33.3 C
Karnataka
Tuesday, May 14, 2024

    CHITRASANTHE-2023; ಚಿತ್ರಕಲಾ ಪರಿಷತ್ತಿನಲ್ಲಿ ಚಿತ್ರ ಚಿತ್ತಾರದ ವೈಭವ – ಮತ್ತೆ ಬಂತು ಚಿತ್ರ ಸಂತೆ@20

    Must read

    ಬಳಕೂರು ವಿ ಎಸ್ ನಾಯಕ

    ಬೆಂಗಳೂರಿನಲ್ಲಿ ಸಂತೆ ಗಳೆಂದರೆ ಏನೋ ಆಕರ್ಷಣೆ ಜನರು ಹೊಸತನ್ನು ಬಯಸಿ ಆ ಕಡೆಗೆ ಹೋಗಿ ಬರೋಣವೆಂದು ಸಾಗುವುದು ಸಹಜ. ಅದರಲ್ಲಿಯೂ ನವನವೀನ ಚಿತ್ರಗಳನ್ನು ಬಿಂಬಿಸುವ ಚಿತ್ರಸಂತೆಯ ಸೌಂದರ್ಯವನ್ನು ಸವಿಯಲು ವಾರದ ಕೊನೆಯ ದಿನದ ತಮ್ಮ ಹಾಜರಿಯನ್ನು ಅಲ್ಲಿ ಹಾಕಿಬಿಡುತ್ತಾರೆ. ಏಕೆಂದರೆ ಕರ್ನಾಟಕ ಚಿತ್ರಕಲಾ ಪರಿಷತ್ತಿನ 20ನೆಯ ಚಿತ್ರಸಂತೆಗೆ ಇನ್ನೂ ಬೆರಳೆಣಿಕೆಯಷ್ಟು ದಿನ ಇರುವುದು ಪ್ರತಿವರ್ಷದಂತೆ ಈ ವರ್ಷವೂ ಕೂಡ ಹಮ್ಮಿಕೊಂಡಿರುವ ವಾರ್ಷಿಕ ಚಿತ್ರಸಂತೆಗೆ ಹಲವಾರು ಕಲಾವಿದರು ಕಲಾಸಕ್ತರು ಕಾಯುತ್ತಿರುವುದು ವಿಶೇಷವಲ್ಲ.

    ಚಿತ್ರ ಸಂತೆಯ ಕಲ್ಪನೆಯೂ ಹುಟ್ಟಿದ್ದು ಹೇಗೆ?

    ನಮ್ಮಲ್ಲಿ ಬಹಳಷ್ಟು ಕಲಾವಿದರು ಇದ್ದಾರೆ ಅವರಿಗೆ ತಾವು ರಚಿಸಿದ ಕಲಾಕೃತಿಗಳನ್ನು ಪ್ರದರ್ಶಿಸಲು ಅಥವಾ ಮಾರಾಟ ಮಾಡಲು ಯಾವುದೇ ಸರಿಯಾದ ವೇದಿಕೆ ಸಿಗುವುದಿಲ್ಲ. ಗ್ಯಾಲರಿಗಳಲ್ಲಿ ಹಣಕೊಟ್ಟು ಪ್ರದರ್ಶನ ಮಾಡಲು ಸಾಮರ್ಥ್ಯವಿಲ್ಲದೆ ಇರಬಹುದು. ಅದಕ್ಕಾಗಿ ಅಂತಹ ಕಲಾವಿದರಿಗೆ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿ ಮಾರಾಟ ಮಾಡಲು ಚಿತ್ರಸಂತೆಯ ಮೂಲಕ ಕರ್ನಾಟಕ ಚಿತ್ರಕಲಾ ಪರಿಷತ್ತು ಅವಕಾಶ ಮಾಡಿಕೊಡುತ್ತಿರುವುದು ಶ್ಲಾಘನೀಯ. ಈ ಸಂದರ್ಭದಲ್ಲಿ ಹಲವಾರು ಕಲಾವಿದರಿಗೆ ಮತ್ತು ಕಲಾಸಕ್ತರಿಗೆ ಉತ್ತಮ ಬಾಂಧವ್ಯ ಮೂಡುತ್ತದೆ.

