33.2 C
Karnataka
Thursday, May 21, 2026
    Home Blog Page 151

    ಶುಭ ದಿನ

    ಇಂದಿನ ನುಡಿ

    ಮಾತು ಮನಸ್ಸುಗಳನ್ನು ಒಂದುಗೂಡಿಸಬೇಕೇ ಹೊರತು ಒಡೆಯಬಾರದು.

    -ಮಾಸ್ತಿ ವೆಂಕಟೇಶ ಅಯ್ಯಂಗಾರ್

    ಸಂಗ್ರಹ :ರಾಜೀವಲೋಚನ
    .

    ಇಂದಿನ ಪಂಚಾಂಗ

    ದಿನಾಂಕ 23 ಸೆಪ್ಟಂಬರ್ 2020,ಬುಧವಾರ

    ಸಂವತ್ಸರ : ಶ್ರೀ ಶಾರ್ವರಿ, ಆಯನ :ದಕ್ಷಿಣಾಯನ, ಋತು: ಶರದ್, ಮಾಸ : ಅಧಿಕ ಆಶ್ವೀಜ, ಪಕ್ಷ :ಶುಕ್ಲ ತಿಥಿ: ಸಪ್ತಮಿ ನಕ್ಷತ್ರ: ಜ್ಯೇಷ್ಠ

    ಸೂರ್ಯೋದಯ : ಬೆಳಿಗ್ಗೆ 6.09

    ಸೂರ್ಯಾಸ್ತ: ಸಂಜೆ 6.15

    P

    ಶುಭ ದಿನ

    ಇಂದಿನ ನುಡಿ

    ನಮ್ಮ ಅತಿಯಾದ ನಿರೀಕ್ಷೆಗಳು ಅಂತ್ಯಗೊಂಡ ದಿನದಿಂದಲೇ, ನಮ್ಮ ನೆಮ್ಮದಿಯ ಜೀವನ ಆರಂಭವಾಗುತ್ತದೆ

    ಸಂಗ್ರಹ :ರಾಜೀವಲೋಚನ
    .

    ಇಂದಿನ ಪಂಚಾಂಗ

    ದಿನಾಂಕ 22 ಸೆಪ್ಟಂಬರ್ 2020,ಮಂಗಳವಾರ

    ಸಂವತ್ಸರ : ಶ್ರೀ ಶಾರ್ವರಿ, ಆಯನ :ದಕ್ಷಿಣಾಯನ, ಋತು: ಶರದ್, ಮಾಸ : ಅಧಿಕ ಆಶ್ವೀಜ, ಪಕ್ಷ :ಶುಕ್ಲ ತಿಥಿ: ಷಷ್ಠಿ ನಕ್ಷತ್ರ: ಅನು

    ಸೂರ್ಯೋದಯ : ಬೆಳಿಗ್ಗೆ 6.09

    ಸೂರ್ಯಾಸ್ತ: ಸಂಜೆ 6.16

    ಇಂದಿನ ವಿಶೇಷ

    ರೋಸ್ ಡೇ (ಕ್ಯಾನ್ಸ್ ರ್ ರೋಗಿಗಳ ಯೋಗ ಕ್ಷೇಮ)

    P

    ಸಿನಿಮಾ ನೆನಪುಗಳ ದಾಖಲಿಸುವ ‘ಚಿತ್ರಪಥ’!

    ಸಿನಿಮಾ ಅಂದ್ರೆ ಸಾಮಾನ್ಯವಾಗಿ ಎಲ್ಲರಿಗೂ ಕುತೂಹಲ. ಭಾಷೆ ಯಾವುದೇ ಇದ್ದರೂ ಚಲಿಸುವ ಚಿತ್ರಗಳಿಂದಲೇ ಎಲ್ಲರನ್ನು ಸೆಳೆಯಬಲ್ಲ ತಾಕತ್ತು ಈ ಮಾಧ್ಯಮದ್ದು. ಹೊಸ ಪೀಳಿಗೆಯ ತಂತ್ರಜ್ಞರು ಪೈಪೋಟಿಗೆ ಬಿದ್ದು ಸಿನಿಮಾ ಮಾಡುತ್ತಿದ್ದರೆ ಹಳೆಯ ಸಿನಿಮಾ ನೆನಪುಗಳು ಮಾತ್ರ ಎಂದಿಗೂ ತಮ್ಮ ಸ್ಥಾನ ಬಿಟ್ಟುಕೊಡವು. ಹೀಗೆ ಅಂದಿನ ನೂರಾರು ಸಿನಿಮಾಗಳು ತಮ್ಮದೇ ವೈಶಿಷ್ಠ್ಯತೆಯೊಂದಿಗೆ ಕಾಡುತ್ತವೆ.

    ಶಶಿಧರ

    ಹೊಸಬರ ಪೈಪೋಟಿ, ಅಬ್ಬರದ ಮಧ್ಯೆ ಹಳೆಯ ನೆನಪುಗಳನ್ನು ಮೆಲುಕು ಹಾಕುವ ಸಿನಿಮಾಸಕ್ತರು ಎಂದಿಗೂ ಇದ್ದಾರೆ. ಅಂಥ ಸಿನಿರಸಿಕರಿಗೆ ಹಾಗೂ ಹೊಸಬರು ಕೂಡ ಕುತೂಹಲದಿಂದ ನೋಡುವಂಥ ಆರ್ಕೈವ್ ಪೋರ್ಟಲ್‌ ರೂಪಿಸಲು ಸಜ್ಜಾಗಿದ್ದಾರೆ ಸಿನಿಮಾ ಪತ್ರಕರ್ತ ಶಶಿಧರ ಚಿತ್ರದುರ್ಗ. ಸುಮಾರು ಹದಿಮೂರು ವರ್ಷಗಳ ಕಾಲ ಅವರು ಮುಖ್ಯವಾಹಿನಿಯ ದಿನಪತ್ರಿಕೆಗಳು, ವೆಬ್‌ ಪೋರ್ಟಲ್‌ನಲ್ಲಿ ಕೆಲಸ ಮಾಡಿದ್ದಾರೆ. ನಾಸ್ಟಾಲ್ಜಿಯಾ ಫೀಲ್‌ ಕೊಡುವ ಸಿನಿಮಾ ಪಸ್ತುಕಗಳನ್ನು ಪ್ರಕಟಿಸಿರುವ ಶಶಿಧರ್ ಇದೀಗ ‘ಚಿತ್ರಪಥ’ ಆರ್ಕೈವ್ ಪೋರ್ಟಲ್‌ ರೂಪಿಸುತ್ತಿದ್ದಾರೆ.  

    ಪ್ರಗತಿ ಅಶ್ವತ್ಥ ನಾರಾಯಣ.

    ಕನ್ನಡ ಚಿತ್ರರಂಗದ ಹಿರಿಯ ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕರಾದ ಭವಾನಿ ಲಕ್ಷ್ಮೀನಾರಾಯಣ ಮತ್ತು ಪ್ರಗತಿ ಅಶ್ವತ್ಥ ನಾರಾಯಣ ಅವರು ಸೆರೆಹಿಡಿದ ಫೋಟೋಗಳೂ ಸೇರಿದಂತೆ ಇತರೆ ಹಲವರಿಂದ ಸಂಗ್ರಹಿಸಿದ ರೆಟ್ರೋ ಫೊಟೋ, ಮಾಹಿತಿ, ಲೇಖನಗಳು ಪೋರ್ಟಲ್‌ನಲ್ಲಿರುತ್ತವೆ. ನಾಸ್ಟಾಲ್ಜಿಯಾ ವೀಡಿಯೋ ಕಂಟೆಂಟ್ ಜೊತೆಗೆ ಪ್ರಸ್ತುತ ಸಿನಿಮಾ ಬಗ್ಗೆಯೂ ಒಂದು ಸೆಂಗ್ಮೆಂಟ್ ಇರುತ್ತದೆ. ಹಿಂದಿ, ದಕ್ಷಿಣದ ಇತರೆ ಚಿತ್ರರಂಗಗಳು ಹಾಗೂ ಕಿರುತೆರೆ ಹಿನ್ನೋಟವನ್ನೂ ದಾಖಲಿಸುವುದು ಅವರ ಇರಾದೆ. ಒಟ್ಟಾರೆ ಇದೊಂದು ಇನ್ಫೋಟೈನ್‌ಮೆಂಟ್‌ ಪೋರ್ಟಲ್ ಎನ್ನುತ್ತಾರವರು.

    ಭವಾನಿ ಲಕ್ಷ್ಮೀನಾರಾಯಣ

    ಬಹುಭಾಷಾ ನಟ ಕಿಶೋರ್‌ ‘ಚಿತ್ರಪಥ’ ಶೀರ್ಷಿಕೆ ಅನಾವರಣಗೊಳಿಸಿ ಶುಭ ಹಾರೈಸಿದ್ದಾರೆ. “ಈಗ ಸಮಾಜದಲ್ಲಿ ಬರೀ ನೆಗೆಟಿವಿಟಿಯೇ ಕಾಣಿಸುತ್ತಿದೆ. ನಮ್ಮ ಸುತ್ತಮುತ್ತಲಿನ ಘಟನೆಗಳೇ ನಮ್ಮನ್ನು ನೆಗೆಟಿವಿಟಿಗೆ ದೂಡುತ್ತಿವೆ. ಸಿನಿಮಾರಂಗ ಕೂಡ ಹಾಗೇ ಆಗಿದೆ. ಸಿನಿಪ್ರೇಮಿಗಳಲ್ಲಿ ಸಕಾರಾತ್ಮಕವಾಗಿ ಯೋಚಿಸುವಲ್ಲಿ ಇಂತಹ ಪೋರ್ಟಲ್‌ಗಳು ಅನುವಾಗಲಿ” ಎನ್ನುವುದು ಕಿಶೋರ್‌ ಮಾತು.  ಸದ್ಯ ಪೋರ್ಟಲ್‌ಗೆ ಸಂಬಂಧಿಸಿದ ಕೆಲಸಗಳು ನಡೆದಿದ್ದು ನವೆಂಬರ್‌ 1, ರಾಜ್ಯೋತ್ಸವದಂದು ಪೋರ್ಟಲ್‌ ಲಾಂಚ್ ಆಗಲಿದೆ.

    ಚಿತ್ರ: ‘ಚಿತ್ರಪಥ’ ಪೋರ್ಟಲ್‌ನ ಶೀರ್ಷಿಕೆ ಅನಾವರಣಗೊಳಿಸಿದ ಕಿಶೋರ್‌.

    ಕಲಿಕೆ ಆನ್ ಲೈನ್, ಬದುಕು ಆಫ್ ಲೈನ್

    ಇಂದಿನಿಂದ ಹಲವು ರಾಜ್ಯಗಳಲ್ಲಿ ಶಾಲಾ, ಕಾಲೇಜು ಭಾಗಶಃ ಪುನರಾರಂಭಗೊಳ್ಳುತ್ತಿವೆ. ಆದರೆ ಸದ್ಯಕ್ಕೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ನಡುವೆ ಸೀಮಿತ ಸಂವಹನಕ್ಕೆ ಅವಕಾಶವಿರುವುದರಿಂದ ಸದ್ಯಕ್ಕೆ ಆನ್ ಲೈನ್ ಕಲಿಕೆಗೆ ಒತ್ತು ಕಡಿಮೆಯಾಗಿಲ್ಲ. ಕರ್ನಾಟಕದಲ್ಲಿ ಕೆಲ ವಿಶ್ವವಿದ್ಯಾಲಯಗಳು ಪದವಿ ಪರೀಕ್ಷೆಗಳನ್ನು ನಡೆಸುತ್ತಿವೆ. ಕೆಲವು ಸಂಸ್ಥೆಗಳು ಆನ್ ಲೈನ್ ಮೂಲಕವೇ ಪರೀಕ್ಷೆ ನಡೆಸಿವೆ. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ಆನ್ ಲೈನ್ ಬೋಧನೆ, ಕಲಿಕೆಯೇ ಮಂತ್ರವಾಗಿದೆ.

    ತಂತ್ರಜ್ಞಾನ ಗೊತ್ತಿದ್ದವರು, ಗೊತ್ತಿಲ್ಲದವರು, ಡೇಟಾ ಪ್ಯಾಕ್ ಬಳಸುತ್ತಿದ್ದವರು ಇಲ್ಲದವರು ಸಾರಾಸಗಟು ಆನ್ ಲೈನ್ ಆಗಿದ್ದಾರೆ. ಪ್ರತಿಯೊಬ್ಬರೂ ತಮ್ಮ ಶಕ್ತ್ಯಾನುಸಾರ ಮಕ್ಕಳಿಗೆ ಆನ್ ಲೈನ್ ಕಲಿಕೆಗೆ ಸೂಕ್ತ ಸೌಲಭ್ಯ ಒದಗಿಸಲೇಬೇಕಾದ ಅನಿವಾರ್ಯತೆ ಹೊಂದಿದ್ದಾರೆ.ಆರಂಭದಲ್ಲಿ ಒಲ್ಲೆ ಎನ್ನುತ್ತಿದ್ದವರು ಈಗ ಅನಿವಾರ್ಯವಾಗಿ ಆನ್ ಲೈನ್ ಶಿಕ್ಷಣವನ್ನು ಒಪ್ಪಿಕೊಳ್ಳಬೇಕಾಗಿದೆ.

