23.5 C
Karnataka
Monday, May 20, 2024

    ಕಲಾವಿದ ಶ್ರೀ ಜಯದೇವ ಕುಂಚದಲ್ಲಿ ಅರಳಿದ ಸೌಂದರ್ಯ ಲಹರಿ ಮತ್ತು ಉಪನಿಷತ್ ದರ್ಶನ

    Must read

    ಬಳಕೂರು ವಿ ಎಸ್ ನಾಯಕ

    ವೇದ ಪುರಾಣ ಉಪನಿಷತ್ ಗಳಂತಹ ವಿಷಯ ಗಳು ನಮ್ಮನ್ನು ಯಾವುದೋ ಒಂದು ಲೋಕಕ್ಕೆ ಕರೆದೋಯುತ್ತದೆ. ಆಗ ನಮ್ಮ ಮನಸ್ಸು ಶಾಂತತೆ . ನೆಮ್ಮದಿಯಿಂದ ಕೂಡಿರುತ್ತದೆ. ಆ ಸಂದರ್ಭದಲ್ಲಿ ಒಂದು ಕ್ಷಣ ಮನಸ್ಸು ಹಗುರವಾಗಿ ಏನನ್ನೋ ಗಳಿಸಿದ ಅನುಭವ ಅದು ಅವರ್ಣನೀಯ.

    ಅದೇ ರೀತಿ ಒಬ್ಬ ಕಲಾವಿದನ ಕೂಡ ಆಧ್ಯಾತ್ಮಿಕ ಪುಸ್ತಕಗಳನ್ನು ಓದಿದಾಗ ಅದರಲ್ಲಿರುವ ವಿಷಯಗಳನ್ನು ತೆಗೆದುಕೊಂಡಾಗ ಅವನ ಮನಸ್ಸಿನಲ್ಲಿ ಆವಿರ್ಭವಿಸಿದ ವಿಚಾರಗಳನ್ನು ಕಲಾ ಸರಣಿಯ ಮೂಲಕ ಕಲಾಸಕ್ತರ ಮಡಿಲಿಗೆ ಅರ್ಪಿಸುವ ಕೆಲಸ ಮಾಡುತ್ತಾನೆ. ಶ್ರೀ ಶಂಕರಾಚಾರ್ಯರಿಂದ ರಚಿತವಾದ ಸೌಂದರ್ಯ ಲಹರಿ ಹಿಡಿದು ನಂತರ ಉಪನಿಷತ್ತುಗಳಲ್ಲಿ ಇರುವ ಹಲವಾರು ಸಾರವನ್ನು ಚಿತ್ರಗಳ ಮೂಲಕ ಕಲಾ ಜಗತ್ತಿಗೆ ಪರಿಚಯಿಸುವ ಕಾರ್ಯವನ್ನು ಮಾಡಿದವರು ಮೈಸೂರಿನ ಪ್ರಖ್ಯಾತ ಕಲಾವಿದ ಜಯದೇವ ಎಸ್.
    ಸಾಮಾನ್ಯವಾಗಿ ಚಿತ್ರಕಲಾವಿದರು ಚಿತ್ರಗಳನ್ನು ರಚಿಸುವಾಗ ಬೇರೆ ಬೇರೆ ವಿಷಯಗಳನ್ನು ಕೇಂದ್ರೀಕರಿಸಿ ಮಾಡುತ್ತಾರೆ. ಆದರೆ ಕಲಾವಿದ ಜಯದೇವ ರವರು ಶಂಕರಾಚಾರ್ಯರ ಸೌಂದರ್ಯ ಲಹರಿ ಪುಸ್ತಕದಿಂದ ಪ್ರೇರೇಪಿತರಾಗಿ ಯಾರು ಊಹಿಸಲಾಗದ ಅದ್ಭುತ ಚಿತ್ರ ಸರಣಿ ಮಾಲಿಕೆಯನ್ನು ವಿಶೇಷವಾಗಿ ತಮ್ಮ ಕುಂಚದಲ್ಲಿ ಚಿತ್ರಿ ಸಿ ಒಂದು ವಿಸ್ಮಯಕಾರಿ ಕಲಾಲೋಕಕ್ಕೆ ನಮ್ಮನ್ನೆಲ್ಲ ಆಹ್ವಾನಿ ಸುತ್ತಿದ್ದಾರೆ.