    ಸಾಮಾನ್ಯವಾಗಿ ಸಂತೆಯ ಮಾದರಿಯಲ್ಲಿಯೇ ಚಿತ್ರಸಂತೆಯನ್ನು ಕರ್ನಾಟಕ ಚಿತ್ರಕಲಾ ಪರಿಷತ್ತು ಕುಮಾರಕೃಪಾ ರಸ್ತೆಯಲ್ಲಿ ಆಯೋಜನೆ ಮಾಡುತ್ತಿರುವುದು ವಿಶೇಷವಾಗಿದೆ. ಚಿತ್ರ ಕಲಾವಿದರಿಗೆ ಸಹಾಯ ಮಾಡುವ ದೃಷ್ಟಿಯಿಂದ ಮತ್ತು ಕಲಾವಿದರು ತಾವು ರಚಿಸಿದ ಶಿಲ್ಪಗಳು ಚಿತ್ರಗಳು ಅದರಲ್ಲಿ ವಿಭಿನ್ನ ರೀತಿಯ ಕಲಾತ್ಮಕ ಚಿತ್ರಗಳು ಕೂಡ ಈ ಸಂತೆಯಲ್ಲಿ ನಮಗೆ ನೋಡಲು ಸಿಗುತ್ತದೆ.

    ಚಿತ್ರಕಲಾ ಪರಿಷತ್ತಿನಲ್ಲಿ ಆ ದಿನವಿಡೀ ಕಲಾ ಲೋಕವೇ ಧರೆಗಿಳಿದುಬಂದಂತೆ ಗೋಚರವಾಗುತ್ತದೆ. ಚಿತ್ರಕಲಾ ಪರಿಷತ್ತಿನ ರಸ್ತೆಯ ತುಂಬಾ ಚಿತ್ರ ಚಿತ್ತಾರದ ವೈಭವ ಒಂದುಕ್ಷಣ ದಾರಿಯಲ್ಲಿ ಸಾಗುತ್ತಿದ್ದ ವರಿಗೆ ಕಲಾವಿದನ ಕೈಚಳಕದಲ್ಲಿ ರಚಿಸಿದ ಚಿತ್ರ ಚಿತ್ತಾರಗಳು ಕಲಾ ಔತಣವನ್ನು ಉಣಬಡಿಸುವುದು ಸತ್ಯ. ಅಚ್ಚರಿಯ ಕಲಾ ತಾಣವೇ ಧರೆಗಿಳಿದು ಬಂದ ಅನುಭವ ಒಂದು ಕ್ಷಣ ಬದುಕಿನ ಜಂಜಾಟ ಮರೆತು ಇಲ್ಲಿಯೇ ಒಂದು ಕ್ಷಣ ವಿಹರಿಸಿ ಬಿಡೋಣ ಎನ್ನುವಷ್ಟು ಸಂಭ್ರಮ ತುಂಬಿ ತುಳುಕುತ್ತಿರುತ್ತದೆ

    ಈ ಚಿತ್ರಸಂತೆ ಚಿತ್ರ ಕಲಾವಿದರಿಗೆ ಅರ್ಪಣೆ

    ಪ್ರತಿವರ್ಷ ನಡೆಯುವ ಚಿತ್ರಸಂತೆಯಲ್ಲಿ ಬೇರೆ ಬೇರೆ ರೀತಿಯ ಮಾದರಿಯಲ್ಲಿ ಆಯೋಜನೆ ಮಾಡಲಾಗುತ್ತದೆ. ಆದರೆ ಈ ವರ್ಷನಮ್ಮ ನಾಡಿನ ಎಲ್ಲಾ ಕಲಾವಿದ ರಿಗೆ ಅರ್ಪಣೆ ಮಾಡಲಾಗುತ್ತದೆ

