿಶೀಲನೆ ನಡೆಸಿ ನೇಮಕ ಮಾಡಿಕೊಳ್ಳಲಾಗುತ್ತದೆ

    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ವೆಬ್ ವಿಳಾಸ sbi.co.in.

    ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಅಧಿಕಾರಿ ಹುದ್ದೆ

    ಬ್ಯಾಂಕ್  ನಲ್ಲಿ ಅಧಿಕಾರಿ ಯಾಗಬೇಕೆಂದು ಕನಸು ಹೊತ್ತವರಿಗೆ ಇಲ್ಲಿದೆ ಮತ್ತೊಂದು ಸಿಹಿ ಸುದ್ದಿ, ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ ದೇಶದ 11 ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ  ಖಾಲಿ ಇರುವ  ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಸರಿ ಸುಮಾರು  3,049 ಹುದ್ದೆಗಳಿಗೆ  ಪೂರ್ವಭಾವಿ ಹಾಗೂ ಮುಖ್ಯ ಪರೀಕ್ಷೆ,ಸಂದರ್ಶನ ನಡೆಸಲು ತೀರ್ಮಾನಿಸಿದೆ. ಪರಿಶಿಷ್ಟ ಜಾತಿಯವರಿಗೆ 462, ಪರಿಶಿಷ್ಟ ಪಂಗಡದವರಿಗೆ 234, ಹಿಂದುಳಿದ ವರ್ಗದವರಿಗೆ 829, ಸಾಮಾನ್ಯ ವರ್ಗದವರಿಗೆ 1,224 ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ 300 ಹುದ್ದೆಗಳು  ದೇಶಾದ್ಯಂತ ಮೀಸಲಾಗಿವೆ.

    ರಾಜ್ಯದ  13 ಜಿಲ್ಲಾ ಕೇಂದ್ರಗಳಲ್ಲಿ ಪೂರ್ವಭಾವಿ ಪರೀಕ್ಷೆ ಮತ್ತು 3 ಜಿಲ್ಲಾ ಕೇಂದ್ರಗಳಲ್ಲಿ ಮುಖ್ಯ ಪರೀಕ್ಷೆ ಆನ್ ಲೈನ್ ನಲ್ಲಿ ನಡೆಯಲಿದೆ.

    ಯಾವ ಬ್ಯಾಂಕಿನಲ್ಲಿ ಎಷ್ಟು ಹುದ್ದೆ?

    Sr. No.Participating BankSCSTOBCEWSURTOTAL
    1BANK OF INDIA3316602293224
    2CANARA BANK753713550203500  
    3CENTRAL BANK OF INDIA3001505402008102000
    4PUNJAB NATIONAL BANK3015542081200
    5PUNJAB&SIND BANK241640837125
                         
    total 4622348293001224 3049 
            

    ಕೆನರಾ ಬ್ಯಾಂಕ್ 500, ಪಂಜಾಬ್ ಎಂಡ್ ಸಿಂಧ ಬ್ಯಾಂಕ್ 125 , ಸೆಂಟ್ರಲ್ ಬ್ಯಾಂಕ್ ಆಪ್ ಇಂಡಿಯಾ 2000, ಬ್ಯಾಂಕ್ ಆಫ್ ಇಂಡಿಯಾ 224 ಪಂಜಾಬ್ ನ್ಯಾಷನಲ್ ಬ್ಯಾಂಕ್ 200 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವುದಾಗಿ ಪ್ರಕಟಿಸಿವೆ.

    ಶೈಕ್ಷಣಿಕ ಅರ್ಹತೆ:

    ಮಾನ್ಯತೆ ಪಡೆದ ವಿಶ್ವವಿದ್ಯಾಲಯ ದಿಂದ ಯಾವುದೇ ವಿಷಯದಲ್ಲಿ ಪದವಿ ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಸಮಾನ ಅರ್ಹತೆ.

    ಒಂದು ವೇಳೆ ಸಂದರ್ಶನಕ್ಕೆ ಕರೆ ಬಂದರೆ, ಅವರು 21 ನೇ ಅಗಸ್ಟ್ 2023 ಅಥವಾ ಅದಕ್ಕಿಂತ ಮೊದಲು ಪದವಿ ಪರೀಕ್ಷೆಯಲ್ಲಿ ಉತ್ತೀರ್ಣ ರಾಗಿರುವುದಕ್ಕೆ ಪುರಾವೆಗಳನ್ನು ಒದಗಿಸಬೇಕು.

    ಅರ್ಜಿ ಸಲ್ಲಿಕೆ ವಿಧಾನ: ಆನ್ ಲೈನ್.

    ಅರ್ಜಿ ಸಲ್ಲಿಕೆ ದಿನಾಂಕ: ಅಗಸ್ಟ್ 1 ರಿಂದ ಅಗಸ್ಟ್ 21 ರವರೆಗೆ.

    ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ನಿಮ್ಮ ಆಯ್ಕೆಯ ಬ್ಯಾಂಕಿನ ಆದ್ಯತೆಯ ಆದೇಶವನ್ನು ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಳವಡಿ ಸಲಾಗಿದೆ. ಅಭ್ಯರ್ಥಿಗಳು ಈ ಹಂತದಲ್ಲಿ ಅವರ ಬ್ಯಾಂಕ್ ಗಳ ಆದ್ಯತೆಯ ಕ್ರಮವನ್ನು ಅಗತ್ಯವಾಗಿ ಸೂಚಿಸಬೇಕು.

    ಯಾವ್ಯಾವ ಬ್ಯಾಂಕ್ ಗಳಲ್ಲಿ ಎಷ್ಟೆಷ್ಟು ಹುದ್ದೆಗಳಿವೆ ಹಾಗೂ ನಮ್ಮ ರಾಜ್ಯದಲ್ಲಿ ಶಾಖೆಗಳಿವೆಯಾ ಎಂಬುದರ ಮೇಲೆ ನಿಮ್ಮ ಆದ್ಯತೆಯ ಆಯ್ಕೆ ಇರಲಿ. ಒಮ್ಮೆ ನೀವು ಆಯ್ಕೆಯಾದರೆ ಬ್ಯಾಂಕ ಬದಲಾವಣೆಗೆ/ಸ್ಥಳ ಬದಲಾವಣೆಗೆ  ಯಾವುದೇ ವಿನಂತಿಯನ್ನು ನಂತರದ ದಿನಗಳಲ್ಲಿ ಪರಿಗಣಿಸಲಾ ಗುವುದಿಲ್ಲ. ಆಯ್ಕೆ ಪ್ರಕ್ರಿಯೆಯ ಹಂತದಲ್ಲಿ ಅಥವಾ ಅಪಾಯಿಂಟ್‌ಮೆಂಟ್‌ನ ನಂತರ ನಿಮ್ಮ ಕೈಬರಹದ ಘೋಷಣೆ ಹಾಗೂ ನಿಮ್ಮ ಕೈಬರಹ ದಲ್ಲಿ  ಭಿನ್ನವಾಗಿರುವುದು ತಜ್ಞರ ವಿಶ್ಲೇಷಣೆಯಲ್ಲಿ ಕಂಡುಬಂದರೆ, ಅಭ್ಯರ್ಥಿಯ ಉಮೇದುವಾ ರಿಕೆಯನ್ನ ರದ್ದುಗೊಳಿ ಸಲಾಗುವುದು. ಹೀಗಾಗಿ ಅರ್ಜಿ ಸಲ್ಲಿಸುವ ಹಂತದಲ್ಲಿಯೇ ಬಹಳ ಎಚ್ಚರಿಕೆಯಿಂದ ಅರ್ಜಿ ಸಲ್ಲಿಸುವುದು ಒಳಿತು.

    ಪೂರ್ವಭಾವಿ ಪರೀಕ್ಷೆಗೆ ತರಬೇತಿ:

    ಐಬಿಪಿಎಸ್ ವತಿಯಿಂದ ಎಸ್.ಸಿ/ಎಸ್‌.ಟಿ/ ಅಲ್ಪಸಂಖ್ಯಾತ ಅಭ್ಯರ್ಥಿಗಳು ಮಾಜಿ ಸೈನಿಕರು ವಿಕಲಚೇತನ ಅಭ್ಯರ್ಥಿಗಳಿಗೆ ಉಚಿತ ಪರೀಕ್ಷಾ ತರಬೇತಿ ನೀಡಲಾಗುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ಆನ್‌ ಲೈನ್ ನಲ್ಲಿ ಅರ್ಜಿ ಸಲ್ಲಿಸುವಾಗಲೇ ಅಭ್ಯರ್ಥಿಗಳು ಕೋರಿಕೆ ಸಲ್ಲಿ ಸಬೇಕಾಗುತ್ತದೆ. ತರಬೇತಿ ಸ್ಥಳದ ಖರ್ಚು ವೆಚ್ಚ ಹಾಗೂ ಪ್ರಯಾಣದ ಖರ್ಚು ವೆಚ್ಚವನ್ನು ಅಭ್ಯರ್ಥಿಗಳ ಭರಿಸಬೇಕಾಗುತ್ತದೆ.

    ಪರೀಕ್ಷಾ ಪ್ರಕ್ರಿಯೆ:

    ಮೊದಲ ಹಂತ: ಆನ್ಲೈನ್ ಪೂರ್ವಭಾವಿ ಪರೀಕ್ಷೆ – ಅಕ್ಟೋಬರ್ 2023

    ಎರಡನೇ ಹಂತ: ಆನ್ಲೈನ್ ಮುಖ್ಯ ಪರೀಕ್ಷೆ – ನವೆಂಬರ್, 2023

    ಮೂರನೇ ಹಂತ: ಸಂದರ್ಶನ ಜನವರಿ/ಫೆಬ್ರವರಿ,2024

    ವಯೋಮಿತಿ:

    01.08.2023 ಕ್ಕೆ, 20 ವರ್ಷಕ್ಕಿಂತ ಕಡಿಮೆ ಇರಬಾರದು. ಮತ್ತು 30 ವರ್ಷಗಳಿಗಿಂತ ಹೆಚ್ಚಿರಬಾರದು. ಅಂದರೆ 20 ವರ್ಷದಿಂದ 30 ವರ್ಷದೊಳಗಿನವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅಂದರೆ ಅಭ್ಯರ್ಥಿಗಳು 02.08.1993 ಕ್ಕಿಂತ ಮುಂಚಿತವಾಗಿ ಮತ್ತು 01.08.2003 ಕ್ಕಿಂತ ನಂತರ ಜನಿಸಿರಬಾರದು. (ಎರಡೂ ದಿನಾಂಕಗಳು ಒಳಗೊಂಡಂತೆ)

    ಎಸ್‌ಸಿ/ ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ವಿಕಲಚೇತನರಿಗೆ 10 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

    ಕ್ರೆಡಿಟ್ ಇತಿಹಾಸ:

    (i) ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಅವರು ಆರೋಗ್ಯಕರ ಕ್ರೆಡಿಟ್ ಇತಿಹಾಸವನ್ನು ಹೊಂದಿರಬೇಕು. ಮತ್ತು ಬ್ಯಾಂಕ್ ಗೆ  ಸೇರುವ ಸಮಯದಲ್ಲಿ ಕನಿಷ್ಠ CIBIL ಸ್ಕೋರ್ 650 ಅಥವಾ ಅದಕ್ಕಿಂತ ಹೆಚ್ಚಿರುವುದನ್ನು  ಖಚಿತ ಪಡಿಸಿ ಕೊಳ್ಳಬೇಕು. ಕನಿಷ್ಠ ಕ್ರೆಡಿಟ್ ಸ್ಕೋರ್ ಭಾಗವಹಿಸುವ ಬ್ಯಾಂಕ್ ಗಳ ನೀತಿಯ ಪ್ರಕಾರ ಇರುತ್ತದೆ, ಕಾಲಕಾಲಕ್ಕೆ ಅವುಗಳನ್ನ ತಿದ್ದುಪಡಿ ಮಾಡಲಾಗುತ್ತದೆ.

    (ii) ಸೇರುವ ದಿನಾಂಕದ ಮೊದಲು CIBIL ಸ್ಥಿತಿಯನ್ನು ನವೀಕರಿಸದ ಅಭ್ಯರ್ಥಿಗಳು, CIBIL ಸ್ಥಿತಿಯನ್ನು ನವೀಕರಿಸಬೇಕು ಅಥವಾ CIBIL ನಲ್ಲಿ ಪ್ರತಿಕೂಲವಾಗಿ ಪ್ರತಿಬಿಂಬಿತವಾಗಿರುವ ಖಾತೆಗಳಿಗೆ ಸಂಬಂಧಿಸಿದಂತೆ ಯಾವುದೇ ಬಾಕಿ ಉಳಿದಿಲ್ಲ ಎಂದು ಸಾಲದಾತರಿಂದ NOC ಗಳನ್ನು ಪಡೆಯಬೇಕು. ವಿಫಲವಾದರೆ ಆಫರ್ ಪತ್ರವನ್ನು ಹಿಂಪಡೆಯಲಾಗುತ್ತದೆ / ರದ್ದುಗೊಳಿಸಲಾಗುತ್ತದೆ.

    ಸೂಚನೆ: ಯಾವುದೇ ಬ್ಯಾಂಕ್ ಖಾತೆಯನ್ನು ಹೊಂದಿರದ ಅಭ್ಯರ್ಥಿಗಳು CIBIL ಸ್ಥಿತಿಯನ್ನು ಒದಗಿಸುವ ಅಗತ್ಯವಿಲ್ಲ.

    ಶುಲ್ಕಪಾವತಿ:

    ನೋಂದಣಿ ನಂತರ ಅಭ್ಯರ್ಥಿಗಳು ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್/ ಇಂಟರ್ನೆಟ್ ಬ್ಯಾಂಕಿಂಗ್ ಬಳಸಿ ಆನ್‌ಲೈನ್ ಮೋಡ್ ಮೂಲಕ ಅಗತ್ಯವಾದ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

    ಅರ್ಜಿ ಶುಲ್ಕ:

    850 ರೂ. ಉಳಿದೆಲ್ಲ ಅಭ್ಯರ್ಥಿಗಳಿಗೆ [ಜಿ ಎಸ್ ಟಿ ಸೇರಿ] (ಎಸ್‌ಸಿ/ಎಸ್‌ಟಿ/PWBD/ EXSM ಅಭ್ಯರ್ಥಿಗಳಿಗೆ 175 ರೂ.[ ಜಿ ಎಸ್ ಟಿ ಸೇರಿ] ಆನ್‌ಲೈನ್‌ ನಲ್ಲಿಯೇ ಅರ್ಜಿ ಶುಲ್ಕವನ್ನೂ ಪಾವತಿಸ ಬೇಕಿರುತ್ತದೆ.

    ನೆನಪಿಡಿ: ಒಬಿಸಿ ವರ್ಗಕ್ಕೆ ಸೇರಿದ ಆದರೆ ಕೆನೆ ಪದರದ ಅಡಿಯಲ್ಲಿ ಬರುವ ಅಭ್ಯರ್ಥಿಗಳು ಒಬಿಸಿ ಮೀಸಲಾತಿಗೆ ಅರ್ಹರಾಗಿರುವುದಿಲ್ಲ. ಅವರು ಆನ್‌ಲೈನ್ ಅರ್ಜಿ ನಮೂನೆಯಲ್ಲಿ ತಮ್ಮ ವರ್ಗವನ್ನು ಸಾಮಾನ್ಯ ಎಂದು ಸೂಚಿಸಬೇಕು. ಅಭ್ಯರ್ಥಿಯು ಕಾಲಕಾಲಕ್ಕೆ ಭಾರತ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಕೆನೆರಹಿತ ಲೇಯರ್ (Non cremy layer) ಷರತ್ತಿನೊಂದಿಗೆ  OBC ಪ್ರಮಾಣಪತ್ರವನ್ನು ಹೊಂದಿರಬೇಕು.

    ಈ ಬಾರಿಯ ಬದಲಾವಣೆ ಗಳೇನು?:

    ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವರ್ಷದಿಂದ ವರ್ಷಕ್ಕೆ ಕೆಲವು ಬದಲಾವಣೆಗಳು ಸಾಮಾನ್ಯ. ಹಾಗೆಯೇ ಈ ಬಾರಿಯ ಬದಲಾವಣೆಗಳು ಕೆಳಗಿನಂತಿವೆ:

    ಈ ಬಾರಿ ಅರ್ಜಿ ಸಲ್ಲಿಸುವಾಗ ಪರೀಕ್ಷೆಗೆ ನೀವು ತರುವ ಐಡಿ ಪ್ರೂಫ್‌ನ ಸಂಖ್ಯೆ ನೀಡುವುದು ಕಡ್ಡಾಯ ಹಾಗೂ ಅದು ನೀವು ಅರ್ಜಿ ಸಲ್ಲಿಸಿದ ಹೆಸರಿನೊಂದಿಗೆ ಹೊಂದಾಣಿಕೆಯಾಗಿರಬೇಕು. ಈ ಬಾರಿ ಪ್ರಿಲಿಮ್ಸ್ ಪರೀಕ್ಷೆಯ ಪ್ರವೇಶ ಪತ್ರವನ್ನು ಪರೀಕ್ಷಾ ಕೇಂದ್ರದಲ್ಲಿ ಸಂಗ್ರಹಿಸ ಲಾಗುವುದಿಲ್ಲ. ಬದಲಾಗಿ ಇದನ್ನು ಪರೀಕ್ಷಾ ಕೇಂದ್ರದ ಸಿಬ್ಬಂದಿಯಿಂದ ಧೃಡಪಡಿಸಿ ಕೊಳ್ಳುವ ಅಗತ್ಯವಿದೆ. ಮೇನ್ಸ್ ಪರೀಕ್ಷೆಗೆ ಅರ್ಹಗೊಂಡ ಅಭ್ಯರ್ಥಿಗಳು ಮೇನ್ಸ್ ಪರೀಕ್ಷೆಯ ಪ್ರವೇಶ ಪತ್ರದೊಂದಿಗೆ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ದೃಢೀಕರಣಗೊಂಡ ಪ್ರವೇಶ ಪತ್ರವನ್ನು ಕೂಡ ಸಲ್ಲಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ನೋಡಬಹುದು. ಕನಿಷ್ಟ 8 ಭಾವಚಿತ್ರವನ್ನು (ಅಭ್ಯರ್ಥಿಯು ಕಾಲ್-ಲೆಟರ್‌ನಲ್ಲಿ ಅಂಟಿಸಿದಂತೆಯೇ) ಹಾಗೂ  ಪ್ರಿಲಿಮ್ಸ್ ಹಾಗೂ ಮೇನ್ಸ್ ನ ಕರೆ ಪತ್ರದ  ಜೆರಾಕ್ಸ್ ಪ್ರತಿಯನ್ನು ಅಥವಾ ಹೆಚ್ಚುವರಿ ಪ್ರಿಂಟ್ ತೆಗೆದಿಟ್ಟುಕೊಳ್ಳಿ. ಕೊನೆಯಲ್ಲಿ ಅದರ ಪ್ರತಿಯನ್ನು ಬ್ಯಾಂಕ್ ಗಳಿಗೆ ಸೇರುವಾಗ ನೀಡಬೇಕು ಎಂಬುದನ್ನು ಮರೆಯಬೇಡಿ.

    ನಂತರದ ದಿನಗಳಲ್ಲಿ ವೆಬ್ ಸೈಟ್ ನಲ್ಲಿ ಸಿಗುವುದಿಲ್ಲ.

    ಅಭ್ಯರ್ಥಿಗಳು ಒಂದು ಹೆಚ್ಚುವರಿ ಛಾಯಾಚಿತ್ರವನ್ನು (ಅಭ್ಯರ್ಥಿಯು ಕಾಲ್ ಲೆಟರ್‌ನಲ್ಲಿ ಅಂಟಿಸಿದಂತೆಯೇ) ಜೊತೆಗೆ ಕರೆ ಪತ್ರ ಮತ್ತು ಇತರ ಅಗತ್ಯ ದಾಖಲೆಗಳೊಂದಿಗೆ “ಮಾಹಿತಿ ಕೈಪಿಡಿ” ಮತ್ತು ಕರೆ ಪತ್ರದಲ್ಲಿ ಸೂಚಿಸಿದ ಮಾಹಿತಿಯಂತೆ ತೆಗೆದುಕೊಂಡು ಹೋಗಬೇಕು.

    ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳ ನೋಂದಣಿ:

    ಎ.ಅಭ್ಯರ್ಥಿಗಳ ನೋಂದಣಿ  ಯನ್ನು ಫೋಟೋ ಕ್ಯಾಪ್ಚರ್ ಮೂಲಕ ಮಾಡಲಾಗುವುದು.

    ಬಿ.ಅಭ್ಯರ್ಥಿಯನ್ನು ಪರೀಕ್ಷಾ ಕೇಂದ್ರದಲ್ಲಿ ನಿಲ್ಲಿಸಿ ಛಾಯಾಚಿತ್ರ ತೆಗೆಯಲಾಗುವುದು.

    ಸಿ.ಅಭ್ಯರ್ಥಿಗಳಿಗೆ ಸೀಟ್ ನಂಬರ್ ನೀಡಲಾಗುತ್ತದೆ.

    ಡಿ.ರಫ್ ಶೀಟ್,(ಗಳನ್ನು) ಪ್ರತಿ ಕ್ಯಾಂಡಿಡೇಟ್ ಡೆಸ್ಕ್ ನಲ್ಲಿ ಇರಿಸಲಾಗಿರುತ್ತದೆ. ಪರೀಕ್ಷೆಯ ಕೊನೆಯಲ್ಲಿ ಅಭ್ಯರ್ಥಿಗಳಿಗೆ  ಸೂಚಿಸಿದಂತೆ ನಿಗದಿತ ಡ್ರಾಪ್ ಬಾಕ್ಸ್‌ನಲ್ಲಿ ರಫ್ ಶೀಟ್ ಗಳನ್ನು ಹಿಂತಿರುಗಿಸಬೇಕು.

    ಮುಖ್ಯ ಪರೀಕ್ಷೆಗೆ  ಸ್ಟ್ಯಾಂಪ್ ಮಾಡಿದ ಫೋಟೊ ಕಾಪಿಯನ್ನು ತರದೇ ಇರುವ ಅಭ್ಯರ್ಥಿಗಳನ್ನು ಪರೀಕ್ಷೆಗೆ ಹಾಜರಾಗಲು ಅನುಮತಿಸಲಾಗುವುದಿಲ್ಲ.

    ನೇಮಕ ಹೇಗೆ?

    ಮೊದಲ ಹಂತದಲ್ಲಿ ಪೂರ್ವ ಭಾವಿ ಪರೀಕ್ಷೆ (ಪ್ರಿಲಿಮ್ಸ್) ನಡೆಯಲಿದೆ.

    ಬೆಳಗಾವಿ, ಬೆಂಗಳೂರು, ಬೀದರ್, ಚಿಕ್ಕಬಳ್ಳಾಪುರ ದಾವಣಗೆರೆ, ದಾರವಾಡ ಕಲಬುರಗಿ, ಹಾಸನ, ಹುಬ್ಬಳ್ಳಿ, ಮಂಡ್ಯ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿಯಲ್ಲಿ ಪೂರ್ವಭಾವಿ  ಪರೀಕ್ಷಾ ಕೇಂದ್ರಗಳಿರಲಿವೆ. ಪೂರ್ವಭಾವಿ ಪರೀಕ್ಷೆ ಒಂದು ಗಂಟೆಗಳ ಕಾಲ ನಡೆಯಲಿದ್ದು,(ಪ್ರತಿ ಪತ್ರಿಕೆಗೂ  20 ನಿಮಿಷಗಳಂತೆ  ಒಟ್ಟಾರೆ 60 ನಿಮಿಷಗಳು) 100 ಅಂಕಗಳಿಗೆ ಕೇಳಲಾಗುತ್ತದೆ. (ಅಂದರೆ ಪ್ರತಿ ಪ್ರಶ್ನೆಗೆ ಒಂದೊಂದು ಅಂಕ ನಿಗದಿಯಾಗಿರುತ್ತದೆ) ಇದರಲ್ಲಿ ಇಂಗ್ಲೀಷ್ ಲಾಂಗ್ವೇಜಗೆ 30, ಕ್ವಾಂಟಿಟೇಟಿವ್ ಅಪ್ಟಿಟ್ಯೂಡ್ ಗೆ 35 ಹಾಗೂ ರೀಸನಿಂಗ್ ಎಬಿಲಿಟಿಯ 35 ಪ್ರಶ್ನೆಗಳಿರಲಿವೆ. ಪ್ರತಿ ಪರೀಕ್ಷೆಯಲ್ಲೂ ಕನಿಷ್ಟ ಅಂಕ ಗಳಿಸಬೇಕೆಂಬ ನಿಯಮವಿದೆ. ಅದರೆ ಒಟ್ಟಾರೆ ಹೆಚ್ಚು ಅಂಕಗಳಿಸುವುದು ಮುಖ್ಯ. (ಆಯಾ ವರ್ಗಗಳಿಗೆ ಇರುವ ಹುದ್ದೆಗಳ ಸಂಖ್ಯೆಗಿಂತ 10 ಪಟ್ಟು ಹೆಚ್ಚು ಅಭ್ಯರ್ಥಿಗಳನ್ನ ಮುಖ್ಯ ಪರೀಕ್ಷೆಗೆ ಆಯ್ಕೆ ಮಾಡುವುದರಿಂದ 1:10 ಅನುಪಾತ) ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಮುಂದಿನ ಹಂತದ ಅಂದರೆ ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆಯುತ್ತಾರೆ. ಮುಖ್ಯ ಪರೀಕ್ಷೆಯು ಬೆಂಗಳೂರು, ಹುಬ್ಬಳ್ಳಿ-ದಾರವಾಡ ಮತ್ತು ಮಂಗಳೂರಿನಲ್ಲಿ ಮಾತ್ರ ನಡೆಯಲಿದ್ದು, ಪರೀಕ್ಷೆಗಳು ಎರಡು ಹಂತಗಳಲ್ಲಿ ನಡೆಯಲಿದೆ. ನಿಗದಿತ ದಿನದಂದು ಆನ್ ಲೈನ್‌ನಲ್ಲಿಯೇ ಎರಡೂ ಲಿಖಿತ ಪರೀಕ್ಷೆಗಳು ನಡೆಯಲಿವೆ. ಮುಖ್ಯ ಪರೀಕ್ಷೆಯು ಮೂರು ಗಂಟೆ ಗಳ ಕಾಲ ನಡೆಯಲಿದ್ದು, 155 ಪ್ರಶ್ನೆಗಳನ್ನು  200 ಅಂಕಗಳಿಗೆ ಕೇಳಲಾಗುತ್ತದೆ.

    I. Reasoning & Computer Aptitude 45 ಪ್ರಶ್ನೆ  60 ಅಂಕಗಳು 60 ನಿಮಿಷಗಳು,

    II.General/ Economy/ Banking Awareness 40 ಪ್ರಶ್ನೆ 40 ಅಂಕಗಳು 35 ನಿಮಿಷಗಳು,

    III. English Language 35 ಪ್ರಶ್ನೆ 40 ಅಂಕಗಳು 40 ನಿಮಿಷಗಳು,

    VI.Data Analysis & Interpretation 35 ಪ್ರಶ್ನೆ 60 ಅಂಕಗಳು 45 ನಿಮಿಷಗಳು,(Table required)

    ಹೀಗೆ ಒಟ್ಟಾರೆ 155 ಪ್ರಶ್ನೆಗಳಿಗೆ 200 ಅಂಕಗಳು ನಿಗದಿಯಾಗಿದ್ದು ಹಾಗೂ 180 ನಿಮಿಷದ ಸಮಯ ನಿಗದಿಪಡಿಸಲಾಗಿದೆ. ಇಂಗ್ಲೀಷ್ ಭಾಷೆ ಒಂದನ್ನು ಹೊರತುಪಡಿಸಿ ಮತ್ತೆಲ್ಲಾ ಪ್ರಶ್ನೆಗಳು ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಇರುತ್ತದೆ. ತಪ್ಪು ಉತ್ತರ ಗುರುತಿಸಿದಲ್ಲಿ, ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಳಲ್ಲಿ ಆಯಾ ವಿಷಯಕ್ಕೆ ಪ್ರತಿ ಪ್ರಶ್ನೆಗೆ ನಿಗದಿ ಪಡಿಸಿದ ಅಂಕದ 0.25 ಅಂಕವನ್ನು  ಋಣಾತ್ಮಕ ಮೌಲ್ಯಮಾಪನದ ನಿಯಮದಂತೆ ಗಳಿಸಿದ ಅಂಕದಿಂದ ಕಳೆಯಲಾಗುತ್ತದೆ. ಪ್ರಶ್ನೆಯನ್ನು ಬರೆಯಲು ಪ್ರಯತ್ನಿಸದೆ ಹಾಗೆಯೆ ಬಿಟ್ಟರೆ, ಅಂದರೆ ಯಾವುದೇ ಉತ್ತರವನ್ನು ಗುರುತಿಸಲಾಗಿಲ್ಲದಿದ್ದರೆ ಅಂತಹ

    ಅಭ್ಯರ್ಥಿಗಳಿಗೆ, ಆ ಪ್ರಶ್ನೆಗೆ ಯಾವುದೇ ರೀತಿಯ ಋಣಾತ್ಮಕ ಮೌಲ್ಯಮಾಪನದ ನಿಯಮದಂತೆ ದಂಡವಿರುವುದಿಲ್ಲ.

    (ಮೇನ್ಸ್) ಮುಗಿಯುತ್ತಿದ್ದಂತೆಯೇ ಡಿಸ್ಸ್ಕ್ರಿಟಿವ್ ಟೆಸ್ಟ್ ಇಂಗ್ಲೀಷ್ ಭಾಷೆಗೆ (Letter Writing & Essay- with two questions)ಸಂಬಂಧಿಸಿದಂತೆ 25 ಅಂಕಗಳಿಗೆ ನಡೆಸಲಾಗುತ್ತದೆ. ಅವಧಿ 30 ನಿಮಿಷಗಳು. ಅಭ್ಯರ್ಥಿಗಳು ಕಂಪ್ಯೂಟರ್ ನಲ್ಲಿಯೇ ಉತ್ತರವನ್ನು ಬರೆಯಬೇಕು.

    ಇಂಗ್ಲಿಷ್ ಭಾಷೆಯ ವಿವರಣಾತ್ಮಕ ಪೇಪರ್ (ಪತ್ರ ಬರವಣಿಗೆ ಮತ್ತು ಪ್ರಬಂಧ) ಅನ್ನು ಸ್ವಯಂಚಾಲಿತ ಸ್ಕೋರಿಂಗ್ ಮೂಲಕ ಮೌಲ್ಯಮಾಪನಮಾಡಲಾಗುತ್ತದೆ. ಬರವಣಿಗೆಯ ಪ್ರಾವೀಣ್ಯತೆಗೆ ಸಂಬಂಧಿಸಿದಂತೆ ವೈಶಿಷ್ಟ್ಯಗಳನ್ನು ಗುರುತಿಸುವುದು ಇದರ ಕಾರ್ಯವಿಧಾನವಾಗಿದೆ. ಆಂಗ್ಲ ಭಾಷೆಯಲ್ಲಿ ಹಾಗೂ ಬರವಣಿಗೆಯಲ್ಲಿ ಪರೀಕ್ಷೆ ಬರೆಯುವವರ ಪ್ರಾವೀಣ್ಯತೆ ಯನ್ನು ವಸ್ತುನಿಷ್ಠ ರೀತಿಯಲ್ಲಿ ಮೌಲ್ಯಮಾಪನ ಮಾಡುವ ವಿಶಿಷ್ಟ ವಿಧಾನವಾಗಿದೆ.

    ನೆನಪಿಡಿ:ಕನ್ನಡದಲ್ಲಿ ಪರೀಕ್ಷೆ  ಬರೆಯಲು ಅವಕಾಶ ಇಲ್ಲ.

    ಈ ಎರಡೂ ಪರೀಕ್ಷೆಗಳಲ್ಲಿ ಬ್ಯಾಂಕ್ ನಿಗದಿಪಡಿಸಿದಷ್ಟು ಅಂಕ ಪಡೆದವರು ಮಾತ್ರ ಮೂರನೇ ಹಂತಕ್ಕೆ ಅರ್ಹರಾಗುತ್ತಾರೆ.

    ಅಭ್ಯರ್ಥಿಯು ಆನ್‌ಲೈನ್ ಮುಖ್ಯ ಪರೀಕ್ಷೆಯ ಪ್ರತಿ ಪರೀಕ್ಷೆಯಲ್ಲಿ ಕನಿಷ್ಠ ಅಂಕ ಪಡೆದಿರಬೇಕು ಮತ್ತು ಸಂದರ್ಶನಕ್ಕೆ ಶಾರ್ಟ್‌ಲಿಸ್ಟ್ ಎಂದು ಪರಿಗಣಿಸಬೇಕಾದ ಕನಿಷ್ಠ ಒಟ್ಟು ಅಂಕಗಳನ್ನು ಗಳಿಸಿರಬೇಕು.ಕನಿಷ್ಠ ಅಂಕಗಳು ಖಾಲಿ ಹುದ್ದೆಗಳ ಸಂಖ್ಯೆಯನ್ನು ಅವಲಂಬಿಸಿರುತ್ತದೆ. ಮತ್ತು ಅವುಗಳ ಮೇಲೆ ಕಟ್-ಆಫ್‌ಗಳನ್ನು ನಿರ್ಧರಿಸಲಾಗುವುದು ಮತ್ತು ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ.

    ಸಂದರ್ಶನಕ್ಕಾಗಿ ಶಾರ್ಟ್‌ಲಿಸ್ಟ್ ಮಾಡಲಾದ ಅಭ್ಯರ್ಥಿಗಳಿಗೆ

    ಸಂದರ್ಶನ ಪ್ರಕ್ರಿಯೆ, ಪೂರ್ಣಗೊಳಿಸುವ ಮೊದಲು

    ಆನ್‌ಲೈನ್ ಮುಖ್ಯ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಅಭ್ಯರ್ಥಿಗಳೊಂದಿಗೆ ಹಂಚಿಕೊಳ್ಳಲಾಗುವುದಿಲ್ಲ.

    ಸಂದರ್ಶನದ ಸಂದರ್ಭದಲ್ಲಿ ‘ಒಬಿಸಿ’ ವರ್ಗದ  ಅಡಿಯಲ್ಲಿ ಹಂತ -3 ಕ್ಕೆ ಅರ್ಹತೆ ಪಡೆದ ಅಭ್ಯರ್ಥಿಗಳು ಒಬಿಸಿ ಪ್ರಮಾಣಪತ್ರವನ್ನು ‘ಕೆನೆರಹಿತ ಪದರ'(‘Non-Creamy layer’) ಷರತ್ತನ್ನು ಒಳಗೊಂಡಿರುವುದನ್ನು ಸಲ್ಲಿಸಬೇಕಾಗುತ್ತದೆ. EWS ವರ್ಗದ ಅಡಿಯಲ್ಲಿ ಹಂತ -3 ಕ್ಕೆ ಅರ್ಹತೆ ಪಡೆದ ಅಭ್ಯರ್ಥಿಗಳು 2022-23ರ ಆರ್ಥಿಕ ವರ್ಷದ ಒಟ್ಟು ವಾರ್ಷಿಕ ಆದಾಯದ ಆಧಾರದ ಮೇಲೆ EWS ಪ್ರಮಾಣಪತ್ರವನ್ನು ಸಲ್ಲಿಸ ಬೇಕಾಗುತ್ತದೆ.

    ಆಯ್ಕೆ ಪಟ್ಟಿ:

    ಅಂತಿಮ ಸುತ್ತಿಗೆ ಆಯ್ಕೆಯಾದ ಅಭ್ಯರ್ಥಿಗಳು ಹಂತ-II ಮತ್ತು ಹಂತ-III ಎರಡರಲ್ಲೂ ಪ್ರತ್ಯೇಕವಾಗಿ ಅರ್ಹತೆ ಪಡೆದಿರಬೇಕು. ಸಂದರ್ಶನಕ್ಕೆ ನಿಗದಿ ಪಡಿಸಲಾದ ಒಟ್ಟು ಅಂಕಗಳು 100. ಸಂದರ್ಶನದಲ್ಲಿ ಕನಿಷ್ಠ ಅರ್ಹತಾ ಅಂಕಗಳು 40% (35% SC/ST/OBC/PWBD ಅಭ್ಯರ್ಥಿಗಳಿಗೆ). ಆನ್‌ಲೈನ್ ಮುಖ್ಯ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಪಡೆದ ಅಂಕಗಳನ್ನು ಕ್ರಮವಾಗಿ 80:20 ಅನುಪಾತದ ಆಧಾರದ ಮೇಲೆ ಮೆರಿಟ್ ಪಟ್ಟಿ ತಯಾರಿಸಿ, ನೇಮಕಾತಿ ಮಾಡಿಕೊಳ್ಳ ಲಾಗುತ್ತದೆ.

    ಅರ್ಜಿ ಸಲ್ಲಿಸಲು ಹಾಗೂ

    ನೋಂದಣಿಗೆ ಬಳಸಬೇಕಾದ ಲಿಂಕ್:

    Website: www.ibps.in

    ವೈದ್ಯಕೀಯ, ಎಂಜಿನಿಯರಿಂಗ್ ಸೇರಿ ಎಲ್ಲ ಕೋರ್ಸ್ ಗಳಿಗೂ ಒಮ್ಮೆಗೇ ಸೀಟು‌ ಹಂಚಿಕೆ

    ಸಿಇಟಿ: ಈ ಬಾರಿ ಸಂಯೋಜಿತ ಸೀಟು ಹಂಚಿಕೆ

    BENGALURU JULY 24

    ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಇದುವರೆಗೂ ಪ್ರತ್ಯೇಕವಾಗಿಯೇ ಸೀಟು ಹಂಚಿಕೆ ಪ್ರಕ್ರಿಯೆ ನಡೆಸುತ್ತಿದ್ದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪ್ರಸಕ್ತ ಸಾಲಿನಿಂದ (2023-24) ಎಲ್ಲವನ್ನೂ ಒಟ್ಟಿಗೇ, ಒಮ್ಮೆಗೇ ನಡೆಸಲು ತೀರ್ಮಾನಿಸಿದೆ.

    ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮತ್ತು ಅನಗತ್ಯ ವಿಳಂಬವನ್ನು ತಪ್ಪಿಸುವ ಉದ್ದೇಶದಿಂದ ಈ ಸುಧಾರಣಾ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ವೈದ್ಯಕೀಯ, ದಂತ ವೈದ್ಯಕೀಯ, ಎಂಜಿನಿಯರಿಂಗ್, ಪಶುವೈದ್ಯ, ಕೃಷಿ, ನರ್ಸಿಂಗ್, ಅರ್ಕಿಟೆಕ್ಟ್ ಹಾಗೂ ಫಾರ್ಮಸಿ ಕೋರ್ಸ್ ಗಳ ಪ್ರವೇಶಕ್ಕೆ ಸಂಯೋಜಿತ ಸೀಟು ಹಂಚಿಕೆ {Combined Seat Allotment) ಪ್ರಕ್ರಿಯೆಯನ್ನು ನಡೆಸಲಾಗುತ್ತದೆ. ಹೀಗೆ ಮಾಡುತ್ತಿರುವುದು ಇದೇ ಮೊದಲು ಎಂದು ಅವರು ವಿವರಿಸಿದ್ದಾರೆ.

    ಪ್ರತ್ಯೇಕ ಸೀಟು ಹಂಚಿಕೆ ಪ್ರಕ್ರಿಯೆಯಿಂದಾಗಿ ಸಾಕಷ್ಟು ಅನಾನುಕೂಲಗಳು ಇದ್ದವು. ಒಬ್ಬ ಅಭ್ಯರ್ಥಿ ಒಮ್ಮೆಗೇ ಒಂದಕ್ಕಿಂತ ಹೆಚ್ಚು ಕೋರ್ಸ್ ಗಳಲ್ಲಿ ಸೀಟು ಪಡೆದು, ನಂತರ ಆತ ಯಾವುದಾದರು ಒಂದಕ್ಕೆ ಪ್ರವೇಶ ಪಡೆಯುವವರೆಗೂ ಉಳಿದ ಕೋರ್ಸ್ಗಳಲ್ಲಿನ ಸೀಟು ಬೇರೆಯ ಅಭ್ಯರ್ಥಿಗಳಿಗೆ ಲಭ್ಯವಾಗುತ್ತಿರಲಿಲ್ಲ. ಇದರಿಂದ ಪ್ರತಿಭಾವಂತರಿಗೆ ಆಯ್ಕೆ ಸುತ್ತಿನಲ್ಲಿ ಸೀಟು ಕೈತಪ್ಪುತ್ತಿತ್ತು ಎಂದು ಅವರು ಹೇಳಿದ್ದಾರೆ.