    ನಗರದ ಉತ್ತರಹಳ್ಳಿ ವಿಷ್ಣುವರ್ಧನ್ ರಸ್ತೆಯಲ್ಲಿರುವ ಶ್ರೀನಿವಾಸಪುರದ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಚಿತ್ರಕಲಾ ಮಹಾವಿದ್ಯಾಲಯ ಕಲಾ ಗ್ಯಾಲರಿಯಲ್ಲಿ ಶನಿವಾರ ಮುಕ್ತಾಯಗೊಂಡ ಆಧ್ಯಾತ್ಮಿಕ ಚಿತ್ರ ಸರಣಿ ಕಲಾಸಕ್ತರ ಮನಸ್ಸನ್ನು ಗೆಲುವಲ್ಲಿ ಯಶಸ್ವಿಯಾಯಿತು. ಜಯದೇವ ರವರು ಕೆಂದ್ರಿಯ ಮಹಾವಿದ್ಯಾಲಯದಲ್ಲಿ ಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ಹಲವಾರು ಮಕ್ಕಳ ಜೀವನದಲ್ಲಿ ಕಲಾ ಶಿಕ್ಷಣವನ್ನು ನೀಡುವುದರ ಮೂಲಕವಾಗಿ ಕಲಾಸೇವೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಸುಮಾರು ನೂರಕ್ಕಿಂತಲೂ ಹೆಚ್ಚು ಕಲಾಕೃತಿಗಳು ಜನರ ಕಣ್ಮನ ಸೆಳೆಯುವ ಯಶಸ್ವಿಯಾಗುತ್ತದೆ.

    ಕಲಾವಿದ ಜಯದೇವ ರವರ ವರ್ಣಚಿತ್ರಗಳು ಆಧ್ಯಾತ್ಮಿಕ ಭಾಷೆಯ ಸಂಕೇತಗಳಾಗಿ ರೂಪಗೊಂಡಿದೆ. ಒಬ್ಬ ಕಲಾವಿದನಾದವನು ಏನನ್ನು ದ್ರಶ್ಯ ಕರಿಸುತ್ತಾನೆಯೋ, ಕಲ್ಪಿಸಿಕೊಳ್ಳುತ್ತಾನೆ ಅದರ ಮೂಲಕ ಅನುಭವಿಸುತ್ತಾನೆ ಇದರ ಹಿನ್ನೆಲೆಯಲ್ಲಿ ಅದ್ಭುತವಾದ ಚಿತ್ರಗಳು ಹೊರಹೊಮ್ಮುತ್ತವೆ. ಸಾಮಾನ್ಯವಾಗಿ ಇವರ ವರ್ಣಚಿತ್ರಗಳು ಆಧ್ಯಾತ್ಮಿಕ ಸೂಕ್ಷ್ಮ ವ್ಯತ್ಯಾಸಗಳು, ಕಲಾವಿದನ ತಿಳುವಳಿಕೆಯನ್ನು ಪ್ರತಿನಿಧಿಸುತ್ತದೆ.

    ಜಯದೇವ ರವರ ಕಲಾಕೃತಿಗಳಲ್ಲಿ ಉಪನಿಷತ್ತಿನ ಸರಣಿ, ಆನಂದಲಹರಿ ಹೀಗೆ ವಿಭಿನ್ನ ಕಲಾಕೃತಿಗಳನ್ನು ಬೇರೆಬೇರೆ ರೀತಿಯಲ್ಲಿ ವಿಂಗಡಿಸಬಹುದು. ಇವರು ಶ್ರೀ ಚಕ್ರದ ಭಾಗವಾಗಿ ಯೋಗ ಚಕ್ರಗಳ ನಡುವಿನ ಪ್ರಸ್ತುತತೆಯನ್ನು ಹೊರ ತರುವ ಪ್ರಯತ್ನವನ್ನು ಕಲಾಕೃತಿಗಳಲ್ಲಿ ಮಾಡಿದ್ದಾರೆ.

    ಸೌಂದರ್ಯಲಹರಿಯ ಪ್ರಥಮ ಖಂಡ ಮತ್ತು ಆನಂದಲಹರಿ ಸ್ತೋತ್ರದ 41 ಶ್ಲೋಕಗಳನ್ನು ಆಧರಿಸಿದ ಚಿತ್ರ ಸರಣಿ ನಿಜವಾಗಿಯೂ ಕೂಡ ಕಲಾಸಕ್ತರ ಗಮನಸೆಳೆಯುತ್ತದೆ ವಿಶೇಷವೇನೆಂದರೆ ಪ್ರತಿಯೊಂದು ಶ್ಲೋಕಕ್ಕೂ ಒಂದು ವರ್ಣ ಚಿತ್ರ ರಚನೆ ಅದರ ವಿವರಣೆ ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಇರುವುದು ಬಹಳ ಸೂಕ್ತ ಎನಿಸುತ್ತದೆ. ಹೀಗೆ ಒಂದಕ್ಕೊಂದು ವಿಭಿನ್ನ ಚಿತ್ರಗಳ ಕಲಾ ಸರಣಿಯ ಈ ಪ್ರದರ್ಶನ ವಿನೂತನ ಅನುಭವವನ್ನು ನೀಡಿತು.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!