    ಹೊಸ ಸಮಸ್ಯೆ- ಸಾಧ್ಯತೆ

    ಆನ್ಲೈನ್ ಬೋಧನೆ ಹಾಗೂ ಕಲಿಕೆ ಹೊಸ ಸಮಸ್ಯೆಗಳನ್ನು, ಸಾಧ್ಯತೆಗಳನ್ನೂ ಸೃಷ್ಟಿಸುತ್ತಿದೆ. ತರಗತಿಗೆ ಸಿದ್ಧವಾಗದೇ ಹೋದರೂ ಪರವಾಗಿಲ್ಲ, ಏನೋ ತಿಳಿದಿದ್ದನ್ನು ಅಥವಾ ಸಬ್ಜೆಕ್ಟ್ ಗೆ ಸಂಬಂಧಿಸದೇ ಇದ್ದಿದ್ದನ್ನು ಹೇಳಿ ಕಾಲಯಾಪನೆ ಮಾಡುತ್ತಿದ್ದ ಮೇಷ್ಟರುಗಳಿಗೆ ಈಗ ಆನ್ಲೈನ್ ನಲ್ಲಿ ವಿಷಯವಷ್ಟನ್ನೇ ಹೇಳಬೇಕಾದ ಅನಿವಾರ್ಯತೆ ಇದೆ. ಅಂಥವರಿಗೆ ಜೂಮ್ ಮೀಟಿಂಗ್ ವರದಾನವಾಗಿದೆ. ಇವರು ಉಭಯ ಕುಶಲೋಪರಿ ಹೇಳಿ ಸಬ್ಜೆಕ್ಟ್ ಪ್ರಾರಂಭಿಸುವ ವೇಳೆಗೆ ಜೂಮ್ ಕಟ್ ಆಗುತ್ತದೆ. ಅಷ್ಟೇ ಅಲ್ಲ, ಮಧ್ಯದಲ್ಲಿ ಹೋಸ್ಟ್ ಇಂಟರ್ನೆಟ್ ಡೌನ್ ಆಗಿದ್ದರಿಂದ ಆಗಾಗ್ಗೆ ಕಟ್ ಆಗಿ ಮತ್ತೆ ಚೇತರಿಸಿಕೊಳ್ಳುವಷ್ಟರಲ್ಲಿ ಜೂಮ್ ಸೆಷನ್ ಕೊನೆಯಾಗಿರುತ್ತದೆ. ಬಹುತೇಕರು ಜೂಮ್ ಉಚಿತ ವರ್ಷನ್ ಮಾತ್ರ ಬಳಸುತ್ತಿರುವುದರಿಂದ ಜೂಮ್ ತರಗತಿಗಳು ಅಷ್ಟೇನೂ ಯಶಸ್ವಿಯಾಗಿಲ್ಲ. ಕೆಲವರು ನಡೆಯುತ್ತಿದ್ದ ತರಗತಿಗಳನ್ನು ತುಂಡರಿಸಿ ಮತ್ತೆ ಆರಂಭಿಸುತ್ತಾರೆ.

    ಆನ್ಲೈನ್ ರಹಸ್ಯಗಳು

    ಆನ್ಲೈನ್ ಬಿಚ್ಚಿಡುತ್ತಿರುವ ರಹಸ್ಯಗಳು ಒಂದೆರಡಲ್ಲ. ಆನ್ಲೈನ್ ತರಗತಿ ನಡೆಯುವಾಗ ಮಗುವಿಗೆ ಸ್ಪೀಕರ್ ಅನ್ ಮ್ಯೂಟ್ ಮಾಡಲು ಮೇಷ್ಟರು ಸೂಚಿಸಿದರು. ಅಷ್ಟೇ, ಆ ಮಗುವಿನ ತಂದೆ ತಾಯಿ ನಡೆಸುತ್ತಿದ್ದ ಮಾರಾಮಾರಿ ಜಗಳ ಆನ್ಲೈನ್ ತರಗತಿಯಲ್ಲಿದ್ದವರಿಗೆಲ್ಲಾ ಗೊತ್ತಾಯಿತು!

    ಆನ್ಲೈನ್ ನಲ್ಲಿ ಕಲಿಯುವುದು ಅಷ್ಟೇನೂ ಪರಿಣಾಮಕಾರಿಯಾಗಿಲ್ಲ. ಆದರೂ ಮಕ್ಕಳು ಮನೆಯ ಸುರಕ್ಷಿತ ವಾತಾವರಣದಲ್ಲಿರುತ್ತಾರೆ ಎನ್ನುವುದು ಕೆಲವು ಪೋಷಕರ ಸಂತಸವಾದರೆ ಮಕ್ಕಳ ಕಾಟ ತಡೆಯಲಾರೆವು ಎನ್ನುವುದು ಕೆಲವು ಪೋಷಕರ ಸಂಕಟ.

    ನೇಯ್ಗೆ ಕೆಲಸದ ನಡುವೆಯೂ ಪ್ರತಿನಿತ್ಯ ಮಕ್ಕಳನ್ನು ಸ್ವತಃ ತರಗತಿಗೆ ಬಿಟ್ಟು ಕರೆದುಕೊಂಡು ಬರುತ್ತಿದ್ದ ಡಿ.ಸಿ.ಬಾಬುಗೆ ಈಗ ಮಕ್ಕಳನ್ನು ನಿತ್ಯ ಶಾಲೆಗೆ ಕರೆದೊಯ್ಯುವ ಜವಾಬ್ದಾರಿಯಿಲ್ಲದಿರುವುದು ಸಂತೋಷ ತಂದಿದೆ. ಮಕ್ಕಳು ಕಣ್ಣ ಮುಂದೆ ಇರುತ್ತಾರೆ. ಮನೆಕೆಲಸದಲ್ಲಿ ನೆರವಾಗುತ್ತಾರೆ ಎನ್ನುವುದು ಆತನ ಸಂತೋಷ. ಆದರೆ ಇದು ಒಂದಲ್ಲಾ ಒಂದು ದಿನ ಕೊನೆಗೊಳ್ಳಲೇಬೇಕು ತರಗತಿಯಲ್ಲಿಯೇ ಮಕ್ಕಳು ಕಲಿಯಲು ಸಾಧ್ಯ ಎನ್ನುವುದು ಆತನ ನಂಬಿಕೆ.

    ಮನೆಯಲ್ಲಿಯೇ ಸ್ವಂತ ಕಂಪ್ಯೂಟರ್ ಮೂಲಕ ಡಿಟಿಪಿ ಮುಂತಾದ ಕೆಲಸ ಮಾಡುವ ಶಂಕರಮೂರ್ತಿ ಅವರದು ಮತ್ತೊಂದು ರೀತಿಯ ಸಂಕಟ. ಮನೆಯಲ್ಲಿಯೇ ಮಕ್ಕಳಿರುವುದರಿಂದ ತಮ್ಮ ಪ್ರೊಡಕ್ಟಿವಿಟಿ ಕಡಿಮೆಯಾಗಿದೆ. ಮಕ್ಕಳು ಶಾಲೆಗೆ ಹೋದರೇನೇ ಚೆಂದ. ಮನೆಯಲ್ಲಿ ತನ್ನ ಕೆಲಸ ಅಬಾಧಿತವಾಗಿರುತ್ತದೆ ಎನ್ನುತ್ತಾರೆ. ಮಕ್ಕಳು ಮನೆಯಲ್ಲಿಯೇ ಇರುವುದರಿಂದ ತನ್ನ ಕೆಲಸಕ್ಕೆ ಪ್ರತ್ಯೇಕ ಆಫೀಸ್ ಮಾಡಿಕೊಳ್ಳುವ ಸನ್ನಾಹದಲ್ಲಿದ್ದಾರೆ. ಮಕ್ಕಳ ಗಲಾಟೆಯಿಂದ ತನ್ನ ಕೆಲಸಕ್ಕೆ ತೊಂದರೆಯಾಗಿದೆ ಎನ್ನುವುದು ಅವರ ಅಂಬೋಣ.

    ನೆಟ್ ವರ್ಕ್ ಸಮಸ್ಯೆ

    ಮಂಡ್ಯದ ಉಪನ್ಯಾಸಕ ಡಾ.ರಘು ಅವರದು ವಿಭಿನ್ನ ಅನುಭವ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚಾಗಿರುವುದರಿಂದ ಬಹುತೇಕ ವಿದ್ಯಾರ್ಥಿಗಳು ನೆಟ್ ವರ್ಕ್ ಸಮಸ್ಯೆ ಎನ್ನುತ್ತಾರೆ. ಆದ್ದರಿಂದ ನೇರ ಆನ್ ಲೈನ್ ತರಗತಿ ನಡೆಸುವುದಕ್ಕಿಂತಲೂ ತರಗತಿಗಳನ್ನು ಚಿತ್ರೀಕರಿಸಿ ಅದನ್ನು ಯೂಟ್ಯೂಬ್ ಗೆ ಅಪ್ ಲೋಡ್ ಮಾಡುತ್ತಾರೆ. ಅದರ ಲಿಂಕ್ ವಿದ್ಯಾರ್ಥಿಗಳಿಗೆ ಕಳುಹಿಸುತ್ತಾರೆ. ಅದನ್ನು ವಿದ್ಯಾರ್ಥಿಗಳು ವೀಕ್ಷಿಸಿ ಕಲಿಯುತ್ತಾರೆ.

    ಆದರೆ ಕ್ಲಾಸ್ ರೂಮ್ ಡೈನಮಿಕ್ಸ್ ಆನ್ಲೈನ್ ತರಗತಿಯಲ್ಲಿ ಇರುವುದಿಲ್ಲ ಎನ್ನುವುದು ಅವರ ಅನುಭವ. ಈ ವಿಡಿಯೋಗಳನ್ನು ವೀಕ್ಷಿಸಿದವರು ಟೆಸ್ಟ್ ಹಾಗೂ ಅಸೈನ್ ಮೆಂಟ್ ಚೆನ್ನಾಗಿ ಮಾಡುತ್ತಾರೆ, ಇಲ್ಲದಿದ್ದವರು ಅಷ್ಟು ಚೆನ್ನಾಗಿ ಕಲಿಯುವುದಿಲ್ಲ. ಆದರೂ ವಿದ್ಯಾರ್ಥಿಗಳ ಕಲಿಕೆಯ ಮಟ್ಟವನ್ನು ಸಮರ್ಥವಾಗಿ ಅಳೆಯುವುದು ಸಾಧ್ಯವಿಲ್ಲ ಎನ್ನುತ್ತಾರೆ. ಅಲ್ಲದೆ ಮಕ್ಕಳು ತಮ್ಮ ಪೋಷಕರಲ್ಲಿ ಹಂಚಿಕೊಳ್ಳಲಾಗದ ವಿಷಯಗಳು ಮಿತ್ರರಲ್ಲಿ ಹಂಚಿಕೊಳ್ಳಲು ಸಾಧ್ಯ. ಬಹಳಷ್ಟು ಮಿತ್ರರ ಒಡನಾಟ ಮಕ್ಕಳಲ್ಲಿ ಆತ್ಮವಿಶ್ವಾಸ, ಭರವಸೆ, ಭದ್ರತೆಯ ಭಾವನೆ ಮೂಡಿಸುತ್ತದೆ. ಆನ್ ಲೈನ್ ಶಿಕ್ಷಣದಲ್ಲಿ ಅದು ಸಾಧ್ಯವಿಲ್ಲ.

    ತರಗತಿಯ ವಾತಾವರಣ ಪಾಠ ಕಲಿಸುವುದೇ ಅಲ್ಲದೆ ಬದುಕಿನ ಪಾಠಗಳನ್ನೂ ಕಲಿಸುತ್ತದೆ. ಅಧ್ಯಾಪಕರು ಬರೀ ಅಕ್ಷರ ಕಲಿಸುವುದಷ್ಟೇ ಅಲ್ಲ, ಮಕ್ಕಳ ವ್ಯಕ್ತಿತ್ವದ ಮೇಲೂ ಪರಿಣಾಮ ಬೀರುತ್ತಾರೆ. ಆದ್ದರಿಂದ ಯಾಂತ್ರಿಕ ಆನ್ ಲೈನ್ ಕಲಿಕೆ ಒಂದು ಯಶಸ್ವಿ ಸಾಧನವಾಗಿ ಬಳಸುವುದು ಸದ್ಯದ ಪರಿಸ್ಥಿತಿಯಲ್ಲಂತೂ ಸಾಧ್ಯವಿಲ್ಲ ಎನ್ನುತ್ತಾರೆ.

