33.3 C
Karnataka
Tuesday, May 14, 2024

    ಕುವೆಂಪು ಸಾಹಿತ್ಯದಲ್ಲಿ ಜೀವ ಸೆಲೆ ತುಂಬಿದ ವಿಶ್ವಮಾನವ

    Must read

    ಕುವೆಂಪು ಸಾಹಿತ್ಯದಲ್ಲಿ ಜೀವ ಸೆಲೆ ತುಂಬಿದ ವಿಶ್ವಮಾನವ. ಜನ ಸಾಮಾನ್ಯರ ಒಡನಾಡಿಯಾಗಿ ಬದುಕಿದ ಚೇತನ. ಅರಿಷಡ್ವರ್ಗಗಳನ್ನು ಮೇರೆ ಮೀರದಂತೆ ನಿಗ್ರಹಿಸಿದ ದೇವತಾ ಮನುಷ್ಯ. ಕುವೆಂಪು ಸಾಹಿತ್ಯವನ್ನು ಮಕ್ಕಳು, ಮೊಮ್ಮಕ್ಕಳಿಗೆ ರುಚಿಸುವಂತೆ ಮಾಡಿದಲ್ಲಿ ಅನಿಕೇತನವಾದೀತು. ಇಲ್ಲವಾದರೆ ವಿಗ್ರಹ ಪೂಜೆಯ ಬ್ರಹ್ಮರಥೋತ್ಸವವಾಗಿ ಉಳಿಯಲಿದೆ ಎಂದು ಸಾಹಿತಿ ಡಾ.ಆನಂದ ಋಗ್ವೇದಿ ತಿಳಿಸಿದರು.

    ಸಾಹಿತಿ ಫೈಜ್ನಟ್ರಾಜ್ ನೇತೃತ್ವದಲ್ಲಿ ಪ್ರತಿ ತಿಂಗಳ ಕೊನೆ ಭಾನುವಾರ ಸಂತೇಬೆನ್ನೂರಿನಲ್ಲಿ ನಡೆಯುವ ಮಾಸದ ಮಾತು ಸಾಹಿತ್ಯದ ಕಾರ್ಯಕ್ರಮದಲ್ಲಿ ಈ ಸಾಲಿನ ಮೇರು ಕವಿಗಳ ಪರಿಚಯ ಕಾರ್ಯಕ್ರಮದಲ್ಲಿ ಕುವೆಂಪು ಕುರಿತು ದಾವಣಗೆರೆ ಸಾಹಿತಿ ಆನಂದ ಋಗ್ವೇದಿ ಮಾತನಾಡಿದರು.

    ಕುವೆಂಪು ಸಾಹಿತ್ಯ ಟೀಕಿಸಲು ಸಾವಿರ ವಿಷಯಗಳಿದ್ದರೆ ಪ್ರೀತಿಸಲು ಲಕ್ಷ ವಿಷಯಗಳಿವೆ. ಬೆಂದ್ರೆಗೆ 46 ವಯಸ್ಸಿನಲ್ಲಿಯೂ ಕಾಯಂ ಕೆಲಸವಿಲ್ಲ ಎಂಬ ಬೇಸರ ಕುವೆಂಪು ಅವರಿಗಿತ್ತು. ಬರವಣಿಗೆ ಹಾಗೂ ಓದಿನಲ್ಲಿ ಶಿಸ್ತುಬದ್ಧ ಜೀವನ ಶೈಲಿ ರೂಢಿಸಿಕೊಂಡಿದ್ದ ಮಹಾನ್ ಚೇತನ ಕುವೆಂಪು ಎಂದು ಬಣ್ಣಿಸಿದರು.

    ಮೇರು ಕವಿ ಕುವೆಂಪು ಮಕ್ಕಳಿಗೆ ಕಿಂದರ ಜೋಗಿ ಪರಿಚಯಿಸಿ, ಪಂಡಿತೋತ್ತಮರಿಗೆ ರಾಮಯಣದರ್ಶನಂವನ್ನು ಬರೆಯುವ ವೈಶಿಷ್ಟತೆ ಇತ್ತು. ಕವಿ ಪ್ರತಿಭೆ ದೃಷ್ಟಿಯಿಂದ ಸಣ್ಣ ಸಂಗತಿಯನ್ನು ವಿಶೇಷ ಚಿತ್ರಿಸುವ ಕೌಶಲ ಅಡಗಿತ್ತು.