    ಅಭ್ಯರ್ಥಿಗಳು ಯಾವುದೇ ಕೋರ್ಸ್ಗಳಿಗೆ ಪ್ರವೇಶ ಬಯಸಿದ್ದಲ್ಲಿ ಸೀಟ್ ಮ್ಯಾಟ್ರಿಕ್ಸ್ ಪ್ರಕಾರ ಶುಲ್ಕ ಮತ್ತು ಲಭ್ಯವಿರುವ ಸೀಟುಗಳನ್ನು ಪರಿಶೀಲಿಸಿ, ನಂತರ ತಮ್ಮ ಆದ್ಯತೆಯನುಸಾರ ಸೀಟುಗಳ ಆಪ್ಷನ್ ಎಂಟ್ರಿ ಮಾಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.

    ಹೊಸ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತೆ?

    ಅಭ್ಯರ್ಥಿಯು ಆಪ್ಷನ್ ಎಂಟ್ರಿ ಮಾಡುವಾಗ ತನ್ನ ಮೊದಲ ಆದ್ಯತೆಯ ಕೋರ್ಸ್ ಗಳನ್ನು ಮೊದಲು ದಾಖಲಿಸಬೇಕು. ಒಂದು ವೇಳೆ ಮೊದಲ ಆದ್ಯತೆಯ ಕೋರ್ಸ್ ಸಿಗದಿದ್ದರೆ ಅದರ ನಂತರದ ಆಯ್ಕೆಯ ಕೋರ್ಸ್ ಯಾವುದು ಎನ್ನುವುದನ್ನು ಎರಡನೇ ಆದ್ಯತೆಯಾಗಿ ದಾಖಲಿಸಬೇಕು. ಉದಾಹರಣೆಗೆ ವೈದ್ಯಕೀಯ ಕೋರ್ಸ್ ಬೇಕೆಂದು ಮೊದಲ ಆದ್ಯತೆ ನೀಡುವ ಅಭ್ಯರ್ಥಿ, ಒಂದು ವೇಳೆ ಅದು ಸಿಗದಿದ್ದಾಗ ತನ್ನ ಆದ್ಯತೆ ಎಂಜಿನಿಯರಿಂಗ್ ಎನ್ನುವುದನ್ನು ದಾಖಲಿಸಬೇಕು. ಆಗ ವೈದ್ಯಕೀಯ ಸೀಟು ಸಿಗದಿದ್ದಾಗ ನಂತರದ ಆದ್ಯತೆಯಾದ ಎಂಜಿನಿಯರಿಂಗ್ ನಲ್ಲಿ ಸೀಟು ಹಂಚಿಕೆ ಆಗುತ್ತದೆ. ಇದೇ ರೀತಿ ಸೀಟ್ ಮ್ಯಾಟ್ರಿಕ್ಸ್ ಪ್ರಕಾರ ಎಷ್ಟು ಕೋರ್ಸ್ ಗಳು ಇವೆಯೊ ಅಷ್ಟೂ ಕೋರ್ಸ್ಗಳಿಗೆ ಆದ್ಯತೆಯನುಸಾರ ಆಪ್ಷನ್ ಎಂಟ್ರಿ ಮಾಡುವುದರ ಮೂಲಕ ಸೀಟು ಪಡೆಯಬಹುದು ಎಂದು ಅವರು ವಿವರಿಸಿದರು.

    ಅಭ್ಯರ್ಥಿಯ ಮೆರಿಟ್, ಮೀಸಲಾತಿ ಹಾಗೂ ಆಪ್ಷನ್ ಎಂಟ್ರಿ ಆಧಾರದ ಮೇಲೆ ಮೊದಲ ಸುತ್ತಿನ ಸೀಟು ಹಂಚಿಕೆ ನಡೆಯುತ್ತದೆ. ಕೆಲ ಅಭ್ಯರ್ಥಿಗಳಿಗೆ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಎರಡೂ ಕೋರ್ಸ್ ಗಳಲ್ಲಿ ಸೀಟು ದೊರೆಯುವ ಸಾಧ್ಯತೆ ಇರುತ್ತದೆ. ಅಂತಹವರು ಚಾಯ್ಸ್ ಎಂಟ್ರಿ ಸ್ಕ್ರೀನ್ ನಲ್ಲಿ ಇವೆರಡರಲ್ಲಿ (ವೈದ್ಯಕೀಯ ಅಥವಾ ಎಂಜಿನಿಯರಿಂಗ್) ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಂತರ ಚಲನ್ ಮೂಲಕ ಶುಲ್ಕ ಪಾವತಿಸಿ ಆಡ್ಮಿಷನ್ ಆರ್ಡ್ರನ್ನು ಆನ್ ಲೈನ್ ಮೂಲಕ ಪಡೆದು ಸಂಬಂಧಪಟ್ಟ ಕಾಲೇಜಿಗೆ ವರದಿ ಮಾಡಿಕೊಳ್ಳಬೇಕಾಗುತ್ತದೆ. ಬಳಿಕ ಅದನ್ನು ಕಾಲೇಜಿನ ಪೋರ್ಟಲ್ ನಲ್ಲಿ ತಪ್ಪದೇ ಅಪ್ ಡೇಟ್ ಮಾಡಿಸಬೇಕು. ಒಂದು ವೇಳೆ ಹಾಗೆ ಮಾಡದಿದ್ದರೆ ಸದರಿ ಸೀಟು ಖಾಲಿ ಇದೆ ಎಂದು ಭಾವಿಸಿ, ಅದನ್ನು ಮುಂದಿನ ಸುತ್ತಿನ ಹಂಚಿಕೆಗೂ ಬಳಸಿಕೊಳ್ಳುವ ಅಪಾಯ ಇರುತ್ತದೆ.‌

    ಎರಡನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಅಭ್ಯರ್ಥಿಯು ಮಾಡಿರುವ ಆಪ್ಷನ್ ಎಂಟ್ರಿ ಪ್ರಕಾರ ಯಾವುದಾದರೊಂದು ಕೋರ್ಸ್ ನಲ್ಲಿ (ವೈದ್ಯಕೀಯ, ಎಂಜಿನಿಯರಿಂಗ್, ಪಶುವೈದ್ಯ ಇತ್ಯಾದಿ) ಸೀಟು ಪಡೆಯಬೇಕು.ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್ ಗಳಲ್ಲಿ ಎರಡನೇ ಸುತ್ತಿನ ಸೀಟು ಹಂಚಿಕೆ ನಂತರ ಕಡ್ಡಾಯವಾಗಿ ತಮಗೆ ಹಂಚಿಕೆಯಾದ ಸೀಟಿಗೆ ಶುಲ್ಕ ಪಾವತಿಸಿ, ಪ್ರವೇಶ ಪಡೆಯಬೇಕು. ಇಲ್ಲದಿದ್ದರೆ ಸದರಿ ಸೀಟುಗಳನ್ನು ದಂಡದ ಮೊತ್ತ ಪಾವತಿಸಿ ರದ್ದುಪಡಿಸಬೇಕು. ಎರಡನೇ ಸುತ್ತಿನಲ್ಲಿ ವೈದ್ಯಕೀಯ ಸೀಟು ಹಂಚಿಕೆಯಾದ ಅಭ್ಯರ್ಥಿಗಳಿಗೆ ಮಾಪ್ಅಪ್ ಸುತ್ತಿನಲ್ಲಿ ಭಾಗವಹಿಸಲು ಅರ್ಹತೆ ಇರುವುದಿಲ್ಲ. ಆದರೆ ಎರಡನೇ ಸುತ್ತಿನಲ್ಲಿ ದಂತ ವೈದ್ಯಕೀಯ ಸೀಟು ದೊರೆತ ಅಭ್ಯರ್ಥಿಗಳು ಸೀಟನ್ನು ರದ್ದುಪಡಿಸದೇ ವೈದ್ಯಕೀಯ ಕೋರ್ಸ್‌ ನ ಮಾಪ್ ಅಪ್ ಸುತ್ತಿನಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ.

    ಎಂಜಿನಿಯರಿಂಗ್ ಸೀಟುಗಳಿಗೆ ಮೂರನೇ ಸುತ್ತಿನವರೆಗೂ ಭಾಗವಹಿಸಬಹುದು. ಆದರೆ ಎರಡನೇ ಸುತ್ತಿನಲ್ಲಿ ಸೀಟು ಹಂಚಿಕೆಯಾದಲ್ಲಿ ಶುಲ್ಕು ಪಾವತಿಸುವುದು ಕಡ್ಡಾಯವಾಗಿರುತ್ತದೆ. ಮೂರನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಜಾಯ್ಸ್-3 ಕೊಟ್ಟಿರುವ ಅಭ್ಯರ್ಥಿಗಳು ಹಾಗೂ ಯಾವುದೇ ಸೀಟು ಹಂಚಿಕೆಯಾಗದ ಅಭ್ಯರ್ಥಿಗಳ ಮೊದಲೆರಡು ಸುತ್ತಿನಲ್ಲಿ ಮಾಡಿದ್ದ ಆಪ್ಷನ್ ಎಂಟ್ರಿಗಳನ್ನು ಡಿಲೀಟ್ ಮಾಡಲಾಗಿರುತ್ತದೆ. ಅಭ್ಯರ್ಥಿಯು ಮೂರನೇ ಸುತ್ತಿಗೆ ಹೊಸದಾಗಿ ಆಪ್ಷನ್ ಎಂಟ್ರಿ ಮಾಡಬೇಕು. ಮೂರನೇ ಸುತ್ತಿನಲ್ಲಿ ಹಂಚಿಕೆಯಾದ ಸೀಟನ್ನು ರದ್ದುಪಡಿಸಲು ಎಲ್ಲ ವರ್ಗದ ಅಭ್ಯರ್ಥಿಗಳು ಶುಲ್ಕದ ಐದು ಪಟ್ಟು ದಂಡ ಕಟ್ಟಬೇಕಾಗುತ್ತದೆ. ಹೀಗಾಗಿ ಅಭ್ಯರ್ಥಿಗಳು ಎಚ್ಚರಿಕೆಯಿಂದಲೇ ಮೂರನೇ ಸುತ್ತಿನ ಆಪ್ಷನ್ ಎಂಟ್ರಿ ಮಾಡಬೇಕು.

    ಮಾಪ್ಅಪ್ ಸುತ್ತು:
    ಎರಡನೇ ಸುತ್ತಿನಲ್ಲಿ ಎಂಜಿನಿಯರಿಂಗ್, ನರ್ಸಿಂಗ್, ಆರ್ಕಿಟೆಕ್ಟರ್, ಪಶುವೈದ್ಯಕೀಯ, ಕೃಷಿ – ಸೀಟು ದೊರೆತ ಅಭ್ಯರ್ಥಿಗಳು ದಂಡ ಪಾವತಿಸಿ, ತಮ್ಮ ಸೀಟನ್ನು ರದ್ದುಪಡಿಸಿದ ನಂತರವೇ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ ನ ಮಾಪ್ಅಪ್ ಸುತ್ತಿನಲ್ಲಿ ಭಾಗವಹಿಸಬಹದು.
    ಅದೇ ರೀತಿ ಎರಡನೇ ಸುತ್ತಿನಲ್ಲಿ ವೈದ್ಯಕೀಯ, ದಂತ ವೈದ್ಯಕೀಯ ಸೀಟುಗಳು ಹಂಚಿಕೆಯಾದ ಅಭ್ಯರ್ಥಿಗಳು ಸದರಿ ಸೀಟುಗಳನ್ನು ದಂಡ ಪಾವತಿಸಿ ರದುಪಡಿಸಿದ ನಂತರ ಎಂಜಿನಿಯರಿಂಗ್ ಮಾಪ್ಅಪ್ ಸುತ್ತಿನಲ್ಲಿ ಭಾಗವಹಿಸಬಹುದು.

    ಬ್ಯಾಂಕ್ ನೇಮಕಾತಿ:ಕ್ಲರಿಕಲ್ ಹುದ್ದೆಗೆ ಅಧಿಸೂಚನೆ ಪ್ರಕಟ: ಅರ್ಜಿ ಸಲ್ಲಿಸಲು ಜುಲೈ 28ರವರೆಗೆ ಅವಕಾಶ

    ಬ್ಯಾಂಕಿನಲ್ಲಿ ಗುಮಾಸ್ತರಾಗಬೇಕೆಂದು ಕನಸು ಹೊತ್ತವರಿಗೆ ಇಲ್ಲಿದೆ ಮತ್ತೊಂದು ಸಿಹಿ ಸುದ್ದಿ. ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ ದೇಶದ 11 ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ  ಖಾಲಿ ಇರುವ  ಗುಮಾಸ್ತ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಸರಿ ಸುಮಾರು  4,545 ಹುದ್ದೆಗಳಿಗೆ  ಪೂರ್ವಭಾವಿ ಹಾಗೂ ಮುಖ್ಯ ಪರೀಕ್ಷೆ ನಡೆಸಲು ತೀರ್ಮಾನಿಸಿದೆ.

    2022-23 ರಲ್ಲಿ 6,035 ಹುದ್ದೆಗಳಿಗೆ ನೇಮಕ ನಡೆಸಲು ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ ಈ ವರ್ಷ ಕೇವಲ 4,545 ಹುದ್ದೆಗಳಿಗೆ ನೇಮಕ ನಡೆಯಲಿದೆ.ಇದರಿಂದ ವರ್ಷದಿಂದ ವರ್ಷಕ್ಕೆ ನೇಮಕಾತಿಯಲ್ಲಿ ಇಳಿಮುಖವಾಗಿರೋದನ್ನ ಸ್ಪಷ್ಟವಾಗಿ ಕಾಣಬಹುದು.ಕಳೆದ ಬಾರಿ ರಾಜ್ಯದಲ್ಲಿ 358 ಹುದ್ದೆಗಳಿದ್ದರೆ ಈ ಬಾರಿ ಕೇವಲ 253 ಹುದ್ದೆಗಳಿಗೆ ಮಾತ್ರ ನೇಮಕ ನಡೆಯಲಿದೆ.ಇದರಿಂದ ಆಕಾಂಕ್ಷಿಗಳು ನಿರಾಸೆಯಾಗುವ ಅಗತ್ಯವಿಲ್ಲ.ವಿಲೀನದ ನಂತರದ  ಈ ಹಿಂದಿನ ಕಾರ್ಪೋರೇಷನ್ ಬ್ಯಾಂಕ್ ವಿಲೀನವಾದ ಯೂನಿಯನ್ ಬ್ಯಾಂಕ್ ಇನ್ನು ಹುದ್ದೆಗಳ ಮಾಹಿತಿಯನ್ನು ಐಬಿಪಿಎಸ್ ಗೆ ನೀಡಿಲ್ಲ.ಕೊನೆಯ ಕ್ಷಣದಲ್ಲಿ ಬದಲಾವಣೆ ಆಗಲುಬಹುದು.

    ರಾಜ್ಯದಲ್ಲಿ ಪರೀಕ್ಷಾ ಕೇಂದ್ರಗಳೆಲ್ಲಿ?:

    ರಾಜ್ಯದ  11 ಜಿಲ್ಲಾ ಕೇಂದ್ರಗಳಲ್ಲಿ ಪೂರ್ವಭಾವಿ ಪರೀಕ್ಷೆ ( ಬೆಂಗಳೂರು, ಬೆಳಗಾವಿ, ಬೀದರ್, ಕಲಬುರಗಿ, ದಾವಣಗೆರೆ,ಹುಬ್ಬಳ್ಳಿ-ಧಾರವಾಡ, ಮೈಸೂರು, ಮಂಗಳೂರು, ಶಿವಮೊಗ್ಗ ಮತ್ತು ಉಡುಪಿ. ಮತ್ತು 3 ಜಿಲ್ಲಾ ಕೇಂದ್ರಗಳಲ್ಲಿ(ಬೆಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡ ಮಂಗಳೂರು  )ಮುಖ್ಯ ಪರೀಕ್ಷೆ ಆನ್ ಲೈನ್ ನಲ್ಲಿ ನಡೆಯಲಿದೆ.

    ಯಾವ ಬ್ಯಾಂಕಿನಲ್ಲಿ ಎಷ್ಟು ಹುದ್ದೆ?

    ಪಂಜಾಬ್ ಎಂಡ್ ಸಿಂಧ ಬ್ಯಾಂಕ್ 9, ಸೆಂಟ್ರಲ್ ಬ್ಯಾಂಕ್ ಆಪ್ ಇಂಡಿಯಾ 61, ಬ್ಯಾಂಕ್ ಆಫ್ ಇಂಡಿಯಾ 3, ಪಂಜಾಬ್ ನ್ಯಾಷನಲ್ ಬ್ಯಾಂಕ್ 15,  ಕೆನರಾ ಬ್ಯಾಂಕನಲ್ಲಿ165 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವುದಾಗಿ ಪ್ರಕಟಿಸಿವೆ. ಹೀಗೆ ಒಟ್ಟಾರೆ ಕರ್ನಾಟಕದಲ್ಲಿ 253 ಹುದ್ದೆಗಳಿವೆ.

    ಶೈಕ್ಷಣಿಕ ಅರ್ಹತೆ:

    ಮಾನ್ಯತೆ ಪಡೆದ ವಿಶ್ವವಿದ್ಯಾಲಯ ದಿಂದ ಯಾವುದೇ ವಿಷಯದಲ್ಲಿ ಪದವಿ ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಸಮಾನ ಅರ್ಹತೆ. ಅಭ್ಯರ್ಥಿಯು ಕಂಪ್ಯೂಟರ್ ನಲ್ಲಿ ಕಾರ್ಯ ನಿರ್ವಹಿಸುವ ಜ್ಞಾನ ಹೊಂದಿರುವುದು ಕಡ್ಡಾಯ. ಹೀಗಾಗಿ ಕಂಪ್ಯೂಟರ್ ಕಲಿಕೆಯ ಬಗ್ಗೆ ದೃಢೀಕರಣ ಪತ್ರವನ್ನು ಕೂಡ ಅಭ್ಯರ್ಥಿಯು ಹೊಂದಿರಬೇಕಾಗುತ್ತದೆ.(ಕಂಪ್ಯೂಟರ್ ಗೆ ಸಂಬಂಧಿಸಿದ ವಿಷಯದಲ್ಲಿ ಸರ್ಟಿಫಿಕೇಟ್/ ಡಿಪ್ಲೊಮಾ ಅಥವಾ ಡಿಗ್ರಿ ಪಡೆದಿರುವುದು ಅಥವಾ ಶಾಲೆ ಅಥವಾ ಕಾಲೇಜಿನಲ್ಲಿ ಕಂಪ್ಯೂಟರ್ ಅಥವಾ ಐಟಿ(InformationTechnology) ಯನ್ನು ಒಂದು ವಿಷಯವಾಗಿ ಓದಿರಬೇಕು. ಅಲ್ಲದೆ, ರಾಜ್ಯದ ಅಧಿಕೃತ ಭಾಷೆಯಲ್ಲಿ ಮಾತನಾಡುವ, ಬರೆಯುವ ಸಾಮರ್ಥ್ಯ ಹೊಂದಿರಬೇಕು.

    ಗಮನಿಸಿ: ಪದವಿ ಪೂರ್ಣಗೊಳಿಸಿ ದವರು ಮಾತ್ರ ಅರ್ಜಿ ಸಲ್ಲಿಸಬಹುದು. ಪದವಿಯಲ್ಲಿ ಪಡೆದ ಶೇಕಡಾವಾರು ಅಂಕಗಳನ್ನು ಅರ್ಜಿಯಲ್ಲಿ ಭರ್ತಿ ಮಾಡಬೇಕಾಗಿರುತ್ತದೆ.

