ಇಂದು ನವರಾತ್ರಿ ತದಿಗೆ. ಕನ್ನಡಪ್ರೆಸ್.ಕಾಮ್ ನ ಸಂಗೀತೋತ್ಸವ ಇಂದು ಶಾಸ್ತ್ರೀಯ ಸಂಗೀತದ ಉತ್ತುಂಗವನ್ನು ತಲುಪಿದೆ. ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಶಾಸ್ತೀಯವಾಗಿ ಅಭ್ಯಸಿಸಿ ಸೊಗಸಾಗಿ ಹಾಡುವ ಗೀತಾ ಗಣೇಶ್ ಇಂದಿನ ಕಚೇರಿಯನ್ನು ನಡೆಸಿಕೊಟ್ಟಿದ್ದಾರೆ.
ಗಣೇಶ ಸ್ತುತಿಯೊಂದಿಗೆ ಆರಂಭವಾಗುವ ಈ ಸಂಗೀತ ಸಂಜೆ ತಾಯಿ ಚಾಮುಂಡೇಶ್ವರಿಯನ್ನು ಧ್ಯಾನಿಸುವ ಮೂಲಕ ಮುಂದುವರಿಯುತ್ತದೆ. ಅಂಬಾಪುರ ವಾಸಿನಿ ಅಖಿಲಾ ಭುವನೇಶ್ವರಿ ಎಂದು ದೇವಿಯನ್ನು ಆರಾಧಿಸಿ ,ಜಗ ಜನನಿಯನ್ನು ನೆನೆದು ,ಭೈರವಿ ಪರಮೇಶ್ವರಿ ಪರಾಶಕ್ತಿಯನ್ನು ಸ್ಮರಿಸುತ್ತಾ ಸಂಪನ್ನವಾಗುತ್ತದೆ.
ಭಾರತಿ ಎಸ್ ಎನ್ ಅವರ ನಿರರ್ಗಳ ವ್ಯಾಖ್ಯಾನ ಈ ಪಾಡ್ಕಾಸ್ಟ್ ಅನ್ನು ಮತ್ತಷ್ಟು ಆಪ್ಯವೆನಿಸುವಂತೆ ಮಾಡುತ್ತದೆ.
ನೀವು ಆಲಿಸಿ, ಪ್ರತಿಕ್ರಿಯಿಸಿ.
Super and excellant. Purely classical touch by Smt. Geetha Ganesh.
ಶ್ರೀಮತಿ ಗೀತಾ ರವರ ಸಂಗೀತ ಸುಮಧುರ ವಾಗಿತ್ತು. ಕೇಳುತ್ತಾ ಸಮಯ ಸರಿದುದೇ ಗೊತ್ತಾಗಲಿಲ್ಲ. ಇಂತಹ ಅವಕಾಶ ಕಲ್ಪಿಸಿದ kannadapress ನವರಿಗೆ ದನ್ಯ ವಾದ ಗಳು.🙏🙏
Very good singing by Smt.Geetha Ganesh and nice program
ಗೀತಾ ಗಣೇಶ್ ಅವರ ಶಾಸ್ತ್ರೀಯ ಸಂಗೀತ ಅಮೋಘವಾಗಿತ್ತು.