27.6 C
Karnataka
Monday, May 13, 2024

    ಇಂದಿನ ಮಹಿಳೆಯರ ಬದುಕಿಗೂ ಆದರ್ಶಪ್ರಾಯ

    Must read

    ರತ್ನಾ ಶ್ರೀನಿವಾಸ

    ಅಕ್ಕಮಹಾದೇವಿ ಕನ್ನಡದ ಪ್ರಥಮ ಮಹಿಳಾ ಕವಿಯತ್ರೀ.ಈಕೆಯನ್ನು ಶರಣ ಚಳವಳಿಯ ಪ್ರಮುಖರಾಗಿ,ಸ್ವಾಭಿಮಾನದ ಪ್ರತೀಕವಾಗಿ,ಸ್ತ್ರೀ ವಾದಿ ಚಳುವಳಿಯ ಪ್ರತಿಪಾದಕಿಯಾಗಿ ಅಕ್ಕರೆಯ ಅಕ್ಕನಾಗಿ ಗುರುತಿಸಬಹುದು.

    ಕನ್ನಡ ಸಾಹಿತ್ಯದಮೊದಲ ಬಂಡಾಯ ಕವಿಯತ್ರೀ ಮತ್ತು ವಚನಗಾರ್ತಿ ಮಹಿಳೆಯ ಪ್ರತಿನಿಧಿಯಾಗಿ ಅಭಿವ್ಯಕ್ತಿಯಲ್ಲಿ ಪುರುಷ ಸಮಾಜವನ್ನು ಪ್ರತಿಭಟಿಸಿದವರು.ಸಾಮಾಜಿಕ ಬದಲಾವನೆಗಾಗಿ ಶ್ರಮಿಸಿದರು.

    ತಂದೆ ನಿರ್ಮಲ ಶೆಟ್ಟಿ ತಾಯಿ ಸುಮತಿಯ ಮಗಳಾಗಿ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಉಡುತಡಿಯಲ್ಲಿ ಚೈತ್ರ ಮಾಸದ ಹುಣ್ಣಿಮೆಯಂದು ಜನಿಸಿದರು.ಈ ಹುಣ್ಣಿ ಮೆಯನ್ನು ಧವನ ಹುಣ್ಣಿಮೆ ಎಂದು ಕರೆಯಲಾಗಿದೆ.

    ಅಕ್ಕ ಪರಮ ವೈರಾಗ್ಯ ಮೂರುತಿಯಾಕೆ.ಲೌಕಿಕ ಪ್ರಪಂಚದ ಲೋಲುಪತೆಗಳನ್ನೆಲ್ಲಾ ಲುಪ್ತವಾಗಿಸಿ ನಿರ್ಲಿಪ್ತವಾಗಿ ನಡೆದು ಹೋದಾಕೆ.ಭೌತಿಕವಾದುದೆಲ್ಲವನ್ನು ತ್ಯಜಿಸಿ,ಬಟ್ಟೆ ಬರೆ ವರ್ಜಿಸಿ,ಕೇಶವನ್ನೇ ಉಡುಪು ಮಾದಿಕೊಂಡಾಕೆ.ಭವಿತನವನ್ನು ತೊರೆದು ಅನುಭಾವಿತನವನ್ನು ಮೆರೆದು ಶರಣ ಚಳವಳಿಯ ಮಂಚೂಣಿಯಲ್ಲಿ ಕಲ್ಯಾ ಣ ಕ್ರಾಂತಿಯನ್ನು ನಡೆಸಿದಾಕೆ.

    ಅಲ್ಲಮಪ್ರಭು, ಬಸವಣ್ಣ, ಚನ್ನಬಸವ ಣ್ಣ ಅಂಥವರ ಶರಣ ಶ್ರೇಷ್ಠರ ಸಮಕಾಲೀನಳಾಗಿ ಅವರುಗಳ ಸಮಕ್ಕೆ ನಿಂತು ಶ್ರೇಷ್ಠ ವಚನಗಳ ನ್ನು ರಚಿಸಿದ ಕನ್ನಡದ ಪ್ರಥಮ ಕವಿಯತ್ರೀ ಅಕ್ಕಮಹಾದೇವಿ. ಶಿವನನ್ನೇ ಪತಿಯೆಂದು ಪರಿಭಾವಿಸಿ ಚೆನ್ನ ಮಲ್ಲಿಕಾರ್ಜುನನನ್ನೆ ವರಿಸಿದಾಕೆ..ಚೆನ್ನಮಲ್ಲಿಕಾರ್ಜುನ ಅಂಕಿತ ನಾಮದಲ್ಲಿ ವಚನಗಳನ್ನ ರಚಿಸಿದರು.
    ಶರಣ ಚಳವಳಿಯಲ್ಲಿಎತ್ತರದ ಚೇತನವಾಗಿ ಮೂಡಿಬಂದ ವ್ಯಕ್ತಿತ್ವ ಅಕ್ಕಮಹಾದೇವಿಯದು.

