26.3 C
Karnataka
Monday, May 20, 2024

    ನೆಲದ ಸಿರಿ – ಗ್ರಾಮೀಣ ಸೊಗಡಿನ ಶೈಕ್ಷಣಿಕ ಸಾಂಸ್ಕೃತಿಕ ಮತ್ತು ಸಮಗ್ರ ಕೃಷಿ ಕೇಂದ್ರ

    Must read

    ಬಳಕೂರು ವಿ ಎಸ್ ನಾಯಕ

    ಕೋಲೆ ಬಸವ , ರಾಟೆ, ಒಕ್ಕಣೆಯ ಕಣ, ಹಾಲು ಹಿಂಡುವಿಕೆ , ಶಕುನ ಸಾರುವ ಹಕ್ಕಿಗಳು , ಉಳುಮೆ ಮಾಡುತ್ತಿರುವ ರೈತ ಮತ್ತು ಎತ್ತುಗಳು, ಕುಂಬಾರಿಕೆ, ಕುಲುಮೆ, ವೀರಗಾಸೆ ,ಯಕ್ಷಿಣಿ , ಡೊಳ್ಳುಕುಣಿತ, ಗ್ರಾಮೀಣ ವಸ್ತುಸಂಗ್ರಹಾಲಯ ,ಪರಿಸರಸ್ನೇಹಿ ಈಜುಕೊಳ ,ಬಕಾಸುರ, ಇಂಗು ಗುಂಡಿಗಳು, ರೋಮನ್ ಎಂಪಿಥೇಟರ್ ವಿವಿಧ ಸಸ್ಯ ಪ್ರಭೇದಗಳು ದಂಡಕಾರಣ್ಯ ಸಾಕುಪ್ರಾಣಿಗಳ ಮತ್ತು ಜೇನುಸಾಕಣೆ ಇವೆಲ್ಲವನ್ನು ಮಾಗಡಿ ಸಮೀಪದ ತೋಟವೊಂದರಲ್ಲಿ ಕಾಣಬಹುದು. ಇದರ ಹೆಸರು ನೆಲದ ಸಿರಿ ಹಸಿರು ತೋಟ.

    ಬೆಂಗಳೂರಿನಿಂದ ಕೇವಲ 20 ಕಿಲೋಮೀಟರ್ ದೂರದಲ್ಲಿ ಬೆಂಗಳೂರು -ಮಾಗಡಿ ರಸ್ತೆಯಲ್ಲಿ ನಿರ್ಮಿಸಲಾದ ಈ ತೋಟ ವಾರಾಂತ್ಯ ವಿಹಾರಕ್ಕೆ ಹೇಿಳಿ ಮಾಡಿಸಿದ ತಾಣ. ವಿಸ್ತೀರ್ಣದಲ್ಲಿ ಚಿಕ್ಕದಾದರೂ ಚೊಕ್ಕವಾಗಿದೆ.