    ಕನ್ನಡದಲ್ಲಿ ಪರೀಕ್ಷೆ:

    ಕರ್ನಾಟಕದ ಅಭ್ಯರ್ಥಿಗಳು ಹಿಂದಿ ಅಥವಾ ಇಂಗ್ಲಿಷ್ ಜೊತೆಗೆ ಕನ್ನಡ ಮತ್ತು ಕೊಂಕಣಿ ಭಾಷೆಯಲ್ಲೂ ಪರೀಕ್ಷೆ ಬರೆಯುವ ಅವಕಾಶವನ್ನು ಐಬಿಪಿಎಸ್‌ ನೀಡಿದೆ. ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವಾಗ ಭಾಷೆ ನಮೂದಿಸಬೇಕು. (ಪರೀಕ್ಷಾ ಸಂದರ್ಭದಲ್ಲಿ ಬದಲಾವಣೆಗೆ ಅವಕಾಶವಿಲ್ಲ ಎಂಬುದನ್ನ ಮರೆಯದಿರಿ.)

    ನೆನಪಿಡಿ ಸಂದರ್ಶನವಿಲ್ಲ:

    ಪೂರ್ವಭಾವಿ ಪರೀಕ್ಷೆಯಲ್ಲಿ ಅರ್ಹತೆ ಪಡೆಯುವ ಮತ್ತು ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ. ಮುಖ್ಯ ಪರೀಕ್ಷೆಯಲ್ಲಿ ಪಡೆದ ಅಂಕಗಳು ಆಧಾರದ ಮೇಲೆ ಅವರನ್ನು ತಾತ್ಕಾಲಿಕವಾಗಿ  ನೇಮಕಾತಿ ಪತ್ರ ವಿತರಿಸಲಾಗುತ್ತದೆ.

    ಅರ್ಜಿ ಸಲ್ಲಿಕೆ ವಿಧಾನ:

    ಆನ್ ಲೈನ್.

    ಅರ್ಜಿ ಸಲ್ಲಿಕೆಯ  ದಿನಾಂಕ: ಜುಲೈ  1 ರಿಂದ ಜುಲೈ 28, 2023 ರವರೆಗೆ. ( ಈ ಹಿಂದೆ ಜುಲೈ 21 ಕೊನೆ ದಿನಾಂಕವಾಗಿತ್ತು ಈಗಿನ ಮಾಹಿತಿ ಪ್ರಕಾರ ಜುಲೈ 28ರವರಗೆ ವಿಸ್ತರಿಸಲಾಗಿದೆ.)

    ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ನಿಮ್ಮ ಆಯ್ಕೆಯ ಬ್ಯಾಂಕಿನ ಆದ್ಯತೆಯ ಆದೇಶವನ್ನು ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಳವಡಿಸಲಾಗಿದೆ. ಅಭ್ಯರ್ಥಿಗಳು ಈ ಹಂತದಲ್ಲಿ ಅವರ ಬ್ಯಾಂಕ್ ಗಳ ಆದ್ಯತೆಯ ಕ್ರಮವನ್ನು ಅಗತ್ಯವಾಗಿ ಸೂಚಿಸಬೇಕು.

    ಯಾವ್ಯಾವ ಬ್ಯಾಂಕ್ ಗಳಲ್ಲಿ ಎಷ್ಟೆಷ್ಟು ಹುದ್ದೆಗಳಿವೆ ಹಾಗೂ ನಮ್ಮ ರಾಜ್ಯದಲ್ಲಿ ಆ ಬ್ಯಾಂಕ್ ಗಳ ಶಾಖೆಗಳಿವೆಯಾ ಎಂಬುದರ ಮೇಲೆ ನಿಮ್ಮ ಆದ್ಯತೆಯ ಆಯ್ಕೆ ಇರಲಿ. ಒಮ್ಮೆ ನೀವು ಆಯ್ಕೆಯಾದರೆ ಬ್ಯಾಂಕ ಬದಲಾವಣೆಗೆ/ಸ್ಥಳ ಬದಲಾವಣೆಗೆ  ಯಾವುದೇ ವಿನಂತಿಯನ್ನು ನಂತರದ ದಿನಗಳಲ್ಲಿ ಪರಿಗಣಿಸಲಾಗುವುದಿಲ್ಲ.

    ಲಿಖಿತ ದೃಢೀಕರಣ:

    ಕೈಬರಹದ ಘೋಷಣೆಯ ಪಠ್ಯ ಈ ರೀತಿಯಲ್ಲಿ ಬರೆದು ಅಪ್ಲೋಡ್ ಮಾಡಬೇಕು,_______ (ಅಭ್ಯರ್ಥಿಯ ಹೆಸರು),ಈ ಮೂಲಕ  ಅರ್ಜಿಯಲ್ಲಿ ಸಲ್ಲಿಸಿದ ಎಲ್ಲಾ ಮಾಹಿತಿಯು ಸರಿಯಾಗಿದೆ.ನಿಜ ಮತ್ತು ಮಾನ್ಯವಾಗಿದೆ ಎಂದು ಘೋಷಿಸುತ್ತೇನೆ. ಅಗತ್ಯವಿದ್ದಾಗ ನಾನು ಪೂರಕ ದಾಖಲೆಗಳನ್ನು ಪ್ರಸ್ತುತಪಡಿಸುತ್ತೇನೆ.”

    ಮೇಲೆ ತಿಳಿಸಿದ ಕೈಯಲ್ಲಿ ಬರೆದ ಲಿಖಿತ ಘೋಷಣೆಯು ಅಭ್ಯರ್ಥಿಯ ಕೈ ಬರಹದಲ್ಲಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಇರಬೇಕು ಮತ್ತು ಕ್ಯಾಪಿಟಲ್ ಲೆಟರ್ಸ್‌ನಲ್ಲಿ ಇರಬಾರದು. ಇದನ್ನು ಬೇರೆಯವರು ಅಥವಾ ಬೇರೆ ಯಾವುದೇ ಭಾಷೆಯಲ್ಲಿ ಬರೆದಿದ್ದರೆ, ಅರ್ಜಿಯನ್ನು ಅಮಾನ್ಯವೆಂದು ಪರಿಗಣಿಸಲಾಗುತ್ತದೆ. ಕ್ಯಾಪಿಟಲ್ ಲೆಟರಗಳಲ್ಲಿ ಹಾಕಿದ ಸಹಿಯನ್ನು ಸ್ವೀಕರಿಸಲಾಗುವುದಿಲ್ಲ. ಎಡ ಹೆಬ್ಬೆರಳಿನ ಗುರುತು ಸರಿಯಾಗಿ ಸ್ಕ್ಯಾನ್ ಮಾಡಬೇಕು ಮತ್ತು ಮಸುಕಾಗಿರಬಾರದು.

    ಆಯ್ಕೆ ಪ್ರಕ್ರಿಯೆಯ ಹಂತದಲ್ಲಿ ಅಥವಾ ಅಪಾಯಿಂಟ್‌ಮೆಂಟ್‌ನ ನಂತರ ನಿಮ್ಮ ಕೈಬರಹದ ಘೋಷಣೆ ಹಾಗೂ ನಿಮ್ಮ ಕೈಬರಹದಲ್ಲಿ  ಭಿನ್ನವಾಗಿರುವುದು ತಜ್ಞರ ವಿಶ್ಲೇಷಣೆಯಲ್ಲಿ ಕಂಡುಬಂದರೆ, ಅಭ್ಯರ್ಥಿಯ ಉಮೇದುವಾರಿಕೆಯ ನ್ನ ರದ್ದುಗೊಳಿಸಲಾಗುವುದು. ಹೀಗಾಗಿ ಅರ್ಜಿ ಸಲ್ಲಿಸುವ ಹಂತದಲ್ಲಿಯೇ ಬಹಳ ಎಚ್ಚರಿಕೆಯಿಂದ ಅರ್ಜಿ ಸಲ್ಲಿಸುವುದು ಒಳಿತು.

    ಪರೀಕ್ಷಾ ಪೂರ್ವ ತರಬೇತಿ:

    ಐಬಿಪಿಎಸ್ ಎಸ್ ಸಿ/ಎಸ್ ಟಿ, ಅಲ್ಪಸಂಖ್ಯಾತ ಅಭ್ಯರ್ಥಿಗಳು ಮಾಜಿ ಸೈನಿಕರು ವಿಕಲಚೇತನ ಅಭ್ಯರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿ ನೀಡಲಿದೆ. ತರಬೇತಿ ಪಡೆಯುವ ಅಭ್ಯರ್ಥಿಗಳು ಆನ್‌ ಲೈನ್ ನಲ್ಲಿಅರ್ಜಿ ಸಲ್ಲಿಸುವಾಗಲೇ ತರಬೇತಿ ಪಡೆಯುವ ಬಗ್ಗೆ ಅದಕ್ಕಾಗಿ ಮೀಸಲಿಟ್ಟ ಕಾಲಂನಲ್ಲಿ ನಮೂದಿಸಬೇಕು,ತರಬೇತಿ ಸ್ಥಳದ ಖರ್ಚು ವೆಚ್ಚಗಳನ್ನು ಹಾಗೂ ಪ್ರಯಾಣದ ಖರ್ಚು ವೆಚ್ಚವನ್ನು ಅಭ್ಯರ್ಥಿಗಳ ಭರಿಸಬೇಕಾಗುತ್ತದೆ. ರಾಜ್ಯದಲ್ಲಿ ಬೆಂಗಳೂರು, ಹುಬ್ಬಳ್ಳಿ, ಮೈಸೂರು ಹಾಗೂ ಮಂಗಳೂರಿನಲ್ಲಿ ಪರೀಕ್ಷಾ ಪೂರ್ವ ತರಬೇತಿ ಕೇಂದ್ರಗಳಿವೆ.

    ಪರೀಕ್ಷಾ ಪ್ರಕ್ರಿಯೆ:

    ಮೊದಲ ಹಂತ: ಆನ್ಲೈನ್ ಪೂರ್ವಭಾವಿ ಪರೀಕ್ಷೆ – ಸೆಪ್ಟೆಂಬರ್ 2023

    ಎರಡನೇ ಹಂತ: ಆನ್ಲೈನ್ ಮುಖ್ಯ ಪರೀಕ್ಷೆ – ಸೆಪ್ಟೆಂಬರ್‌ ಅಕ್ಟೋಬರ್, 2023

    ಪ್ರಾತಿನಿಧಿಕ ಹಂಚಿಕೆ:  ಏಪ್ರಿಲ್ 2024.

    ವಯೋಮಿತಿ:

    01.07.2023 ಕ್ಕೆ, 20 ವರ್ಷಕ್ಕಿಂತ ಕಡಿಮೆ ಇರಬಾರದು. ಮತ್ತು 1.07.2023 ಕ್ಕೆ 28 ವರ್ಷಗಳಿಗಿಂತ ಹೆಚ್ಚಿರಬಾರದು.ಅಂದರೆ 20 ವರ್ಷದಿಂದ 28 ವರ್ಷದೊಳಗಿನವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅಂದರೆ ಅಭ್ಯರ್ಥಿಯು 02.07.1995 ಕ್ಕಿಂತ ಮೊದಲು ಮತ್ತು 01.07.2023 ಕ್ಕಿಂತ ನಂತರ ಹುಟ್ಟಿರಬಾರದು( ಎರಡೂ ದಿನಾಂಕಗಳು ಒಳಗೊಂಡಂತೆ) ಸರಕಾರದ ನಿಯಮದಂತೆ ಎಸ್‌ಸಿ/ ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ವಿಕಲಚೇತನರಿಗೆ 10 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

    ಶುಲ್ಕಪಾವತಿ:/ ಅರ್ಜಿ ಶುಲ್ಕ:

    ನೋಂದಣಿ ನಂತರ ಅಭ್ಯರ್ಥಿಗಳು ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್/ ಇಂಟರ್ನೆಟ್ ಬ್ಯಾಂಕಿಂಗ್ ಬಳಸಿ ಆನ್‌ಲೈನ್ ಮೋಡ್ ಮೂಲಕ ಅಗತ್ಯವಾದ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.ಸಾಮಾನ್ಯ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 850 ರೂ. ಹಾಗೂ ಎಸ್‌ಸಿ/ಎಸ್‌ಟಿ/ವಿಕಲಚೇತನರು/ ಮಾಜಿ ಸೈನಿಕ ಅಭ್ಯರ್ಥಿಗಳಿಗೆ 175 ರೂ.ಶುಲ್ಕ ನಿಗದಿಪಡಿಸಲಾಗಿದೆ. ಬ್ಯಾಂಕ್ ಸೇವಾ ಶುಲ್ಕ ಮತ್ತು  ಇಂಟಿಮೇಷನ್ ಫೀ ಪ್ರತ್ಯೇಕವಾಗಿ ಪಾವತಿಸಬೇಕಾಗುತ್ತದೆ. ಆನ್‌ ಲೈನ್ ಮೂಲಕ ಮಾತ್ರ ಶುಲ್ಕ ಪಾವತಿಸಲು ಅವಕಾಶ ನೀಡಲಾಗಿದೆ.

    ಹೆಚ್ಚಿನಮಾಹಿತಿಗೆವೆಬ್:  https://www.ibps.in/

    ಅಸ್ತಿತ್ವಕ್ಕಾಗಿ ಬೆಂಗಳೂರಿನಲ್ಲಿ ಪ್ರತಿಪಕ್ಷಗಳು ಶೋ ಮಾಡುತ್ತಿವೆ : ಬಸವರಾಜ ಬೊಮ್ಮಾಯಿ

    BENGALURU JULY 10

    .ಬೇರೆ ಬೇರೆ ರಾಜ್ಯಗಳಲ್ಲಿ ಅವರದೇ ಅಸ್ತಿತ್ವ ಇಲ್ಲದ ಪ್ರಾದೇಶಿಕ ಪಕ್ಷಗಳು ಒಂದೇ ಕಡೆ ಸೇರಿದರೆ ಏನೂ ಆಗುವುದಿಲ್ಲ. ಅಸ್ತಿತ್ವವೇ ಇಲ್ಲದವರು ಬೆಂಗಳೂರಿನಲ್ಲಿ ಅಸ್ತಿತ್ವಕ್ಕಾಗಿ ಶೋ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗವಾಡಿದ್ದಾರೆ‌.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ UPA ಅಂಗ ಪಕ್ಷಗಳ ಸಭೆಯಿಂದ ಏನೂ ಪ್ರಯೋಜನವಿಲ್ಲ. ಮೋದಿ ಅವರದು ಮೇರು ವ್ಯಕ್ತಿತ್ವ, ರಾಷ್ಟ್ರದಲ್ಲಿ 9 ವರ್ಷದಲ್ಲಿ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸೇರಿ ಎಲ್ಲಾ ರಂಗದಲ್ಲೂ ದೊಡ್ಡ ಬದಲಾವಣೆ ತಂದು ದೇಶದವನ್ನು ಅಭಿವೃದ್ಧಿ ಪಥದಲ್ಲಿ ತೆಗೆದುಕೊಂಡು ಹೋಗುತ್ತಿದ್ದಾರೆ‌‌ ಎಂದರು.
    ವಿಶ್ವದ ಎಲ್ಲಾ ರಾಷ್ಟ್ರಗಳ ಕೋವಿಡ್ ನಿರ್ವಹಿಸಲು ವಿಫಲವಾದಗ ಮೋದಿ ಉತ್ತಮವಾಗಿ ನಿರ್ವಹಣೆ ಮಾಡಿದರು.

    ಅದಕ್ಕಾಗಿ ಇವತ್ತು ಭಾರತಕ್ಕೆ ಗೌರವ ಇದೆ , ಪ್ರಧಾನಿ ಮೋದಿ ನಾಯಕತ್ವವನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ. ರಾಷ್ಟ್ರದ ಪ್ರತಿ ಹಳ್ಳಿಗೂ ಮೋದಿ ಕಾರ್ಯಕ್ರಮ ಮುಟ್ಟಿದೆ ಎಂದು ಹೇಳಿದರು.

    ಪ್ರತಿಪಕ್ಷಗಳು ಅವರ ಅಸ್ತಿತ್ವವನ್ನೇ ಅವರು ಕಾಪಾಡಲು ಸಾಧ್ಯವಿಲ್ಲ. ಇಲ್ಲಿ ಬಂದು ಶೋ ಮಾಡೊ ಪ್ರಯತ್ನ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಏನೋ ದೊಡ್ಡ ಸಾಧನೆ ಮಾಡಿದ್ದೇವೆ ಅಂತ ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮಣ್ಣು ಮುಕ್ಕುವುದು ನಿಶ್ಚಿತ ಎಂದು ಹೇಳಿದರು.

    ಪ್ರತಿಪಕ್ಷ ನಾಯಕರನ್ನು ಆಯ್ಕೆ ಮಾಡಿ :ಬಿಜೆಪಿ -BJP-ವರಿಷ್ಠ ನಾಯಕರಿಗೆ ಎಚ್.ಡಿ.ಕುಮಾರಸ್ವಾಮಿ -H D kumaraswamy-ಮನವಿ

    BENGALURU JULY 10

    ಆದಷ್ಟು ಬೇಗ ವಿಧಾನಸಭೆಯಲ್ಲಿ ನಿಮ್ಮ ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ವರಿಷ್ಠ ನಾಯಕರನ್ನು ಮನವಿ ಮಾಡಿದರು.

    ವಿಧಾನಸೌಧದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; ನಾನು ಬಿಜೆಪಿ ವರಿಷ್ಠರಿಗೆ ಸಲಹೆ ಕೊಡುವಷ್ಟು ದೊಡ್ಡವನಲ್ಲ. ಆದರೆ, ಈ ಸರಕಾರದ ವಿರುದ್ಧ ಸದನದಲ್ಲಿ ದೊಡ್ಡ ಹೋರಾಟದ ಅಗತ್ಯ. ನಾವೆಲ್ಲ ಪ್ರತಿಪಕ್ಷದಲ್ಲಿ ಇರುವುದರಿಂದ ಸಂಘಟಿತ ಹೋರಾಟದ ಅಗತ್ಯವಿದೆ ಎಂದರು.

    ಬಿಜೆಪಿ 65 ಸ್ಥಾನ ಗೆದ್ದಿದೆ. ಆ ಪಕ್ಷದಲ್ಲಿ ದೊಡ್ಡ ನಾಯಕರಿದ್ದಾರೆ. ಮಾಜಿ ಮುಖ್ಯಮಂತ್ರಿಗಳು, ಮಾಜಿ ಉಪ ಮುಖ್ಯಮಂತ್ರಿಗಳು, ಮಾಜಿ ಸಚಿವರು ಇದ್ದಾರೆ. ಯಾರಾದರೂ ಇಬ್ಬರನ್ನು ನೇಮಕ ಮಾಡಿ. ಇಷ್ಟು ದಿನ ಪ್ರತಿಪಕ್ಷ ಸ್ಥಾನವನ್ನು ಖಾಲಿ ಬಿಡುವುದು ಒಳ್ಳೆಯದಲ್ಲ ಎಂದು ಅವರು ಹೇಳಿದರು.

    ಕುಮಾರಸ್ವಾಮಿ ಅವರು ವಿಪಕ್ಷ ನಾಯಕ ಆಗ್ತಾರಂತೆ. ಕೇಂದ್ರದ ಮಂತ್ರಿಗಿರಿಗೆ ಟವೆಲ್ ಹಾಕಿದ್ದಾರಂತೆ. ಹೀಗೆಲ್ಲಾ ಮಾಧ್ಯಮದಲ್ಲಿ ಬರ್ತಿದೆ. ನಮ್ಮ ಪಕ್ಷದಲ್ಲಿ 19 ಶಾಸಕರಿದ್ದಾರೆ. ನಾನು ಅವರ ಜೊತೆಯಲ್ಲೇ ಹೋರಾಟ ಮಾಡ್ತೀನಿ ಎಂದು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

    ಜೆಡಿಎಸ್‌ ಶಾಸಕರನ್ನು ಕಾಂಗ್ರೆಸ್ ಸೆಳೆಯುತ್ತಿದೆ ಎನ್ನುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು; 12 ಜನ ಹೋಗ್ತಾರಂತೆ, 7 ಸೀಟು ಕೇಳಿದ್ದಾರಂತೆ ಎಂದು ಕೆಲ ಮಾಧ್ಠಮಗಳಲ್ಲಿ ಸುದ್ದಿ ಬರುತ್ತಿದೆ. ಇದ್ಯಾವುದು ಸತ್ಯ ಅಲ್ಲ. ನಮ್ಮಲ್ಲಿ ಯಾವ ಅಸಮಾಧಾನವೂ ಇಲ್ಲ. ಎಲ್ಲರೂ ಒಟ್ಟಾಗಿ ಕುಟುಂಬದ ರೀತಿ ಇದ್ದೇವೆ ಎಂದರು ಅವರು.