    ಬೆಂಗಳೂರಿನ ಉಪನ್ಯಾಸಕ ಡಾ. ಪುರುಷೋತ್ತಮ ಅವರು ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವುದರಿಂದ ಸಾಧಾರಣ ಫೋನ್ ಕರೆಯಲ್ಲಿ ಬೇಕಾದ ಸೂಚನೆಗಳನ್ನು ನೀಡಿ, ತರಗತಿಗಳನ್ನು ನಡೆಸುತ್ತಾರೆ, ಹಲವು ವಿದ್ಯಾರ್ಥಿಗಳಿಗೆ ಕಾನ್ಫರೆನ್ಸ್ ಕಾಲ್ ಮಾಡಿ ಮಾಹಿತಿ ನೀಡುತ್ತಾತೆ. ಹೆಚ್ಚು ಮಂದಿ ವಿದ್ಯಾರ್ಥಿಗಳಿರುವಾಗ ಜೂಮ್ ಮೀಟಿಂಗ್ ಅಗತ್ಯವಾಗುತ್ತದೆ. ಬಹುತೇಕ ವಿದ್ಯಾರ್ಥಿಗಳು ನೆಟ್ ವರ್ಕ್ ಸಮಸ್ಯೆ ಎದುರಿಸುವುದರಿಂದ ತರಗತಿಯಷ್ಟು ಪರಿಣಾಮಕಾರಿ ಬೋಧನೆ ಆನ್ಲೈನ್ ನಲ್ಲಿ ಅಸಾಧ್ಯ ಎನ್ನುತ್ತಾರೆ.

    ಕೋವಿಡ್-19 ಸಾಂಕ್ರಾಮಿಕದ ನಂತರ ಖಾಸಗಿ ಸಂಸ್ಥೆಗಳಂತೆ, ಸರ್ಕಾರಗಳು ಕೂಡಾ ಬೋಧಕ ಸಿಬ್ಬಂದಿಯನ್ನು ಕಡಿಮೆ ಮಾಡಿ ಹೆಚ್ಚು ಆನ್ಲೈನ್ ತರಗತಿಗಳಿಗೆ ಆದ್ಯತೆ ನೀಡಬಹುದು ಎಂದುಕೊಂಡಿದ್ದವು. ಆದರೆ ನಮ್ಮ ಮೂಲಭೂತ ಸೌಕರ್ಯ, ನೆಟ್ ವರ್ಕ್, ಡೇಟಾ ಬಳಕೆಯ ಮಿತಿಯಿಂದ ಸದ್ಯಕ್ಕೆ ಆಫ್ ಲೈನ್ ತರಗತಿಯೇ ಅತ್ಯಂತ ಪರಿಣಾಮಕಾರಿ ಎನ್ನುವುದನ್ನು ಸಾಬೀತುಪಡಿಸಿವೆ ಎನ್ನುತ್ತಾರೆ.

    ನಾವು ಆನ್ ಲೈನ್ ತರಗತಿಯ ವ್ಯವಸ್ಥೆಗೆ ಬಹಳ ದೂರವಿದ್ದೇವೆ. ಅಲ್ಲದೆ ಆನ್ ಲೈನ್ ತರಗತಿಯು ಅಷ್ಟು ಪರಿಣಾಮಕಾರಿ ಬೋಧನೆಯಲ್ಲ ಎನ್ನುವುದು ನಮ್ಮ ಅನುಭವ. ತರಗತಿಯ ಬೋಧನೆಯಲ್ಲಿರುವ ಪರಿಣಾಮಕಾರಿ ಸಂವಹನ ಆನ್ ಲೈನ್ ನಲ್ಲಿ ಇನ್ನೂ ಸಾಧ್ಯವಾಗಿಲ್ಲ. ಆದ್ದರಿಂದ ಬೋಧಕ ಸಿಬ್ಬಂದಿ ಕಡಿಮೆ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ.

    ಉಚಿತ ಜೂಮ್ ವರ್ಷನ್ ಬಳಸುವವರಿಗೆ ತರಗತಿಯ ರೆಕಾರ್ಡಿಂಗ್ ಸಾಧ್ಯವಿಲ್ಲ. ಇದರಿಂದ ಕೆಲವರು ಅದರ ಚಂದಾದಾರಿಕೆ ಪಡೆದಿದ್ದಾರೆ. ಕೆಲವರು ಭದ್ರತೆಯ ಕಾರಣಗಳಿಗೆ ಜೂಮ್ ಬಳಸದೆ ಇತರೆ ತಂತ್ರಜ್ಞಾನಗಳ ಮೊರೆ ಹೋಗಿದ್ದಾರೆ.

    ‘ದಿ ಕಿಂಗ್’ ಯಡಿಯೂರಪ್ಪ

    ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಯಶಸ್ವಿ ದಿಲ್ಲಿ ಯಾತ್ರೆ ವಿಧಾನ ಮಂಡಲ ಅಧಿವೇಶನ ಸಂದರ್ಭದಲ್ಲಿ ಮಹತ್ವ ಪಡೆದಿರುವುದೇಕೆ? ಅವರ ವಿರೋಧಿಗಳಿಗೆ ರವಾನೆಯಾಗಿರುವ ಸಂದೇಶವಾದರೂ ಏನು?

    ಅಶೋಕ ಹೆಗಡೆ

    ತಮ್ಮ ದಿಲ್ಲಿ ಯಾತ್ರೆ ಯಶಸ್ವಿಯಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೊಂಡಿರುವುದು ಅರ್ಥಪೂರ್ಣವಾಗಿದೆ. ಏಕೆಂದರೆ ಅವರ ಉದ್ದೇಶಗಳೆಲ್ಲವೂ ಸಫಲಗೊಂಡಿವೆ. ಮುಖ್ಯವಾಗಿ ನಾಯಕತ್ವ ಬದಲಾವಣೆ ಸದ್ಯಕ್ಕಿಲ್ಲ, ಮುಂದಿನ ಎರಡೂವರೆ ವರ್ಷ ತಾವೇ ಮುಖ್ಯಮಂತ್ರಿ ಎಂಬ ಸಂದೇಶವನ್ನು ತಮ್ಮ ವಿರೋಧಿಗಳಿಗೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

    ಯಡಿಯೂರಪ್ಪ ಭೇಟಿ ಹಿಂದಿನ ನಿಜವಾದ ಉದ್ದೇಶ ಸಂಪುಟ ವಿಸ್ತರಣೆ ಅಥವಾ ಪುನರ್‌ರಚನಗೆ ವರಿಷ್ಠರ ಅನುಮತಿ ಪಡೆಯುವುದಾಗಿತ್ತು. ಅದರಲ್ಲಿಯೂ ತಾವು ಅಧಿಕಾರಕ್ಕೆ ಬರಲು ಕಾರಣರಾದ ಎಂ.ಟಿ.ಬಿ.ನಾಗರಾಜ್ ಮತ್ತು ಆರ್.ಶಂಕರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದು ಅವರ ಮುಖ್ಯ ಉದ್ದೇಶವಾಗಿತ್ತು. ತಕ್ಷಣದಲ್ಲೋ ಅಥವಾ ಬಿಹಾರ ವಿಧಾನಸಭೆ ಚುನಾವಣೆ ಮುಗಿದ ಬಳಿಕವೋ, ಯಾವಾಗ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆಯಾದರೂ ಈ ಇಬ್ಬರಿಗೆ ಸ್ಥಾನವನ್ನು ಖಾತ್ರಿ ಪಡಿಸಿಕೊಂಡು ಬಂದಿದ್ದಾರೆ. ಅಲ್ಲಿಗೆ ಸರಕಾರ ಬರಲು ಕಾರಣರಾದವರಿಗೆ ಕೊಟ್ಟ ಮಾತನ್ನು ಯಡಿಯೂರಪ್ಪ ಉಳಿಸಿಕೊಂಡಂತಾಗಿದೆ.

    ಬೇಡವೆಂದರೂ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತ ಎಚ್.ವಿಶ್ವನಾಥ್ ಅವರನ್ನು ವಿಧಾನ ಪರಿಷತ್ ಸದಸ್ಯರಾಗಿ ನೇಮಕ ಮಾಡುವ ಮೂಲಕ ವಿಶ್ವನಾಥ್‌ಗೂ ರಾಜಕೀಯ ಪುನರ್‌ಜನ್ಮ ನೀಡಿದ್ದಾರೆ. ವಿಶ್ವನಾಥ್ ಸಂಪುಟ ಸೇರುವ ಸಾಧ್ಯತೆ ಕಡಿಮೆ, ಅದು ಅವರಿಗೂ ಗೊತ್ತಿದೆ.
    ದಿಲ್ಲಿ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಭೇಟಿ ಯಡಿಯೂರಪ್ಪ ಅವರಿಗೆ ಡಬ್ಬಲ್ ಧಮಾಕಾ ನೀಡಿದೆ. ವರಿಷ್ಠರು ಯಡಿಯೂರಪ್ಪ ಪರವಾಗಿಲ್ಲ ಎಂಬ ಅನುಮಾನಗಳಿಗೆ ಈ ಭೇಟಿ ತೆರೆ ಎಳೆದಿದೆ. ಅದಕ್ಕಿಂತ ಮುಖ್ಯವಾಗಿ ಯಡಿಯೂರಪ್ಪನವರನ್ನು ಅಲುಗಾಡಿಸಿದರೆ ಕರ್ನಾಟಕದಲ್ಲಿ ಬಿಜೆಪಿ ಸ್ಥಿತಿ ಏನಾಗುತ್ತದೆ ಎನ್ನುವುದು ಈ ಇಬ್ಬರಿಗೂ, ಜತೆಗೆ ಇನ್ನಿಬ್ಬರಿಗೆ (ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ) ಅವರಿಗೂ ಮನವರಿಕೆಯಾಗಿದೆ.

    ಯಡಿಯೂರಪ್ಪನವರಿಗೆ ವಯಸ್ಸಾಯಿತು, ಪರ್ಯಾಯ ನಾಯಕತ್ವ ಬೇಕು ಎನ್ನುವುದು ನಿಜ. ಆದರೆ ಅದು ಈ ಕ್ಷಣವೇ ಆಗಲೇಬೇಕಾದ ಕೆಲಸವೇನೂ ಅಲ್ಲ. ವಿಧಾನಸಭೆ ಚುನಾವಣೆಗೆ ಇನ್ನೂ ಎರಡೂವರೆ ವರ್ಷ ಕಾಲಾವಕಾಶ ಇದೆ. ಕೊನೆಯ ಒಂದು ವರ್ಷವನ್ನು ಚುನಾವಣೆ ಸಿದ್ಧತೆಗೆಂದು ಮೀಸಲಿಟ್ಟುಕೊಂಡರೂ, ಒಂದೋವರೆ ವರ್ಷ ಯಡಿಯೂರಪ್ಪ ನಿರಾಳವಾಗಿ ಆಡಳಿತ ನಡೆಸಲು ಅನುವು ಮಾಡಿಕೊಡಬೇಕು. ಅದಕ್ಕೆ ಕೇಂದ್ರದಿಂದ ಅಗತ್ಯ ಸಹಕಾರ, ಅನುದಾನದ ನೆರವನ್ನೂ ನೀಡಬೇಕು. ಈ ಸತ್ಯ ವರಿಷ್ಠರಿಗೆ ಈಗ ಮನವರಿಕೆಯಾದಂತಿದೆ.

    ವರ್ಷದ ಹಿಂದೆ ಸರಕಾರ ರಚಿಸಿದಾಗ ಯಡಿಯೂರಪ್ಪನವರ ಕುರಿತು ವರಿಷ್ಠರಿಗೆ ತುಸು ಮುನಿಸು ಇದ್ದದ್ದು, ಅಸಹಕಾರ ತೋರಿಸಿದ್ದು ಎಲ್ಲವೂ ನಿಜವೇ. ಕೆಲವರು ಇದೇ ಪರಿಸ್ಥಿತಿಯನ್ನು ಬಳಸಿಕೊಂಡು ‘ಸಂತೋಷ’ಪಟ್ಟಿದ್ದೂ ಉಂಟು. ಎಲ್ಲವನ್ನೂ ಯಡಿಯೂರಪ್ಪ ಮೌನವಾಗಿ ಸಹಿಸಿಕೊಂಡರು. ಅವರಿಗೂ ಚೆನ್ನಾಗಿ ಗೊತ್ತು, ಇದು ತಮ್ಮ ಕೊನೆಯ ಅವಕಾಶ ಎಂದು. ಆ ತಾಳ್ಮೆ ಈಗ ಫಲ ನೀಡಿದೆ. ಯಡಿಯೂರಪ್ಪನವರ ನಿಜವಾದ ತಾಕತ್ತು ಏನೆಂಬುದು ಮೋದಿ ಸೇರಿದಂತೆ ವರಿಷ್ಠರ ಅರಿವಿಗೆ ಬಂದಿದೆ.


    ಯಡಿಯೂರಪ್ಪ ದಿಲ್ಲಿ ಭೇಟಿ ಮಹತ್ವ ಪಡೆದಿರುವುದಕ್ಕೆ ಇನ್ನೊಂದು ಕಾರಣವೂ ಇದೆ. ಅದು ಸೋಮವಾರದಿಂದ ಆರಂಭವಾಗಿರುವ ವಿಧಾನಮಂಡಲ ಅಧಿವೇಶನ. ಈ ಸಂದರ್ಭದಲ್ಲಿಯೇ ನಾಯಕತ್ವದ ಗೊಂದಲ ನಿವಾರಿಸಿಕೊಂಡಿರುವುದು ಯಡಿಯೂರಪ್ಪ ವಿರೋಧಿ ಬಣಕ್ಕೆ ನುಂಗಲಾರದ ತುತ್ತಾಗಿದೆ. ಏಕೆಂದರೆ ಸಾಮಾನ್ಯವಾಗಿ ವಿಧಾನ ಮಂಡಲ ಅಧಿವೇಶನ ಗಾಳಿ ಮಾತುಗಳನ್ನು ಹರಿಬಿಡಲು ಉತ್ತಮ ವೇದಿಕೆ. ದಿಲ್ಲಿ ಭೇಟಿಯಲ್ಲಿ ಸ್ವಲ್ಪ ಎಡವಟ್ಟಾಗಿದ್ದರೂ, ವಿರೋಧಿಗಳು ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳುತ್ತಿದ್ದರು. ಅದೃಷ್ಟದ ಬಲವೊ, ಯಡಿಯೂರಪ್ಪನವರ ಜಾಣ್ಮೆಯೋ, ಅಂತೂ ದಿಲ್ಲಿ ಭೇಟಿ ಬಳಿಕ ಪ್ರಬಲ ಸಂದೇಶವಂತೂ ರವಾನೆಯಾಗಿದೆ.