    ಒಂದೇ ದಿನದ ವಾರ್ಷಿಕ ಕಲಾ ಸಂತೆ

    ಎಲ್ಲರಿಗಾಗಿ ಕಲೆ ಕಲಾ ಸಂತೆಯ ಮುಖ್ಯ ವೇದವಾಕ್ಯ ವಾಗಿದ್ದು ಸರ್ವರಿಗೂ ಕಲಾಕೃತಿ ದೊರೆಯುವಂತಾಗಬೇಕು ಕಲಾಸಕ್ತರು ಬಂಧು ಕಲಾವಿದರ ಕಲಾಕೃತಿಗಳನ್ನು ಕೊಂಡು ಅವರನ್ನು ಪ್ರೋತ್ಸಾಹಿಸಬೇಕು ಅದರ ಜೊತೆಗೆ ಎಲ್ಲರಿಗೂ ಕಲೆ ತಲುಪುವಂತಾಗಬೇಕು ಎಂಬ ಉದ್ದೇಶದಿಂದ ಈ ಚಿತ್ರಸಂತೆಯನ್ನು ಆಯೋಜಿಸಲಾಗಿದೆ

    ರಾಜ್ಯ ದೇಶ ವಿದೇಶಗಳಿಂದ ಚಿತ್ರಸಂತೆಗೆ ಕಲಾವಿದರು

    ನಮ್ಮ ನಾಡಿನ ಈ ಚಿತ್ರಸಂತೆಗೆ ಬೇರೆ ಬೇರೆ ಕಡೆಯಿಂದ ಕಲಾವಿದರು ಬರುವುದು ವಿಶೇಷ. ಒಂದೇ ಸೂರಿನಲ್ಲಿ ವಿಭಿನ್ನ ಕಲಾವಿದರನ್ನು ನೋಡುವ ಅವಕಾಶ, ಕಲಾತ್ಮಕ ವಿಷಯಗಳನ್ನು ಚರ್ಚೆ ಮಾಡುವ ಅವಕಾಶ, ವಿಚಾರವಿನಿಮಯ ಎಲ್ಲವೂ ಕೂಡ ಇಲ್ಲಿ ನಡೆಯುತ್ತದೆ . ನಮಗೆ ಗೊತ್ತಿರದ ಹಲವಾರು ಕಲೆಗಳನ್ನು, ಕಲಾಪ್ರಕಾರಗಳನ್ನು ಇಲ್ಲಿ ಬರುವ ಕಲಾವಿದರು ಪರಿಚಯ ಮಾಡಿಕೊಡುತ್ತಾರೆ ಈ ವಿಶೇಷವಾದ ಅವಕಾಶವನ್ನು ಎಲ್ಲರೂ ಪಡೆದುಕೊಳ್ಳುವರು.

    ಕಲಾವಿದರಿಗೆ ಊಟ ವಸತಿ ವ್ಯವಸ್ಥೆ

    ಚಿತ್ರಸಂತೆಗೆ ಬರುವ ಕಲಾವಿದರಿಗೆ ಚಿತ್ರಕಲಾ ಪರಿಷತ್ ಉಚಿತವಾಗಿ ಊಟ ಮತ್ತು ವಸತಿ ವ್ಯವಸ್ಥೆ ಮಾಡಿಕೊಡುತ್ತದೆ. ಒಟ್ಟಾರೆ ಕಲಾವಿದರನ್ನು ಬೆಳೆಸುವುದು ಕಲೆಯನ್ನು ಉಳಿಸುವುದು ಇದರ ಉದ್ದೇಶವಾಗಿದೆ. ಸಾಮಾನ್ಯವಾಗಿ ಚಿತ್ರಸಂತೆಗೆ ಬರುವ ಕಲಾವಿದರು ಬೇರೆ ಕಡೆಗೆ ಹೋಗಿ ವಸತಿ ಮಾಡಿಕೊಂಡು ಅದರ ವೆಚ್ಚವನ್ನು ಭರಿಸಲು ಕಷ್ಟವಾಗುತ್ತದೆ ಅದಕ್ಕಾಗಿ ಕಲಾವಿದರ ಕ್ಷೇಮಕ್ಕಾಗಿ ಚಿತ್ರಕಲಾ ಪರಿಷತ್ ವ್ಯವಸ್ಥೆ ಮಾಡುತ್ತಿದೆ