    ನಾವು ಎಲ್ಲರೂ ಸೋತು ಎರಡು ಮೂರು ಕ್ಷೇತ್ರ ಗೆದ್ದಾಗಲೇ ಧೃತಿಗೆಡಲಿಲ್ಲ. ಈಗ 19 ಕ್ಷೇತ್ರಗಳಲ್ಲಿ ಗೆದ್ದಿದ್ದೇವೆ, ಈಗ ಹೆದರುತ್ತೇವೆಯಾ? ನಮ್ಮ ಮುಂದಿನ ನಡೆ ಏನು? ಯಾರ ಜತೆ ಸೇರಬೇಕು, ಬಿಡಬೇಕು ಎನ್ನುವ ಬಗ್ಗೆ ಯೋಚನೆ ಮಾಡಿ ನಿರ್ಧಾರ ಕೈಗೊಳ್ಳುತ್ತೇವೆ ಎಂದರು ಮಾಜಿ ಮುಖ್ಯಮಂತ್ರಿಗಳು.

    ಹಾವು ಕಂಡರೆ ಭಯ ತರುವ Ophidiophobia

    ನಿನ್ನೆ ಭಾನುವಾರ ವಿಶ್ವ ಹಾವುಗಳ ದಿನ.

     ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹಿಂದೂ ಪರಂಪರೆಯಲ್ಲಿ ಹಾವುಗಳಿಗೆ ವಿಶಿಷ್ಟ ಸ್ಥಾನಮಾನವಿದೆ. ಆದಿಶೇಷ ನಾಗರಾಜ ನಾಗದೇವಿಯರನ್ನು ಪೂಜಿಸಿದ ಪರಂಪರೆ ನಮ್ಮದು.

    ಈ ದಿನಾಚರಣೆಯ ಮೂಲ ಉದ್ದೇಶವೇ ಹಾವುಗಳಲ್ಲಿರುವ ಭಯವನ್ನು ದೂರ ಮಾಡುವುದು. ಒಫಿಡಿಯೋ ಫೋಬಿಯಾ ಎಂಬುದು ಹಾವುಗಳ ಬಗೆಗಿನ ತೀವ್ರ ಭಯವನ್ನು ವಿವರಿಸಲು ಬಳಸುವ ಪದವಾಗಿದೆ. ಇತರ ಭಯಗಳಂತೆ, ಒಫಿಡಿಯೋ ಫೋಬಿಯಾವು ಅತಿಯಾದ ಮತ್ತು ಅವಿವೇಕದ ಭಯದ ಪ್ರತಿಕ್ರಿಯೆಯನ್ನು ಒಳಗೊಂಡಿರುತ್ತದೆ. ಅದು ಹಾವುಗಳಿಂದ ಉಂಟಾಗುವ ನಿಜವಾದ ಅಪಾಯಕ್ಕೆ ಅಸಮಾನವಾಗಿದೆ.

    ಒಫಿಡಿಯೋ ಫೋಬಿಯಾ ಹೊಂದಿರುವ ಜನರು ಹಾವುಗಳನ್ನು ಎದುರಿಸಿದಾಗ ಅಥವಾ ಯೋಚಿಸಿದಾಗ ವಿವಿಧ ರೋಗಲಕ್ಷಣಗಳನ್ನು ಅನುಭವಿಸಬಹುದು. ಈ ರೋಗಲಕ್ಷಣಗಳು ತ್ವರಿತ ಹೃದಯ ಬಡಿತ, ಉಸಿರಾಟದ ತೊಂದರೆ, ನಡುಕ, ಬೆವರುವಿಕೆ, ವಾಕರಿಕೆ ಮತ್ತು ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳುವ ಅಥವಾ ತಪ್ಪಿಸಲು ಬಲವಾದ ಬಯಕೆಯನ್ನು ಒಳಗೊಂಡಿರುತ್ತದೆ. ಕೆಲವು ವ್ಯಕ್ತಿಗಳು ತೀವ್ರತರವಾದ ಪ್ರಕರಣಗಳಲ್ಲಿ ಪ್ಯಾನಿಕ್ ಅಟ್ಯಾಕ್ ಅನ್ನು ಸಹ ಅನುಭವಿಸಬಹುದು.

    ಒಫಿಡಿಯೋ ಫೋಬಿಯಾದ ನಿಖರವಾದ ಕಾರಣಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲಾಗಿಲ್ಲ, ಆದರೆ ಹಲವಾರು ಅಂಶಗಳು ಅದರ ಬೆಳವಣಿಗೆಗೆ ಕಾರಣವಾಗಬಹುದು. ಈ ಅಂಶಗಳು ಹಾವುಗಳ ಬಗೆಗಿನ ಆಘಾತಕಾರಿ ಅನುಭವ, ಪೋಷಕರು – ಗೆಳೆಯರಿಂದ ಕಲಿತ ಭಯ, ಸಾಂಸ್ಕೃತಿಕ ಅಥವಾ ಸಾಮಾಜಿಕ ಪ್ರಭಾವಗಳು ಅಥವಾ ಆತಂಕದ ಅಸ್ವಸ್ಥತೆಗಳನ್ನು ಒಳಗೊಂಡಿರಬಹುದು. ಕೆಲವೊಮ್ಮೆ, ಮಾಧ್ಯಮ ಅಥವಾ ಕಥೆಗಳ ಮೂಲಕ ಹಾವುಗಳಿಗೆ ಪರೋಕ್ಷವಾಗಿ ಒಡ್ಡಿಕೊಳ್ಳುವುದು ಸಹ ಭಯವನ್ನು ಪ್ರಚೋದಿಸುತ್ತದೆ.

    ಒಫಿಡಿಯೋಫೋಬಿಯಾದ ಚಿಕಿತ್ಸಾ ಆಯ್ಕೆಗಳು ವಿಶಿಷ್ಟವಾಗಿ ಚಿಕಿತ್ಸೆಯನ್ನು ಒಳಗೊಂಡಿರುತ್ತದೆ, ವಿಶೇಷವಾಗಿ ಅರಿವಿನ ವರ್ತನೆಯ ಚಿಕಿತ್ಸೆ (  ಕಾಗ್ನಿಟಿವ್ ಬಿಹೇವಿಯರಲ್ ಥೆರಪಿ – CBT). CBT ವ್ಯಕ್ತಿಗಳಿಗೆ ಹಾವುಗಳ ಬಗ್ಗೆ ಅವರ ಆಲೋಚನೆಗಳು ಮತ್ತು ನಂಬಿಕೆಗಳನ್ನು ಗುರುತಿಸಲು ಮತ್ತು ಸವಾಲು ಮಾಡಲು ಸಹಾಯ ಮಾಡುತ್ತದೆ, ಕ್ರಮೇಣ ಅವುಗಳನ್ನು ನಿಯಂತ್ರಿತ ಮತ್ತು ಸುರಕ್ಷಿತ ವಾತಾವರಣದಲ್ಲಿ ಹಾವುಗಳಿಗೆ ಒಡ್ಡುತ್ತದೆ. ಈ ಪ್ರಕ್ರಿಯೆಯನ್ನು ಮಾನ್ಯತೆ ಚಿಕಿತ್ಸೆ ಎಂದು ಕರೆಯಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ, ಆತಂಕದ ಲಕ್ಷಣಗಳನ್ನು ನಿರ್ವಹಿಸಲು ಸಹಾಯ ಮಾಡಲು ಔಷಧಿಗಳನ್ನು ಶಿಫಾರಸು ಮಾಡಬಹುದು.

    ಹಾವುಗಳ ಬಗ್ಗೆ ಕೆಲವು ಪ್ರಮುಖ ಸಂಗತಿಗಳು ಇಲ್ಲಿವೆ:

    1. ವೈವಿಧ್ಯತೆ: ಹಾವುಗಳು ಸರೀಸೃಪಗಳ ವೈವಿಧ್ಯಮಯ ಗುಂಪಾಗಿದ್ದು, ಅಂಟಾರ್ಕ್ಟಿಕಾವನ್ನು ಹೊರತುಪಡಿಸಿ ಪ್ರತಿ ಖಂಡದಲ್ಲಿ 3,500 ಕ್ಕೂ ಹೆಚ್ಚು ಜಾತಿಗಳು ಕಂಡುಬರುತ್ತವೆ. ಅವು ವಿವಿಧ ಗಾತ್ರಗಳು, ಬಣ್ಣಗಳು ಮತ್ತು ಮಾದರಿಗಳಲ್ಲಿ ಬರುತ್ತವೆ, ಕೆಲವು ಇಂಚುಗಳಷ್ಟು ಅಳತೆಯ ಸಣ್ಣ ಥ್ರೆಡ್‌ಸ್ನೇಕ್‌ಗಳಿಂದ ಹಿಡಿದು 20 ಅಡಿ ಉದ್ದವನ್ನು ಮೀರುವ ದೊಡ್ಡ ಹೆಬ್ಬಾವುಗಳು ಮತ್ತು ಅನಕೊಂಡಗಳವರೆಗೆ.
    2. ಕೈಕಾಲುಗಳಿಲ್ಲದ ದೇಹಗಳು: ಹಾವುಗಳು ಅವುಗಳ ಉದ್ದನೆಯ ದೇಹ ಮತ್ತು ಕೈಕಾಲುಗಳ ಕೊರತೆಯಿಂದ ಗುಣಲಕ್ಷಣಗಳನ್ನು ಹೊಂದಿವೆ. ಕಾಲುಗಳ ಬದಲಿಗೆ, ಅವುಗಳು  ತಮ್ಮ ಸ್ನಾಯುಗಳು ಮತ್ತು ಹೊಟ್ಟೆಯನ್ನು ಬಳಸಿಕೊಂಡು ತಮ್ಮನ್ನು ಮುಂದಕ್ಕೆ ತಳ್ಳಲು ಮತ್ತು ಮುಂದೂಡಲು “ಅಂಡಲೇಶನ್” ಎಂಬ ವಿಶಿಷ್ಟವಾದ ಚಲನವಲನವನ್ನು ಮಾರ್ಪಡಿಸಿಕೊಂಡಿವೆ.  
    3. ಪರಿಸರ ಪಾತ್ರ: ಹಾವುಗಳು ಪರಭಕ್ಷಕ ಮತ್ತು ಬೇಟೆಯಾಗಿ ನಿರ್ಣಾಯಕ ಪರಿಸರ ಪಾತ್ರಗಳನ್ನು ನಿರ್ವಹಿಸುತ್ತವೆ. ಪರಭಕ್ಷಕಗಳಂತೆ ಕೀಟಗಳು ಮತ್ತು ಇತರ ಸಣ್ಣ ಪ್ರಾಣಿಗಳ ಜನಸಂಖ್ಯೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಬೇಟೆಗಳಂತೆ ಪಕ್ಷಿಗಳು, ಸಸ್ತನಿಗಳು ಮತ್ತು ಇತರ ಹಾವುಗಳಂತಹ ದೊಡ್ಡ ಪರಭಕ್ಷಕಗಳಿಗೆ ಅವುಗಳು ಆಹಾರದ ಮೂಲವಾಗಿಯೂ ಕಾರ್ಯನಿರ್ವಹಿಸುತ್ತವೆ.
    4. ಮಾಂಸಾಹಾರಿ ಆಹಾರ: ಎಲ್ಲಾ ಹಾವುಗಳು ಮಾಂಸಾಹಾರಿಗಳು, ಅಂದರೆ ಅವು ಇತರ ಪ್ರಾಣಿಗಳ ಮೇಲೆ ಪ್ರತ್ಯೇಕವಾಗಿ ತಿನ್ನುತ್ತವೆ. ಅವರ ಆಹಾರದಲ್ಲಿ ದಂಶಕಗಳು, ಪಕ್ಷಿಗಳು, ಮೀನುಗಳು, ಉಭಯಚರಗಳು, ಸರೀಸೃಪಗಳು ಮತ್ತು ಇತರ ಹಾವುಗಳು ಸೇರಿವೆ. ವಿಷಪೂರಿತ ಹಾವುಗಳು ತಮ್ಮ ಬೇಟೆಯನ್ನು ನಿಶ್ಚಲಗೊಳಿಸಲು ಅಥವಾ ಕೊಲ್ಲಲು ತಮ್ಮ ವಿಷವನ್ನು ಬಳಸುತ್ತವೆ, ಆದರೆ ವಿಷಕಾರಿಯಲ್ಲದ ಹಾವುಗಳು ಸಾಮಾನ್ಯವಾಗಿ ತಮ್ಮ ಬಲಿಪಶುಗಳನ್ನು ಸೆರೆಹಿಡಿಯುತ್ತವೆ ಮತ್ತು ನಿರ್ಬಂಧಿಸುತ್ತವೆ.
    5. ಚೆಲ್ಲುವ ಚರ್ಮ: ಹಾವುಗಳು ನಿಯತಕಾಲಿಕವಾಗಿ ತಮ್ಮ ಚರ್ಮವನ್ನು ಚೆಲ್ಲುವ ವಿಶಿಷ್ಟ ಸಾಮರ್ಥ್ಯವನ್ನು ಹೊಂದಿವೆ. ಎಕ್ಡಿಸಿಸ್ ಅಥವಾ ಮೊಲ್ಟಿಂಗ್ ಎಂದು ಕರೆಯಲ್ಪಡುವ ಈ ಪ್ರಕ್ರಿಯೆಯು ಹಾವುಗಳನ್ನು ಬೆಳೆಯಲು ಮತ್ತು ಹಾನಿಗೊಳಗಾದ ಚರ್ಮವನ್ನು ಬದಲಿಸಲು ಅನುವು ಮಾಡಿಕೊಡುತ್ತದೆ. ಹಾವು ತನ್ನ ಹಳೆಯ ಚರ್ಮದಿಂದ ಹೊರಬರುತ್ತದೆ. ಎಳೆಯ ಹಾವುಗಳು ವಯಸ್ಕರಿಗಿಂತ ಹೆಚ್ಚಾಗಿ ಚೆಲ್ಲುತ್ತವೆ.
    6. ಸಂವೇದನಾ ಸಾಮರ್ಥ್ಯಗಳು: ಹಾವುಗಳು ವಾಸನೆಯ ಗಮನಾರ್ಹ ಅರ್ಥವನ್ನು ಹೊಂದಿವೆ ಮತ್ತು ಗಾಳಿಯಿಂದ ಪರಿಮಳದ ಕಣಗಳನ್ನು ಸಂಗ್ರಹಿಸಲು ತಮ್ಮ ನಾಲಿಗೆಯನ್ನು ಬಳಸುತ್ತವೆ, ಅವುಗಳನ್ನು ತಮ್ಮ ಬಾಯಿಯ ಛಾವಣಿಯಲ್ಲಿರುವ ಜಾಕೋಬ್ಸನ್ ಅಂಗಕ್ಕೆ ವರ್ಗಾಯಿಸುತ್ತವೆ. ಇದು ಬೇಟೆಯನ್ನು ಪತ್ತೆಹಚ್ಚಲು ಮತ್ತು ಅವುಗಳ ಪರಿಸರವನ್ನು ನ್ಯಾವಿಗೇಟ್ ಮಾಡಲು ಸಹಾಯ ಮಾಡುತ್ತದೆ. ಅವುಗಳು “ಪಿಟ್ ಆರ್ಗನ್ಸ್” ಎಂದು ಕರೆಯಲ್ಪಡುವ ವಿಶೇಷವಾದ ಶಾಖ-ಸಂವೇದನಾ ಹೊಂಡಗಳನ್ನು ಹೊಂದಿವೆ, ಅದು ಅತಿಗೆಂಪು ವಿಕಿರಣವನ್ನು ಪತ್ತೆಹಚ್ಚಲು ಅನುವು ಮಾಡಿಕೊಡುತ್ತದೆ, ಬೆಚ್ಚಗಿನ ರಕ್ತದ ಬೇಟೆಯನ್ನು ಪತ್ತೆಹಚ್ಚಲು ಮತ್ತು ಕತ್ತಲೆಯಲ್ಲಿ ನ್ಯಾವಿಗೇಟ್ ಮಾಡಲು ಸಹಾಯ ಮಾಡುತ್ತದೆ.
    7. ದೀರ್ಘಾವಧಿಯ ಜೀವಿತಾವಧಿ: ಹಾವುಗಳ ಜೀವಿತಾವಧಿಯು ಜಾತಿಗಳು, ಆವಾಸಸ್ಥಾನಗಳು ಮತ್ತು ಇತರ ಹಲವಾರು ಅಂಶಗಳನ್ನು ಅವಲಂಬಿಸಿ ಬಹಳವಾಗಿ ಬದಲಾಗಬಹುದು. ಕೆಲವು ಸಣ್ಣ ಹಾವಿನ ಜಾತಿಗಳು ತುಲನಾತ್ಮಕವಾಗಿ ಕಡಿಮೆ ಜೀವಿತಾವಧಿಯನ್ನು ಹೊಂದಿರುತ್ತವೆ, ಸಾಮಾನ್ಯವಾಗಿ ಕೆಲವು ವರ್ಷಗಳಿಂದ ಒಂದು ದಶಕದವರೆಗೆ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯವರೆಗೆ ಇರುತ್ತದೆ. ದೊಡ್ಡ ಹಾವಿನ ಪ್ರಭೇದಗಳು ದೀರ್ಘಾವಧಿಯ ಜೀವಿತಾವಧಿಯನ್ನು ಹೊಂದಿರುತ್ತವೆ, ಸಾಮಾನ್ಯವಾಗಿ 20 ವರ್ಷಗಳನ್ನು ಮೀರುತ್ತವೆ, ಮತ್ತು ಕೆಲವು ಸೆರೆಯಲ್ಲಿ ಹಲವಾರು ದಶಕಗಳವರೆಗೆ ಬದುಕಬಹುದು..

