34.1 C
Karnataka
Monday, May 13, 2024

    ಮಾತಪಿತರನು ದೇವರೆಂದ ದೇವರದೇವ!

    Must read

    ಶಿವಪ್ರಸಾದ್ ಬೋಳಂತೂರು

    ಪ್ರಸನ್ನ ವದನ ಗಣೇಶ ಸರಳತೆಯ ಪ್ರತೀಕವೂ ಹೌದು. ಅನೇಕ ಹೆಸರುಗಳಿಂದ ಪೂಜಿಸಲ್ಪಡುವ ಗಣಪ, ಮುಕ್ಕೋಟಿ ದೇವತೆಗಳ ದೇವರದೇವ, ಮಾತಾಪಿತರನ್ನೇ “ತ್ವಮೇವ ಸರ್ವಂ ಮಮ ದೇವದೇವ” ಎಂದು ಪೂಜಿಸುವವನೆಂದು ಪುರಾಣಗಳು ಹೇಳುತ್ತವೆ.

    ಆಹಾ…! ಲಂಬೋದರನದು ಎಂತಹಾ ವ್ಯಕ್ತಿತ್ವ , ಅಗಣಿತ ದೈವೀ ಶಕ್ತಿಗಳು ಆತನಲ್ಲಿವೆ… ಬ್ರಹ್ಮಚರ್ಯ ಪರಿಪಾಲನಾ ಏಕಾಗ್ರತೆಯ ಶಿಖರವೂ ಆಗಿರುವನು, ಲೋಕಾಟ್ಟಹಾಸಗೈಯುತ್ತಿದ್ದ ಮೂಷಿಕಾಸುರನೇ ಸ್ವಯಂ ಗಣಪನ ವಾಹನವಾಗಿರುವನು… ಲೋಕದಲಿ ಉದರ ತುಂಬಲು ಖಾದ್ಯ ಬಹಳಷ್ಟಿದ್ದರೂ ಮೋದಕವನ್ನೇ ಭೋಗಿಸುವನು…ವ್ಯಾಸರಿಗೆ ಮಹಾಭಾರತವನೇ ಬರೆದು ಕೊಟ್ಟವನು.. ಎಂಬೆಲ್ಲಾ ಕಥೆಗಳ ಕಥಾನಾಯಕನಾಗಿದ್ದರೂ ಆತ ಒಮ್ಮೆಯೂ ಗರ್ವದಿಂದ ವರ್ತಿಸಿದ್ದೇ ಇಲ್ಲ!

    ಜಗಜ್ಜನರ ಮೊದಲ ಪೂಜಿತ ದೇವನಾದರೂ, ಮದತುಂಬಿ ಮೆರೆದಾಡದೆ ಶಿವಪಾರ್ವತಿಯರನ್ನೇ ಮೆರೆಯಿಸಲಿಲ್ಲವೇ … ಜಗಬೆಳಗೋ ಚಂದ್ರನ ಜರೆಯಲಿಲ್ಲವೇ…ತಾಯಿಗೆ ಕೊಟ್ಟ ಮಾತನ್ನು ಉಳಿಸಿ ಗಜಮುಖನಾದವನು….ಜಗವನ್ನು ಪ್ರದಕ್ಷಿಣೆ ಹಾಕಿ ಮೊದಲಾರು ಬರುವರೆಂದು ಸ್ಪರ್ಧೆ ಏರ್ಪಟ್ಟು ಸುಬ್ರಮಣ್ಯ ನವಿಲೇರಿ ಹೊರಟಾಗ ಇಲಿಯೇರದೆ ಮಾತಾಪಿತರೇ ತನ್ನ ಜಗವೆಂದು ಪ್ರದಕ್ಷಿಣೆ ಹಾಕಿ ಜಯಿಸಿದವನು ..ಹಾಗಾಗಿಯೇ ಬಾಲ ಗಣೇಶ ಮುಕ್ಕೋಟಿ ದೇವತೆಗಳ ಪ್ರೀತಿಯನ್ನು ಪಡೆದಿದ್ದ ..ಆತನ ವ್ಯಕ್ತಿತ್ವ ಆತನನ್ನು ದೇವರನ್ನಾಗಿಸಿತು ಹೊರತು ಬಿರುದುಗಳಲ್ಲ.

    ಇಂದು ಗಣೇಶನ ಹಬ್ಬ, ಆತನ ಕತೆಗಳನ್ನು ಹಾಡು ಕಟ್ಟಿ ಹೇಳುವವರು ನಾವು. ವಿಧವಿಧವಾಗಿ ಪೂಜಿಸುವವರು ನಾವು, ವೈವಿಧ್ಯ ಖಾದ್ಯಗಳನ್ನು ಅರ್ಪಿಸಿ ಸೇವಿಸುವವರು ನಾವು. ಆದರೆ ಗಣೇಶನ ವ್ಯಕ್ತಿತ್ವವನ್ನು ಅಳವಡಿಸಿಕೊಳ್ಳದೆ ಲೌಕಿಕ ಹಿತದೊಳಗೆ ಮೋಹಿತರಾಗಿ ಬದುಕುತ್ತಿದ್ದೇವೆ, ಇದೆಂತಹ ವಿಪರ್ಯಾಸ ! ಗಣಪನ ಹೆಸರು ಹೇಳಿ ಹಣವನ್ನು ಅದೆಷ್ಟೋ ಬಾರಿ ದುರ್ಬಳಕೆ ಮಾಡಿದ್ದೇವೆ. ಅದನ್ನು ತೊರೆದು ಆತನ ವ್ಯಕ್ತಿತ್ವವನ್ನೆ ನಾವು ಅಳವಡಿಸಿಕೊಳ್ಳಬಹುದಲ್ಲವೇ. ಗಣೇಶ ತನ್ನ ತಾಯಿಗೆ ಕೊಟ್ಟ ಮಾತನ್ನು ತಪ್ಪಿ ನಡೆಯದಂತೆ ನಾವೂ ಕೂಡ ನಮ್ಮ ಜೀವನದಲ್ಲಿ ತಂದೆ ತಾಯಿಯರನ್ನು ಅವರ ಇಚ್ಛೆಗೆ ಒಡಕು ಬರದಂತೆ ಜೀವನ ನಡೆಸಬಹುದಲ್ಲವೇ…ಕ್ಷಣಿಕ ಸುಖದ ಆಸೆಗೆ ಮರುಳಾಗಿ ನಮ್ಮ ಹೆತ್ತವರನ್ನು ದೂಷಿಸುವ ನಾವುಗಳು, ಗಣಪನನ್ನು ಆರಾಧಿಸುವ ಜೊತೆಗೆ ಮಾತಾಪಿತರನ್ನೆ ದೇವರನ್ನ ಬಹುದಲ್ಲವೆ?


    ಶಿವಪ್ರಸಾದ್ ಬೋಳಂತೂರು ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು ಇಲ್ಲಿ ಪ್ರಥಮ ಬಿ.ಎ.ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿ

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!