    ವಿದ್ಯಾರ್ಥಿ ಸ್ವಯಂಸೇವಕರು

    ಚಿತ್ರಸಂತೆಯ ದಿನ ಚಿತ್ರಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ಕಾರ್ಯನಿರ್ವಹಿಸುತ್ತಾರೆ. ಚಿತ್ರಕಲಾವಿದರಿಗೆ ಬೇಕಾಗುವ ಊಟ ನೀರು ಇನ್ನಿತರ ವಸ್ತುಗಳನ್ನು ಸ್ಥಳದಲ್ಲಿಯೇ ಅವರಿಗೆ ಪೂರೈಕೆ ಮಾಡುವುದು ಮತ್ತು ಅಗತ್ಯ ಸಹಾಯವನ್ನು ಮಾಡುವ ಕೆಲಸ ನೋಡಿಕೊಳ್ಳುತ್ತಾರೆ.

    ಅಂಗವಿಕಲ ಮತ್ತು ವಯಸ್ಸಾದ ಕಲಾವಿದರಿಗೆ ಪರಿಷತ್ತಿನ ಆವರಣದಲ್ಲಿ ಸ್ಟಾಲ್ ಗಳು

    ಚಿತ್ರಸಂತೆಗೆ ಸಾಮಾನ್ಯವಾಗಿ ಪ್ರತಿಭಾವಂತ ಅಂಗವಿಕಲ ಕಲಾವಿದರು ಮತ್ತು ವಯಸ್ಸಾದ ಚಿತ್ರಕಲಾವಿದರು ಬರುವುದರಿಂದ ಅವರ ಹಿತದೃಷ್ಟಿಯಿಂದ ಚಿತ್ರಕಲಾ ಪರಿಷತ್ತಿನ ಆವರಣದ ಒಳಗೆ ಅವರಿಗೆ ಅಂಗಡಿಗಳನ್ನು ಹಾಕಿ ಕಲಾಕೃತಿಗಳನ್ನು ಮಾರಾಟ ಮಾಡಲು ಅವಕಾಶ ಮಾಡಿಕೊಡಲಾಗುತ್ತದೆ. ಇಂತಹ ಕಲಾವಿದರಿಗೆ ಪ್ರೋತ್ಸಾಹಿಸುವ ಕೆಲಸ ಚಿತ್ರಕಲಾ ಪರಿಷತ್ತು ಮಾಡುತ್ತಿದೆ.

    ಈ ಚಿತ್ರಸಂತೆಯಲ್ಲಿ ನೂರು ರೂಪಾಯಿಯಿಂದ ಚಿತ್ರಗಳು ಮಾರಾಟವಾಗುತ್ತದೆ ಎಲ್ಲರಿಗೂ ಕೈಗೆಟುಕುವ ದರದಲ್ಲಿ ಕಲಾಕೃತಿಗಳು ಸಿಗುವಂತಾಗಬೇಕು ಎಲ್ಲರ ಮನೆ ಮನೆಗೆ ಒಂದೊಂದು ಕಲಾಕೃತಿಗಳನ್ನು ತೆಗೆದುಕೊಂಡು ಹೋಗಬೇಕು ಎಲ್ಲರ ಮನೆಗೆ ಒಂದೊಂದು ಕಲಾಕೃತಿಗಳನ್ನು ಒಯ್ಯಬೇಕು ಎಂಬ ಉದ್ದೇಶದಿಂದ ಆಯೋಜಿಸಲಾಗಿದೆ ಚಿತ್ರಸಂತೆಯ ದಿನ ಚಿತ್ರಕಲೆ. ಶಿಲ್ಪಕಲೆ ಗ್ರಾಫಿಕ್ ಅಲ್ಲದೆ ಮಧುಬನಿ ವಿವಿಧ ಶೈಲಿಯ ಸಾಂಪ್ರದಾಯಿಕ ಚಿತ್ರಗಳನ್ನು ನೋಡಬಹುದು.

