24.4 C
Karnataka
Friday, May 17, 2024

    MYSURU DASARA:ಅರಮನೆ ಆವರಣದಲ್ಲಿ ವೈಭವಯುತ ಜಂಬೂಸವಾರಿ

    Must read

    MYSURU OCT 15

    ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ_mysuru Dasara- ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ-jamboo savari- ಕಾರ್ಯಕ್ರಮ ಶುಕ್ರವಾರ ಅರಮನೆ ಆವರಣದಲ್ಲಿ ಸಾಂಪ್ರದಾಯಕವಾಗಿ ಜರುಗಿತು.

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ-basavaraja bommai- ಅವರು ಅರಮನೆಯ ಬಲರಾಮ ದ್ವಾರದ ಬಳಿ ಸಂಜೆ 4.36 ರಿಂದ 4.46 ರೊಳಗೆ ಸಲ್ಲುವ ಮೀನ ಲಗ್ನದಲ್ಲಿ ನಂದಿ ಧ್ವಜಕ್ಕೆ-nandi dhwaja_ ಪೂಜೆಸಲ್ಲಿಸಿದರು. ಬಳಿಕ ದಸರಾ ಮಹೋತ್ಸವದ ಕೇಂದ್ರಬಿಂದು ಜಂಬೂಸವಾರಿಯಲ್ಲಿ 750 ಕೆ.ಜಿ ತೂಕದ ಚಿನ್ನದ ಅಂಬಾರಿಯಲ್ಲಿ ಶ್ರೀ ಚಾಮುಂಡೇಶ್ವರಿಯ ವಿಗ್ರಹವನ್ನು ಎರಡನೇ ಬಾರಿಗೆ ಹೊತ್ತ ಅಭಿಮನ್ಯು, ತನ್ನ ಸಂಗಾತಿಗಳಾದ ಕಾವೇರಿ ಹಾಗೂ ಚೈತ್ರ ಜೊತೆಗೆ ರಾಜಗಾಂಭೀರ್ಯದಿಂದ ಹೆಜ್ಜೆ ಹಾಕುತ್ತ ಸಂಜೆ 5.23ಕ್ಕೆ ವಿಶೇಷ ವೇದಿಕೆಗೆ ಬಂದಿತು.

    ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಿನ್ನದ ಅಂಬಾರಿಯಲ್ಲಿ ಅಲಂಕೃತಗೊಂಡ ಶ್ರೀ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಸಲ್ಲಿಸುತ್ತಿದ್ದಂತೆ ರಾಷ್ಟ್ರಗೀತೆ ಮೊಳಗಿತು. ಇದೇ ವೇಳೆಗೆ 52 ಸೆಕೆಂಡ್‌ಗಳಲ್ಲಿ 21 ಬಾರಿ ಕುಶಾಲತೋಪುಗಳನ್ನು ಅರಮನೆಯ ಹೊರಾವರಣದಲ್ಲಿ ನಗರ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಸಿಡಿಸಿದರು.

    ಬಳಿಕ ಅಂಬಾರಿ ಆನೆಯು ಪೊಲೀಸ್ ಅಶ್ವದಳ, ಕೆ‌ಎಸ್‌ಆರ್‌ಪಿ ಮೌಂಟೇನ್ ಕಂಪನಿ ಬೆಂಗಾವಲಿನಲ್ಲಿ ಸಾಗಿತು. ನೆರೆದಿದ್ದ ಜನರು ಜಂಬೂಸವಾರಿ ಮೆರವಣಿಗೆಯನ್ನು ಕಣ್ತುಂಬಿಕೊಂಡು ಝೇಂಕಾರ ಘೋಷಗಳನ್ನು ಕೂಗಿದರು.

    ಮೆರವಣಿಗೆಯ ಆರಂಭದಲ್ಲಿ ನಿಶಾನೆ ಆನೆ ಧನಂಜಯ ಹಾಗೂ ಗೋಪಾಲಸ್ವಾಮಿ ನಡುವೆ ಅಶ್ವತ್ಥಾಮ ಆನೆಗಳು ಗಾಂಭೀರ್ಯದಿಂದ ಹೆಜ್ಜೆ ಹಾಕಿದವು. ಬಳಿಕ ನಾದಸ್ವರ ಮತ್ತು ಸ್ಯಾಕ್ಸೋಫೋನ್ ಕಲಾವಿದರು ಪ್ರದರ್ಶನ ನೀಡುತ್ತಾ ಸಾಗಿದರು. ನಾದಸ್ವರ, ವೀರಗಾಸೆ, ಚೆಂಡೆ ಮೇಳ, ಮರ ಗಾಲು ವೇಷ, ಚಿಲಿಪಿಲಿ ಗೊಂಬೆ ಕಲಾವಿದರು ಪ್ರದರ್ಶನ ನೀಡುತ್ತಾ ಎಲ್ಲರನ್ನು ರಂಜಿಸಿದರು.