    ತೋಟದ ವಿಶೇಷತೆಗಳು

    ಪರಂಪರಾ ಗ್ರಾಮೀಣ ವಸ್ತುಸಂಗ್ರಹಾಲಯ
    ನಮ್ಮ ಪೂರ್ವಜರು ಬಳಸುತ್ತಿದ್ದ ಉಪಕರಣಗಳು ಸಾಮಗ್ರಿಗಳು ಮತ್ತು ಆಚಾರಗಳನ್ನು ಈಗಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಪರಂಪರಾ ಗ್ರಾಮೀಣ ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲಾಗಿದೆ. ಹಿಂದಿನ ಕಾಲದ ಹೊಲ ಉಳುವ ನೇಗಿಲು ಮತ್ತು ಎತ್ತುಗಳು ಟ್ರ್ಯಾಕ್ಟರ್ ಎಂಬ ಆಧುನಿಕ ಯಂತ್ರದಿಂದ ಕಣ್ಮರೆಯಾಗಿದೆ. ಹಾಗೆಯೇ ಅಡುಗೆ ಮಾಡಲು ಬಳಸುತ್ತಿದ್ದ ಮಣ್ಣಿನ ಕುಡಿಕೆ, ಬಾನ ,ಮುಚ್ಚಳಿಕೆ, ಹಂಚು ಹಿತ್ತಾಳೆ ಪಾತ್ರೆಗಳು ಮಾಯಾವಾಗಿ ಎಲ್ಲವೂ ಅಲ್ಯೂಮಿನಿಯಂ ಸ್ಟೇನ್ಲೆಸ್ ಸ್ಟೀಲ್ ಆಗಿವೆ. ನಮ್ಮ ಪೂರ್ವಿಕರು ಬಳಸುತ್ತಿದ್ದ ಪರಿಸರಸ್ನೇಹಿ ಉಪಕರಣಗಳನ್ನು ಒಂದೆಡೆ ಸೇರಿಸಿ ಮಕ್ಕಳಿಗೆ ಉಪಕರಣಗಳ ಹೆಸರು ಮತ್ತು ಅವುಗಳು ಯಾವ ಕೆಲಸಕ್ಕೆ ಬಳಕೆಯಾಗುತ್ತಿದ್ದವು ಎನ್ನುವ ವಿಚಾರವನ್ನು ಇಲ್ಲಿ ತಿಳಿಯಬಹುದಾಗಿದೆ
    ಪರಿಸರ ಸ್ನೇಹಿ ಈಜುಕೊಳ
    ಹಳ್ಳದ ಕಡೆಗೆ ನೀರು ಹರಿಯುವುದು ಎಂಬ ಗಾದೆಯಂತೆ ಕೊಳವೆಬಾವಿಗಳಿಂದ ಕೆತ್ತಲ್ಪಟ್ಟ ನೀರನ್ನು ಈ ತೊಟ್ಟಿಯಲ್ಲಿ ತುಂಬುವುದು ವಿಶೇಷ.
    ಇಂಗು ಗುಂಡಿಗಳು
    ನೆಲದ ಸಿರಿ ತೋಟದ ಪಕ್ಕದಲ್ಲಿ ಪೂರ್ವದಿಕ್ಕಿಗೆ ಹೊಂದಿಕೊಂಡು ಹಳ್ಳ ಹರಿಯುತ್ತದೆ. ಇಲ್ಲಿ ಸುಮಾರು 600 ಅಡಿ ಸಾಗಿದ ನಂತರ ಮತ್ತೊಂದು ತಡೆಗೋಡೆಯನ್ನು ನಿರ್ಮಿಸಲಾಗಿದೆ ಇಂಗುಗುಂಡಿಯ ಸುಮಾರು 18 ಲಕ್ಷ ಲೀಟರ್ ನೀರು ತುಂಬಿದ ನಂತರ ಬಿಡಲಾಗುತ್ತದೆ .ನೆಲದ ಸಿರಿ ಯಲ್ಲಿ ಸುಮಾರು 25 ಲಕ್ಷ ಲೀಟರ್ ಗಳಷ್ಟು ಮಳೆ ನೀರನ್ನು ಕೊಯ್ಲು ಮಾಡಲಾಗುತ್ತದೆ.
    ರೋಮನ್ Amphy ಥಿಯೇಟರ್