    ಹಾವುಗಳ ಬಗ್ಗೆ ಕೆಲವು ಕಟ್ಟುಕತೆಗಳು ಇವೆ:

    1. ಹಾವುಗಳು ಆಕ್ರಮಣಕಾರಿ ಮತ್ತು ಅಪ್ರಚೋದಿತವಾಗಿ ದಾಳಿ ಮಾಡುತ್ತವೆ: ಹಾವುಗಳು ಸಾಮಾನ್ಯವಾಗಿ ಆಕ್ರಮಣಕಾರಿಯಾಗಿರುವುದಿಲ್ಲ ಮತ್ತು ಅವುಗಳು ಬೆದರಿಕೆಯನ್ನು ಅನುಭವಿಸಿದಾಗ ಮಾತ್ರ ಆತ್ಮರಕ್ಷಣೆಗಾಗಿ ಕಚ್ಚುತ್ತವೆ. ಮುಖಾಮುಖಿಯಾಗುವುದನ್ನು ತಪ್ಪಿಸಲು ಅವರು ಓಡಿಹೋಗುತ್ತಾರೆ ಅಥವಾ ಅಡಗಿಕೊಳ್ಳುತ್ತಾರೆ. ಮಾನವರು ಉದ್ದೇಶಪೂರ್ವಕವಾಗಿ ಹೆಜ್ಜೆ ಹಾಕಿದಾಗ ಅಥವಾ ಎಚ್ಚರಿಕೆಯಿಲ್ಲದೆ ಹಾವುಗಳನ್ನು ಮುಟ್ಟಿದಾಗ ಮಾತ್ರ ಹೆಚ್ಚಿನ ಹಾವು ಕಡಿತಗಳು ಸಂಭವಿಸುತ್ತವೆ.
    2. ಹಾವುಗಳು ಮನುಷ್ಯರನ್ನು ಬೆನ್ನಟ್ಟಲು ಮತ್ತು ಕಚ್ಚಲು ಹೊರಟಿವೆ: ಹಾವುಗಳು ಮನುಷ್ಯರನ್ನು ಸಕ್ರಿಯವಾಗಿ ಬೆನ್ನಟ್ಟುವುದಿಲ್ಲ. ಅವರು ಹಿಮ್ಮೆಟ್ಟುವ ಮತ್ತು ಮುಖಾಮುಖಿಯಾಗುವುದನ್ನು ತಪ್ಪಿಸುವ ಸಾಧ್ಯತೆ ಹೆಚ್ಚು. ನಿಮಗೆ ಹಾವು ಎದುರಾದರೆ, ನಿಧಾನವಾಗಿ ಹಿಂದೆ ಸರಿಯುವುದು ಮತ್ತು ತಪ್ಪಿಸಿಕೊಳ್ಳಲು ಜಾಗವನ್ನು ನೀಡುವುದು ಉತ್ತಮ.
    3. ಹಾವುಗಳು ಕಚ್ಚಿದಾಗ ಯಾವಾಗಲೂ ವಿಷವನ್ನು ಚುಚ್ಚುತ್ತವೆ: ಎಲ್ಲಾ ಹಾವು ಕಡಿತದಿಂದ ವಿಷವನ್ನು ಚುಚ್ಚಲಾಗುತ್ತದೆ. ಹಾವುಗಳು ರಕ್ಷಣಾತ್ಮಕ ಪ್ರತಿಕ್ರಿಯೆಯಾಗಿ ಕಚ್ಚಬಹುದು, ಆದರೆ ಅವು ಬಿಡುಗಡೆ ಮಾಡುವ ವಿಷದ ಪ್ರಮಾಣವನ್ನು ನಿಯಂತ್ರಿಸಬಹುದು. ಹಾವು ವಿಷವನ್ನು ಚುಚ್ಚದೆ ಕಚ್ಚಿದಾಗ “ಒಣ ಕಡಿತ” ಸಂಭವಿಸುತ್ತದೆ. ಆದಾಗ್ಯೂ, ಎಲ್ಲಾ ಹಾವು ಕಡಿತಗಳನ್ನು ಗಂಭೀರವಾಗಿ ಪರಿಗಣಿಸುವುದು ಮತ್ತು ವೈದ್ಯಕೀಯ ಚಿಕಿತ್ಸೆ ಪಡೆಯುವುದು ಅತ್ಯಗತ್ಯ.
    4. ಹಾವುಗಳು ನೆಗೆಯಬಹುದು ಅಥವಾ ಹಾರಬಲ್ಲವು: ಹಾವುಗಳು ಕೈಕಾಲುಗಳಿಲ್ಲದವು ಮತ್ತು ರೆಕ್ಕೆಗಳನ್ನು ಹೊಂದಿರುವುದಿಲ್ಲ, ಆದ್ದರಿಂದ ಅವುಗಳಿಗೆ ಹಾರಲು ಸಾಧ್ಯವಿಲ್ಲ. ಕೆಲವು ಹಾವುಗಳು ಮರಗಳನ್ನು ಹತ್ತಲು ಅಥವಾ ಈಜಲು ಸಾಧ್ಯವಾದರೆ, ಕಪ್ಪೆಗಳಂತೆ ನೆಗೆಯುವ ಅಥವಾ ಪಕ್ಷಿಗಳಂತೆ ಹಾರುವ ಸಾಮರ್ಥ್ಯವನ್ನು ಹೊಂದಿರುವುದಿಲ್ಲ.
    5. ಹಾವುಗಳೆಲ್ಲವೂ ಶೀತ-ರಕ್ತದವು: ಹೆಚ್ಚಿನ ಹಾವುಗಳು ನಿಜವಾಗಿಯೂ ಶೀತ-ರಕ್ತವನ್ನು ಹೊಂದಿದ್ದರೂ, ಕೆಲವು ಅಪವಾದಗಳಿವೆ. ಹೆಬ್ಬಾವಿನಂತಹ ಕೆಲವು ಜಾತಿಯ ಹಾವುಗಳನ್ನು “ಬೆಚ್ಚಗಿನ ರಕ್ತದ” ಅಥವಾ “ಭಾಗಶಃ ಬೆಚ್ಚಗಿನ ರಕ್ತದ” ಎಂದು ವರ್ಗೀಕರಿಸಲಾಗಿದೆ. ಅವುಗಳು ತಮ್ಮ ದೇಹದ ಉಷ್ಣತೆಯನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸಬಹುದು.

    ಪರಿಸರ ವ್ಯವಸ್ಥೆಯ ನಿರ್ವಹಣೆ ಮತ್ತು ಸಂರಕ್ಷಣೆಗೆ ಹಾವುಗಳು ಮತ್ತು ಪರಿಸರ ಚಕ್ರಗಳ ನಡುವಿನ ಪರಸ್ಪರ ಕ್ರಿಯೆಗಳನ್ನು ಅರ್ಥಮಾಡಿಕೊಳ್ಳುವುದು ಅತ್ಯವಶ್ಯ. ಪರಿಸರ ವ್ಯವಸ್ಥೆಯ ಸಮತೋಲನ, ಜೀವವೈವಿಧ್ಯ ಮತ್ತು ಪರಿಸರ ವ್ಯವಸ್ಥೆಯ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಹಾವುಗಳ ಪ್ರಾಮುಖ್ಯತೆಯನ್ನು ಎತ್ತಿ ಬಗೆಗಿನ ಸಾಮಾಜಿಕ ಜಾಗೃತಿ ಅತ್ಯಗತ್ಯ.

    ಈ ಆಕರ್ಷಕ ಜೀವಿಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಮತ್ತು ಸಹಬಾಳ್ವೆ ನಡೆಸಲು ಹಾವುಗಳ ಬಗ್ಗೆ ನಮಗೆ ಶಿಕ್ಷಣ ನೀಡುವುದು ಮತ್ತು ಈ ಕಟ್ಟುಕತೆಗಳನ್ನು ಹೋಗಲಾಡಿಸುವುದು ಮುಖ್ಯವಾಗಿದೆ.  ನೀವು ಅಥವಾ ನಿಮಗೆ ತಿಳಿದಿರುವ ಯಾರಾದರೂ ಒಫಿಡಿಯೋಫೋಬಿಯಾದೊಂದಿಗೆ ಹೋರಾಡುತ್ತಿದ್ದರೆ, ಮಾನಸಿಕ ಆರೋಗ್ಯ ವೃತ್ತಿಪರರೊಂದಿಗೆ ಸಮಾಲೋಚಿಸಲು ಸಲಹೆ ನೀಡಲಾಗುತ್ತದೆ. ಅವರು ನಿಖರವಾದ ರೋಗನಿರ್ಣಯವನ್ನು ಒದಗಿಸಬಹುದು ಮತ್ತು ಭಯ ಮತ್ತು ದೈನಂದಿನ ಜೀವನದಲ್ಲಿ ಅದರ ಪ್ರಭಾವವನ್ನು ಪರಿಹರಿಸಲು ಸೂಕ್ತವಾದ ಚಿಕಿತ್ಸಾ ಯೋಜನೆಯನ್ನು ಅಭಿವೃದ್ಧಿಪಡಿಸಬಹುದು.

    ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ – ಇಂದಿನ ಅವಶ್ಯಕತೆ

    ಅಮೇರಿಕಾ ದೇಶದ ತತ್ವಜ್ಞಾನಿ, ಮನಶಾಸ್ತ್ರಜ್ಞ ಮತ್ತು ಶೈಕ್ಷಣಿಕ ಸುಧಾರಕ ಜಾನ್‌ ಡಿವಿ ಪ್ರಗತಿಶೀಲ ಶಿಕ್ಷಣವನ್ನು ಪ್ರತಿಪಾದಿಸಿದವರು. ಶಿಕ್ಷಣ, ವಿದ್ಯಾರ್ಥಿಗಳು ಸ್ವತಃ ಪ್ರಯೋಗಗಳನ್ನು ಮಾಡುವುದರ ಜೊತೆಗೆ ಕಲಿಕೆ ಅನುಭವದ ಪ್ರಕ್ರಿಯೆ ಆಗಬೇಕೆಂಬ ಆಶಯವನ್ನು ಹೊಂದಿದ್ದ ಶಿಕ್ಷಣ ತಜ್ಞರಲ್ಲೊಬ್ಬರು. ವಿಮರ್ಶಾತ್ಮಕ ಚಿಂತನೆಯನ್ನು (ಕ್ರಿಟಿಕಲ್ ಥಿಂಕಿಂಗ್)‌ ಪ್ರಚೋದಿಸುವ ಮತ್ತು ಪ್ರಪಂಚದ ನೈಜ ಸಮಸ್ಯೆಗಳನ್ನು ಬಿಡಿಸುವ ವಾತಾವರಣವನ್ನು ತರಗತಿಗಳಲ್ಲಿ ಸೃಷ್ಟಿಸುವ ಅವಶ್ಯಕತೆಯಿದೆ ಎಂದು ವಾದಿಸಿದವರು. ಇಂತಹ ಕಲಿಕೆಯ ವಿಧಾನ, ವಿದ್ಯಾರ್ಥಿಗಳಿಗೆ ಭವಿಷ್ಯವನ್ನು ರೂಪಿಸಿಕೊಳ್ಳಲು ಅನುವುಮಾಡಿಕೊಡುತ್ತದೆ ಎಂದು ಎಲ್ಲರಿಗೂ ಮನದಟ್ಟು ಮಾಡಿದಂತವರು.

    ಕಾಲಿನ್ಸ್‌ ಮತ್ತು ಓಬ್ರೈನ್ ರ (ಗ್ರೀನ್‌ ವುಡ್‌ ಶೈಕ್ಷಣಿಕ ನಿಘಂಟಿನ ಸಂಪಾದಕರು) ಪ್ರಕಾರ, ವಿದ್ಯಾರ್ಥಿಯು ಪ್ರಭಾವಿತನಾಗಿ, ವಿಷಯ, ಕಲಿಕಾ ಚಟುವಟಿಕೆಗಳು, ಅಧ್ಯಯನ ಸಾಮಾಗ್ರಿಗಳು ಮತ್ತು ಕಲಿಕೆಯ ವೇಗವನ್ನು ವಿದ್ಯಾರ್ಥಿಯೇ ನಿರ್ಧರಿಸಿ, ಶಿಕ್ಷಣವನ್ನು ಪಡೆಯುವ ಬೋಧನಾ ವಿಧಾನವನ್ನು ವಿದ್ಯಾರ್ಥಿ ಕೇಂದ್ರಿತ ಶಿಕ್ಷಣವೆಂದು ಕರೆಯಬಹುದಾಗಿದೆ.

    ವಿದ್ಯಾರ್ಥಿ ಕೇಂದ್ರಿತ ಶಿಕ್ಷಣದಲ್ಲಿ, ವಿದ್ಯಾರ್ಥಿಗಳನ್ನು ಬೋಧನೆ ಮತ್ತು ಕಲಿಕೆಯ ಪ್ರಕ್ರಿಯೆಯ ಹೃದಯ ಭಾಗದಲ್ಲಿ ಇರಿಸಲಾಗುತ್ತದೆ. ಈ ಪದ್ದತಿಯಲ್ಲಿ, ವಿದ್ಯಾರ್ಥಿಗಳು ಹೆಚ್ಚು ಆಸಕ್ತಿಯಿಂದ ಕಲಿಕಾ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ. ಬೋಧನೆ ಮತ್ತು ಕಲಿಕೆಯ ಪ್ರಕ್ರಿಯೆಯು, ಏಕಮುಖ ಸಂಚಾರವಾಗದೆ, ಶಿಕ್ಷಕರ ಮತ್ತು ವಿದ್ಯಾರ್ಥಿಗಳ ನಡುವೆ ಸಂಭಾಷಣೆ ಅಥವಾ ಸಂವಾದದ ಮೂಲಕ ಜ್ಞಾನಾರ್ಜನೆಗೆ ಅನುವು ಮಾಡಿಕೊಡುತ್ತದೆ. ಪರಿಕಲ್ಪನಾ ಕಲಿಕೆಗೆ ಹೆಚ್ಚು ಒತ್ತನ್ನು ನೀಡಲಾಗುತ್ತದೆ. ವಿದ್ಯಾರ್ಥಿಗಳ ಅಭಿರುಚಿ ಮತ್ತು ಅವರ ಕಲಿಕಾ ಧ್ಯೇಯಗಳನ್ನು ಪರಿಗಣಿಸಿ ಬೋಧನಾ ಕ್ರಮವನ್ನು ರೂಪಿಸಲಾಗುತ್ತದೆ. ಈ ಪದ್ಧತಿಯಲ್ಲಿ ಚರ್ಚೆಗಳಿಗೆ, ಗುಂಪು ಚರ್ಚೆಗಳಿಗೆ, ವಿಮರ್ಶಾತ್ಮಕ ಚಿಂತನೆಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ.

    ಸ್ವಲ್ಪ ವಿಷಯಾಂತರ ಮಾಡಿ, ನಮ್ಮ ದೇಶದಲ್ಲಿ ಪ್ರಸ್ತುತದಲ್ಲಿ ಬಹಳಷ್ಟು ಚಾಲ್ತಿಯಲ್ಲಿರುವ ಬೋಧನಾ ಕಲಿಕೆಯ ಪ್ರಕ್ರಿಯೆಯನ್ನು ಅವಲೋಕಿಸಿದರೆ ನಮಗೆ ಕಾಣುವುದು ಶಿಕ್ಷಕ ಕೇಂದ್ರಿತ ಶಿಕ್ಷಣ (ಟೀಚರ್‌ ಸೆಂಟ್ರಿಕ್‌ ಶಿಕ್ಷಣ). ಈ ಪದ್ದತಿಯಲ್ಲಿ ಶಿಕ್ಷಕರು ಬೋಧನಾ ಕಲಿಕೆಯ ಪ್ರಕ್ರಿಯೆಯಲ್ಲಿ ಪ್ರಧಾನ ಪಾತ್ರವನ್ನು ವಹಿಸಿ, ವಿದ್ಯಾರ್ಥಿಗಳು ಕೇವಲ ನಿಷ್ಕ್ರಿಯ ಕೇಳುಗರ (ಪಾಸ್ಸೀವ್‌ ಲಿಜನರ್ಸ್‌) ಪಾತ್ರ ವಹಿಸುತ್ತಾರೆ. ಶಿಕ್ಷಕರು ಪ್ರಧಾನ ಸಂಪನ್ಮೂಲ ವ್ಯಕ್ತಿಗಳಾಗಿರುತ್ತಾರೆ. ಏಕ ಮುಖ ಸಂಚಾರದ ರೀತಿಯಲ್ಲಿ ವಿಷಯಗಳು, ಶಿಕ್ಷಕರಿಂದ ವಿದ್ಯಾರ್ಥಿಗಳಿಗೆ ವರ್ಗಾವಣೆಯಾಗುತ್ತವೆ. ಅನೇಕ ವೇಳೆ, ಈ ಏಕತಾನತೆಯಿಂದ ವಿದ್ಯಾರ್ಥಿಗಳು ಆಸಕ್ತಿಯನ್ನು ಕಳೆದುಕೊಂಡು, ಬೇಸರಗೊಳ್ಳುವ ಸಂದರ್ಭಗಳಿವೆ.

    ವಿಶೇಷವಾಗಿ ಸಾಂಪ್ರದಾಯಿಕ ಶಿಕ್ಷಕ ಕೇಂದ್ರಿತ ಶಿಕ್ಷಣ ಪದ್ದತಿಯಲ್ಲಿ, ಪರೀಕ್ಷೆಗಳನ್ನು ಪಾಸು ಮಾಡುವ ಗುರಿಯನ್ನು ಹೊಂದಿದ್ದು, ವಿಷಯಗಳನ್ನು ಸರಿಯಾದ ರೀತಿಯಲ್ಲಿ ಅರ್ಥಮಾಡಿಕೊಳ್ಳದೆ, ಗಟ್ಟು ಹೊಡೆಯುವ ಸಂಸ್ಕೃತಿಯನ್ನು ಉತ್ತೇಜಿಸಲಾಗುತ್ತದೆ. ಪರಿಕಲ್ಪನಾ ಕಲಿಕೆಗೆ ಹೆಚ್ಚು ಅವಕಾಶವಿರುವುದಿಲ್ಲ. ಜೊತೆಗೆ, ಶಿಕ್ಷಕರನ್ನೇ ಅವಲಂಭಿಸುವ ಸಂಸ್ಕೃತಿಯನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳುವ ಅವಕಾಶಗಳು ಹೆಚ್ಚಾಗುತ್ತವೆ. ಉತ್ತಮ ರೀತಿಯಲ್ಲಿ ಕಲಿಕೆಯ ಫಲಿತಾಂಶಗಳನ್ನು ಮೌಲ್ಯಮಾಪನ ಮಾಡಲು ಸಾಧ್ಯವಾಗುವುದಿಲ್ಲ. ಇದಕ್ಕೆ ವಿರುದ್ಧವಾಗಿ, ವಿದ್ಯಾರ್ಥಿ ಕೇಂದ್ರಿತ ಶಿಕ್ಷಣದಲ್ಲಿ, ಶಿಕ್ಷಕರು ವಿಷಯ ಅಥವಾ ಜ್ಞಾನವನ್ನು ನೀಡುವ ಪೂರೈಕೆದಾರರಾಗದೆ ಜ್ಞಾನಾರ್ಜನೆಯ ಪ್ರಕ್ರಿಯೆಯಲ್ಲಿ ಕೇವಲ ಅನುವುಗಾರರಾಗುತ್ತಾರೆ (ಪೆಸಿಲಿಟೇಟರ್ಸ್).‌ ವಿದ್ಯಾರ್ಥಿ ಕೇಂದ್ರಿತ ವಿದ್ಯಾರ್ಥಿಗಳಲ್ಲಿ ನಿರಂತರ ಆಸಕ್ತಿಯನ್ನುಂಟು ಮಾಡುತ್ತದೆ.

    ವಿದ್ಯಾರ್ಥಿ ಕೇಂದ್ರಿತ ಶಿಕ್ಷಣಕ್ಕೆ ಸಂಬಂಧಿಸಿದಂತೆ, ನನ್ನ ವೈಯಕ್ತಿಕ ಅನುಭವವನ್ನು ಹಂಚಿಕೊಳ್ಳಲು ಬಯಸುತ್ತೇನೆ. ನಾನು ಅಮೇರಿಕಾ ದೇಶಕ್ಕೆ ನೀಡಿದ ಒಂದು ಭೇಟಿಯಲ್ಲಿ ನನ್ನ ಮಗನ ಪ್ರಯತ್ನದಿಂದ ಹ್ಯೂಸ್ಟನ್‌ ನಗರದಲ್ಲಿರುವ ಟೌನ್‌ ವೆಸ್ಟ ಎಲಿಮೆಂಟಿರಿ ಶಾಲೆಯನ್ನು ಭೇಟಿ ಮಾಡುವ ಮತ್ತು ಮೂರನೇ ತರಗತಿಯ ಮಕ್ಕಳೊಡನೆ ಸಂವಾದ ಮಾಡಲು ಅನುಮತಿ ದೊರಕಿತು. ನಾವು ತರಗತಿಯ ಕೊಠಡಿಯ ಒಳಗೆ ಪ್ರವೇಶಿಸಿದಾಗ, ನಮಗೆ ಆಶ್ಚರ್ಯವೇ ಕಾದಿತ್ತು. ತರಗತಿಯಲ್ಲಿ ವಿದ್ಯಾರ್ಥಿಗಳಿಗಾಗಲಿ ಅಥವಾ ಶಿಕ್ಷಕರಿಗಾಗಲಿ ಯಾವುದೇ ಬಿಗುವಿನ ವಾತಾವರಣವಿರದೇ ವಿಶ್ರಾಂತ ವಾತಾವರಣ ಎದ್ದು ಕಾಣುತ್ತಿತ್ತು. ಮಕ್ಕಳಲ್ಲಿ ಯಾವುದೇ ಉದ್ವೇಗವಿಲ್ಲದೆ, ತಮ್ಮ ತಮ್ಮ ಚಟುವಟಿಕೆಗಳಲ್ಲಿ ಕಾರ್ಯ ಮಗ್ನರಾಗಿದ್ದರು. ಪ್ರತಿಯೊಬ್ಬ ವಿದ್ಯಾರ್ಥಿಗೂ ಒಂದು ಮೇಜು ಮತ್ತು ಒಂದು ಕುರ್ಚಿಯನ್ನು ನೀಡಲಾಗಿತ್ತು. ವಿದ್ಯಾರ್ಥಿಗಳು ಅವರವರ ಆಸಕ್ತಿಗೆ ಅನುಸಾರವಾಗಿ ಚಟುವಟಿಕೆಗಳಲ್ಲಿ ತೊಡಗಿದ್ದರು.