    ಮುಂದಿನ ಎರಡೂವರೆ ವರ್ಷ ಯಡಿಯೂರಪ್ಪನವರಿಗೆ ಅತ್ಯಂತ ಮಹತ್ವದ ಅವಧಿ. ರಾಜ್ಯದ ಆರ್ಥಿಕತೆ ಸರಿಯಾಗಿಲ್ಲ. ಬೊಕ್ಕಸ ಬರಿದಾಗಿದೆ. ಮುಖ್ಯಮಂತ್ರಿಯವರ ತಲೆಯಲ್ಲಿ ನೂರಾರು ಕನಸುಗಳಿವೆ. ಕಡೇಪಕ್ಷ ಈ ಅವಧಿಯಲ್ಲಿ ಜನರ ನೆನಪಿನಲ್ಲಿ ಉಳಿಯುವಂತಹ ಏನಾದರೂ ಕೆಲಸ ಮಾಡಬೇಕೆಂಬ ಉಮೇದು ಇದೆ. ಕೇಂದ್ರ ಸರಕಾರ ತುಸುವೇ ಅನುದಾನದ ಸಹಕಾರ ನೀಡಿದರೂ ಅಭಿವೃದ್ಧಿಯ ಹೊಸ ಪರ್ವವನ್ನು ಯಡಿಯೂರಪ್ಪ ಈ ಎರಡೂವರೆ ವರ್ಷಗಳಲ್ಲಿ ಆರಂಭಿಸಬಹುದು.

    ಶುಭ ದಿನ

    ಇಂದಿನ ನುಡಿ

    ಅವಮಾನಗಳನ್ನು ಎದುರಿಸುವ ಸಾಮರ್ಥ್ಯ ನಮಗಿದ್ದರೆ, ಸನ್ಮಾನ ಸ್ವೀಕರಿಸುವ ಯೋಗ್ಯತೆ ಬಂದೇ ಬರುತ್ತದೆ.

    ಸಂಗ್ರಹ :ರಾಜೀವಲೋಚನ
    .

    ಇಂದಿನ ಪಂಚಾಂಗ

    ದಿನಾಂಕ 21 ಸೆಪ್ಟಂಬರ್ 2020,ಸೋಮವಾರ

    ಸಂವತ್ಸರ : ಶ್ರೀ ಶಾರ್ವರಿ, ಆಯನ :ದಕ್ಷಿಣಾಯನ, ಋತು: ಶರದ್, ಮಾಸ : ಅಧಿಕ ಆಶ್ವೀಜ, ಪಕ್ಷ :ಶುಕ್ಲ ತಿಥಿ: ಚತುರ್ಥಿ ನಕ್ಷತ್ರ: ವಿಶಾಖ

    ಸೂರ್ಯೋದಯ : ಬೆಳಿಗ್ಗೆ 6.09

    ಸೂರ್ಯಾಸ್ತ: ಸಂಜೆ 6.16

    ಇಂದಿನ ವಿಶೇಷ

    ವಿಶ್ವ ಶಾಂತಿ ದಿನ

    P

    ಐ ಪಿ ಓ ಲಿಸ್ಟಿಂಗ್ ತ್ವರಿತ ಸಂಪಾದನೆಗೆ ದಾರಿ – ವಿಳಂಬವಾದರೆ ಕ್ರೂರಿ

    ಕೋವಿಡ್‌ 19 ಇಡೀ ವಿಶ್ವದ ಜೀವನ ಶೈಲಿಯನ್ನೇ ಬದಲಿಸಿ, ಸಂಘ ಜೀವನದಿಂದ ಸಂಸಾರಿಕ ಜೀವನದತ್ತ ಸೆಳೆದಿದೆ.   ಹೆಚ್ಚಿನ ದೇಶಗಳನ್ನು ಆರ್ಥಿಕ ಒತ್ತಡಕ್ಕೆ ತಳ್ಳಿದೆ.  ಈ ಪರಿಸ್ಥಿತಿಯಲ್ಲಿ ಪೂರ್ವನಿಯೋಜಿತ ಯೋಜನೆಗಳೆಲ್ಲವೂ ಬುಡಮೇಲಾಗುವಂತಾಗಿದೆ.   

    ಹೆಚ್ಚಿನ ಕಾರ್ಪೊರೇಟ್‌ ಗಳು ಕೊರೋನಾ ಆರಂಭದ ದಿನಗಳಿಗಿಂತ ಮುಂಚೆಯೇ ಆರ್ಥಿಕ ಒತ್ತಡ, ಹಿಂಜರಿತದ ಪರಿಸ್ಥಿತಿಯಲ್ಲಿದ್ದವು.  ಈಗ ಕಾರ್ಪೊರೇಟ್‌ ಗಳು, ವ್ಯವಹಾರಿಕ ಸಂಸ್ಥೆಗಳು ಮುಂತಾದ ಔದ್ಯಮಿಕ ಜಗತ್ತಿನವರ ಪ್ರಮುಖವಾದ ಕಾರ್ಯ  ʼಫಂಡ್‌ ರೈಸಿಂಗ್‌ʼ   ಅಂದರೆ ಸಂಪನ್ಮೂಲ ಸಂಗ್ರಹಣೆಯೇ ಮುಖ್ಯಗುರಿಯಾಗಿದೆ. 

     ಈ ದಿಶೆಯಲ್ಲಿ ಅನೇಕ ಬ್ರಾಂಡೆಡ್‌ ಕಂಪನಿಗಳೂ ಆರಂಭಿಕ ಷೇರು ವಿತರಣೆಗೆ ಮುಂದಾಗಿವೆ.    ಐ ಪಿ ಒ ಮೂಲಕ ಫಂಡ್‌ ರೈಸಿಂಗ್‌ ಷೇರುಪೇಟೆಯ ಸಹಜ ಕ್ರಿಯೆ.  ಆದರೆ ಈ ಪ್ರಕ್ರಿಯೆಯ ಮೂಲಕ ಸಂಪನ್ಮೂಲ ಸಂಗ್ರಹಣೆಯಲ್ಲಿ ವಿತರಿಸುತ್ತಿರುವ ಷೇರುಗಳ ಬೆಲೆಯು ಹೇಗಿದೆ ಎಂದರೆ, ಆ ಷೇರುಗಳು ಲಿಸ್ಟಿಂಗ್‌ ಆದ ಮೇಲೆ ಅಲಾಟ್‌ ಆದವರು ಪಡೆಯಬಹುದಾದ ಲಾಭವನ್ನು ಸೇರಿಸಿಕೊಂಡು ಪ್ರೀಮಿಯಂ ನಿಗದಿಪಡಿಸಿರುವಂತೆ ತೋರುತ್ತಿದೆ.   ಈ ಸಂದರ್ಭದಲ್ಲಿ ಸ್ಟಾಟಿಸ್ಟಿಕ್ಸ್‌ ಹೆಚ್ಚು ಪ್ರಭಾವಿಯಾಗಿದೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಯೋಚಿಸಿ, ಚಿಂತಿಸಿ ನಿರ್ಧರಸಿರಿ.   ಕೇವಲ ಆಂಕರ್‌ ಇನ್ವೆಸ್ಟರ್ಸ್‌,  ಮರ್ಚಂಟ್‌ ಬ್ಯಾಂಕರ್ಸ್‌, ಹಿಂದಿನ ಘಟನೆಗಳನ್ನು ಆಧಾರವಾಗಿರಿಸಿಕೊಂಡು ನೀಡುವ ಪ್ರಚಾರಕ್ಕೆ ಹೆಚ್ಚಿನ ಒತ್ತು ನೀಡದೆ, ವಾಸ್ತವ ಅಂಶ, ಪೇಟೆಯ ಪರಿಸ್ಥಿತಿಯಂತಹ ಅಂಶಗಳೊಂದಿಗೆ, ಘೋಷಿತ ಗುರಿಸಾಧನೆ ಸಾಧ್ಯವೇ? ಎಂಬ ಅಂಶಗಳನ್ನು ಪರಿಶೀಲಿಸಿ ತೀರ್ಮಾನ ಕೈಗೊಳ್ಳುವುದು ಸರಿಯಾದ ಕ್ರಮ.

    ಈ ಹಿಂದೆ ವಿತರಣೆಯಾದ ಕೆಲವು ಐ ಪಿ ಒ ಗಳು

    ಈಗಿನ ದಿನಗಳಲ್ಲಿ ಸಾಕ್ಷರತೆ ಹೆಚ್ಚಾಗಿದ್ದರೂ ಆರ್ಥಿಕ ಸಾಕ್ಷರತೆಯನ್ನು ಹೆಚ್ಚಿಸಲು ಮರ್ಚಂಟ್ ಬ್ಯಾಂಕರ್ / ಕಂಪನಿಗಳ ದುರಾಸೆಗಳಿಗೆ ಬ್ರೇಕ್ ಹಾಕಬೇಕಾದರೆ, ರಿಟೇಲ್ ಹೂಡಿಕೆದಾರರಲ್ಲಿ ನಂಬಿಕೆ ಮೂಡಿಸಲು ಸೂಕ್ತವಾದ ನಿಯಮ, ನಿಯಂತ್ರಣ ಅಧವಾ ತಿದ್ದುಪಡಿ ಜಾರಿಗೊಳಿಸುವುದು ಅನಿವಾರ್ಯವಾಗಿದೆ.

    2007 ರಿಂದ ರೇಟಿಂಗ್ ಪಡೆದು ಆರಂಭಿಕ ಷೇರು ವಿತರಣೆ ಮಾಡುವ ನಿಯಮ ಜಾರಿಯಾದ ಮೇಲೂ ಕಾರ್ಪೊರೇಟ್ ಗಳು ನಿಗದಿಪಡಿಸುವ ವಿತರಣಾ ಬೆಲೆಗಳು ಅತಿ ಹೆಚ್ಚಾಗಿದ್ದು, ವಿತರಣೆಯಾದ ನಂತರದ ವರ್ಷಗಳಲ್ಲಿ ಈ ಕಂಪನಿಗಳ ಷೇರುಗಳು ಕಂಡ ಅತಿಯಾದ ಕುಸಿತವು ಹೇಗೆ ಹೂಡಿಕೆದಾರರ ಬಂಡವಾಳವನ್ನು ಕರಗಿಸಿವೆ. ರೇಟಿಂಗ್ ಎಂಬುದು ಕೇವಲ ಕಣ್ಣೊರೆಸುವ ತಂತ್ರದಂತಾಗಿ ಅದರ ಘನತೆಯನ್ನು ಕಳೆದುಕೊಂಡಿದೆ.

    ಇತ್ತೀಚಿಗೆ ಈ ರೇಟಿಂಗ್ ಎಂಬುದು ವಹಿವಾಟುದಾರರ ದಿನನಿತ್ಯದ ಚಟುವಟಿಕೆಗೆ ಆಹಾರವಾಗಿದೆ. ಒಂದು ಕಂಪನಿಯ ಷೇರಿನ ಬೆಲೆ ಕುಸಿತ ಕಂಡಾಗ ರೇಟಿಂಗ್ ಇಳಿಸುವುದು ಮತ್ತು ಏರಿಕೆ ಕಂಡಾಗ ರೇಟಿಂಗ್ ಹೆಚ್ಚಿಸುವ ಈ ಪ್ರಕ್ರಿಯೆಗೆ ಹೆಚ್ಚಿನ ಮಹತ್ವ ನೀಡುವಂತಹ ಅಗತ್ಯವಿಲ್ಲದಾಗಿದೆ.

    ಸಹಜತೆಯಿಂದ ಆರ್ಥಿಕ ಸ್ಥಿರತೆ    ಹಣದುಬ್ಬರ ನಿಯಂತ್ರಣಕ್ಕೆ ಐಪಿಒ


    ಆರಂಭಿಕಷೇರು ವಿತರಣೆಗಳಲ್ಲಿ ಜನಸಾಮಾನ್ಯರು ಭಾಗವಹಿಸುವುದರಿಂದ ಕಾರ್ಪೊರೇಟ್ ಗಳು ಸಹಜ, ಅರ್ಹಬೆಲೆಯಲ್ಲಿ ವಿತರಣೆಮಾಡಲು ಮುಂದಾದರೆ ಹೂಡಿಕೆಗೂ ಪ್ರೋತ್ಸಾಹಿಸುವದರ ಜೊತೆಗೆ ಹಣದುಬ್ಬರದ ನಿಯಂತ್ರಣವು ತನ್ನಷ್ಟಕ್ಕೆ ತಾನೇ ನಿಯಂತ್ರಿಸಲು ಸಾಧ್ಯವಾಗುತ್ತದೆ. ಇದು ಸಾರ್ವಜನಿಕರ ಭಾಗಿತ್ವದಿಂದ ಆರ್ಥಿಕ ಸ್ಥಿರತೆಯನ್ನು ಸ್ಥಾಪಿಸುವಂತಹ ಕ್ರಮವಾಗಿದೆ. 