    ಅವರ ಇಡೀ ಜೀವನ ಕಥನ,ಐತಿಹ್ಯ,ವಿಸ್ಮಯ,ಪ್ರಭಾವಗಳಿಂದ ತುಂಬಿವೆ. ಹರಿಹರ ಮಹಾಕವಿ ರಚಿಸಿರುವ ಮಹಾದೆಯಕ್ಕನ ರಗಳೆ,ಸ್ವತಃ ಅಕ್ಕನೇ ರಚಿಸಿರುವ ವಚನಗಳು ಅವರ ವ್ಯಕ್ತಿತ್ವವನ್ನು ಕಟ್ಟಿಕೊಡುವಲ್ಲಿ ಮಹತ್ತರ ಪಾತ್ರವನ್ನುವಹಿಸುತ್ತವೆ.
    ಅಕ್ಕನ ವಚನಗಳು ಕನ್ನಡ ಸಾಹಿತ್ಯದ ಮೌಲಿಕ ಬರವಣಿಗೆಗಳಾಗಿವೆ.ವಚನಕಾರರಲ್ಲಿ ಕಿರಿಯರಾಗಿದ್ದರೂ ವಿಶಿಷ್ಟ ಜೀವನಾನುಭವವನ್ನು ಹೊಂದಿರುವ ಕಾರಣದಿಂದಾಗಿ ಅವರ ವಚನಗಳು ಗಮನಾರ್ಹವಾಗಿವೆ.

    ಸಮಾಜದಲ್ಲಿಪುರುಷರಷ್ಟೇ ಸರಿಸಮಾನ ಸ್ಥಾನ ಮಾನ ಮಹಿಳೆಯಾರಿಗೂ ಕಲ್ಪಿಸಬೇಕೆಂದು 12 ನೇ ಶತಮಾನದಲ್ಲಿಯೆ ಹೋರಾಟ ಮಾಡಿದ ಅಕ್ಕಮಹಾದೇವಿ ಇಂದಿನ ಮಹಿಳೆಯರ ಬದುಕಿಗೆ ಆದರ್ಶಪ್ರಾಯ.ಅಂದು ಸಮಾಜದಲ್ಲಿ ಇದ್ದಂತಹ ಅಂಕುಡೊಂಕುಗ ಳನ್ನು ತಿದ್ದಿ ಸಾಮರಸ್ಯ ಮೂಡಿಸಲು ಶ್ರಮಿಸಿದ ಅಕ್ಕ ಮಹಾದೇ ವಿಯ ಹೆಸರುಇತಿಹಾಸದ ಪುಟದಲ್ಲಿ ಉಳಿದುಕೊಂಡಿ ದ್ದು,ಅವರ ಆದ್ರಶಗ ಳು ಇಂದಿನ ಮಹಿಳೆಯರಿಗೆ ದಾರಿದೀಪವಾಗಿದೆ.

    ” ಯೋಗಾಂಗ ತ್ರೀವಿಧಿ” ಅಕ್ಕನ ಪ್ರಮುಖ ಕೃತಿ.ಇದು 67 ತ್ರಿಪದಿ ಗಳಲ್ಲಿ ರಚಿತ ವಾಗಿದೆ.ಈಕೆ ಶಿವಭಕ್ತೆ.ಕೈ ಹಿಡಿದ ಗಂಡ ಅದರಲ್ಲೂ ರಾಜನಾಗಿದ್ದವನನ್ನು ತಿರಸ್ಕರಿಸಿ, ಸಾಂಪ್ರದಾಯಿಕ ಸಮಾಜದ ವಿವಾಹದ ನಿಯಮಗಳನ್ನು ಗಾಳಿಗೆ ತೂರಿ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿ ಗೆ ದೊರೆತಿದ್ದ ಕೀಳರಿಮೆ ಸ್ಥಾನ ವನ್ನುಪ್ರತಿಭ ಟಿ ಸಿಯಶಸ್ವಿಯಾದದ್ದು ಒಂದು ದೊಡ್ಡ ಸಾಧನೆಯೇ.