    ನೆಲದ ಸಿರಿ ತೋಟದಲ್ಲಿ ಸುಮಾರು 60 ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಅನುಕೂಲವಾಗುವ ಒಂದು ಥಿಯೇಟರ್ ನಿರ್ಮಾಣವಾಗಿದೆ.ಇದಕ್ಕೆ ರೋಮನ್ ಎಂಬ ಹೆಸರು ಕೊಡಲು ಕಾರಣ ಗ್ರೀಸ್ ದೇಶದ ರೋಮನ್ ನಗರದಲ್ಲಿ ಗುಡ್ಡದ ಇಳಿಜಾರಿನಲ್ಲಿ ಕಲ್ಲಿನ ಆಸನಗಳನ್ನು ನಿರ್ಮಿಸಿ ಕೆಳಭಾಗದ ಸಮತಟ್ಟು ನೆಲದಲ್ಲಿ ವೇದಿಕೆಯನ್ನು ನಿರ್ಮಿಸಲಾಗುತ್ತಿತ್ತು. ರಾತ್ರಿ ವೇಳೆ ನಾಗರಿಕರು ನಾಟಕಗಳನ್ನು ಈ ಆಸನದಲ್ಲಿ ಕುಳಿತು ದೀಪದ ಬೆಳಕಿನಲ್ಲಿ ನೋಡುತ್ತಿದ್ದರು. ಖರ್ಚಿಲ್ಲದೆ ನೈಸರ್ಗಿಕವಾಗಿರುವ ಭೂಭಾಗವನ್ನು ಬಳಸಿ ನಿರ್ಮಿಸಲಾಗಿದೆ.
    ನೆಲದ ಸಿರಿಯ ಇತರೆ ವಿಶೇಷತೆಗಳು
    ಶಾಂತಲಾ ನಾಟ್ಯ ಶಾಲೆ,ಸಾಲು ಪರಗೋಲಾಸ್,ತೋಟದ ಮನೆ,ಭಾಗೀರಥಿ ಕಲ್ಲು ಬಾವಿ,
    ಆಟದ ಗ್ರಾಮೀಣ ಕ್ರೀಡೆಗಳು,ಕೊಟ್ಟಿಗೆಗಳು,ದಂಡಕಾರಣ್ಯ,
    ಶಾಂತಲಾ ನಾಟಕಶಾಲೆ
    ಸುಮಾರು 600 ಚದರಡಿಗಳಷ್ಟು ವಿಸ್ತೀರ್ಣವುಳ್ಳ ನಾಟ್ಯ ಶಾಲೆಯನ್ನು ನಿರ್ಮಿಸಲಾಗಿದೆ. ಇದು ಕಡಪ ಕಲ್ಲಿನಿಂದ ತಯಾರು ಮಾಡಲಾಗಿದೆ . ಸುಂದರವಾದ ಹೂಗಳನ್ನು ಅಳವಡಿಸಲಾಗಿದೆ.
    ಸಾಲು ಪರಗೊಲಾಸ್
    ಇಲ್ಲಿ ಸುಮಾರು 150 ಅಡಿ ದೂರಕ್ಕೆ ಒಂದು ಕಾಲುದಾರಿ ನಿರ್ಮಿಸಿ ಅದಕ್ಕೆ 36 ಕಲ್ಲಿನ ಕಂಬಗಳು ಮತ್ತು 69 ಕಲ್ಲಿನ ತೊಲೆಗಳನ್ನು ಬಳಸಿ ನಿರ್ಮಿಸಲಾಗಿದೆ .ಇದರ ಮೇಲೆ ಪಡವಲ ಸೀಮೆಬದನೆ ಚಪ್ಪರದವರೆಕಾಯಿ ಹೀಗೆ ಹಲವಾರು ತರಕಾರಿಗಳನ್ನು ಹಬ್ಬಿಸಲಾಗಿರುವುದು ವಿಶೇಷ.
    ತೋಟದ ಮನೆ
    ತೋಟದ ಮನೆಯನ್ನು ದೇಶಿ ಸಂಸ್ಕೃತಿಯನ್ನು ಹೊರಗಿನಿಂದ ಕಾಣುವ ಹಾಗೆ ವಿನ್ಯಾಸ ಮಾಡಲಾಗಿದ್ದು ಒಳಭಾಗದಲ್ಲಿ 18 ಅಡಿಗಳ ಎತ್ತರದಲ್ಲಿ ಕಾಂಕ್ರೀಟಿನಿಂದ ಛಾವಣಿಯನ್ನು ನಿರ್ಮಿಸಿದ್ದಾರೆ. ಒಂದು ಭಾಗಕ್ಕೆ ಫ್ಲೋರ್ ನಿರ್ಮಿಸಿದ ರೂಪದಲ್ಲಿ ವಿನ್ಯಾಸವನ್ನು ಮಾಡಲಾಗಿದೆ.
    ಭಾಗೀರಥಿ ಕಲ್ಲಿನ ಬಾವಿ
    ನೆಲದ ಸಿರಿ ತೋಟದಲ್ಲಿ ಪೂರ್ವಜರು ನಿರ್ಮಿಸಿರುವ 200 ವರ್ಷಗಳ ಇತಿಹಾಸವಿರುವ ಸಿಹಿನೀರಿನ ಕಲ್ಲು ಬಾವಿಯೂ ಇದೆ.
    ದಂಡಕಾರಣ್ಯ