    ಕೋಲ್ ಇಂಡಿಯಾ: 2010 ರಲ್ಲಿ ನವರತ್ನ ಕಂಪನಿ ಕೋಲ್ ಇಂಡಿಯಾ ರೂ.15 ಸಾವಿರಕೋಟಿ ಸಂಗ್ರಹಣೆಯ ಉದ್ದೇಶದಿಂದ, ತನ್ನ ಚೊಚ್ಚಲ ಆರಂಭಿಕಷೇರು ವಿತರಣೆಮಾಡಿತು. ಆಸಂದರ್ಭದಲ್ಲಿ ಸಾರ್ವಜನಿಕ ಸ್ಪಂದನ ಹೆಚ್ಚಾಗಿ ಸುಮಾರು ಎರಡು ಲಕ್ಷ ಕೋಟಿ ಹಣ ಸಂಗ್ರಹಣೆಯಾಯಿತು. ಅಂದರೆ ಸುಮಾರು ರೂ.1.85 ಲಕ್ಷಕೋಟಿ ಹೆಚ್ಚು ಸಂಗ್ರಹವಾಗಿ, ಅಷ್ಟು ಹಣ ಪೇಟೆಯಿಂದ ಸ್ವಲ್ಪ ಸಮಯದವರೆಗೂ ದೂರಸರಿಯಿತು ಇದು ಭಾರತೀಯ ರಿಸರ್ವ್‌ ಬ್ಯಾಂಕ್‌ ಪೇಟೆಯಿಂದ ಹರಿದಾಡುವ ಹಣವನ್ನು ಹೀರಲು ಜಾರಿಗೊಳಿಸಬಹುದಾದ ಸೆಕ್ಯುರಿಟೀಸ್ ಮಾರಾಟದ ಕ್ರಮಕ್ಕೆ ಸ್ವಲ್ಪಮಟ್ಟಿನ ಬ್ರೇಕ್‌ ಹಾಕುವ ಕ್ರಮವೂ ಆಗಿರುತ್ತದೆ. 

    ಈ ಷೇರಿನ ಬೆಲೆ 2005 ರಲ್ಲಿ ರೂ.440 ನ್ನು ತಲುಪಿದ್ದು ನಂತರದಲ್ಲಿ ನಿರಂತರವಾಗಿ ಕುಸಿಯುತ್ತ ಬಂದು ರೂ.119 ರ ಕನಿಷ್ಠಕ್ಕೆ ತಲುಪಿ ಈಗ ರೂ.123/124 ರ ಸಮೀಪದಲ್ಲಿದೆ.
     
    ಬಿ ಎಸ್‌ ಇ ಲಿಮಿಟೆಡ್:   2017ರಲ್ಲಿ ಪ್ರತಿ ಷೇರಿಗೆ ರೂ.806 ರಂತೆ ವಿತರಣೆ ಮಾಡಿದ, ದೇಶದ 140 ವರ್ಷ ಹಳೆಯ,  ಅಂತಾರಾಷ್ಟ್ರೀಯ ಮಟ್ಟದಲ್ಲಿ  ಭಾರತೀಯ ಷೇರುಪೇಟೆಯ ಹೆಗ್ಗುರುತಾದ ʼಸೆನ್ಸೆಕ್ಸ್‌ʼ ನ್ನು ಸೂಚ್ಯಂಕವನ್ನಾಗಿಸಿಕೊಂಡಿರುವ ಬಾಂಬೆ ಸ್ಟಾಕ್‌ ಎಕ್ಸ್ ಚೇಂಜ್‌ ಷೇರಿನ ಬೆಲೆ ರೂ.1,100 ನ್ನು ದಾಟಿತ್ತು.  ಈ ಸಂಸ್ಥೆಯು ಸೇವಾಕ್ಷೇತ್ರದಲ್ಲಿದ್ದು,  ಕಂಪನಿಗಳ ಲಿಸ್ಟಿಂಗ್‌ ನಿಂದ ಆದಾಯ ಪಡೆಯಲಿರುವುದರಿಂದ ಯಾವುದೇ ಬದಲಾವಣೆಗಳು ಹೆಚ್ಚು ಪ್ರಭಾವಿಯಾಗಿರುವುದಿಲ್ಲ. ಆದರೂ  ಈ ಷೇರಿನ ಬೆಲೆ ಈ ವರ್ಷದ ಮಾರ್ಚ್ ನಲ್ಲಿನ ಕುಸಿತದಲ್ಲಿ ರೂ.275 ರ ಸಮೀಪಕ್ಕೆ ಕುಸಿದು ಸರ್ವಕಾಲೀನ ಕನಿಷ್ಠದ ದಾಖಲೆ ನಿರ್ಮಿಸಿ, ನಂತರ ಚೇತರಿಕೆಯಿಂದ ರೂ.570 ರ ಸಮೀಪ ವಹಿವಾಟಾಗುತ್ತಿದೆ.  ಆದರೂ ವಿತರಣೆ ಬೆಲೆಗಿಂತ ಕಡಿಮೆ ಬೆಲೆಯಲ್ಲಿದ್ದು ಅಂದು ಹೂಡಿಕೆ ಮಾಡಿದವರ ಬಂಡವಾಳವನ್ನು ಕರಗಿಸಿದೆ.

    ಸಿ ಡಿ ಎಸ್‌ ಎಲ್‌ ಲಿಮಿಟೆಡ್‌:   ಅದೇ ವರ್ಷ ಪ್ರತಿ ಷೇರಿಗೆ ರೂ.149 ರಂತೆ  ವಿತರಿಸಿದ ಬಿ ಎಸ್‌ ಇ ಯ ಅಂಗಸಂಸ್ಥೆ ಸಿಡಿಎಸ್‌ ಎಲ್‌  ಷೇರು ವಿತರಣೆ ಬೆಲೆಗಿಂತ ಹೆಚ್ಚಿನ ಬೆಲೆಯಲ್ಲೇ ವಹಿವಾಟಾಗುತ್ತಿದ್ದು, ಹೂಡಿಕೆದಾರರನ್ನು ಹರ್ಷಿತಗೊಳಿಸಿದೆ.  ಸಧ್ಯ ಈ ಷೇರಿನ ಬೆಲೆ ರೂ.470 ರ ಸಮೀಪವಿದೆ.

    ಪಿ ಎನ್‌ ಬಿ ಹೌಸಿಂಗ್‌ ಫೈನಾನ್ಸ್‌ ಲಿಮಿಟೆಡ್ :   2016 ರಲ್ಲಿ ಪ್ರತಿ ಷೇರಿಗೆ ರೂ.775 ರಂತೆ ಐ ಪಿ ಓ ಮೂಲಕ ಪೇಟೆ ಪ್ರವೇಶಿಸಿದ ಪಿ ಎನ್ ಬಿ ಹೌಸಿಂಗ್ ಫೈನಾನ್ಸ್ ಕಂಪನಿ ಷೇರಿನ ಬೆಲೆ ರೂ.1,039 ರ ವಾರ್ಷಿಕ ಗರಿಷ್ಠವನ್ನು ನವೆಂಬರ್ 2018 ರಲ್ಲಿತ್ತು.  ಈ ವರ್ಷದ ಮಾರ್ಚ್‌ ನಲ್ಲಿ ರೂ.146 ಕ್ಕೆ ಜಾರಿದ್ದ ಈ ಷೇರಿನ ಬೆಲೆ  ನಂತರ ಚೇತರಿಕೆಯಿಂದ ರೂ.335 ರವರೆಗೂ ಜಿಗಿತ ಕಂಡಿದೆ. 

    ಆಂಜನೇಯ ಲೈಫ್‌ ಕೇರ್‌ ಲಿಮಿಟೆಡ್:
    2011 ರಲ್ಲಿ ಪ್ರತಿಷೇರಿಗೆ ರೂ.240 ರಂತೆ ಐಪಿಒ ಮೂಲಕ ವಿತರಣೆಮಾಡಿದ ಆಂಜನೇಯ ಲೈಫ್‌ ಕೇರ್‌,  ಷೇರಿನ ಬೆಲೆ ರೂ.720 ನ್ನು 2013 ರಲ್ಲಿ ತಲುಪಿತಾದರೂ, ನಂತರ ತನ್ನ ಹೆಸರನ್ನು ಡಾಕ್ಟರ್‌ ಡಾಟ್ಸನ್ಸ್‌ ಲ್ಯಾಬ್‌ ಲಿಮಿಟೆಡ್‌ ಎಂದು ಬದಲಾಯಿಸಿಕೊಂಡರೂ, ಏಳ್ಗೆಯಾಗಲಿಲ್ಲ.   2015 ರಲ್ಲಿ ಒಂದಂಕಿಗೆ ತಲುಪಿ ನಂತರ, ಷೇರುಪೇಟೆಯಿಂದ ನಿರ್ಗಮಿಸಿದೆ.

    ಜೆಟ್‌ ಏರ್‌ ವೇಸ್‌ (ಇಂಡಿಯಾ) ಲಿಮಿಟೆಡ್:‌    2005 ರಲ್ಲಿ ಜೆಟ್ ಏರ್ ವೇಸ್ ಕಂಪನಿಯು ಪ್ರತಿ ಷೇರಿಗೆ ರೂ.1,100 ರಂತೆ ಆರಂಭಿಕ ಷೇರು ವಿತರಿಸಿತ್ತು. ಆಗ ಆ ವಿತರಣೆಗೆ ಹದಿನಾರು ಪಟ್ಟು ಹೆಚ್ಚು ಸಂಗ್ರಹವಾಗಿತ್ತು. ಆದರೆ ನಂತರದ ದಿನಗಳಲ್ಲಿ , ಪೇಟೆಯಲ್ಲಿ, ವಿತರಣೆ ಬೆಲೆ ಸಹ ತಲುಪದಾಗದೆ, ಈಗ ರೂ.26 ರ ಸಮೀಪಕ್ಕೆ ಕುಸಿದಿದೆ.

    ಹಿಂದೂಸ್ಥಾನ್‌ ಏರೋನಾಟಿಕ್ಸ್  ಲಿಮಿಟೆಡ್:   2018‌ ರಲ್ಲಿ ಪ್ರತಿ ಷೇರಿಗೆ ರೂ.1,215 ರಂತೆ ಐ ಪಿ ಒ ಮೂಲಕ ಷೇರು ವಿತರಣೆ ಮಾಡಿದ ಈ ಕಂಪನಿ ಷೇರಿನ ಬೆಲೆ ನಂತರದಲ್ಲಿ ವಿತರಣೆ ಬೆಲೆಯನ್ನು ತಲುಪದೇ ಇದ್ದು ಈ ವರ್ಷದ  ಮಾರ್ಚ್‌ ನಲ್ಲಿ ರೂ.450 ರ ಸಮೀಪಕ್ಕೆ ಕುಸಿದು ಅಲ್ಲಿಂದ ಪುಟಿದೆದ್ದ ಷೇರಿನ ಬೆಲೆ  ಆಗಸ್ಟ್‌ ನಲ್ಲಿ ರೂ.1,400 ನ್ನು ದಾಟಿತು.  ಈ ಸಂದರ್ಭದ ಪ್ರಯೋಜನವನ್ನು ಕೇಂದ್ರ ಸರ್ಕಾರವು ಮತ್ತೊಮ್ಮೆ ರೂ.1,000 ದ ಸಮೀಪದ ಬೆಲೆಯಲ್ಲಿ ಷೇರು ವಿತರಣೆ ಮಾಡಿತು.   ವಿತರಣೆ ಮುಗಿದ ನಂತರ ಕೆಲವೇ ದಿನಗಳಲ್ಲಿ ಷೇರಿನ ಬೆಲೆ ರೂ.850 ರ ಸಮೀಪಕ್ಕೆ ಹಿಂದಿರುಗಿದೆ.

