22.7 C
Karnataka
Monday, May 20, 2024

    ಧೀಮಂತ ನಟರ ನೆನಪಲ್ಲಿ ಪ್ರಾಣಿ ದತ್ತು

    Must read

    ಕನ್ನಡ ಸಿನಿಮಾ ರಂಗಕ್ಕೂ ಮೈಸೂರು ಪ್ರಾಣಿ ಸಂಗ್ರಹಾಲಯಕ್ಕೂ ಅವಿನಾಭಾವ ಸಂಬಂಧವಿದೆ. ಕನ್ನಡದ ಅನೇಕ ಸಿನಿಮಾಗಳಲ್ಲಿ ಈ ಮೃಗಾಲಯದ ಪ್ರಾಣಿಗಳು ನಟಿಸಿವೆ. ನಾನಾ ಚಿತ್ರಗಳಲ್ಲಿ ದೃಶ್ಯವಾಗಿ ಮೃಗಾಲಯ ಕಂಡಿದೆ. ಜತೆಗೆ ಅನೇಕ ನಟರು ಈ ಸಂಗ್ರಹಾಲಯದ ಪ್ರಾಣಿಗಳನ್ನು ದತ್ತು ಪಡೆದು ಪೋಷಿಸುತ್ತಿದ್ದಾರೆ. ಇವರ ಸಾಲಿಗೆ ಹೊಸ ಸೇರ್ಪಡೆ ಕನ್ನಡದ ಈ ಧೀಮಂತ ಶಕ್ತಿಗಳು.


    ಮೈಸೂರು ಮೂಲದವರಾದ ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್ ಮತ್ತು ಡಾ.ಅಂಬರೀಶ್ ಹೆಸರಿನಲ್ಲಿ ಸೋಮವಾರ (ಜೂ. 8) ಪ್ರಾಣಿಗಳನ್ನು ದತ್ತು ಪಡೆಯಲಾಗಿದೆ.

    ಸುಮಲತಾ ಅಂಬರೀಶ್ ಮತ್ತು ಸಚಿವ ಸೋಮಶೇಖರ್

    ವರನಟ ಡಾ. ರಾಜ್ ಕುಮಾರ್ ಅವರ ಹೆಸರಿನಲ್ಲಿ ಆನೆ ಹಾಗೂ ರೆಬೆಲ್ ಸ್ಟಾರ್ ಅಂಬರೀಷ್ ಅವರ ಹೆಸರಿನಲ್ಲಿ ಆಫ್ರಿಕನ್ ಆನೆ ಮತ್ತು ಸಾಹಸಸಿಂಹ ವಿಷ್ಣುವರ್ಧನ್ ಹೆಸರಿನಲ್ಲಿ ಒಂದು ಸಿಂಹ ದತ್ತು ಪಡೆಯಲಾಗಿದೆ.


    ರಾಜ್ ಕುಮಾರ್ ಅವರಿಗೆ ಆನೆಗಳ ಮೇಲೆ ವಿಶೇಷ ಪ್ರೀತಿ. ಗಂಧದ ಗುಡಿ ಸೇರಿದಂತೆ ಇವರ ನಟನೆಯ ಹಲವು ಚಿತ್ರಗಳಲ್ಲಿ ಆನೆ ಬಳಸಲಾಗಿದೆ. ಜತೆಗೆ ಶೂಟಿಂಗ್ ಸಮಯದಲ್ಲಿ ಆನೆಗಳ ಜತೆ ರಾಜ್ ಕುಮಾರ್ ಬಿಂದಾಸ್ ಆಗಿ ಕಾಲಕಳೆಯುತ್ತಿದ್ದರು. ಅಂಬರೀಶ್ ಅವರಿಗೂ ಕೂಡ ಆನೆಗಳ ಮೇಲೆ ಅಷ್ಟೇ ಅಕ್ಕರೆ ಹಾಗಾಗಿ ಈ ಇಬ್ಬರ ನಟರ ಹೆಸರಿನಲ್ಲಿ ಆನೆಗಳನ್ನು ದತ್ತು ಪಡೆಯಲಾಗಿದೆ.ಸಾಹಸ ಸಿಂಹ ಅವರ ಅಭಿಮಾನಿಗಳ ಅಭಿಮಾನಕ್ಕೆ ತಕ್ಕಂತೆ ವಿಷ್ಣುವರ್ಧನ್ ಅವರ ಹೆಸರಲ್ಲಿ ಸಿಂಹವನ್ನು ದತ್ತು ಪಡೆಯಲಾಗಿದೆ.