    ಗಮನಸೆಳೆದ ಕಲಾ ತಂಡಗಳು

    ನಾದಸ್ವರ ವಿದ್ವಾನ್ ಆರ್. ನಾಗರಾಜ್ ಮತ್ತು ತಂಡ ಹಾಗೂ ಹಂಪಾಪುರ ಮಹದೇವ್ ತಂಡದಿಂದ ಸುಮಧುರವಾಗಿ ನಾದಸ್ವರ ನುಡಿಸುತ್ತಾ ಸಾಗಿದರು‌. ಮೈಸೂರಿನ ರತ್ನಮ್ಮ ತಂಡ, ಅಂಬಳೆ ಶಿವಣ್ಣ ತಂಡ, ನೀಲಕಂಠ ತಂಡ, ಆನಂದ್ ಕುಮಾರ್ ತಂಡ ಹೆಚ್.ಪಿ ರುದ್ರೇಶ್ ಹಾಗೂ ವೀರಭದ್ರೇಶ್ವರ ವೀರಗಾಸೆ ತಂಡದವರು ವೀರಗಾಸೆ ಕುಣಿತವಾಡುತ್ತ ಮುನ್ನೆಡೆದರು‌.

    ಕೆಂಪಿಸಿದ್ದನಹುಂಡಿ ಮಹದೇವು, ಚಿಕ್ಕಮರಿಯಪ್ಪ, ಕಂಸಾಳೆ ಸಿದ್ದರಾಮು ಹಾಗೂ ಕೃಷ್ಣ ಜನಮನ ಮತ್ತು ತಂಡದಿಂದ ಕಂಸಾಳೆ ಜಾನಪದ ನೃತ್ಯ ಮಾಡಿದರು. ರಮ್ಯ , ಕಿರಣ್, ಕುಮಾರ್, ಸ್ವಾಮಿನಾಯಕ ಮತ್ತು ತಂಡದವರು ಮಾಡಿದ ಡೊಳ್ಳುಕುಣಿತವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

    ಅಮೃತ ಮತ್ತು ತಂಡ, ಪಲ್ಲವಿ ಮತ್ತು ತಂಡದಿಂದ ನಗಾರಿ, ಪಲ್ಲವಿ ಹಾಗೂ ವೈ.ಬಿ ಪ್ರಕಾಶ್ ಮತ್ತು ತಂಡದಿಂದ ಪೂಜಾಕುಣಿತ ಅದ್ಭುತವಾಗಿತ್ತು. ಅಶ್ವಾರೋಹಿ ಪಡೆಯ ಪ್ರಧಾನ ಕಮಾಂಡೆಂಟ್ ಕೆಎಆರ್‌ಪಿ ಮೌಂಟೆಂಡ್ ಕಂಪನಿ ತುಕಡಿಗಳು ಶಿಸ್ತುಬದ್ಧವಾಗಿ ಹೆಜ್ಜೆ ಹಾಕಿದವು.

    ಚಿತ್ತಾಕರ್ಷಕ ಸ್ತಬ್ದಚಿತ್ರಗಳು

    ಈ ಬಾರಿಯ ದಸರಾ ಜಂಬೂಸವಾರಿಯಲ್ಲಿ ಒಟ್ಟು 6 ವರ್ಣರಂಜಿತ ಸ್ತಬ್ಧಚಿತ್ರಗಳು ಎಲ್ಲರನ್ನೂ ಆಕರ್ಷಿಸಿದವು. 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ‘ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ’ ಸ್ತಬ್ದಚಿತ್ರವು ಮೊದಲಿಗೆ ಸಾಗುವ ಮೂಲಕ ಎಲ್ಲರ ಚಿತ್ತ ನೆಟ್ಟಿತು.

    ಬಳಿಕ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ‘ಬಹುವಸತಿ ಸಂಕೀರ್ಣ’, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ‘ಕೊರೊನಾ ಮುಕ್ತ ಕರ್ನಾಟಕ’ ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ‘ಸಮಗ್ರ ಕೃಷಿ’, ಮತ್ತು ದಸರಾ ಉಪಸಮಿತಿಯಿಂದ ‘ಪರಿಸರ ಸಂರಕ್ಷಣೆ’, ‘ಅರಮನೆ ಆನೆಬಂಡಿ’ ಸ್ತಬ್ಧ ಚಿತ್ರಗಳು ಸಾಗಿದವು.

    ಪುಷ್ಪಾರ್ಚನೆ ವೇಳೆ ರಾಜ್ಯ ಹೃಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ, ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್, ಮೇಯರ್ ಸುನಂದ ಪಾಲನೇತ್ರ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ನಗರ ಪೋಲಿಸ್ ಆಯುಕ್ತ ಡಾ.ಚಂದ್ರಗುಪ್ತ, ಮೈಸೂರು ರಾಜಮನೆತನದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಉಪಸ್ಥಿತರಿದ್ದರು.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!