    ಟಾಟಾ ಸ್ಟೀಲ್‌ ಲಿಮಿಟೆಡ್ :   ಟಾಟಾ ಸ್ಟಿಲ್ ಕಂಪನಿಯ ಷೇರಿನ ಬೆಲೆ ಸಧ್ಯ ರೂ.400 ರ ಸಮೀಪವಿದೆ. ಈ ಕಂಪನಿಯು ಸೆನ್ಸೆಕ್ಸ್ ಮತ್ತು ನಿಫ್ಟಿ ಗಳ ಭಾಗವಾಗಿದ್ದು, ಪ್ರತಿಷ್ಠಿತ ಕಂಪನಿಯಾಗಿದೆ. ಈ ಕಂಪನಿಯ ಷೇರಿನ ಬೆಲೆ 2013 ರಲ್ಲಿ ರೂ.190 ರೊಳಗೆ ಕುಸಿದು, 2010 ರ ಎಫ್ ಪಿ ಓ ಮೂಲಕ ಪ್ರತಿ ಷೇರಿಗೆ ರೂ.610 ರಂತೆ ಷೇರುಪಡೆದವರಿಗೇ ಅಪಾರವಾದ ಹಾನಿಗೊಳಪಡಿಸಿತು. ಆದರೆ ಅಲ್ಲಿಂದ ಪುಟಿದೆದ್ದು ಜನವರಿ 2018 ರಲ್ಲಿ ರೂ.792 ರವರೆಗೂ ಏರಿಕೆ ಕಂಡಿತ್ತು. ಫೆಬ್ರವರಿ 2018 ರಲ್ಲಿ ಕಂಪನಿಯು ಮತ್ತೊಮ್ಮೆ ಹಕ್ಕಿನ ಷೇರನ್ನು ವಿತರಿಸಲು ನಿಗದಿತ ದಿನ ಗೊತ್ತುಪಡಿಸಿತು. ಪ್ರತಿ ಷೇರಿಗೆ ರೂ.510 ರಂತೆ ಪೂರ್ಣವಾಗಿ ಪಾವತಿಸಿದ ಷೇರುಗಳನ್ನು ವಿತರಿಸಿತು. ಅಂದರೆ ಈ ಎರಡೂವರೆ ವರ್ಷಗಳಲ್ಲಿ ಷೇರಿನ ಬೆಲೆಯೂ ಕುಸಿದು ಹಕ್ಕಿನ ಷೇರಿನ ವಿತರಣಾ ಬೆಲೆಗಿಂತ ಕಡಿಮೆ ದರದಲ್ಲಿ ವಹಿವಾಟಾಗುತ್ತಿದೆ. ಫೆಬ್ರವರಿ 2018 ರ ಸಂದರ್ಭದಲ್ಲಿ ಕಂಪನಿಯು ಭಾಗಷಃ ಪಾವತಿಸಿದ ಷೇರುಗಳನ್ನು ಪ್ರತಿ ಷೇರಿಗೆ ರೂ.615 ರ ಬೆಲೆಯಲ್ಲಿ ವಿತರಿಸಿ, ಮೊದಲನೇ ಕಂತು ರೂ.154 ನ್ನು ಪಾವತಿಸಲಾಗಿದೆ.  ಈ ಷೇರು ಖರೀದಿಸಿದವರು ಉಳಿದ ಹಣ ರೂ.461 ನ್ನು ಕಂಪನಿಯ ಕರೆ ಬಂದಾಗ ಪಾವತಿಸಬೇಕಾಗಿದೆ.
     
    ಕರಗಿದ ಹೂಡಿಕೆ

    2010 ರಲ್ಲಿನ ವಿತರಣೆಯಲ್ಲಿ ವಿವಿಧ  ಅಂತರರಾಷ್ಟ್ರೀಯ ವಿತ್ತೀಯ ಸಂಸ್ಥೆಗಳೂ ಸೇರಿ 17 ಆಂಕರ್‌ ಹೂಡಿಕೆದಾರರಾಗಿ ಖರೀದಿಸಿವೆ.‌  ಅವುಗಳ ಹೂಡಿಕೆಯೂ ಕರಗಿದೆ.   2015 ರಲ್ಲಿ ಪ್ರತಿ ಷೇರಿಗೆ ರೂ.320 ರಂತೆ ಆರಂಭಿಕ ಷೇರು ವಿತರಣೆ ಮಾಡಿದ ಮನ್ ಪಸಂದ್ ಬೆವರೇಜಸ್ ಅಲ್ಲದೆ ಅದಕ್ಕೂ ಹಿಂದೆ ಒಂದು ಸಮಯದಲ್ಲಿ ಹೆಚ್ಚಿನ ರಭಸದ ಚಟುವಟಿಕೆಯಿಂದ ವಿಜೃಂಭಿಸಿದ ಲ್ಯಾಂಕೋ ಇನ್ಫ್ರಾ, ಮೋಸರ್ ಬೇರ್, ಸ್ಯಾಂಟಲ್ ಕಲರ್, ಎಲ್ ಎಂ ಎಲ್, ಹಾನಂಗ್ ಟಾಯ್ಸ್ ನಂತಹ ಕಂಪನಿಗಳು ಈಗ ವಹಿವಾಟಿನಿಂದ ಹಿಂದೆ ಸರಿದಿದ್ದು, ಡೀಲಿಸ್ಟ್ ಆಗಲಿವೆ. ಈ ಕಂಪೆನಿಗಳಲ್ಲಿ ಹೂಡಿಕೆ ಮಾಡಿದ ಹೆಚ್ಚಿನವರು ಅಪಾರವಾದ ಹಾನಿಗೊಳಗಾಗಿರುವುದು ನಿಷ್ಚಿತ.  ಈ ಕಂಪನಿಗಳಲ್ಲಿ ಹೂಡಿಕೆಯು LONG Term Investment ಬದಲು Permanant Investment ಆಗಿ ಪರಿವರ್ತನೆಗೊಂಡಿದೆ.

       ಮುಂದಿನ ಐ ಪಿ ಒ

    ಈ ತಿಂಗಳ 20 ರಿಂದ ಕ್ಯಾಮ್ಸ್‌ ,   ಚೆಂಕಾನ್ ಸ್ಪೆಷಾಲಿಟಿ ಕೆಮಿಕಲ್ಸ್ ನ ಐ ಪಿ ಒ ಗಳು ಆರಂಭವಾಗಲಿದ್ದು ವಿತರಣೆ ಬೆಲೆ,  ಕಂಪನಿಗಳ ವ್ಯವಹಾರ, ಮುಂತಾದವುಗಳನ್ನು ಪರಿಶೀಲಿಸಿ ನಿರ್ಧರಿಸಿರಿ. 

    ಕಂಪನಿಯು ಉತ್ತಮ ಬ್ರಾಂಡ್‌ ಹೊಂದಿರಬಹುದು, ಉತ್ತಮ ಕಂಪನಿಗಳನ್ನು ತನ್ನ ಗ್ರಾಹಕ ಕಂಪನಿಗಳನ್ನಾಗಿಸಿಕೊಂಡಿರಬಹುದು, ಆಂಕರ್‌ ಹೂಡಿಕೆಗೆ ಉತ್ತಮ ಸ್ಪಂದನ ದೊರೆತಿರಬಹುದು,  ಆದರೆ ಷೇರುಗಳು ಅಲಾಟ್‌ ಆದ ಮೇಲೆ ಲಭಿಸಬಹುದಾದ ಲಾಭವನ್ನು ವಿತರಕರೇ ಹೆಚ್ಚಿನ ಪ್ರೀಮಿಯಂ ಆಗಿ ಪಡೆದರೆ ಉಪಯೋಗವೇನು?  ವಿತರಣೆ ಬೆಲೆಯ ಮಟ್ಟಕ್ಕೆ ಹೆಚ್ಚು ಆದ್ಯತೆ ನೀಡಿ , ಬಂಡವಾಳ ಸುರಕ್ಷಿತಗೊಳಿಸಿ ಕೊಳ್ಳಿರಿ.

    ಐ ಪಿ ಓ ಗಳಲ್ಲಿ ವಿತರಿಸಿದ ಷೇರುಗಳು ಲಿಸ್ಟಿಂಗ್ ಅದಮೇಲೆ ಉತ್ತಮ ಆದಾಯ ಕಲ್ಪಿಸುತ್ತಿದ್ದರೆ ಮಾರಾಟ ಮಾಡಿ ಹೊರಬರುವುದು ಕ್ಷೇಮ. ಕಂಪನಿಗಳು ತಮ್ಮ ಐ ಪಿ ಓ ಮೂಲಕ ವಿತರಿಸಿದ ಬೆಲೆಗಳು ಕಡಿಮೆ ಇದ್ದು, ಆಕರ್ಷಕವಾಗಿದ್ದಲ್ಲಿ ಅವು ಪೇಟೆಯಲ್ಲಿ ದೀರ್ಘಕಾಲದ ಚಟುವಟಿಕೆಯಲ್ಲಿರುತ್ತವೆ.  ಇದಕ್ಕೆ ಉತ್ತಮ ಉದಾಹರಣೆ ಎಂದರೆ ಮಾರುತಿ ಸುಜುಕಿ, ಕೆನರಾ ಬ್ಯಾಂಕ್‌ ಗಳು.   ವಿತರಣೆ ಬೆಲೆ ಹೆಚ್ಚಾದಲ್ಲಿ ಅವು ಪೇಟೆಯಲ್ಲಿ ಕೇವಲ ಅಲ್ಪ ಕಾಲದಲ್ಲಿ ಮೆರೆದು ಮಾಯವಾಗುತ್ತವೆ. ಇದಕ್ಕೆ ಮುಖ್ಯ ಕಾರಣ ಷೇರಿನ ಬೆಲೆಗಳು ನ್ಯಾಯಸಮ್ಮತವಾಗಿದ್ದಲ್ಲಿ ಹೂಡಿಕೆದಾರರ ಬೆಂಬಲ ದೀರ್ಘಕಾಲೀನವಾಗಿರುತ್ತದೆ.  

    ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    Photo by Alec Favale on Unsplash


    ಶುಭ ದಿನ

    ಇಂದಿನ ನುಡಿ

    ದೇವರೆಂದರೆ ಗುಡಿಯೊಳಗಿನ ಮೂರ್ತಿಯಲ್ಲ. ಮಾನವನ ಹೃದಯದಲ್ಲಿರುವ ಪ್ರೀತಿ

    ಸಂಗ್ರಹ :ರಾಜೀವಲೋಚನ
    .

    ಇಂದಿನ ಪಂಚಾಂಗ

    ದಿನಾಂಕ 20 ಸೆಪ್ಟಂಬರ್ 2020,ಭಾನುವಾರ

    ಸಂವತ್ಸರ : ಶ್ರೀ ಶಾರ್ವರಿ, ಆಯನ :ದಕ್ಷಿಣಾಯನ, ಋತು: ಶರದ್, ಮಾಸ : ಅಧಿಕ ಆಶ್ವೀಜ, ಪಕ್ಷ :ಶುಕ್ಲ ತಿಥಿ: ತದಿಗೆ ನಕ್ಷತ್ರ: ಚಿತ್ತ

    ಸೂರ್ಯೋದಯ : ಬೆಳಿಗ್ಗೆ 6.09

    ಸೂರ್ಯಾಸ್ತ: ಸಂಜೆ 6.17

    P

    ಪಾಟ್ ನಲ್ಲೂ ಬೆಳೆಯಿರಿ ತಾವರೆ

    ಜಯಶ್ರೀ ಅಬ್ಬಿಗೇರಿ

    ಹಾಗೆ ನೋಡಿದರೆ ಹೂಗಳನ್ನು ಇಷ್ಟಪಡದವರು ಇಲ್ಲವೇ ಇಲ್ಲ ಎಂದು ಹೇಳಬಹುದು. ಹೂ ಮನಸ್ಸನ್ನು ಹಗುರಗೊಳಿಸಿ ಸಂತಸವನ್ನು ಮನದಂಗಳದಲ್ಲಿ ನೆಲೆಸುವಂತೆ ಮಾಡುತ್ತದೆ. ವಿವಿಧ ಸುಗಂಧ ಸುವಾಸನೆ ಸುಂದರ ಭಾವನೆ ಹೊರಹೊಮ್ಮಿಸುವ ಹೂಗಳು ಸರ್ವರನ್ನೂ ಮಂತ್ರಮುಗ್ಧಗೊಳಿಸುವ ಶಕ್ತಿ ಹೊಂದಿವೆ. ಸೌಂದರ್ಯ ಮತ್ತು ಸಮೃದ್ಧಿಯ ಪ್ರತೀಕವಾದ ಹೂ ದೇವರ ಅತ್ಯದ್ಭುತ ಸೃಷ್ಟಿಯಲ್ಲೊಂದು.

    ಕೋಮಲತೆಯನ್ನು ಸಂಕೇತಿಸುವ ಕೋಮಲವಾದ ಹೂಗಳೆಂದರೆ ಕೋಮಲೆಯರಿಗೆ ತುಂಬಾ ಇಷ್ಟ. ಹೂವಿನಂಥ ಮನಸ್ಸುಳ್ಳ ಹೆಂಗಳೆಯರಿಗೆ ಹೂಗಳನ್ನು ಬೆಳೆಯಲು ಬಹಳಷ್ಟು ತಾಳ್ಮೆ ಮತ್ತು ದೃಢತೆ ಇದ್ದೇ ಇರುತ್ತದೆ. ಹೆಚ್ಚಿನ ಆರೈಕೆ ಮತ್ತು ಕಾಳಜಿ ಬೇಕಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತು.

    ಹೂಗಳನ್ನು ಆಹಾರದ ಬಣ್ಣ ಬದಲಿಸಲು ಬಳಸುತ್ತಾರೆ. ಇಲ್ಲವೇ ಇವುಗಳ ಎಲೆಗಳನ್ನು ಬೇಯಿಸಿ ಹಾಗೆ ತಿನ್ನಬಹುದು. ಆದರೆ ತುರ್ತು ಆಹಾರವಾಗಿ ತಿನ್ನಲು ಯೋಗ್ಯವಾದ ಕಡುಗೆಂಪು ಬಣ್ಣದ ಡೈ ಯನ್ನು ಕೇಕ್ ಮತ್ತು ಜೆಲ್ಲಿಗಳ ಬಣ್ಣ ಬದಲಿಸಲು ಬಳಸಬಹುದು. ಕೆಲವು ಹೂಗಳನ್ನು ಚಿಕಿತ್ಸೆಯಲ್ಲೂ ಬಳಸುತ್ತಾರೆ.
    ಹೂಗಳಿಂದಲೇ ದೇವರ ಪೂಜೆಗೆ ಒಂದು ವಿಶೇಷ ಕಳೆ. ಹೂಗಳಿಲ್ಲದೇ ದೇವರ ಪೂಜೆ ಸಂಪೂರ್ಣವಾಗಲಾರದು.

