ಅರಮನೆ ಮೈದಾನದಲ್ಲಿ RED U FAIR ಅತಿ ದೊಡ್ಡ ಶೈಕ್ಷಣಿಕ ಮೇಳ ನಾಳೆಯಿಂದ ಆರಂಭ

BENGALURU MAY 26

ಕರ್ನಾಟಕದ ಅತಿ ದೊಡ್ಡ ಶೈಕ್ಷಣಿಕ ಮೇಳ ಇದೇ ಶನಿವಾರ ಮತ್ತು ಭಾನುವಾರ ಮೇ 27 ಮತ್ತು 28 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜನೆಗೊಂಡಿದೆ. ಗಾಯಿತ್ರಿ ವಿಹಾರ್ ಸಾಗರ್ ಸಭಾಂಗಣದಲ್ಲಿ ನಡೆಯಲಿರುವ ಈ ಬೃಹತ್ ಮೇಳದಲ್ಲಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಭಾಗವಹಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿವೆ.

ಯಾವ ಕೋರ್ಸ್ ಭವಿಷ್ಯದಲ್ಲಿ ಉನ್ನತ ಅವಕಾಶ ಒದಗಿಸಲಿದೆ ಎಂಬುದರ ಬಗ್ಗೆ ತಜ್ಞರು ತಿಳಿಸಿ ಕೊಡಲಿದ್ದಾರೆ. ಶೈಕ್ಷಣಿಕ ಪ್ರಗತಿಯೊಂದಿಗೆ ಜೀವನ ಮೌಲ್ಯಗಳ ಉನ್ನತಿಯ ಬಗ್ಗೆಯೂ ಇಲ್ಲಿ ಮಾರ್ಗದರ್ಶನ ಸಿಗಲಿದೆ.

ಮೇ 27 ರಂದು ಬೆಳಿಗ್ಗೆ 10.30ಕ್ಕೆ ಕರ್ನಾಟಕ ಸರಕಾರದ ಸಚಿವ ರಾಮಲಿಂಗರೆಡ್ಡಿ ಅವರು ಮೇಳವನ್ನು ಉದ್ಘಾಟಿಸಲಿದ್ದಾರೆ. ಕರ್ನಾಟಕದ ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗಡೆ ಮತ್ತು ಆರ್ ವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಪಿ ಶ್ಯಾಮ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಇನ್ ಸೈಟ್ ಇಂಡಿಯಾದ ಮುಖ್ಯಸ್ಥ ಜಿ ಬಿ ವಿನಯ ಕುಮಾರ್ , ಯೋಜನ ಬದ್ದ ಶಿಕ್ಷಣ ಹೇಗೆ ಭವ್ಯ ಭವಿಷ್ಯವನ್ನು ರೂಪಿಸಬಲ್ಲದು ಎಂಬುದರ ಬಗ್ಗೆ ಬಂಜಾರ ಅಕಾಡೆಮಿಯ ಡಾ. ಅಲಿ ಕ್ವಾಜಾ ಮತ್ತು ಪಿಯುಸಿ ನಂತರದ ಅವಕಾಶಗಳ ಬಗ್ಗೆ ಡಾ. ಬಿ ಎಸ್ ಶ್ರೀಕಂಠ ಮಾರ್ಗದರ್ಶನ ನೀಡಲಿದ್ದಾರೆ. ರೆಡ್ ಎಫ್ ಎಂ ನೆಟ್ ವರ್ಕ್ ನ ಸಿಒಒ ಎಂ. ಸುರೇಂದರ್. ಶಿಕ್ಷಣ ತಜ್ಞ ಡಾ ಎಂ. ಜಯಪ್ಪ ಮತ್ತು ಕನ್ನಡಪ್ರೆಸ್ .ಕಾಮ್ ನ ಪ್ರಧಾನ ಸಂಪಾದಕ ಶ್ರೀವತ್ಸ ನಾಡಿಗ್ ಉಪಸ್ಥಿತರಿರುತ್ತಾರೆ.

ಈ ಮೇಳಕ್ಕೆ ಪ್ರವೇಶ ಉಚಿತವಾಗಿದ್ದು , ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯುವಂತೆ ರೆಡ್ ಎಫ್ ಎಂ ನ ಮಾರುಕಟ್ಟೆ ಮುಖ್ಯಸ್ಥ ಸುರೇಶ್ ಗಣೇಶನ್ ಕೋರಿದ್ದಾರೆ. ಕನ್ನಡಪ್ರೆಸ್ .ಕಾಮ್ ಮೇಳಕ್ಕೆ ಡಿಜಿಟಲ್ ಮಾಧ್ಯಮ ಸಹಯೋಗ ಒದಗಿಸಿದೆ.

LEAVE A REPLY

Please enter your comment!
Please enter your name here