    ನೆಲದ ಸಿರಿ ತೋಟದಲ್ಲಿ ಒಂದು ಅರಣ್ಯವನ್ನು ಬೆಳೆಸುವ ಉದ್ದೇಶದಿಂದ ಬಗೆಬಗೆಯ ಕಾಡು ಮರಗಳನ್ನು ಬೆಳೆಸಲಾಗಿದೆ . ಘಮಘಮಿಸುವ ಕಾಡು ಹೂಗಳ ಪರಿಮಳ ಪಕ್ಷಿಗಳ ಕಲರವ ಹಾಡು ಬೆಳೆಸಿರುವ ಸಾರ್ಥಕತೆಯನ್ನು ಮರೆಸುತ್ತದೆ.
    ಕೊಟ್ಟಿಗೆಗಳು
    ನೆಲದ ಸಿರಿ ಯಲ್ಲಿ ಹಸು,ಎಮ್ಮೆ, ಕೋಳಿ-ಕುರಿ, ಮೇಕೆ,ಬೆಕ್ಕು,ಮೊಲ,ಮೀನು ಇತ್ಯಾದಿ ಸಾಕುಪ್ರಾಣಿಗಳನ್ನು ಪ್ರತ್ಯೇಕವಾದ ಕೊಟ್ಟಿಗೆಗಳಲ್ಲಿ ಸಾಕಲಾಗುತ್ತದೆ. ಇದರ ಉದ್ದೇಶ ಆರ್ಥಿಕ ಅವಲಂಬನೆಯ ಜೊತೆಗೆ ಮಕ್ಕಳಿಗೆ ವಿವಿಧ ಸಾಕುಪ್ರಾಣಿಗಳನ್ನು ತೋರಿಸುವುದೇ ಆಗಿದೆ ಎಂದು ಅಲ್ಲಿನ ವ್ಯವಸ್ಥಾಪಕರು ತಿಳಿಸುತ್ತಾರೆ.
    ತೋಟದ ಸಸ್ಯ ಪರಿಚಯ
    ನೆಲದ ಸಿರಿ ತೋಟದಲ್ಲಿ ಸುಮಾರು 2000ಕ್ಕೂ ಹೆಚ್ಚು ಸಸ್ಯಗಳನ್ನು ಬೆಳೆಸಲಾಗಿದೆ.ತೋಟದ ಅಂಚಿನಲ್ಲಿ ಬಿದಿರು ಬೆಳೆಸಲಾಗಿದೆ. ಬೆಂಗಳೂರು ಮಾಗಡಿ ರಸ್ತೆಯಲ್ಲಿ ವಾಹನಗಳಿಂದ ಉಂಟಾಗುವ ಶಬ್ದ ಮಾಲಿನ್ಯ ಮತ್ತು ಕಲುಷಿತ ಗಾಳಿ ಮತ್ತು ರಾತ್ರಿ ವೇಳೆ ಉಂಟಾಗುವ ವಾಹನಗಳ ಬೆಳಕಿನ ಮಾಲಿನ್ಯ ತಡೆಗಟ್ಟುವುದು ಆಗಿದೆ.
    ಗ್ರಾಮೀಣ ಕ್ರೀಡೆಗಳು
    ಗ್ರಾಮೀಣ ಕ್ರೀಡೆಗಳನ್ನು ಜೀವಂತ ಉಳಿಸುವುದು ಮತ್ತು ಈಗಿನ ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ವಿವಿಧ ಗ್ರಾಮೀಣ ಕ್ರೀಡೆಗಳಾದ ಲಗೋರಿ, ಗೋಲಿ ,ಕಣ್ಣಾಮುಚ್ಚಾಲೆ ,ಮರಕೋತಿ ಆಟ ,ಕುಂಟೆಬಿಲ್ಲೆ, ಚೌಕಾಬಾರ ಇತ್ಯಾದಿ ಆಟಗಳನ್ನು ಆಡಿಸುವುದು ಇಲ್ಲಿನ ವಿಶೇಷ.
    ಟಾಸ್ಕ್ ರೂಪದಲ್ಲಿ ಗ್ರಾಮೀಣ ಕಸುಬುಗಳು
    ಗ್ರಾಮೀಣ ಕಸುಬುಗಳು ಆದ ಮಡಿಕೆ ಮಾಡುವುದು, ಕುಲುಮೆಯನ್ನು ತಯಾರಿಸುವುದು ಗೊಂಬೆ ಆಟ ಆಡುವುದು, ಕೊರವಂಜಿ ,ಬುಡಬುಡುಕಿ ಇತ್ಯಾದಿ ಗ್ರಾಮೀಣ ಕಲೆಗಳನ್ನು ಮಕ್ಕಳಿಗೆ ನುರಿತ ವ್ಯಕ್ತಿಗಳಿಂದ ಮಾಡಿಸಿ ತೋರಿಸಲಾಗುತ್ತದೆ. ಇದರಿಂದ ಇಲ್ಲಿಗೆ ಬರುವ ವಿದ್ಯಾರ್ಥಿಗಳಿಗೆ ಹಲವಾರು ವಿಷಯಗಳನ್ನು ತಿಳಿಸಿಕೊಟ್ಟ ಹಾಗೆ ಆಗುತ್ತದೆ.