    ಶುಭ ಸಮಾರಂಭಗಳಲ್ಲಂತೂ ಇದರದು ಅಗ್ರ ಸ್ಥಾನ. ದೇವರ ಆರಾಧನೆಗೆ ಪ್ರಾರ್ಥನೆಗೆ ಹೂ ಬೇಕೇ ಬೇಕು. ನಿರ್ಮಲ ಮನಸ್ಸಿನಿಂದ ಹೂಗಳನ್ನು ದೇವರಿಗೆ ಸಮರ್ಪಿಸಿದರೆ ಮನದ ಆಸೆ ಆಕಾಂಕ್ಷೆಗಳು ಈಡೇರುವವು ಎಂಬ ಬಲವಾದ ನಂಬಿಕೆಯೂ ಇದೆ. ದೇವರ ಪಾದಗಳಿಗೆ ಹೂಗಳನ್ನು ಭಕ್ತಿ ಭಾವದಿಂದ ಸಮರ್ಪಿಸಿ ದೇವರ ಪ್ರೀತಿಗೆ ಪಾತ್ರರಾಗುತ್ತಾರೆ. ವಿವಿಧ ಬಣ್ಣದ ಹೂಗಳಿಂದ ದೇವರ ಅಲಂಕಾರ ಅಷ್ಟೇ ಅಲ್ಲ ದೇವರ ಮನೆಯನ್ನೂ ಸಿಂಗರಿಸಲಾಗುವುದು. ದೇವಸ್ಥಾನವೂ ಇವುಗಳಿಂದಲೇ ಅಲಂಕೃತಗೊಂಡಿರುವುದನ್ನು ನಾವು ನೋಡಿ ಖುಷಿ ಪಡುತ್ತೆವೆ. ದೇವತೆಗಳಿಗೆ ಇಷ್ಟವಾಗುವ ಹೂಗಳನ್ನು ಸಮರ್ಪಿಸಿದರೆ ಅದೃಷ್ಟ ಹಾಗೂ ಸಮೃದ್ಧಿ ಪ್ರಾಪ್ತಿಯಾಗುವುದು ಎನ್ನುವ ನಂಬಿಕೆಯೂ ಇದೆ.

    ಮಹಾಭಾರತದಲ್ಲಿ ಉಲ್ಲೇಖವಾಗಿರುವ ಮಾಹಿತಿಯಂತೆ “ಯಾರು ಶುದ್ಧವಾದ ಮನಸ್ಸಿನಿಂದ, ಧಾರ್ಮಿಕವಾದ ವಿಧಿ ವಿಧಾನದ ಮೂಲಕ ದೇವರಿಗೆ ಹೂವನ್ನು ಸಮರ್ಪಿಸುತ್ತಾರೋ ಅಂತಹ ವ್ಯಕ್ತಿಗಳ ಬಗ್ಗೆ ದೇವರು ತೃಪ್ತನಾಗುತ್ತಾನೆ ಮತ್ತು ಆ ವ್ಯಕ್ತಿಗಳಿಗೆ ಸಮೃದ್ಧಿಯಿಂದ ಹರಿಸುತ್ತಾನೆ..” ವಿವಿಧ ದೇವತೆಗಳಿಗೆ ವಿಭಿನ್ನ ಹೂಗಳು ಹಾಗೂ ಅವುಗಳ ದಳಗಳು ಅತ್ಯಂತ ಪ್ರಿಯವಾದವುಗಳು ಆಗಿರುತ್ತವೆ. ಎಂಬ ವಿಷಯಗಳು ಪುರಾಣ ಇತಿಹಾಸದಲ್ಲಿ ಉಲ್ಲೇಖವಾಗಿರುವುದನ್ನು ಕಾಣುತ್ತೇವೆ. ದೇವರು ಕುಳಿತುಕೊಳ್ಳುವ ಪೀಠ ವಿಶೇಷ ಹೂಗಳಿಂದ ಕೂಡಿರುತ್ತವೆ. ದೇವತೆಗಳ ಕೈಯಲ್ಲೂ ವಿಭಿನ್ನ ಹೂಗಳನ್ನು ಹಿಡಿದಿರುವುದು ಹೂಗಳ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ.
    ದಾಸವಾಳ ಹೂವು, ಪಾರಿಜಾತ ಹೂವು ,ಕಮಲದ ಹೂವು, ಚೆಂಡು ಹೂವು, ತುಳಸಿ, ಮಲ್ಲಿಗೆ ಹೂವು ಪೂಜೆಗಳಲ್ಲಿ ವಿಶಿಷ್ಟ ಸ್ಥಾನ ಪಡೆದುಕೊಂಡಿವೆ.

    ಮಳೆಗಾಲ ಬಂತೆಂದರೆ ಸಾಕು ಎಲ್ಲೆಲ್ಲೂ ಹಸಿರಿನೊಂದಿಗೆ ವಿವಿಧ ನಮೂನೆಯ ರಂಗು ರಂಗಿನ ಹೂಗಳು ಕಣ್ಮನ ಸೆಳೆಯುತ್ತವೆ. ಕೆಲವು ಮಹಿಳೆಯರು ಇಂಥ ಚಿತ್ತಾಕರ್ಷಕ ಹೂಗಳನ್ನು ಬೆಳೆಯುವ ಸಲುವಾಗಿ ಮಳೆಗಾಲಕ್ಕೆ ಕಾಯುತ್ತಿರುತ್ತಾರೆ. ಇಳೆಗೆ ತಂಪು ತಂದ ಮಳೆರಾಯ ಸಕಲ ಜೀವಿಗಳಿಗೂ ನವೋಲ್ಲಾಸ ನೀಡುತ್ತಾನೆ. ಇಡೀ ಪ್ರಕೃತಿಯೇ ಸೌಂದರ್ಯ ರಾಶಿಯಿಂದ ಕಂಗೊಳಿಸುತ್ತಿರುವಾಗ ಹೂಗಳ ಪ್ರೇಮಿಗಳಾದ ಹೆಂಗಳೆಯರು ಪರಿಸರದ ಸೌಂದರ್ಯ ವರ್ಧನೆಯಲ್ಲಿ ತಮ್ಮದೂ ಒಂದಿಷ್ಟು ಪಾಲು ಇರಲೆಂದು ಸಜ್ಜಾಗಿರುತ್ತಾರೆ.

    ಮಳೆಗೆ ಹಿಗ್ಗಿ ಹಿಗ್ಗಿ ಹೂವಾಗುವ ಪುಷ್ಪಗಳು ಅನೇಕ ಅವುಗಳಲ್ಲಿ ತಾವರೆಯೂ ಒಂದು. ಇದನ್ನು ಡೇರೆ ಹೂವೆಂದೂ ಕರೆಯುವರು. ಈ ಸಮಯದಲ್ಲಿ ತಾವರೆಯನ್ನು ತಮ್ಮ ಕೈ ತೋಟದಲ್ಲಿ, ಹೂದೋಟದಲ್ಲಿ ಬೆಳೆಸಲು ಹೆಂಗಳೆಯರು ನಾ ಮುಂದು ತಾ ಮುಂದು ಎಂದು ಸ್ಪರ್ಧೆ ಒಡ್ಡುವಷ್ಟು ಕೌತುಕರಾಗಿರುತ್ತಾರೆ.

    ತಾವರೆ ಗಡ್ಡೆ ಪ್ರಕೃತಿ ದತ್ತವಾಗಿ ದೊರೆಯತ್ತದೆ ಕೆಲವೊಮ್ಮೆ ಅವರಿವರನ್ನು ಕೇಳಿ ವಿವಿಧ ಬಣ್ಣದ ಹೂ ಬಿಡುವ ತಾವರೆ ಗೆಡ್ಡೆಗಳನ್ನು ಪಡೆದು ಭೂಮಿಯನ್ನು ಅಗೆದು ಅದರಲ್ಲಿ ಮರಳು ಮಣ್ಣು ಮತ್ತು ಗೊಬ್ಬರದ ಮಿಶ್ರಣ ಮಾಡಿ ಗಡ್ಡೆಯನ್ನು ಅದರೊಳಗಿಟ್ಟು ಬೆಳೆಸುವರು. ಇನ್ನು ಕೆಲವರು ಪ್ಲಾಸ್ಟಿಕ್ ಚೀಲದಲ್ಲಿ ಮಣ್ಣು ಮರಳು ಗೊಬ್ಬರ ಬೆರೆಸಿ ಅದರಲ್ಲಿ ತಾವರೆ ಗಡ್ಡೆಯನ್ನಿಟ್ಟು ಬೆಳೆಸುವರು. ಸುರಿಯುವ ಮಳೆಗೆ ನೋಡು ನೋಡುತ್ತಿದ್ದಂತೆ ಒಂದೇ ವಾರದಲ್ಲಿ ಚಿಗುರೊಡೆದು ವಿಸ್ಮಯ ಮೂಡಿಸುವುದು. ನಂತರ ಮೊಳಕೆಯೊಡೆದು ಸಣ್ಣ ಸಣ್ಣ ಗಿಎಡವಾಗಿ ಬೆಳೆಯುತ್ತಾ ಹೋಗುತ್ತವೆ. ಈ ಸಂದರ್ಭದಲ್ಲಿ ಗಿಡಗಳಿಗೆ ಕಂಬಗಳನ್ನು ಆಧಾರವಾಗಿಡುವುದು ಸೂಕ್ತ. ತಿಂಗಳು ಕಳೆಯುವಷ್ಟರಲ್ಲಿ ಮೊಗ್ಗುಗಳು ಹಿಗ್ಗಿ ಹಿಗ್ಗಿ ಹೂವಾಗಿ ಮನಸೂರೆಗೊಳ್ಳುತ್ತವೆ.

    ಮಳೆಗಾಲದ ನಂತರ ಇವುಗಳಿಗೆ ನೀರುಣಿಸುವುದು ಅತ್ಯಗತ್ಯ. ಮಳೆಗಾಲದ ನಂತರ ಗಿಡ ಒಣಗಿದಾಗ ಗಿಡದ ಬುಡದಲ್ಲಿ ಕಟಾವು ಮಾಡಿ ಪ್ಲಾಸ್ಟಿಕ್ ಚೀಲಗಳನ್ನಿಟ್ಟರೆ ಮತ್ತೆ ಮುಂದಿನ ಮಳೆಗಾಲಕ್ಕೆ ಮನಮೋಹಕ ತಾವರೆಗಳನ್ನು ಬೆಳೆದು ಮನಾನಂದ ಪಡೆಯಬಹುದು.

    ಈಗ ನಗರ ಭಾಗಗಳಲ್ಲಿ ಟೆರೆಸ್ ಗಾರ್ಡನ್ ಅನಿವಾರ್ಯವಾಗಿರುವುದರಿಂದ ಮೇಲಿನ ವಿಧಾನದಲ್ಲಿ ಪಾಟ್ ನಲ್ಲೂ ತಾವರೆಗಿಡ ಬೆಳಸಬಹುದು. ಪಾಟ್ ಅಗಲವಾಗಿರಬೇಕಪ. ಅದರಲ್ಲಿ ಪೂರ್ಣ ಮಣ್ಣು ತುಂಬದೆ ಮಕ್ಕಾಲು ಮಣ್ಣು ತುಂಬಿ ಮೇಲೆ ನೀರ ಹಾಕಬೇಕು. ಕೆಸರಿನಂತೆ ಇರಬೇಕು.ಅದರಲ್ಲಿ ತಾವರೆ ಗೆಡ್ಡೆಗಳನ್ನುಇಟ್ಟು ಬೆಳೆಸಬಹುದು.

    ಚಾಂಪಿಯನ್ಸ್, ಜೀನಿಯಸ್ ಎಂದೆಲ್ಲಾ ಕರೆಸಿಕೊಂಡವರ ಯಶಸ್ಸಿನ ಗುಟ್ಟೇನು

    ಇಚ್ಚಾ ಶಕ್ತಿ, ಅಪಾರ ಬುದ್ಧಿವಂತಿಕೆ, ಅಗತ್ಯವಾದ ಜ್ಞಾನ ಇದ್ದಾಗಲೂ ಜನರು ಯಾಕೆ ಕೆಲವೊಂದು ಕೆಲಸದಲ್ಲಿ ವಿಫಲರಾಗುತ್ತಾರೆ? ಹಲವಷ್ಟು ಬಾರಿ ಕೆಲಸ ಗೊಂದಲಮಯವಾಗಿ ಇಲ್ಲವೇ ಅಪೂರ್ಣವಾಗಿಯೇ ಉಳಿಯುತ್ತದೆ. ಇದೇಕೆ ಹೀಗೆ ಎನ್ನಿಸಬಹುದು.?