     ಕುವೆಂಪು ಮನೆ ದೊಡ್ಡ ಮನೆತನ. ಚಿಕ್ಕ ವಯಸ್ಸಿನಲ್ಲೇ ತಾಯಿ ಕಳೆದುಕೊಂಡರು. ಮಲತಾಯಿ ಬಂದ ಮೇಲೆ ಕೇವಲ ಐದನೇ ತರಗತಿ ನಂತರ ಕುಪ್ಪಳಿ ಮನೆ ತೊರೆದು ರಾಮಕೃಷ್ಣಾಶ್ರಮ ಸೇರಿದರು. ಬಿ.ಎ. ಮುಗಿಸಿ ಕುಪ್ಪಳಿಗೆ ಬಂದದ್ದು ತಂದೆಗೆ ಆನಾರೋಗ್ಯದ ಕಾರಣ. ತಾಯಿ ಮನೆ ಸಮೀಪದ ಹಿರೇ ಕೂಡಿಗೆಗೆ ಬರುತ್ತಿದ್ದರು. ‘ನನ್ನ ಮನೆ’ ಎಂದು ಬರೆದ್ದದ್ದು ಭಾವನಾತ್ಮಕ ಕವನ. ಪಾಶ್ಚ್ಯತೀಕರಣದ ಅನುಕರಣೆಯಲ್ಲಿ ಕುಪ್ಪಳಿಯನ್ನು ಸರ್ಕಾರ ಸ್ಮಾರಕಗೊಳಿಸಿದೆ. ಕುಪ್ಪಳಿ ಮನೆ  ಅವರಿಗೆ ಸುಮಧುರ ಅನುಭವ ನೀಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಸಂಕಟ ಮರೆಯಲು ಕವಿಶೈಲದಲ್ಲಿ ಕಾಲ ಕಳೆಯುತ್ತಿದ್ದರು ಕುವೆಂಪು. ಕವಿಶೈಲದಲ್ಲಿ ನನಗೆ ಸಂಭ್ರಮಕ್ಕಿಂತ ಸಂಕಟ ಪಡುವ ಮಗು ನೆನಪಾಗುತ್ತದೆ. ಆ ಅಳು ಮುವತ್ತು ಕವನ ಸಂಕಲದಲ್ಲಿ ದಾಖಲಿಸಿದ್ದಾರೆ. ಮಲೆಗಳಲ್ಲಿ ಮದುಮಗಳು ಮೇರು ಕೃತಿಯಲ್ಲಿ ಐಕ ಮತ್ತು ಪೀತ ಕಾಡಿನ ಬೆಳದಿಂಗಳಲ್ಲಿ ಓಡಾಡುತ್ತಾರೆ. ಚಂದಿರನ ಬೆಳಕು, ಕಾಡು ಅದ್ಭುತ ಚಿತ್ರಣ ಎಂಬ ಬೆರಗು ಬೇಡ. ಬಡವರಿಗೆ ಹಸಿವು ನೀಗಿಸುವುದಷ್ಟೆ ಮುಖ್ಯ. ಇದನ್ನು ಅದ್ಬುತವಾಗಿ ಚಿತ್ರಿಸಿದ್ದರು ಕುವೆಂಪು ಎಂದು ಅವರು ಹೇಳಿದರು.

    ಕೆ ಎಸ್ ವೀರೇಶ ಪ್ರಸಾದ್
    ಕೆ ಎಸ್ ವೀರೇಶ ಪ್ರಸಾದ್https://kannadapress.com/
    ವೃತ್ತಿ ಯಿಂದ ವಿಜ್ಞಾನ ಶಿಕ್ಷಕ . ಪ್ರವೃತ್ತಿಯಿಂದ ಪತ್ರಕರ್ತ.
    spot_img

    More articles

    1 COMMENT

    1. ನಿಜವಾಗಿಯೂ ಪ್ರಕೃತಿಯ ಮಡಿಲಲ್ಲಿ ಎಂತಾ ಸಂಕಟವನ್ನು ಮರೆಯಬಹುದು ನಿಜವಾದ ಮಾತು. ತಮ್ಮನ ಭಾಷಣವನ್ನು ಗೆಳೆಯನ ಬರಹದಲ್ಲಿ ನೋಡಿ ಖುಷಿಯಾಯಿತು. ನಿಜ ಕುವೆಂಪು ಪ್ರೀತಿಸಲು ಲಕ್ಷ ಲಕ್ಷ ವಿಷಯಗಳಿವೆ.

    LEAVE A REPLY

    Please enter your comment!
    Please enter your name here

    Latest article

    error: Content is protected !!