    ಚಿತ್ರಕಲಾ ಸಮ್ಮಾನ್ ಮತ್ತು ಪ್ರೊ. ಎಂ. ಎಸ್. ನಂಜುಂಡರಾವ್ ಪ್ರಶಸ್ತಿ ಪ್ರದಾನ

    ಪ್ರತಿವರ್ಷ ಕರ್ನಾಟಕ ಚಿತ್ರಕಲಾ ಪರಿಷತ್ ನಾಡಿನ ಹಿರಿಯ ಪ್ರಸಿದ್ಧ ಕಲಾವಿದರನ್ನು ಗುರುತಿಸಿ ಚಿತ್ರಕಲಾ ಸಮ್ಮಾನ್ ಮತ್ತು ಎಂಎಸ್ ನಂಜುಂಡರಾವ್ ಪ್ರಶಸ್ತಿ ಪ್ರಧಾನ ಮಾಡುತ್ತಿದೆ ಈ ಪ್ರಶಸ್ತಿ ಗಳನ್ನು ಚಿತ್ರಸಂತೆಯ ಹಿಂದಿನ ದಿನ ಪ್ರದಾನ ಮಾಡಲಾಗುತ್ತದೆ. ಈ ರೀತಿ ಮಾಡುವದರಿಂದ ಕಲಾವಿದ ರಿಗೆ ಪ್ರೋತ್ಸಾಹ ಮತ್ತು ಗೌರವಿಸಿದ ಹಾಗೆ ಆಗುತ್ತದೆ.

    ಸಾಮಾನ್ಯವಾಗಿ ಚಿತ್ರಸಂತೆಗೆ ಸುಮಾರು ಮೂರು ಲಕ್ಷಕ್ಕಿಂತ ಹೆಚ್ಚು ಜನ ಬರುವ ನಿರೀಕ್ಷೆ ಇದೆ ಇದರ ಜೊತೆಗೆ ಬಹಳಷ್ಟು ಕಲಾವಿದರು ಬಂದು ತಮ್ಮ ಕಲಾಪ್ರಕಾರದ ಪರಿಚಯ ಮತ್ತು ವಿಭಿನ್ನ ಕಲಾಕೃತಿಗಳನ್ನು ಪರಿಚಯಿಸುವುದು ಕಲಾ ವಿನಿಮಯ ಚರ್ಚೆ ಇಲ್ಲಿ ಒಂದೇ ಸೂರಿನಲ್ಲಿ ನಡೆಯಲಿದೆ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಗ್ಯಾಲರಿಯಲ್ಲಿ ಆ ದಿನ ಹಲವಾರು ಕಲಾಕೃತಿಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ ಇದಕ್ಕೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ ಜನವರಿ 8 ಭಾನುವಾರದಂದು ನಡೆಯುವ ಚಿತ್ರಸಂತೆಗೆ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಾಯಿ ಅವರು ಉದ್ಘಾಟನೆ ಮಾಡಲಿದ್ದಾರೆ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾದ ಡಾ. ಬಿಎಲ್ ಶಂಕರ್ ಅವರು ವಹಿಸಲಿದ್ದಾರೆ


    ಚಿತ್ರ ಸಂತೆ ನಡೆಯುವ ದಿನ
    ಜನವರಿ 8 ಭಾನುವಾರ

    ಸ್ಥಳ:ಕರ್ನಾಟಕ ಚಿತ್ರಕಲಾ ಪರಿಷತ್ತು
    ಕುಮಾರಕೃಪಾ ರಸ್ತೆ ಬೆಂಗಳೂರು


    This image has an empty alt attribute; its file name is V-S-NAIK.jpg

    ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಉಪನ್ಯಾಸಕರಾಗಿರುವ ವಿ. ಎಸ್ . ನಾಯಕರ ಪೂರ್ಣ ಹೆಸರು ವೆಂಕಟದಾಸ್ ಎಸ್ . ನಾಯಕ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಅನೇಕ ಸಂಸ್ಥೆಗಳಲ್ಲಿ ಕಾರ್ಯಕ್ರಮ ಸಂಯೋಜಕರಾಗಿಯೂ ಪರಿಚಿತರು. ದೂರದರ್ಶನದಲ್ಲಿ ಗಾಂಧೀ ವಿಚಾರಧಾರೆ ಕುರಿತು ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ಹಲವಾರು ಸಂಸ್ಥೆಗಳ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.



    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!