23.5 C
Karnataka
Friday, May 10, 2024

    ಕೆಟ್ಟ ಗುಣಗಳನ್ನೆ ರೂಢಿಸಿಕೊಂಡವರು ಸುಲಭಕ್ಕೆ ಒಳ್ಳೆಯವರಾಗುವುದು ಕಷ್ಟ

    Must read

    ಸುಮಾ ವೀಣಾ

    ತುಪ್ಪೇರಿದ ದರ್ಪಣದೊಳ್  ಪಜ್ಜಳಿಸಲಾರ್ಪುದೆ ಬಿಂಬಂ–  ಜನ್ನ ಕವಿಯ ಯಶೋಧರ ಚರಿತೆಯಿಂದ ಪ್ರಸ್ತುತ ಸಾಲನ್ನು ಆರಿಸಲಾಗಿದೆ.

    ಜನ್ನ ಕವಿ

    ಹೀನ ಹೃದಯಿಗಳು ಎಂದು ಸಾಬೀತಾದ ಮೇಲೆ ಅವರು ಸಭ್ಯರು ಎಂದು ಒಪ್ಪಿಕೊಳ್ಳುವುದು ಕಷ್ಟ. ನಿರಂತರ ಪಾಪಕೃತ್ಯಗಳಲ್ಲಿ ತೊಡಗುವವರನ್ನು  ಪುಣ್ಯಾತ್ಮರು ಎಂದು   ಒಪ್ಪುವುದು ಅಸಾಧ್ಯದ ಮಾತು.  ಅವರನ್ನು  ಒಳ್ಳೆಯವರು ಎಂದು ಬಿಂಬಿಸುವುದು ಕ್ರೂರ ಮೃಗಕ್ಕೆ  ಮುನಿಯ ವೇಷ ತೊಡಿಸಿದ ಹಾಗಾಗುತ್ತದೆ ಎಂದು ಬರೆದಿದ್ದಾರೆ. ದರ್ಪಣ ಪರಿಶುದ್ಧತೆಯ ಸಂಕೇತ  ಹಾಗೆ  ತುಪ್ಪ  ತೊಡಕಿನ ಸಂಕೇತವಾಗಿ ಇಲ್ಲಿ ಬಂದಿದೆ.

    ಅಭಯ ರುಚಿ ಮತ್ತು ಅಭಯಮತಿ ಇಬ್ಬರೂ ಮಾರಿದತ್ತನ ಮನವೊಲಿಸುವ ಸಂದರ್ಭದಲ್ಲಿ ಆಡಿದ ಮಾತುಗಳಿವು. ಮಾರಿದತ್ತನೆಂಬ ಮಂತ್ರಿ ಮಾರಿದೇವತೆಗೆ ಬಲಿಕೊಡಲು ಅಭಯರುಚಿ ಮತ್ತು ಅಭಯಮತಿ ಎಂಬ  ಇಬ್ಬರು  ಅಣ್ಣ ತಂಗಿಯರನ್ನು ಎಳೆ ತರುತ್ತಾನೆ.  ಮಾರಿದತ್ತ  ಆ ಮಕ್ಕಳನ್ನು ಅವರ ಪೂರ್ವಪರಗಳನ್ನು ಕೇಳುತ್ತಾನೆ.  ಆ ಸಂದರ್ಭದಲ್ಲಿ ಇಬ್ಬರು ಮಕ್ಕಳು ಅಧರ್ಮವನ್ನೇ ಪಾಲಿಸುತ್ತಿರುವವರಿಗೆ ನಮ್ಮ ನಿರ್ಮಲವಾದ ಚರಿತ್ರೆ ರುಚಿಸುವುದಿಲ್ಲ.  ಗುಣಗಳು ಅನ್ನುವ  ರತ್ನದ ಆಭರಣಗಳು ಕಟ್ಟ  ಅರಸರಿಗೆ ಸೊಗಸವು  ಅದು  ತುಪ್ಪ ಸವರಿದ ಕನ್ನಡಿಯಲ್ಲಿ ಪ್ರತಿಬಿಂಬವನ್ನು   ನೋಡುವ ವ್ಯರ್ಥ ಪ್ರಯತ್ನದಂತೆ ಎನ್ನುತ್ತಾನೆ.

     ಜೈವಿಕ ಗುರುತನ್ನು ಕಳೆದು ನಾವು ಇನ್ಯಾವುದೇ ವೇಷ ಹಾಕಿಕೊಂಡರೂ ಅದು ತಾತ್ಕಾಲಿಕವೇ.   ಹಾಗೆ   ಧರಿಸುವ ವೇಷ    ಅಶಾಶ್ವತ. ಹಾಗೆ ಮೂಲತಃ ಕೆಟ್ಟ ಗುಣವನ್ನು ಹೊಂದಿರುವವರು ಪ್ರಾಯಶ್ಚಿತ್ತ ಮಾಡಿಕೊಳ್ಳದೆ ಒಳ್ಳೆಯವರು ಎಂದು ನಟಿಸುವುದು ಮೇಲ್ನೋಟಕ್ಕೆ ಬೇಗ ತಿಳಿಯುತ್ತದೆ. 

    ಷಡ್ರಸಾನ್ನವನ್ನು   ತಿಂದರೂ ಉರ ಹಂದಿ ಹೊಲಸು ಕಂಡಾಗ   ಜಿಗಿದು ತನ್ನ ಮೂಲತನವನ್ನು ಅದು ತೋರಿಸುತ್ತದೆ ಅದು ಅದರ ಗುಣ ಬದಲಾವಣೆ ಮಾಡಲು ಸಾದ್ಯವಿಲ್ಲ.  ಅಂತೆಯೇ   ಕೆಟ್ಟ ಗುಣಗಳನ್ನೆ ರೂಢಿಸಿಕೊಂಡವರು ಸುಲಭಕ್ಕೆ ಒಳ್ಳೆಯವರಾಗುವುದು ಕಷ್ಟ  ಎಂಬುದನ್ನು . “ತುಪ್ಪೇರಿದ ದರ್ಪಣದೊಳ್  ಪಜ್ಜಳಿಸಲಾರ್ಪುದೆ ಬಿಂಬಂ” ಎಂಬ ಮಾತು ಹೇಳುತ್ತದೆ.

    ಈ ಅಂಕಣದ ಹಿಂದಿನ ಸಂಚಿಕೆಗಳ ಧ್ವನಿರೂಪಕವನ್ನು ಆಲಿಸಲು ಈ ಕೆಳಗಿನ ಯೂ ಟ್ಯೂಬ್ ಲಿಂಕ್ ನ್ನು ಕ್ಲಿಕ್ ಮಾಡಿ. ಹಾಗೆಯೇ ನಮ್ಮ ಯೂ ಟ್ಯೂಬ್ ಚಾನಲ್ ಗೆ SUBSCRIBE ಆಗಿರಿ.

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!