ಟಾಪ್ 10ತಾಜಾ ವರದಿ ಈ ಹೊತ್ತಿನ ಹೆಡ್ ಲೈನ್ By ಕನ್ನಡಪ್ರೆಸ್.ಕಾಮ್ ವರದಿ - June 19, 2021 3 332 FacebookTwitterPinterestWhatsApp ರಾಜ್ಯದ ಹಲವೆಡೆ ಪ್ರವಾಹ ಸ್ಥಿತಿ .ಕರಾವಳಿ, ಕೊಡಗು ಬೆಳಗಾವಿಯಲ್ಲಿ ಮಳೆ ಅಬ್ಬರ. ಡಿಸಿಗಳೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ ವಿಡಿಯೋ ಸಭೆ. 21 ರಿಂದ ಮತ್ತಷ್ಟು ಅನ್ ಲಾಕ್. ಇಂದು ಸಂಜೆ ನಿರ್ಧಾರ. ಸಚಿವರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಸಂಜೆ ಸಿಎಂ ಸಭೆ ರಾಜ್ಯದಲ್ಲಿ ನಾಯಕತ್ವ ಬದಲಿಲ್ಲ ಕೆ ಎಸ್ ಈಶ್ವರಪ್ಪ ಮತ್ತು ಬಸವರಾಜ ಬೊಮ್ಮಾಯಿ ಪುನರುಚ್ಚಾರ ಮಹಾರಾಷ್ಟ್ರ ನೀರಾವರಿ ಸಚಿವ ಜಯಂತ್ ಪಾಟೀಲ್ ಅವರೊಂದಿಗೆ ಮುಖ್ಯಮಂತ್ರಿ ಸಭೆ . ಕೃಷ್ಣಾ ಮತ್ತು ಭೀಮಾ ನದಿ ಪ್ರವಾಹ ನಿಯಂತ್ರಣ ಚರ್ಚೆ. ಧೂದ್ ಗಂಗಾಯೋಜನೆ ಶೀಘ್ರ ಪೂರ್ಣಕ್ಕೆ ನಿರ್ಧಾರ. ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬೇಸಿಗೆಯಲ್ಲಿ ನೀರು ಪಡೆದು ಮಳೆಗಾಲದಲ್ಲಿ ವಾಪಸ್ಸು ನೀಡಲು ನಿರ್ಧಾರ . ದೇಶ ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ಬರ್ತ್ ಡೇ.ಗಣ್ಯರಿಂದ ಶುಭಾಶಯ ದೇಶದಲ್ಲಿ ಕೋವಿಡ್ ಸೋಂಕು ಮತ್ತಷ್ಟು ಇಳಿಕೆ 74 ದಿನಗಳಲ್ಲೇ ಕನಿಷ್ಠ ಕೇಸು ದಾಖಲು. ಗುಣಮುಖರಾಗುತ್ತಿರುವವರ ಪ್ರಮಾಣ ಶೇಕಡ 96.16ಕ್ಕೆ ಏರಿಕೆ. ರಾಜ್ಯದಲ್ಲೂ ಸೋಂಕು ಇಳಿಮುಖ ಕೋವಿಡ್ ಮೂರನೇ ಅಲೆ ಅನಿವಾರ್ಯ. ಇನ್ನು 6 ರಿಂದ 8 ವಾರದಲ್ಲಿ ದೇಶಕ್ಕೆ ಅಪ್ಪಳಿಸಲಿದೆ ಎಂದು AIMS ಮುಖ್ಯಸ್ಥಡಾ. ರಂದೀಪ್ ಗುಲೇರಿಯಾ ಈಗ್ಗೆ ಸ್ವಲ್ಪ ಹೊತ್ತಿಗೆ ಮುಂಚೆ NDTV ಗೆ ತಿಳಿಸಿದ್ದಾರೆ
👍
👍, useful
Good initiative and new trend in digital media