    ಪ್ರತಿ ಸೆಕೆಂಡುನಲ್ಲೂ ಪ್ರತಿಯೊಬ್ಬರ ಮನಸ್ಸಿನ ಪರದೆಯಲ್ಲಿ ಹಲವಾರು ವಿಚಾರಗಳು ಹರಿದಾಡುತ್ತಿರುತ್ತದೆ. ಅದು ಏಕಾಗ್ರತೆಗೆ ಭಂಗ ತರುತ್ತದೆ. ಅದರಿಂದ ಮಾಡಲು ಹೊರಟಿರುವ ಕೆಲಸದ ಫಲಿತಾಂಶ ಅಪೂರ್ಣವೇ ಆಗಿರುತ್ತದೆ. ಗುರಿಯೆಡೆಗೆ ಮನಸ್ಸು ಏಕಾಗ್ರಗೊಳ್ಳದೇ ಇದ್ದರೆ ಯಾವುದೇ ಪ್ರಯತ್ನವೂ ಸಫಲವಾಗುವುದಿಲ್ಲ. ಏಕಮನಸ್ಸಿನಿಂದ ಕೆಲಸದ ಕಡೆಗೆ ಗಮನ ಹರಿಸದೇ ಇದ್ದರೆ ಖಂಡಿತಾ ಯಶಸ್ಸು ಸಾಧ್ಯವಿಲ್ಲ. ಕೇಂದ್ರೀಕೃತ ಮನಸ್ಸು ಕೆಲಸದ ವೇಗವನ್ನು ಹೆಚ್ಚಿಸುತ್ತದೆ. ಹಾಗೂ ಅದರಿಂದ ಉತ್ತಮ ಫಲಿತಾಂಶವನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತದೆ.

    ಮನಸ್ಸನ್ನು ಕೇಂದ್ರೀಕರಿಸುವುದರಿಂದ ವ್ಯಕ್ತಿಯ ಅಭಿವ್ಯಕ್ತಿ ಸಾಮರ್ಥ್ಯ ಹೆಚ್ಚುತ್ತದೆ. ಮನಸ್ಸನ್ನು ಹತೋಟಿಯಲ್ಲಿರಿಸಿಕೊಳ್ಳಲು ಸಾಧ್ಯವಾಗುವುದಾದರೆ ಅದರಿಂದ ನಾವು ಸಮಂಜಸವಾಗಿ, ನಿಖರವಾಗಿ ನಮ್ಮನ್ನುನಾವು ವ್ಯಕ್ತಪಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಅದರಿಂದ ದೊಡ್ಡಮಟ್ಟದ ಯಶಸ್ಸು ಗಳಿಸುವುದಕ್ಕೂ ಸಾಧ್ಯ. ಅಂತಹ ಯಶಸ್ಸು ಸಾಧ್ಯವಾಗುವುದು ನಮ್ಮ ಮನಸ್ಸನ್ನು ನಾವು ನಿಯಂತ್ರಣದಲ್ಲಿರಿಸಿ ಕೊಳ್ಳುವುದರಿಂದ ಮಾತ್ರ ಸಾಧ್ಯ. ಚಾಂಪಿಯನ್ಸ್, ಜೀನಿಯಸ್ ಎಂದೆಲ್ಲಾ ಕರೆಸಿಕೊಂಡವರ ಯಶಸ್ಸಿನ ಗುಟ್ಟು ಇದೇ ಆಗಿದೆ.

     ಏಕಾಗ್ರತೆ ನಮ್ಮೊಳಗೆ ಆಧ್ಯಾತ್ಮಿಕ ಅರಿವನ್ನು ತಂದುಕೊಡುತ್ತದೆ, ನಮ್ಮಂತರಂಗವನ್ನು ಅರಿಯುವುದಕ್ಕೆ ಸಾಧ್ಯವಾಗಿಸುತ್ತದೆ. ಪ್ರತಿಯೊಬ್ಬನೂ ಆಧ್ಯಾತ್ಮಿಕ ಮತ್ತು ಧಾರ್ಮಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಶಕ್ತಿ ಹೊಂದಿರುತ್ತಾನೆ. ಮನಸ್ಸನ್ನು ಕೇಂದ್ರೀಕರಿಸಿಕೊಳ್ಳುವುದನ್ನು ಆಧ್ಯಾತ್ಮಿಕ ಗುರು ಮನವೊಲಿಸುವುದರ ಮೂಲಕ ಕಲಿಸಿಕೊಡುತ್ತಾನೆ. ಅದನ್ನವನು ಬಹಳ ಚತುರತೆಯಿಂದ ಬಳಸಿಕೊಂಡಿರುತ್ತಾನೆ.ವಿವಿಧ ಧರ್ಮಗ್ರಂಥಗಳು ಕೂಡಾ ಫೋಕಸ್ ಮಾಡುವುದರ ಬಗೆಗೆ ತಮ್ಮದೇ ನೆಲೆಯಲ್ಲಿ ಸಾರುತ್ತವೆ.

    ಎಲ್ಲಾ ಧರ್ಮಗಳೂ ಕೂಡಾ ಕರ್ಮದ ಕಡೆಗೆ ಮನಸ್ಸನ್ನು ಕೇಂದ್ರೀಕರಿಸುವಂತೆ ಹೇಳುತ್ತದೆ.ವಾಸ್ತವ ಅಂದರೆ ಒಬ್ಬ ಸಾಮಾನ್ಯ ಮನುಷ್ಯನಿಗೆ ಹಲವಾರು ಗೊಂದಲಗಳು ಇದ್ದಾಗ ಒಂದೇ ಕಡೆಗೆ ಗಮನ ನೀಡುವುದು ಅಷ್ಟು ಸುಲಭದ ಮಾತಲ್ಲ. ಮನಸ್ಸಿನೊಂದಿಗೆ ಹಲವಾರು ವಿಷಯಗಳು ಸ್ಪರ್ಧೆ ಮಾಡುತ್ತಿರುತ್ತವೆ. ಹಾಗಾಗಿ ಒಂದೇ ವಿಷಯದ ಕಡೆಗೆ ಮನಸ್ಸನ್ನು ಕೇಂದ್ರೀಕರಿಸುವ ವಿಧಾನ ಅಂದರೆ ಈ ಕ್ಷಣ ನಾನೇನು ಮಾಡಬೇಕು, ನಾನು ಮಾಡಬೇಕಾದ್ದದ್ದೇನು ಎಂಬುದನ್ನು ತಿಳಿದುಕೊಳ್ಳುವುದು. ಸದ್ಯದ ಪರಿಸ್ಥಿತಿಯಲ್ಲಿ ತಾನು ಮಾಡಬೇಕಾದ ಗುರಿಗಳೇನು ಎಂಬುದನ್ನು ತಿಳಿದುಕೊಳ್ಳುವುದು. ಮೊದಲ ಪ್ರಾಶಸ್ತ್ಯ ಯಾವುದಕ್ಕೆ ನೀಡಬೇಕು ಎಂಬುದನ್ನು ಅರಿತು ಕೆಲಸ ಮಾಡುವುದರಿಂದ ಒಂದೊಂದೇ ಗುರಿಗಳೊಂದಿಗೆ ಸರ್ವಶ್ರೇಷ್ಠ ಸಾಧನೆಯನ್ನು ಮಾಡುವುದಕ್ಕೆ ಸಾಧ್ಯವಾಗುತ್ತದೆ.

    ನಮ್ಮ ಗಮನ ಯಾವಾಗ ಹಲವಾರು ಕೆಲಸಗಳೊಂದಿಗೆ ಒಂದೇ ಸಮಯದಲ್ಲಿ ವಿಭಜನೆಯಾಗಿ ಹೋಗಿರುತ್ತದೆಯೋ ಅದು ನಮ್ಮನ್ನು ಗೊಂದಲಕ್ಕೀಡು ಮಾಡುತ್ತದೆ. ಒಂದೇ ಸಮಯದಲ್ಲಿ ಹಲವು ಕೆಲಸಗಳನ್ನು ಮಾಡುತ್ತಿರುವುದರಿಂದ (ಮಲ್ಟಿಟಾಸ್ಕ್) ಉದಾಹರಣೆಗೆ ಇಮೇಲ್ ಮಾಡುವುದು, ಫೇಸ್‍ಬುಕ್ ನೋಡುವುದು, ಟ್ವಿಟರ್ ಹೀಗೆ  ಒಟ್ಟಿಗೆ ಎಲ್ಲವನ್ನೂ ಮಾಡುವುದರಿಂದ ಚಿಂತನೆಯನ್ನೇ ಹಾಳು ಮಾಡಿಬಿಡುತ್ತದೆ. ಇದರಿಂದ ಮಾಡುವ ಕೆಲಸದಲ್ಲಿ ಗುಣಮಟ್ಟ ಕಡಿಮೆಯಾಗುತ್ತದೆ.ಹಳೆಯದರ ಬಗ್ಗೆ ಚಿಂತೆ ಮಾಡದೆ, ಭವಿಷ್ಯದ ಬಗ್ಗೆ ವಿಚಲಿತರಾಗದೆ ಪ್ರಸ್ತುತ ಕೈಗೆತ್ತಿಕೊಂಡುದುದರ ಬಗ್ಗೆ ಗಮನ ಕೇಂದ್ರೀಕರಿಸಿ. ಧ್ಯಾನ ಅಭ್ಯಾಸ ಮಾಡುವವರ ಪ್ರಮುಖ ಅಂಶ.

    ಧ್ಯಾನ ಮಾಡುವುದರಿಂದ ಮನಸ್ಸನ್ನು ಕೇಂದ್ರೀಕರಿಸಲು ಸಾಧ್ಯವಾಗುತ್ತದೆ. ಇದರಿಂದ ಮನಸ್ಸು ಒತ್ತಡಮುಕ್ತವಾಗುತ್ತದೆ. ಮನಸ್ಸಿನ  ಗೊಂದಲಗಳನ್ನು ತಳ್ಳಿ ಹಾಕುತ್ತದೆ.ಒಂದು  ವಸ್ತುವಿನೆಡೆಗಿನ ನಮ್ಮ ಮನಸ್ಸಿನ ಜಾಗೃತಿಯು ನಮ್ಮ ಧ್ಯಾನಾವಸ್ಥೆಗೆ ಕೊಂಡೊಯುತ್ತದೆ.ಒಂದು ಗುರಿಯನ್ನು ಆಯ್ಕೆ ಮಾಡಿಕೊಂಡು ಅದರೆ ಮನಸ್ಸನ್ನು ಕೇಂದ್ರೀಕರಿಸಿ. ಅದು ಪೂರ್ಣಗೊಂಡ ನಂತರವೇ ಮತ್ತೊಂದನ್ನು ಆಯ್ಕೆ ಮಾಡಿಕೊಳ್ಳಿ.

    ಒಂದು ಸಮಯಕ್ಕೆ ಒಂದೇ ವಿಷಯದ ಕಡೆಗೆ ಗಮನ ಕೇಂದ್ರೀಕರಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ವಾಸ್ತವದ ಕಡೆಗೇ ಗಮನ ಇರಬೇಕು ಅನ್ನೋದನ್ನು ಮರೆಯಬಾರದು. ಪ್ರತಿದಿನ ಬೆಳಗ್ಗೆ ಎದ್ದಾಗ ಎಂತಹ ಅದ್ಭುತ ಮತ್ತೊಂದು ಗಳಿಗೆ ಬಂದಿದೆ. ಅದು ಜೀವನಕ್ಕೆ ಸಿಕ್ಕಿದ ಅದ್ಭುತ ಉಡುಗೊರೆ ಎಂದುಕೊಂಡು ಗುರಿಯೆಡೆಗೆ ಮನಸ್ಸನ್ನು ಕೇಂದ್ರೀಕರಿಸಿಕೊಂಡರೆ ಅದು ಒಳ್ಳೆಯ ದಿನವಾಗುವುದರಲ್ಲಿ  ಸಂಶಯವಿಲ್ಲ.

    ಗಮನ ಕೇದ್ರೀಕರಿಸುವುದು ಹೇಗೆ?

    *  ಒಂದಷ್ಟು ಹೊತ್ತು ಒಂದೇ ವಿಷಯ, ಗುರಿ, ಕೆಲಸದ ಕಡೆ ಗಮನ ನೀಡಲು ಪ್ರಯತ್ನಿಸಬೇಕು.

    * ಗಮನ ಕೇಂದ್ರೀಕರಿಸುವುದು ಅಂದರೆ ಒಂದೊಳ್ಳೆ ಕಾರಣಕ್ಕಾಗಿ ಒಂದೊಳ್ಳೆಯ ಸಮಯ ಹಾಗೂ ಸ್ಥಳದಲ್ಲಿ ಕೆಲಸ ಮಾಡುವ ಕಲೆ.

    * ಏನು ಬೇಕು ಎಂಬುದನ್ನು ಮತ್ತೆ ಮತ್ತೆ ಯೋಚಿಸಿ.

    * ಕೃತಜ್ಞತೆ ಹೇಳಿ, ಕೃತಜ್ಞರಾಗಿರಿ.

    * ಸಮಯ ನಿರ್ವಹಣೆ ಅಭ್ಯಸಿಸಿಕೊಳ್ಳಿ.

    error: Content is protected !!