    ಉದಾಹರಣೆಗೆ ಹೇಳುವುದಾದರೆ, ಕೆಲವು ವಿದ್ಯಾರ್ಥಿಗಳು ಗಣಿತದ ಮಾದರಿಗಳನ್ನು ತಯಾರು ಮಾಡುತ್ತಿದ್ದರೆ, ಇನ್ನು ಕೆಲವರು ವಿಜ್ಞಾನದ ಪ್ರಾಜೆಕ್ಟ್ ಗಳಲ್ಲಿ ಮಗ್ನರಾಗಿದ್ದರು. ಮೂರನೇ ಗುಂಪಿನ ವಿದ್ಯಾರ್ಥಿಗಳು ಸ್ಕೆಚಿಂಗ್‌ ಮಾಡುತ್ತಿದ್ದರು. ಹೀಗೆ, ವಿದ್ಯಾರ್ಥಿಗಳು ಅವರವರ ಆಸಕ್ತಿಗೆ ಅನುಗುಣವಾಗಿ ವಿದ್ಯಾರ್ಜನೆ ಮಾಡುತ್ತಿದ್ದರು. ಯಾವುದೇ ನಿಬಂಧನೆಯಿರಲಿಲ್ಲ. ಶಿಕ್ಷಕರು ಕೇವಲ ಮಾರ್ಗದರ್ಶನ ನೀಡುತ್ತಿದ್ದರು ಹಾಗೂ ವಿದ್ಯಾರ್ಥಿಗಳ ವೈಯಕ್ತಿಕ ಆಸಕ್ತಿಗಳನ್ನು ಉತ್ತೇಜಿಸುತ್ತಿದ್ದರು. ಬಹುಶಃ ಈ ತರಗತಿಯಲ್ಲಿದ್ದ ವಾತಾವರಣ, ವಿದ್ಯಾರ್ಥಿ ಕೇಂದ್ರಿತ ಶಿಕ್ಷಣಕ್ಕೆ ಶಾಸ್ತ್ರೀಯ (ಕ್ಲಾಸಿಕ್)‌ ಉದಾಹರಣೆ ಎಂದು ಹೇಳಬಹುದು.

    ಶಿಕ್ಷಕರ ಪಾತ್ರ

    ಈಗಾಗಲೆ ತಿಳಿಸಿರುವಂತೆ ವಿದ್ಯಾರ್ಥಿ ಕೇಂದ್ರಿತ ಶಿಕ್ಷಣದಲ್ಲಿ, ಶಿಕ್ಷಕರು ವಿಷಯ ವಿತರಣೆಗಾರರಲ್ಲ (ಕಂಟೆಂಟ್‌ ಡೆಲಿವರರ್ಸ್)‌, ಆದರೆ ಕೇವಲ ಅನುವುಗಾರರು (ಪೆಸಿಲಿಟೇಟರ್ಸ್).‌ ವಿದ್ಯಾರ್ಥಿ ಕೇಂದ್ರಿತ ಶಿಕ್ಷಣದಲ್ಲಿ ಹೆಚ್ಚು ಮಹತ್ವವನ್ನು ಪಡೆದಿರುವ ಶೈಕ್ಷಣಿಕ ಸ್ಕ್ಯಾಪೋಲ್ಡಿಂಗ್‌ ನ್ನು ಅಳವಡಿಸಿಕೊಳ್ಳ ಬೇಕಾಗುತ್ತದೆ. ಇದರಿಂದ, ವಿದ್ಯಾರ್ಥಿಗಳು ಸ್ವತಂತ್ರವಾಗಿ ಚಿಂತನೆ ಮಾಡುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುಲು ಸಾಧ್ಯವಾಗುತ್ತದೆ. ಹೆಚ್ಚು ಪ್ರಚಲಿತದಲ್ಲಿರುವ ಮಾತೆಂದರೆ, ವಿದ್ಯಾರ್ಥಿ ಕೇಂದ್ರಿತ ಶಿಕ್ಷಣದಲ್ಲಿ ಶಿಕ್ಷಕರು ವಿಷಯ ವಿತರಕರ (ಕಂಟೆಂಟ್‌ ಡಿಸ್ಪೆನ್ಸರ್)‌ ಪಾತ್ರದಿಂದ ವಿಷಯ ಸಂಪನ್ಮೂಲಕಾರರ ಪಾತ್ರಕ್ಕೆ (ಕಂಟೆಂಟ್‌ ರಿಸೋಸರ್ಸ್) ಬದಲಾಗ ಬೇಕಾಗುತ್ತದೆ. ವಿದ್ಯಾರ್ಥಿ ಕೇಂದ್ರಿತ ಶಿಕ್ಷಣದಲ್ಲಿ, ಶಿಕ್ಷಕರು ಅನೇಕ ಪಾತ್ರಗಳನ್ನು ವಹಿಸಬೇಕಾಗುತ್ತದೆ. ಉದಾಹರಣೆಗೆ, ವಿಷಯ ತಜ್ಞರು, ಮಾರ್ಗದರ್ಶಕರು, ವಿವಿಧ ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ ಮತ್ತು ಭಾಷಾ ಹಿನ್ನಲೆಯಿಂದ ಬಂದಿರುವ ವಿದ್ಯಾರ್ಥಿಗಳ ನಡುವೆ ಬಲವಾದ ಮತ್ತು ವಿಶ್ವಾಸಾರ್ಹ ಸಂಬಂಧಗಳನ್ನು ಬೆಳೆಸಿಕೊಂಡು, ವಿದ್ಯಾರ್ಥಿಗಳ ಆತ್ಮ ವಿಶ್ವಾಸವನ್ನು ಹೆಚ್ಚು ಮಾಡುವ ಕಾರ್ಯವನ್ನು ನಿರಂತರವಾಗಿ ಮಾಡಬೇಕಾಗುತ್ತದೆ.

    ವಿದ್ಯಾರ್ಥಿ ಕೇಂದ್ರಿತ ಶಿಕ್ಷಣದ ಅನುಕೂಲಗಳು.

    1. ವಿದ್ಯಾರ್ಥಿಗಳು ಅವರ ವಿದ್ಯೆಯನ್ನು ಸ್ವತಃ ಅವರೇ ಸೃಷ್ಟಿಸಕೊಳ್ಳಬಲ್ಲ ಅವಕಾಶಗಳನ್ನು ಒದಗಿಸುತ್ತದೆ.

    ಯಾವ ವಿಷಯವನ್ನು ಕಲಿಯ ಬೇಕು, ಯಾವಾಗ ಕಲಿಯ ಬೇಕು ಮತ್ತು ಹೇಗೆ ಕಲಿಯ ಬೇಕು ಎಂಬ ಅಂಶಗಳನ್ನು ವಿದ್ಯಾರ್ಥಿಗಳೇ ನಿರ್ಧಾರ ಮಾಡಲು ಉತ್ತೇಜಿಸಲಾಗುತ್ತದೆ.

    • ಎಲ್ಲಿ ಬೇಕಾದರೂ ಯಾವಾಗ ಬೇಕಾದರೂ ಕಲಿಯುವ ನಮ್ಯತೆ (ಪ್ಲೆಕ್ಷಿಬಿಲಿಟಿ)‌ ಯನ್ನು ಒದಗಿಸುತ್ತದೆ.
    • ಕಲಿಯುವ ಪ್ರಕ್ರಿಯೆಯು ಆಸಕ್ತಿದಾಯಕವಾಗಿ ಮತ್ತು ಆನಂದದಾಯಕವಾಗಿರುತ್ತದೆ.
    • ಜ್ಞಾನ ಸಂಪತ್ತು ಮತ್ತು ಸ್ವಯಂ ನಿರ್ದೇಶನದಿಂದ ಕೌಶಲ್ಯಗಳನ್ನು ಪಡೆಯುಲು ಅನುವು ಮಾಡಿಕೊಡುತ್ತದೆ.
    • ತರಗತಿಗಳ ಹೊರಗೂ ಸಹ, ವಿದ್ಯಾರ್ಥಿಗಳು ಬೆಳೆಯಲು ಅಂದರೆ ಅವರ ಜೀವನದಲ್ಲಿ ಬೆಳೆಯಲು ಸಕ್ರಿಯಗೊಳಿಸುತ್ತದೆ.
    • ಕುತೂಹಲ ಮತ್ತು ಸಹಕಾರಿಕೆ ಕಲಿಕೆಗಳನ್ನು ಉತ್ತೇಜಿಸುವುದರ ಮೂಲಕ, ಉತ್ತಮ ರೀತಿಯ ಜ್ಞಾನ ಸಂಪಾದನೆಗೆ ಅನುವುಮಾಡಿಕೊಡುತ್ತದೆ.
    • ವಿದ್ಯಾರ್ಥಿಗಳು, ಸ್ವತಂತ್ರವಾಗಿ ಆಲೋಚಿಸಲು, ಸಂಶೋಧನಾ ವಿಧಾನವನ್ನು ಅವರೇ ನಿರ್ಧರಿಸಲು ಮತ್ತು ಅವರ ಪ್ರಗತಿಯನ್ನು ಅವರೇ ಮೌಲ್ಯ ಮಾಪನ ಮಾಡಲು ಅವಕಾಶಗಳಿರುತ್ತವೆ.
    • ವಿಮರ್ಶಾತ್ಮಕ ಚಿಂತನೆ, ಸೃಜನಶೀಲತೆ, ಸಮಸ್ಯೆಗಳನ್ನು ಬಿಡಿಸುವ ಸಾಮರ್ಥ್ಯ, ಹೀಗೆ ಹಲವಾರು ಜೀವನದ ಕೌಶಲ್ಯಗಳನ್ನು ಬೋಧಿಸುತ್ತದೆ.
    • ಪರಿಕಲ್ಪನಾ ಕಲಿಕೆ, ವಿಷಯಗಳ ಬಗ್ಗೆ ಆಳವಾದ ಮತ್ತು ಸ್ಪಷ್ಟ ತಿಳುವಳಿಕೆಯನ್ನು ಪಡೆಯಲು ಸಾಧ್ಯವಾಗುತ್ತದೆ.
    • ನವೀನತೆಯಿಂದ ಕೂಡಿದ ಬೋಧನಾ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಶಿಕ್ಷಕರಿಗೆ ಅವಕಾಶಗಳು ದೊರಕುತ್ತವೆ.
    • ಅನ್ವೇಷಣೆಯ ಮೂಲಕ ಕಲಿಯುವ ವಿಧಾನವನ್ನು ಪೋಷಿಸುತ್ತದೆ.
    • ಜೀವನದ ಸವಾಲುಗಳನ್ನು ಧೈರ್ಯದಿಂದ, ಆತ್ಮ ವಿಶ್ವಾಸದಿಂದ ಎದುರಿಸುವ ಸಾಮರ್ಥ್ಯವನ್ನು ನೀಡುತ್ತದೆ.

    ವಿದ್ಯಾರ್ಥಿ ಕೇಂದ್ರಿತ ಶಿಕ್ಷಣದ ವಿಧಾನಗಳು.

    ಈಗಾಗಲೇ ಮೇಲೆ ತಿಳಿಸಿರುವಂತೆ, ವಿದ್ಯಾರ್ಥಿ ಕೇಂದ್ರಿತ ಶಿಕ್ಷಣದಲ್ಲಿ ಬೋಧನೆ ಮತ್ತು ಕಲಿಕೆಯ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳನ್ನು ಕೇಂದ್ರ ಬಿಂದುವಿನಲ್ಲಿರಿಸಿ ಬೋಧನಾ ಕ್ರಮವನ್ನು ವಿನ್ಯಾಸಗೊಳಿಸಲಾಗುತ್ತದೆ. ವಿಷಯದ ಬಗ್ಗೆ ಇರುವ ಪೂರ್ವ ಜ್ಞಾನವನ್ನು ಸಕ್ರಿಯಗೊಳಿಸುವುದು, ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಮತ್ತು ಕಲಿಕಾ ಶೈಲಿಯನ್ನು ಆಧರಿಸಿ ಬೋಧನಾ ಕ್ರಮವನ್ನು ಬದಲಿಸುವುದು, ವಿದ್ಯಾರ್ಥಿಗಳ ಅನುಭವಗಳಿಗೆ ಸಂಬಂಧ ಕಲ್ಪಿಸುವುದು ಮತ್ತು ಪ್ರತಿಯೊಬ್ಬ ವಿದ್ಯಾರ್ಥಿಯ ಕಲಿಕಾ ವೇಗಕ್ಕೆ ಅನುಗುಣವಾಗಿ ಬೋಧಿಸುವುದು ವಿದ್ಯಾರ್ಥಿ ಕೇಂದ್ರಿತ ಶಿಕ್ಷಣದ ಪ್ರಮುಖ ಲಕ್ಷಣಗಳು.

    ಅನುಭವದ ಕಲಿಕೆ (ಎಕ್ಸ್‌ಪೀರಿಯನ್ಸಲ್)‌ ಮತ್ತು ಭಾಗವಹಿಸುವ ಕಲಿಕೆ (ಪಾರ್ಟಿಸಿಪೇಟೀವ್) ಗಳು ಒಳಗೊಂಡಂತೆ ಕೆಲವು ವಿಧಾನಗಳನ್ನು ಪಟ್ಟಿ ಮಾಡುವ ಪ್ರಯತ್ನ ಮಾಡೋಣ.

    1. ಸಂವಾದಾತ್ಮಕ ಅಥವಾ ಪ್ರಶ್ನೆ – ಉತ್ತರ ಅಧಿವೇಶನಗಳು, ಬಹುಶಃ ಸಾಕ್ರೆಟಿಕ್ ವಿಧಾನಕ್ಕೆ ಸರಿ ಸಮಾನವಾದುದು.

    ಸಾಕ್ರೆಟಿಕ್‌ ವಿಧಾನದಲ್ಲಿ, ಶಿಕ್ಷಕ ಮತ್ತು ವಿದ್ಯಾರ್ಥಿಗಳ ನಡುವೆ ತನಿಖಾತ್ಮಕ ಪ್ರಶ್ನೆಗಳನ್ನು, ವಿದ್ಯಾರ್ಥಿಗಳನ್ನು ಪ್ರಚೋಧಿಸುವ ರೀತಿಯಲ್ಲಿ ಅವಿಚ್ಚಿನ್ನವಾಗಿ ಕೇಳುವುದು. ಇದರಿಂದ ವಿಷಯದ ಬಗ್ಗೆ ವಿದ್ಯಾರ್ಥಿಗಳಲ್ಲಿರುವ ಅಭಿಪ್ರಾಯಗಳನ್ನು ಪಡೆಯಲು ಹಾಗೂ ಅವರ ವಿಷಯಾನುಗ್ರಹಿಕೆಯನ್ನು ಅಳತೆ ಮಾಡಲು ಸಾಧ್ಯವಾಗುತ್ತದೆ.

    • ಬ್ರೈನ್‌ ಸ್ಟಾರ್ಮಿಂಗ್‌ ಅಧಿವೇಶನಗಳು.
    • ಸಹಕಾರಿಕೆ ಕಲಿಕೆ ( ಕೊಲಾಬರೇಟಿವ್‌ ಕಲಿಕೆ)
    • ಪೀರ್‌ ಲರ್ನಿಂಗ್‌ ( ಸಮಾನರ ಜೊತೆಗೂಡಿ ಕಲಿಯುವುದು)
    • ವಿಷಯ ಅಧ್ಯಯನ ಪದ್ಧತಿ (ಕೇಸ್‌ ಸ್ಟಡಿ ಪದ್ಧತಿ)
    • ಸಮಸ್ಯಾಧಾರಿತ ಕಲಿಕೆ (ಪ್ರಾಬ್ಲಮ್‌ ಬೇಸಡ್‌ ಲರ್ನಿಂಗ್)‌
    • ಯೋಜನಾಧಾರಿತ ಕಲಿಕೆ (ಪ್ರಾಜೆಕ್ಟ್‌ ಬೇಸಡ್‌ ಲರ್ನಿಂಗ್)‌
    • ಪ್ರಾಯೋಗಿಕ ತರಗತಿಗಳು.
    • ಚರ್ಚಾ ಸ್ಪರ್ಧೆಗಳು ಮತ್ತು ರಸ ಪ್ರಶ್ನೆಗಳು.
    • ವಿದ್ಯಾರ್ಥಿ ಉಪನ್ಯಾಸಗಳು.
    • ಜಿಗ್‌ ಸಾ ತಂತ್ರದ ಮೂಲಕ ಕಲಿಕೆ.
    • ಕ್ರೀಡೆಗಳ ಮೂಲಕ ಬೋಧನೆ.
    • ಗುಂಪು ಚರ್ಚೆಗಳು.
    • ಪ್ಲಿಪಡ್‌ ತರಗತಿಗಳು.
    • ಶೈಕ್ಷಣಿಕ ಸ್ಪರ್ಧಾತ್ಮಕ ಚಟುವಟಿಕೆಗಳು.
    • ಜಡ್‌ ಟು ಎ ಪದ್ಧತಿ.

    ವಿದ್ಯಾರ್ಥಿ ಕೇಂದ್ರಿತ ಶಿಕ್ಷಣವನ್ನು ಪರಿಣಾಮಕಾರಿಯಾಗಿ ಮಾಡುವುದು ಹೇಗೆ.

    1. ಮೊದಲನಯದಾಗಿ, ಶಿಕ್ಷಕರ ಮನೋಭಾವವನ್ನು ಪರಿವರ್ತನೆ ಮಾಡುವುದು. ಅನುವುಗಾರರ ಪಾತ್ರವನ್ನು ಸಂತಸದಿಂದ ಒಪ್ಪಿಕೊಳ್ಳುವಂತೆ ಮನ ಪರಿವರ್ತನೆ ಮಾಡುವುದು ಬಹಳ ಮುಖ್ಯ.
    2. ವಿದ್ಯಾರ್ಥಿಗಳಿಗೆ ತಮ್ಮ ಧ್ಯೇಯಗಳನ್ನು/ಗುರಿಗಳನ್ನು ಅವರೇ ನಿರ್ಧರಿಸಲು ಉತ್ತೇಜಿಸುವುದು.
    3. ಹೊಸ ಹೊಸ ವಿಷಯಗಳನ್ನು ವಿದ್ಯಾರ್ಥಿಗಳೇ ಸ್ವಂತ ಪ್ರಯತ್ನದಿಂದ ಕಲಿಯಲು ಪ್ರೇರೇಪಿಸುವುದು.
    4. ಚರ್ಚೆಗಳನ್ನು ಮತ್ತು ಸಂವಾದಗಳನ್ನು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ನಡೆಸುವುದು.
    5. ಸಮಾನರ ಜೊತೆಗೂಡಿ ಕಲಿಯುವ ಪದ್ಧತಿ ಅಳವಡಿಸುವುದು.
    6. ಸಹಕಾರಿ ಕಲಿಕೆಯನ್ನು ಉತ್ತೇಜಿಸುವುದು.
    7. ಅನುಭವದ ಕಲಿಕೆ ಮತ್ತು ಭಾಗವಹಿಸುವ ಕಲಿಕೆಗಳನ್ನು ಉತ್ತೇಜಿಸಿ, ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವುದು.

    ಮೌಲ್ಯ ಮಾಪನಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ವಿದ್ಯಾರ್ಥಿ ಕೇಂದ್ರಿತ ಶಿಕ್ಷಣದಲ್ಲಿ ಸಂಕಲನಾತ್ಮಕ ಮೌಲ್ಯಮಾಪನಕ್ಕಿಂತ (ಸಮ್ಮೇಟೀವ್ ಅಸೆಸ್‌ಮೆಂಟ್), ರಚನಾತ್ಮಕ ಮೌಲ್ಯಮಾಪನಕ್ಕೆ (ಪಾರ್ಮೆಟೀವ್‌ ಅಸೆಸ್‌ಮೆಂಟ್)‌ ಹೆಚ್ಚು ಒತ್ತು ಕೊಡಬೇಕಾಗಿರುವ ಅವಶ್ಯಕತೆಯಿರುತ್ತದೆ. ನಾವಿನ್ಯತೆಯಿಂದ ಕೂಡಿದ ಬೋಧನಾ ಕ್ರಮಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುವ ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ, ಶಿಕ್ಷಣದ ಎಲ್ಲಾ ಹಂತಗಳಲ್ಲಿ ಇಂದಿಗೆ ಬಹಳಷ್ಟು ಅವಶ್ಯಕತೆಯಿದೆ. ನೂತನ ರಾಷ್ಟೀಯ ಶಿಕ್ಷಣ ನೀತಿ 2020 ಉದ್ದೇಶವೂ ಸಹ ಇದೇ ಆಗಿರುತ್ತದೆ. ಆದರೆ ನಮ್ಮ ದೇಶದ ಪ್ರಸ್ತುತದ ಪರಿಸ್ಥಿತಿಯಲ್ಲಿ, ಒಂದು ತರಗತಿಯಲ್ಲಿ ಎಂಬತ್ತರಿಂದ ನೂರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವಾಗ, ಅನುಷ್ಠಾನಕ್ಕೆ ತರುವುದು ಕಷ್ಟದ ಸಂಗತಿ. ಆದರೆ, ಅಳವಡಿಸಿಕೊಳ್ಳದಿರಲು ಸಹ ಸಾಧ್ಯವಿಲ್ಲ. ಬಹುಶಃ ಪ್ರಾರಂಭದಲ್ಲಿ, ಹೈಬ್ರಿಡ್‌ ಪದ್ಧತಿಯನ್ನು ಅಂದರೆ ಶಿಕ್ಷಕ ಕೇಂದ್ರಿತ ಶಿಕ್ಷಣ ಮತ್ತು ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ, ಎರಡನ್ನೂ ಸೇರಿಸಿ, ಜಾರಿಗೆ ತಂದು ಕ್ರಮೇಣ ಪೂರ್ಣ ಪ್ರಮಾಣದ ಬದಲಾವಣೆಗೆ ಪ್ರಯತ್ನಿಸಬಹುದು,

    ಕನ್ಪೂಸಿಯಸ್‌ನ ವಾಕ್ಯದಿಂದ, ಲೇಖನವನ್ನು ಮುಕ್ತಾಯ ಮಾಡಲು ಬಯಸುತ್ತೇನೆ,

    I hear and I forget, I see and I remember, I do and I understand.