    ಬೆಂಗಳೂರಿನಲ್ಲಿ ವಿದ್ಯಾಸಂಸ್ಥೆಗಳನ್ನು ನಡೆಸುತ್ತಿರುವ ಡಾ. ಗೋಪಾಲಕೃಷ್ಣ ಅವರ ಕನಸಿನ ಕೂಸು ಈ ನೆಲದ ಸಿರಿ. ಅವರ ಪ್ರಕಾರ ನಗರ ವಾಸ ನರಕವಾಸ. ಮನುಷ್ಯನ ಜೀವನ ನಗರಗಳಲ್ಲಿ ಕಲುಷಿತ ಗಾಳಿ ನೀರು ಮತ್ತು ಆಹಾರ ಸೇವನೆಯಿಂದ ಅನಾರೋಗ್ಯಕರ ವಾಗಿದೆ .ಇಷ್ಟು ಸಾಲದೇ ಒತ್ತಡದ ಜೀವನ ಆರೋಗ್ಯವಂತ ಜೀವನಕ್ಕೆ ಮಾರಕವಾಗಿದೆ . ಈ ನಿಟ್ಟಿನಲ್ಲಿ ಇಲ್ಲಿಗೆ ಬಂದಾಗ ಸ್ವಲ್ಪವಾದರು ಮನಲ್ಲೋಸ ವಾಗುತ್ತದೆ.

    ನೆಲದಸಿರಿಗೆ ಹೋಗುವವರು https://neladasiri.com ನಲ್ಲಿ ಮೊದಲೇ ನೋಂದಾಯಿಸಿಕೊಂಡು ಹೋಗುವುದು ಉತ್ತಮ.

    This image has an empty alt attribute; its file name is V-S-NAIK.jpg

    ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಉಪನ್ಯಾಸಕರಾಗಿರುವ ವಿ. ಎಸ್ . ನಾಯಕರ ಪೂರ್ಣ ಹೆಸರು ವೆಂಕಟದಾಸ್ ಎಸ್ . ನಾಯಕ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಅನೇಕ ಸಂಸ್ಥೆಗಳಲ್ಲಿ ಕಾರ್ಯಕ್ರಮ ಸಂಯೋಜಕರಾಗಿಯೂ ಪರಿಚಿತರು. ದೂರದರ್ಶನದಲ್ಲಿ ಗಾಂಧೀ ವಿಚಾರಧಾರೆ ಕುರಿತು ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ಹಲವಾರು ಸಂಸ್ಥೆಗಳ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.


    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!