28.7 C
Karnataka
Saturday, May 11, 2024

    ಮಲಗಿದ್ದಾಗ ನಮ್ಮ ‘ಕೆಳಗೆ’ ಹೂವು ಇದ್ರೆ ಪ್ರಥಮ ರಾತ್ರಿ, ನಮ್ಮ ‘ಮೇಲೆ’ ಹೂವಿದ್ದರೆ ಅಂತಿಮ ರಾತ್ರಿ

    Must read

    ಬಣ್ಣಗಳಿಗೆ ಉದಾಹರಣೆ ಈ ಹೂವು . ಜಗತ್ತಿನಲ್ಲಿ ಲಕ್ಷಾಂತರ ರೀತಿಯ ಹೂವುಗಳಿದ್ದರೂ ಪ್ರತಿಯೊಂದು ಹೂವು ಆಕಾರದಿಂದಲೂ ಪರಿಮಳದಿಂದಲೂ ಬೇರೆ ಬೇರೆ ರೀತಿಯದ್ದಾಗಿರುವುದು ವಿಶೇಷವೇ ಸರಿ .

    ಅದೇನೋ ಗೊತ್ತಿಲ್ಲ ಹೂವು ಅನ್ನೋ ಪದ ಕಿವಿಗೆ ಬಿದ್ದಾಕ್ಷಣ ಮನಸ್ಸು ಪ್ರಶಾಂತವಾಗುತ್ತದೆ . ಹೂವಿಗೆ ಕೈ ಇಟ್ಟ ಎಂತಹ ಒರಟನ ಕೈ ಸಹ ಮೃದುವಾಗುತ್ತದೆ . ಹೂವು ಹಗುರವಾಗಿದ್ದರೂ ಸಹ ತುಂಬಾ ತೂಕದ ಬೆಲೆ ಉಳಿಸಿಕೊಂಡಿದೆ .

    ಘೋರಯುದ್ದವನ್ನು ನಿಲ್ಲಿಸುವ ಶಕ್ತಿ ಹೂವಿಗಿದೆ . ಒಳ್ಳೆಯ ಮನಸ್ಸುಗಳನ್ನು ಹೂವಿಗೆ ಹೋಲಿಸುತ್ತಾರೆ . ಹೆಣ್ಣು ಮಕ್ಕಳಿಗೆ ಹೂವಿನ ಹೆಸರನ್ನೇ ಇಡುತ್ತಾರೆ .

    ಹೂವು ಅಂದರೇನೇ ಶ್ರೇಷ್ಠ . ಧರ್ಮ ಗ್ರಂಥಗಳಲ್ಲಿ ಹೂವಿನ ಬಗ್ಗೆ ಅದ್ಭುತವಾದ ಕತೆಗಳಿವೆ . ಬಿಡಿಯಾಗಿದ್ದಾಗ ಹೂ ಕಟ್ಟಿದಾಗ ಹೂವು . ಮುಳ್ಳಿನ ಮಧ್ಯೆಯೇ ಇರಲಿ ಬೇಲಿಯ ಮಧ್ಯೆಯೇ ಇರಲಿ ಕೆಸರಿನ ನಡುವೆಯೇ ಇರಲಿ ತಲೆಯೆತ್ತಿ ನಿಲ್ಲುತ್ತದೆ .

    ಹೂವಿಲ್ಲದೇ ಜಗತ್ತನ್ನ ಊಹಿಸಿಕೊಳ್ಳಲು ಸಾಧ್ಯವಿಲ್ಲ . ದೇವರನ್ನು ಪೂಜಿಸಲು ,ಕವಿಗಳು ಬರೆಯಲು , ಹೆಂಗಸರು ಮುಡಿಯಲು , ಗಾಯಕರು ಹಾಡುಲು , ರೈತರು ದುಡಿಯಲು ಹೂವು ಬೇಕು . ಇದಕ್ಕೆಂದೇ ಒಂದು ಮಾರುಕಟ್ಟೆ ಇದೆ .

    ಶೃಂಗಾರಕ್ಕೇ, ಸಿಂಗಾರಕ್ಕೇ ,ಸನ್ಮಾನಕ್ಕೆ, ಸಮಾರಂಭಕ್ಕೆ, ಆರಾಧನೆಗೆ ಸಮಾರಾಧನೆಗೆ ಹೂವು ಕಡ್ಡಾಯ .

    ದೇವಸ್ಥಾನದಲ್ಲಿ ಬಲಗಡೆ ದೇವರ ವಿಗ್ರಹಕ್ಕೆ ಸಿಕ್ಕಿಸಿದ್ದ ಹೂವು ಬಿದ್ದರೆ ವರ ಸಿಕ್ಕಿತೆಂಬ ನಂಬಿಕೆ . ಹುಡುಗ ಕೊಟ್ಟ ಹೂವು ಹುಡುಗಿ ಸ್ವೀಕರಿಸಿದರೆ ಪ್ರೀತಿ ಒಪ್ಪಿದಳೆಂಬ ಖಾತ್ರಿ .