    ‌   

    ಅಮೋಘ ಪರಂಪರೆಯ ಅಮೂಲ್ಯ ಕೊಡುಗೆ

    ಇಪ್ಪತ್ತ ನೆಯ ಶತಮಾನದ ಪೂರ್ವಾರ್ಧದಲ್ಲಿ ಎರೆಡೆರಡು ಪ್ರಾಪಂಚಿಕ ಯುದ್ಧಗಳನ್ನು ಕಂಡ ವಿಶ್ವ ಮತ್ತೆ ಆ ತರಹದ ಯುದ್ಧಗಳನ್ನು ತಡೆಯುವ ನಿಟ್ಟಿನಲ್ಲಿ, ಶಾಂತಿ ಬಯಸುವ 280 ಸಮಾನ ಮನಸ್ಕ ದೇಶಗಳೊಂದಿಗೆ ವಿಶ್ವ ಸಂಸ್ಥೆ ಅನ್ನುವ ಒಕ್ಕೂಟವನ್ನು 24 ಅಕ್ಟೊಬರ್ 1945 ರಂದು ಅಸ್ತಿತ್ವಕ್ಕೆ ತರುತ್ತದೆ. ಇದರ ಮೂಲ ಉದ್ದೇಶ ಒಕ್ಕೂಟ ದೇಶಗಳ ಭದ್ರತೆ, ಶಾಂತಿ ಮತ್ತು ಸೌಹಾರ್ದಾಯುತ ಸಂಬಂಧಗಳನ್ನು ಪೋಷಿಸಿ ಬೆಳೆಸುವುದಾಗಿರುತ್ತದೆ, ಯಾವುದೇ ದೇಶದ ಆತ್ಮಾಭಿಮಾನಕ್ಕೆ ಬಾರದ ರೀತಿಯಲ್ಲಿ.

    ವಿಶ್ವದ ಆಗ್ರಗಣ್ಯ ದೇಶಗಳಾದ ಅಮೇರಿಕಾ, ರಷ್ಯಾ , ಬ್ರಿಟನ್, ಜಪಾನ್, ಫ್ರಾನ್ಸ್ ಗಳನ್ನು ಒಳಗೊಂಡಂತಹ ಈ ಒಕ್ಕೂಟ ಅಮೇರಿಕಾದ ನೇತೃತ್ವದಲ್ಲಿ, ಅಲ್ಲಿಯ ನೆಲದಲ್ಲಿಯೇ (ಸ್ಯಾನ್ ಫ್ರಾನ್ಸಿಸ್ಕೊ) ಸ್ಥಾಪನೆಯಾಗಿ ಇಲ್ಲಿಯವರೆಗೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಕೆಲಸಮಾಡಿಕೊಂಡು ಬಂದಿದೆ. ಇಂತಹ ಒಕ್ಕೂಟಕ್ಕೆ 1945 ರ ಬ್ರಿಟಿಷ್ ಭಾರತವೂ ಸದಸ್ಯತ್ವವನ್ನು ಪಡೆಯುತ್ತದೆ.

    ಶಾಂತಿ, ಸೌಹಾರ್ದತೆ ಅನ್ನುವುದು ಎಲ್ಲೇ ಇರಲಿ ಅಲ್ಲಿ ಭಾರತದ ಪಾತ್ರ ಬಹು ಮುಖ್ಯವಾಗಿರಬೇಕಿತ್ತು. ಕಾರಣಾಂತರಗಳಿಂದ ಸ್ವಾತಂತ್ರ ಭಾರತ ವಿಶ್ವಸಂಸ್ಥೆಯಲ್ಲಿ ಅಷ್ಟೊಂದು ಸಕ್ರಿಯವಾಗಿ ಭಾಗಿ ಆಗಲಿಲ್ಲ .ವಿಶ್ವವೆಲ್ಲವೂ ಮೃಗಸಮಾನವಾದ ಅವಸ್ಥೆಯಲ್ಲಿದ್ದಾಗ ಭಾರತ ಆಧ್ಯಾತ್ಮ ಚಿಂತನೆಗಳ ಕಣಜವಾಗಿತ್ತು ಅನ್ನುವುದು ಅತಿಶಯೋಕ್ತಿ ಅಲ್ಲ ಬದಲಿಗೆ ಕಹಿ ಸತ್ಯ!

    ಗ್ರೀಕ್ ಯೋಧ ಅಲೆಕ್ಸಾoಡರ್ ಭಾರತದ ಕಡೆ ತನ್ನ ರಾಜ್ಯ ವಿಸ್ತರಣೆಯ ದಂಡೆಯಾತ್ರೆ ಮಾಡುವ ಎಷ್ಟೋ ಶತಮಾನಗಳ ಮೊದಲು ಇಲ್ಲಿಯ ವಿಕ್ರಮಾದಿತ್ಯನು ಆಗ್ಗೆ ನಿವಾಸ ಯೋಗ್ಯ ವಿಶ್ವವನ್ನು (ಬಹುಪಾಲು ಈಗಿನ ಏಷ್ಯಾ ಖಂಡ) ತನ್ನ ಅಧೀನಕ್ಕೆ ತೆಗೆದುಕೊಂಡು ರಾಜ್ಯಭಾರ ಮಾಡಿದ್ದನು. (ವಿದೇಶಿಯರ ಚರಿತ್ರೆ ಇದನ್ನು ದಾಖಲಿಸಲಿಲ್ಲ ಅಂತ ಇದನ್ನು ಕಟ್ಟು ಕಥೆ ಅನ್ನುವ ಬುದ್ಧಿಜೀವಿಗಳೂ ನಮ್ಮಲ್ಲಿದ್ದಾರೆ!) ನಿನ್ನನ್ನು ನೀನು ಜಯಿಸದೆ, ವಿಶ್ವವನ್ನು ಜಯಿಸಿದರೂ ಪ್ರಯೋಜನವಿಲ್ಲ ಅನ್ನುವ ಅಧ್ಯಾ ತ್ಮಿಕ ತತ್ವಕ್ಕೆ ಶರಣಾದ ಎಷ್ಟೋ ಶೂರ ಚಕ್ರವರ್ತಿಗಳು, ಸಾಮ್ರಾಟರು ಇಲ್ಲಿ ವಾನಪ್ರಸ್ತ ಆಶ್ರಮ ಸ್ವೀಕರಿಸಿ ಸಾಧುಗಳಾಗಿದ್ದಾರೆ. ಇಂತಹ ಘಟನೆಗಳು ಪ್ರಪಂಚದ ಯಾವ ಸಂಸ್ಕೃತಿಯ ಇತಿಹಾಸದಲ್ಲೂ ಸಿಗುವುದಿಲ್ಲ, ಆದರೆ ಇಲ್ಲಿ ಅದು ಜೀವನ ಪದ್ಧತಿ ಆಗಿತ್ತು!

    ಪ್ರಕೃತಿಯನ್ನು ನೋಡುತ್ತಾ, ಅದನ್ನು ಅಭ್ಯಸಿ ಸುತ್ತಾ, ಅದಕ್ಕೆ ಧಕ್ಕೆ ತಾರದೇ, ಅದರ ನಿಯಮಗಳನ್ನು ಅನುಸರಿಸಿ ಜೀವನಕ್ರಮವನ್ನು ರೂಪಿಸಿಕೊಂಡ ಯಾವುದಾದರೂ ಸಂಸ್ಕೃತಿ ಪ್ರಪಂಚದಲ್ಲಿ ಇದ್ದರೇ ಅದು ಈ ನೆಲದ್ದು ಮಾತ್ರ. ಇದರಲ್ಲಿ ಯಾವುದೇ ಅನುಮಾನ ಯಾರಿಗೂ ಬೇಡ. ಇಲ್ಲಿಯ ದಾರ್ಶನಿಕರ ಕಾಣ್ಕೆ ಗಳು, ಉಪದೇಶಿಸಿದ ತತ್ವಗಳು , ಸಾರಿದ ಜೀವನದ ಸಂದೇಶಗಳು ಇದನ್ನು ಸಿದ್ದಪಡಿಸುತ್ತವೆ. ಪ್ರಕೃತಿಯ ಕೂಸಾದ ನೀನು ಪ್ರಕೃತಿಗೆ ಹೊರೆಯಾಗದೆ, ಪೋಶಿಸಿದ ಅದನ್ನು ಕೃತಜ್ಞತೆ ಯಿಂದ ಸ್ಮರಿಸು, ಬದಲಾಗಿ ನಿನ್ನ ಅಹಂಕಾರದ ಗುರುತಾಗಿ ನಿನ್ನ ಹೆಜ್ಜೆ ಗುರುತನ್ನೂ ಇಲ್ಲಿ ಬಿಡಬೇಡ ಅನ್ನುವ ಪರಮ ಸಾತ್ವಿಕ ಸಾರವನ್ನು ಮಾನವ ಕುಲಕ್ಕೆ ಹೇಳಿದ ಕಿವಿಮಾತುಗಳು ಇಲ್ಲಿಯ ಮಹಾನ್ ಪರಂಪರೆಗೆ ಸಾಕ್ಷಿಯಾಗಿವೆ.

    ಇಂತಹ ಅಮೋಘ ಪರಂಪರೆಯ ಒಂದು ಅಮೂಲ್ಯ ತುಣುಕು ಯೋಗ ! ಇದನ್ನು ಯಾರು, ಯಾವಾಗ, ಏಕೆ, ಎಲ್ಲಿ ಹೇಗೆ ಕಂಡು ಹಿಡಿದರು ಅನ್ನುವಂತಹ ಈಗಿನ ಬುದ್ದಿವಂತರ ಪ್ರಶ್ನೆಗಳಿಗೆ ಉತ್ತರ ಸಿಗುವುದು ಕಷ್ಟ. ಇಂತಹ ಪ್ರಶ್ನೆಗಳೇ ಆಗ ಅಪ್ರಸ್ತುತ ಅನ್ನಿಸಿರಬೇಕು. ಜೀವನ ಕ್ರಮಕ್ಕಾಗಿ ರೂಪುಗೊಂಡ ಸಾಧಾರಣ ವಿಧಾನಗಳಲ್ಲಿ ಇದೂ ಒಂದು ಅಷ್ಟೇ. ಕೃಷ್ಣ ಭಗವದ್ಗೀತೆಯಲ್ಲಿ ಇದರ ಬಗ್ಗೆ ಅರ್ಜುನನಿಗೆ ಹೇಳಿದ್ದಾನೆ ಅಂತ ಇದರ ಉಲ್ಲೇಖಕ್ಕೆ 5000 ವರ್ಷ ಅನ್ನುವವರಿದ್ದಾರೆ ಬಿಟ್ಟರೆ ಇದರ ಉಗಮ ಯಾರಿಂದ, ಯಾವಾಗ ಆಯ್ತು ಅಂತ ಹೇಳೋರು ಯಾರೂ ಇಲ್ಲ. ನಂತರ ಪತಾಂಜಲಿ ಅನ್ನುವ ಸಾಧಕ ಸುಮಾರು 2500 ಸಾವಿರ ವರ್ಷಗಳ ಹಿಂದೆ ಇದರ ಮಹತ್ವ, ಗುಣವಿಶೇಷ ವನ್ನು ಬರಹದ ರೂಪದಲ್ಲಿ ದಾಖಲಿಸಿದ ಅಂತ ಹೇಳುವವರಿದ್ದಾರೆ. ಇಲ್ಲಿಯ ಹಲವಾರು ವಿಷಯಗಳು ಹೀಗೆಯೇ ಇವೆ. ಯಾಕಂದ್ರೆ ಸೂರ್ಯನನ್ನು ಮೊದಲು ನೋಡಿದವರು ಯಾರು ಹಾಗಂತ ಎಲ್ಲಿ ಯಾರು ದಾಖಲಿಸಿಟ್ಟರು ನೋಡಿದ್ದನ್ನು ಅಂತ ಕೇಳಿದ ಹಾಗೆ ಆಗ್ತದೆ! ಮಾನವ ಕಲ್ಯಾಣಕ್ಕಾಗಿ ಇರುವ ಸತ್ಯಗಳನ್ನು ಕಂಡುಕೊಂಡರೂ ಅದರ ವಾರಸತ್ವವನ್ನು ಹೊಂದುವುದು ಅಪರಾಧ ಅಂತ ಭಾವಿಸಿದ್ದ ದಾರ್ಶನಿಕರು ಎಲ್ಲಿಯೂ ತಮ್ಮ ಹೆಸರನ್ನು ದಾಖಲಿಸಲು ನಿರಾಕರಿಸಿದ್ದಾರೆ.

    ಪಕ್ಷಿ ನೋಟದಲ್ಲಿ ಯೋಗವನ್ನು ಈ ಪರಂಪರೆಯ ಕಣ್ಣಿಂದ ದರ್ಶಿಸುವುದಾದರೆ , ಸೂಕ್ಷ್ಮ ಶರೀರ( ಮನಸ್ಸು) ಮತ್ತು ಸ್ಟೂಲ ಶರೀರ( ದೇಹ) ಎರಡನ್ನೂ ಸಮನ್ವಯದಲ್ಲಿರಿಸಿ ಆಧ್ಯಾತ್ಮಿಕತೆಯ ಪ್ರಯಾಣಕ್ಕೆ ಸಜ್ಜುಗೊ ಳ್ಳುವುದಕ್ಕೆ ಬೇಕಾದ ಸಾಧನ! ಅಂತ ಹೇಳಬಹುದು.
    ಈ ಪ್ರಯಾಣಕ್ಕೆ ಹೊರಡುವ ಮೊದಲು ಬೇಕಾಗುವ ಏಕಾಗ್ರತೆ , ಶಾಂತಿ, ಹೊರಟಾದ ಮೇಲೆ ಬೇಕಾಗುವ ಶಕ್ತಿ ಎಲ್ಲವೂ ಯೋಗದಲ್ಲಿ ಇದೆ. ಇದರ ಮುಖಾಂತರ ಪ್ರಯಾಣ ಮಾಡಿ ಗಮ್ಯ ತಲುಪಿರುವವರ ದೊಡ್ಡ ಪಟ್ಟಿಯೇ ಈ ನೆಲದ ಇತಿಹಾಸದಲ್ಲಿದೆ. ಇಂದಿಗೂ ಇದರ ಪ್ರಯೋಜನ ಪಡೆಯುವವರು ಕೆಲವು ಲಕ್ಷ ಸಂಖ್ಯೆಯಲ್ಲಿದ್ದಾರೆ.

    ಇಂತಹ ಯೋಗವನ್ನು ಭಾರತ ಸರ್ಕಾರ ವಿಶ್ವ ಸಂಸ್ಥೆಗೆ ಪರಿಚಯಿಸಲು ಬರೋಬ್ಬರಿ 70 ವರ್ಷ ತೆಗೆದುಕೊಂಡಿತು! 2015 ಡಿಸೇಂಬರ್ 11ರಂದು ವಿಶ್ವ ಸಂಸ್ಥೆಯ 280 ದೇಶಗಳ ಪೈಕಿ 177 ದೇಶಗಳು ಭಾರತದ ಈ ಯೋಗವನ್ನು ಪ್ರತಿವರ್ಷ ಜೂನ್ 21 ರಂದು ವಿಶ್ವ ಯೋಗ ದಿನ ಅಂತ ಆಚರಿಸಲು ಒಪ್ಪಿಗೆ ನೀಡಿದವು. ಅಂದಿನಿಂದ ಇಂದಿನ ವರೆಗೆ ಒಟ್ಟು 9 ವರ್ಷ ಈ ಜೂನ್ 21 ನ್ನು ವಿಶ್ವ ಯೋಗ ದಿನವನ್ನಾಗಿ ಆಚರಿಸಿ ಕೊಂಡು ಬರಲಾಗುತ್ತಿದೆ.

    ಇಂದಿನ ಕಲುಷಿತ ಮಾನಸಿಕ ವಾತಾವರಣದಲ್ಲಿ ಪ್ರತಿಯೊಂದು ವಸ್ತುವೂ, ವಿಷಯವೂ ಧಾರ್ಮಿಕವಾಗಿ ಗುರುತಿಸಿಕೊಂಡು ಈ ಯೋಗ ಅನ್ನುವುದು ಒಂದು ನಿರ್ದಿಷ್ಟ ಧರ್ಮದ್ದು! ! ಇದನ್ನು ಪ್ರಪಂಚದಾದ್ಯಂತ ಆಚರಿಸಬಾರದು ಅಂತ ಕೆಲವು ದೇಶಗಳು ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಭಾರತವು ಇದು ಯಾವುದೇ ಧರ್ಮಕ್ಕೆ ಸಂಬಂಧಿಸಿದ್ದು ಅಲ್ಲ ಬದಲಾಗಿ ಈಗಿನ ಮಾನವನ ಮಾನಸಿಕ ಆರೋಗ್ಯಕ್ಕೆ ಬಹಳ ಅಗತ್ಯ ಅನ್ನುವುದನ್ನು ಪುರಾವೆ ಸಹಿತ ವಿಶ್ವ ಸಂಸ್ಥೆ ಗೆ ಮನವರಿಕೆ ಮಾಡಿ ಕೊಡಬೇಕಾಯ್ತು!

    ಅಷ್ಟರಮಟ್ಟಿಗೆ ಯೋಗವನ್ನು ಪ್ರಪಂಚಕ್ಕೆ ಪರಿಚಯಿಸಿ ಭಾರತ ತನ್ನ ಭವ್ಯ ಪರಂಪರೆಯ ಔದಾರ್ಯವನ್ನು ವಿಶ್ವ ಸಂಸ್ಥೆಯ ಮುಖಾಂತರ ಮೆರೆದಿರುವುದು ಪ್ರತಿಯೊಬ್ಬ ಭಾರತೀಯನಿಗೂ ಗೌರವ ತರುವಂತಹ ವಿಷಯ. ಇಂದು ಮಾನವ ಕುಲಕ್ಕೆ ಬೇಕಾಗಿರುವ ಅತ್ಯಂತ ತುರ್ತು ಔಷಧಿಗಳಾದ ಶಾಂತಿ, ಸೌಹಾರ್ದಾತೆ, ಮಾನಸಿಕ ಸ್ಥಿರತೆ , ಸದ್ಭುದ್ಧಿ ಗಳನ್ನು ಭಾರತ ಪ್ರಪಂಚಕ್ಕೆ ಕೊಡುವಂತಾಗಿ ವಿಶ್ವಕ್ಕೆ ತನ್ನ ಪರಂಪರೆಯ ದರ್ಶನವನ್ನು ಮನವರಿಕೆ ಮಾಡಲಿ. ಅಂದ ಹಾಗೆ ಇಂದು ಕರ್ಕಾಟಕ ಸಂಕ್ರಮಣ. ಅತೀ ದೊಡ್ಡ ಹಗಲಿನ ದಿನ.

    ಎಲ್ಲರಿಗೂ ವಿಶ್ವ ಯೋಗ ದಿನದ ಶುಭಾಶಯಗಳು.

    error: Content is protected !!