    ಅಕ್ಕನ ಕಾವ್ಯದ ಗುಣಗಳು ಒಂದು ವೇದನೆ ಇನ್ನೊದು ನಿವೇದನೆ

    ತಿ.ನಂ.ಶ್ರೀ. ಅವರು ಹೇಳಿರುವಂತೆ ಅಕ್ಕನ “ವಚನಗಳ ಬಹುಭಾಗ ನಿಜವಾಗಿಯೂ ರಸಾರ್ದ್ರ ವಾದದ್ದು, ಉಪಮಾನಗಳಿಂದ ಚಿತ್ರ ಕಲ್ಪನೆಗಳಿಂದ ಮನೊಹರವಾಗಿರತಕ್ಕದ್ದು.ಆಕೆಯದು ಕವಿ ಹೃದಯಕವಿಯ ಕಣ್ಣು ಎಂಬುದನ್ನು ಸಾರತಕ್ಕದ್ದು” ಎಂಬ ಮಾತು ನಿಜಕ್ಕೂ ಪ್ರಶಂ ಸ ನೀಯವಾದುದು.
    ಶೂನ್ಯ ಸಂಪಾದನೆಕಾರರು ಮಹಾದೇವಿ ಅಕ್ಕನ ಸಂಪಾದನೆ ಎಂಬ ಒಂದು ಅಧ್ಯಾಯವನ್ನೆ ರಚಿಸಿ ಅವರ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆ.ಹರಿಹರ ಕವಿಯ ಮಹಾದೆವಿಯಕ್ಕನ ರಗಳೆ, ಎಚ್.ತಿಪ್ಪೇರುದ್ರಸ್ವಾಮಿ ಅವರ ಕದಳಿಯಾ ಕರ್ಪೂರ ಅಕ್ಕನವರ ವ್ಯಕ್ತಿತ್ತ್ವ ವನ್ನು ಕಟ್ಟಿ ಕೊಡುವ ಸಮರ್ಥ ಬರಹಗಳಾಗಿವೆ.
    ವಚನ ಸಾಹಿತ್ಯಾಕಾಶದ ಉಜ್ವಲ ನಕ್ಷತ್ರ ವಾಗಿ,ಆದರ್ಶ ಮಹಿಳೆ ಯಾಗಿ ಕಂಡು ಬರುವ ಅಕ್ಕನ ವಚನಗಳು ಕನ್ನಡದ ಸ್ತ್ರೀ ಸಂ ವೇದ ನಾ ಅಭಿವ್ಯಕ್ತಿಯ ಮೊದಲ ದಾಖಲೆ ಗಳಾಗಿ ಅಚ್ಚರಿಯನ್ನು ಉಂಟುಮಾಡಿವೆ.

    ರತ್ನಾ ಶ್ರೀನಿವಾಸ್ ಅವರು ಮೂಲತಃ ಹಾಸನ ಜಿಲ್ಲೆ ಅರಸೀಕೆರೆ ಯವರು.  ಪ್ರಾಥಮಿಕ ಪದವಿಯನ್ನು ಅರಸೀಕೆರೆಯಲ್ಲಿ ಪಡೆದು ಮುಂಬಯಿನಲ್ಲಿ  ಎಂ.ಎ ಎಂ.ಫಿಲ್  ಪಡೆದು ಪ್ರಸ್ತುತ ಆದಿತ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ & ರಿಸರ್ಚ್, ಯಲಹಂಕ, ಇಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.  ಇವರ ಚಾರುವಸಂತದ ಆಯಾಮ ಅನನ್ಯತೆ ಸಂಪ್ರಬಂಧದ  ಪುಸ್ತಕವಾಗಿ ಅಭಿಜಿತ್ ಪ್ರಕಾಶನ ಮುಂಬೈನಿಂದ ಪ್ರಕಟವಾಗಿದೆ.


    spot_img

    More articles

    2 COMMENTS

    LEAVE A REPLY

    Please enter your comment!
    Please enter your name here

    Latest article

    error: Content is protected !!