    ಕವಿಗಳು ಕತೆಗಾರರು ಸಾಹಿತಿಗಳು ಹೂವು ಮಾತನಾಡುತ್ತದೆ ಎಂದು ಬಣ್ಣಿಸುತ್ತಾರೆ ಆದರೆ ಈ ಹೂವು ಮಾತಾಡೋದು ಹೆಂಗಸರ ಜೊತೆ ಮಾತ್ರ. ಅದು ನಮಗೆ ಹೆಂಗ್ ಗೊತ್ತಾಗುತ್ತೆ ಅಂದ್ರೆ ಅವರು ಪ್ರತೀ ಹಬ್ಬದಲ್ಲೂ ‘ ಹೂವನ್ನ ಮಾತಾಡ್ಸಕ್ಕೇ ಆಗಲ್ಲ ಅಷ್ಟು ರೇಟಾಗೋಗಿದೆ ಅಂತಿರ್ತಾರೆ .

    ಯಾರೊ ಎಷ್ಟು ಚೆನ್ನಾಗಿ ಹೇಳಿದಾರೆ ನೋಡಿ …. ಮಲಗಿದ್ದಾಗ ನಮ್ಮ ‘ ಕೆಳಗೆ ‘ ಹೂವು ಇದ್ರೆ ಪ್ರಥಮ ರಾತ್ರಿಯಂತೆ , ನಮ್ಮ ‘ ಮೇಲೆ ‘ ಹೂವಿದ್ದರೆ ಅಂತಿಮ ರಾತ್ರಿಯಂತೆ .

    ಬಣ್ಣಗಳಿಗೆ ಉದಾಹರಣೆ ಈ ಹೂವು . ಜಗತ್ತಿನಲ್ಲಿ ಲಕ್ಷಾಂತರ ರೀತಿಯ ಹೂವುಗಳಿದ್ದರೂ ಪ್ರತಿಯೊಂದು ಹೂವು ಆಕಾರದಿಂದಲೂ ಪರಿಮಳದಿಂದಲೂ ಬೇರೆ ಬೇರೆ ರೀತಿಯದ್ದಾಗಿರುವುದು ವಿಶೇಷವೇ ಸರಿ .

    ಹೂವಿನ ಆಯಸ್ಸು ತುಂಬಾನೇ ಕಡಿಮೆಯಾದರೂ ಇದ್ದಷ್ಟೂ ಕಾಲ ನಗುನಗುತ್ತಾ ಉಪಯೋಗವಾಗಿಯೇ ಬಾಡುತ್ತದೆ . ಬಿಡಿಸದೇ ಗಿಡದಲ್ಲಿಯೇ ಇದ್ದರೆ ಉದುರಿ ಗೊಬ್ಬರವಾದರೂ ಆಗುತ್ತದೆ . ಹೂವಿಗೂ ಒಂದು ರುಚಿಯಿದೆ ಅದರ ಹೆಸರೇ ಜೇನು .

    Photo by Boris Smokrovic on Unsplash

    ಮಾಸ್ತಿ
    ಮಾಸ್ತಿhttps://kannadapress.com
    ಕನ್ನಡ ಚಿತ್ರರಂಗದಲ್ಲಿ ಪ್ರಸ್ತುತ ಬೇಡಿಕೆ ಇರುವ ಸಂಭಾಷಣೆಕಾರ ಮಾಸ್ತಿ ಮೂಲತಃ ಕೋಲಾರ ಜಿಲ್ಲೆಯವರು. ಸುಂಟರಗಾಳಿ ಚಿತ್ರದಿಂದ ಆರಂಭವಾದ ಇವರ ಸಿನಿಮಾ ಜರ್ನಿ ನಟ, ಸಹ ನಿರ್ದೇಶಕ, ಈಗ ಕಥೆಗಾರ, ಸಂಭಾಷಣೆಕಾರ ಮತ್ತು ಚಿತ್ರಕಥೆಗಾರರಾಗಿ ಮುಂದುವರೆದಿದೆ. ಟಗರು ಇವರ ವೃತ್ತಿ ಜೀವನದ ಮೈಲಿಗಲ್ಲು.
    spot_img

    More articles

    2 COMMENTS

    1. ಹೂವಿನ ವಿವಿಧ ಮಜಲುಗಳ ನ್ನು ತಿಲುಹಿಸಿರುವುದು ಚೆಂದವಿದೆ.

    LEAVE A REPLY

    Please enter your comment!
    Please enter your name here

    Latest article

    error: Content is protected !!