27.4 C
Karnataka
Thursday, May 16, 2024

    ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಸಿಪೋರೆಕ್ಸ್ ಕಾರ್ವಿಂಗ್ ಕಾರ್ಯಾಗಾರ

    Must read

    ಬಳಕೂರು ವಿ ಎಸ್ ನಾಯಕ

    ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ ಚಿತ್ರಕಲಾ ಮಹಾವಿದ್ಯಾಲಯ ವಿಷ್ಣುವರ್ಧನ್ ರಸ್ತೆಯಲ್ಲಿರುವ ಶಿಲ್ಪಕಲಾ ವಿಭಾಗದಲ್ಲಿ ಅಡಿ ಇಟ್ಟವರಿಗೆ ಒಂದು ವಿಸ್ಮಯಕಾರಿ ಶಿಲ್ಪ ಕಲಾಲೋಕಕ್ಕೆ ಅಡಿ ಇಟ್ಟ ಅನುಭವವಾಗಿತ್ತು. ಒಂದಕ್ಕಿಂತ ಒಂದು ಕಲಾಕೃತಿಗಳು ಚಿತ್ರಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಕೈಚಳಕದಲ್ಲಿ ಅರಳಿ ಒಂದು ವಿನೂತನವಾದ ಶಿಲ್ಪಕಲಾಲೋಕವೇ ಧರೆಗಿಳಿದುಬಂದಂತೆ ಗೋಚರವಾಗುತ್ತಿದೆ.

    ಹಾಗಾದ್ರೆ ಏನಿರಬಹುದು ಎಂಬ ಕುತೂಹಲ ಕಲಾಸಕ್ತರಿಗೆ ಅನಿಸದೇ ಇರುವುದಿಲ್ಲ. ಚಿತ್ರಕಲಾ ಮಹಾವಿದ್ಯಾಲಯದ ಬಿ. ವಿ. ಎ. ಫೌಂಡೇಶನ್ ತರಗತಿಯ ವಿದ್ಯಾರ್ಥಿಗಳಿಗೆ ಶಿಲ್ಪಕಲಾ ಶಿಬಿರವೊಂದನ್ನು ಆಯೋಜಿಸಲಾಗಿದೆ. ಮಧ್ಯಪ್ರದೇಶದ ಇಂದೋರ್ ಪ್ರಸಿದ್ಧ ಶಿಲ್ಪ ಕಲಾವಿದ

    ಪ್ರಕಾಶ್ ಪಾಟೀದಾರ್ ಅವರ ನಿರ್ದೇಶನದಲ್ಲಿ ಅತಿ ಹಗುರ ಸಿಮೆಂಟ್ ಇಟ್ಟಿಗೆ ಯನ್ನು ಬಳಸಿ ಅದರಲ್ಲಿ ಕಾರ್ವಿಂಗ್ ಮಾಡಿ ವಿಶಿಷ್ಟವಾದ ಕಲಾಕೃತಿಗಳನ್ನು ರಚಿಸುವ ತರಬೇತಿ ಶಿಲ್ಪಕಲಾ ವಿಭಾಗದಲ್ಲಿ ನಡೆಯುತ್ತಿರುವುದು ವಿಶೇಷ . ಬಿ.ವಿ.ಎ ಫೌಂಡೇಶನ್ ತರಗತಿಯ ಸುಮಾರು 140 ಗಿಂತಲೂ ಹೆಚ್ಚಿನ ಕಲಾ ವಿದ್ಯಾರ್ಥಿಗಳಿಗೆ ವಿಭಿನ್ನಬಗೆಯ ಶಿಲ್ಪ ಕಲಾಕೃತಿಗಳನ್ನು ರಚಿಸುವ ಶಿಬಿರ ನಡೆದಿದೆ ಸುಮಾರು ಎರಡು ವಾರಗಳ ಕಾಲ ನಡೆಯುವ ಈ ಶಿಬಿರದಲ್ಲಿ ಕಲಾ ವಿದ್ಯಾರ್ಥಿಗಳು ಇಂಥ ಒಂದು ವಿಭಿನ್ನವಾದ ಶಿಲ್ಪಕಲಾಕೃತಿಗಳನ್ನು ಕಾರ್ವಿಂಗ್ ಮಾಡುವುದರ ಮೂಲಕ ರಚಿಸುವ ಕಾರ್ಯವನ್ನು ಮಾಡಿದ್ದಾರೆ.