    ಈ ಮೇರು ನಟರ ಹೆಸರಿನಲ್ಲಿ ಪ್ರಾಣಿಗಳನ್ನು ದತ್ತು ಪಡೆದವರು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್. ಸ್ವತಃ ಸುಮಲತಾ ಅಂಬರೀಶ್ ಉಪಸ್ಥಿತರಿದ್ದ ಕಾರ್ಯಕ್ರಮದಲ್ಲೇ ಅವರು ಇಂಥದ್ದೊಂದು ಮೆಚ್ಚುವ ಕಾರ್ಯ ಮಾಡಿದ್ದಾರೆ.

    “ಮೂವರು ನಟರೂ ಮೈಸೂರು ಮೂಲದವರು. ಅವರ ಹೆಸರಿನಲ್ಲಿ ದತ್ತು ತಗೆದುಕೊಳ್ಳುವಂತಹ ಅವಕಾಶ ನನಗೆ ಸಿಕ್ಕಿದೆ. ಹೆಮ್ಮೆಯಿಂದ ಈ ಕೆಲಸಕ್ಕೆ ಮುಂದಾದೆ” ಎಂದಿದ್ದಾರೆ ಸಚಿವರು.


    ಈಗಾಗಲೇ ಸ್ಯಾಂಡಲ್ ವುಡ್ ನಟರಾದ ದರ್ಶನ್, ಸೃಜನ್ ಲೋಕೇಶ್ ಸೇರಿದಂತೆ ಹಲವು ಕಲಾವಿದರು ಪ್ರಾಣಿಗಳನ್ನು ದತ್ತು ಪಡೆದಿದ್ದಾರೆ.

    ಡಾ. ಶರಣು ಹುಲ್ಲೂರು
    ಡಾ. ಶರಣು ಹುಲ್ಲೂರು
    ಡಾ. ಶರಣು ಹುಲ್ಲೂರು ವೃತ್ತಿಯಿಂದ ಪತ್ರಕರ್ತ . ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ ಪದವಿ ಪಡೆದಿರುವ ಅವರು ಹಲವು ಪತ್ರಿಕಾ ಬಳಗದಲ್ಲಿ ಸೇವೆ ಸಲ್ಲಿಸಿದ್ದಾರೆ. 'ತಪ್ಪು ಮಾಡಿದ ತಾತ', 'ಮುಂದಿರುವ ಮೌನ', 'ಜುಗಲ್ಬಂದಿ' ಎಂಬ ಕವನ ಸಂಕಲನಗಳನ್ನು, ’ಚಂದನ ಸಿಂಚನ’ ಎಂಬ ಬಿ.ಜೆ.ಅಣ್ಣಿಗೇರಿ ಅವರ ಜೀವನ ಚರಿತ್ರೆಯನ್ನು,  ’ಮಲ್ಲಿಗೆ’, ’ಕನಸಿನ ಹುಡುಗ’ ನಾಟಕವನ್ನು ರಚಿಸಿದ್ದಾರೆ. ಬದುಕು ಹ್ಯಾಕ್ ಆಗಿದೆ, ಜುಗಲ್ ಬಂದಿ ಕವಿತೆಗಳು, ಸಿನಿ ಸಾಂಗತ್ಯ, ಅಂಬರೀಶ್ ಬದುಕು ಬರಹ ಇವರ ಮಹತ್ತರ ಕೃತಿಗಳು.ತಕಧಿಮಿಕಾ, ಮುಂಗಾರಿನ ಕನಸು ಕಾರ್ತೀಕ ದೀಪ, ಬದುಕು, ಮದರಂಗಿ ಮುಂತಾದ ಧಾರಾವಾಹಿಗಳಿಗೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ರಚಿಸಿದ್ದಾರೆ. ಕಾರ್ಯನಿರತ ಪತ್ರಕರ್ತರ ಸಂಘದ 'ಅತ್ಯುತ್ತಮ ಸಿನಿಮಾ ಪತ್ರಕರ್ಕ' ಪ್ರಶಸ್ತಿ, 'ಗೌರಿ ಲಾಮಯ್ಯ ದತ್ತಿ' ಪ್ರಶಸ್ತಿ, 'ಪುಟ್ಟರಾಜ ಗವಾಯಿ ಕಾವ್ಯ' ಪ್ರಶಸ್ತಿ, ಕರ್ನಾಟಕ ರಾಜ್ಯ ಚಲನಚಿತ್ರ ಸಾಹಿತ್ಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ
    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!