ಹೈ ಕಮಾಂಡ್ ಕೇಳಿದರೆ ಪದತ್ಯಾಗಕ್ಕೆ ಸಿದ್ಧ ಎಂದು ಮೊನ್ನೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಹೇಳಿರುವುದು ರಾಜ್ಯ ರಾಜಕೀಯದಲ್ಲಿ ಸಂಚಲನವನ್ನೇ ಎಬ್ಬಿಸಿದೆ. ಯಡಿಯೂರಪ್ಪ ಅವರ ಈ ಹೇಳಿಕೆ ಹಿಂದಿನ ರಾಜಕೀಯ ನಡೆಯೇನು? ಯಡಿಯೂರಪ್ಪನವರು ಹೊರತು ಪಡಿಸಿದರೆ ಸರಕಾರವನ್ನು ಮುನ್ನೆಡುಸುವ ನಾಯಕರು ಬಿಜೆಪಿಯಲ್ಲಿ ಯಾರಿದ್ದಾರೆ?
ಈ ಎಲ್ಲಾ ಬೆಳವಣಿಗೆಗಳ ಕುರಿತ ಪಾಡ್ಕಾಸ್ಟ್ ಇಲ್ಲಿದೆ. ಕನ್ನಡಪ್ರೆಸ್ .ಕಾಮ್ ನ ಪ್ರಧಾನ ಸಂಪಾದಕ ಶ್ರೀವತ್ಸ ನಾಡಿಗ್ ಮತ್ತು ಹಿರಿಯ ರಾಜಕೀಯ ವಿಶ್ಲೇಷಕ ಕೂಡ್ಲಿ ಗುರುರಾಜ ಅವರು ಭಾಗವಹಿಸಿದ್ದಾರೆ. ಆಲಿಸಿ ಮತ್ತು ಪ್ರತಿಕ್ರಿಯಿಸಿ