    ಶಿಲ್ಪಕಲಾ ಶಿಬಿರದ ಉದ್ದೇಶವೆಂದರೆ ಕಲಾ ವಿದ್ಯಾರ್ಥಿಗಳಿಗೆ ಶಿಲ್ಪಕಲೆಯ ಸಾಧ್ಯತೆಗಳನ್ನು ತಿಳಿಸುವುದು ಬೇರೆಬೇರೆ ಮಾಧ್ಯಮ ಪ್ರಕಾರಗಳನ್ನು ಪರಿಚಯಿಸುವ ಕಾರ್ಯ ನಡೆಯಲಿದೆ. ಶಿಲ್ಪಕಲಾ ಶಿಬಿರದಲ್ಲಿ ಎಂದೂ ನೋಡದ ಅಚ್ಚರಿಯ ಶಿಲ್ಪಕಲಾಕೃತಿಗಳನ್ನು ವಿದ್ಯಾರ್ಥಿಗಳು ಸಿಮೆಂಟ್ ಇಟ್ಟಿಗೆಗಳನ್ನು ಬಳಸಿ ಕಾರ್ವಿಂಗ್ ಮಾಡುವುದರ ಮೂಲಕಒಂದು ಅಚ್ಚರಿಯ ನೋಟ ನೋಟಕ್ಕೆ ಸಾಕ್ಷಿಯಾಗಿದ್ದಾರೆ. ಇಂತಹ ಪ್ರಕಾರದ ಶಿಲ್ಪಗಳನ್ನು ಮಾಡುವುದರಿಂದ ಮತ್ತು ಇನ್ಸ್ಟಾಲೇಷನ್ ಮಾಡಿದರೆ ಮುಂದೆ ಬರುವ ವಿದ್ಯಾರ್ಥಿಗಳಿಗೆ ವಿಭಿನ್ನ ಕಲಾಪ್ರಕಾರಗಳನ್ನು ಪರಿಚಯಿಸಿದ ಹಾಗೆ ಆಗುತ್ತದೆ.

    ಶಿಲ್ಪಕಲಾ ಶಿಬಿರ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಬಾಬು ಜತ್ತಕರ ರವರ ಮುಂದಾಳತ್ವದಲ್ಲಿ ಮತ್ತು ಶಿಲ್ಪ ಕಲಾ ವಿಭಾಗದ ಉಪನ್ಯಾಸಕರಾದ ನಾಗಪ್ಪ ಪ್ರಧಾನಿ, ವಿಶಾಲ್ ಕಾವಟೆಕಾರ್, ಗೋಪಾಲ್ ಕಮ್ಮಾರ್ ರವರ ಸಹಭಾಗಿತ್ವದಲ್ಲಿ, ಮತ್ತು ಈ ಶಿಲ್ಪಕಲಾ ಶಿಬಿರ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾದ ಡಾ : ಬಿಎಲ್ ಶಂಕರ್ ಮತ್ತು ಗೌರವ ಕಾರ್ಯದರ್ಶಿಗಳಾದ ಪ್ರೊ. ಅಪ್ಪಜಯ್ಯ ಸಹಕಾರದೊಂದಿಗೆ ನಡೆಯುತ್ತಿದೆ. ಈ ಕಲಾ ಶಿಬಿರ ಇನ್ನು ಒಂದು ವಾರಗಳ ಕಾಲ ನಡೆಯಲಿದ್ದು ಕಲಾಸಕ್ತರು ಕಂಡುಕೊಳ್ಳಬಹುದಾಗಿದೆ.


    ಸ್ಥಳ:ಚಿತ್ರಕಲಾ ಮಹಾವಿದ್ಯಾಲಯ,ಕರ್ನಾಟಕ ಚಿತ್ರಕಲಾ ಪರಿಷತ್ತು
    ವಿಷ್ಣುವರ್ಧನ್ ರಸ್ತೆ ಓಂಕಾರ್ ಆಶ್ರಮದ ಹತ್ತಿರ ಶ್ರೀನಿವಾಸಪುರ ಬೆಂಗಳೂರು

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!