34.1 C
Karnataka
Monday, May 13, 2024

    ಖಿನ್ನತೆ ಗೊಂದು ಕೊನೆ ಇರಲಿ

    Must read

    ಹಿ೦ದಿ ಚಲನಚಿತ್ರ ದಿಲ್ ಹಿ ದಿಲ್ ಮೆ (ತಮಿಳಿನ ಕಾದಲಾರ್ ದಿನ೦) ನಲ್ಲಿ ಸೋನಾಲಿ ಬೇಂದ್ರೆ ಅವರೊಂದಿಗೆ ಅಭಿನಹಿಸಿದ್ದ ಹೀರೋ ಕುನಾಲ್ ಸಿ೦ಗ್ . ಈ ಚಿತ್ರದಲ್ಲಿ ಹಳ್ಳಿಯಿಂದ ಬಂದ ಒಂದು ಯುವ ಪ್ರತಿಭೆ ಮುಂಬೈನ ಪ್ರತಿಷ್ಠಿತ ವಿಶ್ವವಿದ್ಯಾನಿಲಯದಲ್ಲಿ ಎಂಬಿಎ ಪದವಿಯನ್ನು ತೆಗೆದುಕೊಂಡು ತನ್ನ ಪ್ರೀತಿಯನ್ನು ಪಡೆದಂತಹ ಯುವಕನ ಚಲನಚಿತ್ರ.

    ಆ ಕಾಲದಲ್ಲಿ ಅವನ ರೂಪ ಅಭಿನಯ ಮತ್ತು ಹೇರ್ ಸ್ಟೈಲ್ಗಳಿಗೆ ಮೆಚ್ಚದವರಿಲ್ಲ. ನಾನು ಕುನಾಲ್ ಸಿ೦ಗ್ ಮತ್ತು ಸೋನಾಲಿ ಬೇ೦ದ್ರೆ ರ ದೊಡ್ಡ ಅಭಿಮಾನಿ.

    ಕಳೆದ ವರ್ಷ(2019) ನನ್ನ ಸಂಶೋಧನೆಯ ವಿಚಾರವಾಗಿ ತಮಿಳುನಾಡಿಗೆ ಪ್ರಯಾಣಿಸುತ್ತಿದ್ದಾಗ ಅದೇ ಕಾದಲಾರ್ ದಿನ೦ ಚಲನಚಿತ್ರವನ್ನು SRS ಬಸ್ ನಲ್ಲಿ ಹಾಕಿದ್ದರು. ಬಾಲ್ಯದಲ್ಲಿ ನೋಡಿದ್ದ ಚಲನಚಿತ್ರವನ್ನು ನೆನಪಿಸಿಕೊಂಡು, ಆ ಹೀರೋ ಕುನಾಲ್ ಸಿಂಗ್ ಬಗ್ಗೆ ಗೂಗಲ್ ನಲ್ಲಿ ಸರ್ಚ್ ಮಾಡಿದಾಗ ಆಘಾತಕಾರಿ ಘಟನೆಯೊಂದು ತಿಳಿಯಿತು.

    ಫೆಬ್ರವರಿ 7, 2008 (ಇಂದಿಗೆ ಸರಿಯಾಗಿ 14 ವರ್ಷಗಳ ಹಿಂದೆ) ತನ್ನ ಮೂವತ್ತು ನೇ ವರ್ಷಕ್ಕೆ ಕುನಾಲ್ ಸಿಂಗ್ ಅವರು ಮುಂಬೈನ ಅಪಾರ್ಟ್ಮೆಂಟ್ ಒಂದರಲ್ಲಿ ಸಂಸಾರ ಹಾಗೂ ಪ್ರೇಮ ವೈಫಲ್ಯ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದರು ವಿಷಯ ತಿಳಿದು ಆಘಾತವಾಯಿತು.

    ಒಂದು ಚಲನ ಚಿತ್ರದಲ್ಲಿ ದಕ್ಷಿಣ ಏಷ್ಯಾದಲ್ಲೇ ಮಿಂಚಿದ ಯುವಕನ ನಿಜ ಜೀವನದ ದಾರುಣ ಕಥೆ ವ್ಯಥೆ ಬೇಸರವೆನಿಸಿತು. ಒಂದು ಕಾಲಘಟ್ಟದಲ್ಲಿ ಅತ್ಯುನ್ನತವಾದ ಹಂತಕ್ಕೆ ಹೋದ ಹೀರೋ ಖಿನ್ನತೆ ಇ೦ದ ಆತ್ಮಹತ್ಯೆ ಮಾಡಿಕೊಂಡಿದ್ದು ಬೇಸರದ ಸಂಗತಿ.

    ಈ ಖಿನ್ನತೆ ಗೊಂದು ಕೊನೆ ಇರಲಿ. ಜೀವನ ವಿಶಾಲವಾಗಿದೆ ಏಳು ಬೀಳುಗಳನ್ನೆಲ್ಲಾ ಸಮನಾಗಿ ಸ್ವೀಕರಿಸೋಣ.

    ಮಿಸ್ ಯು ಕುನಾಲ್ ಸಿಂಗ್

    ಡಾ. ಮಲ್ಲಿಕಾರ್ಜುನ ಎಚ್ ಎಂ
    ಡಾ. ಮಲ್ಲಿಕಾರ್ಜುನ ಎಚ್ ಎಂ
    ಬೆಂಗಳೂರಿನ ಚನ್ನಸಂದ್ರದಲ್ಲಿರುವ ಆರ್ ಎನ್ ಎಸ್ ಐ ಟಿ ಯಲ್ಲಿ ವಿದ್ಯುನ್ಮಾನ ಹಾಗೂ ಉಪಕರಣಗಳ ವಿಭಾಗದಲ್ಲಿ ಉಪನ್ಯಾಸಕರಾಗಿರುವ ಮಲ್ಲಿಕಾರ್ಜುನ ಪ್ರವೃತ್ತಿಯಿಂದ ಸಂಶೋಧಕರು ಮತ್ತು ಬರಹಗಾರರು. ಮೆದುಳಿನ ತರಂಗಗಳು, ನಿದ್ರಾಹೀನತೆ, ಖಿನ್ನತೆ ಈ ವಿಷಯಗಳ ಬಗ್ಗೆ ಸಂಶೋಧನೆ ಮಾಡಿದ್ದಾರೆ. ಮನೋ ವೈಜ್ಞಾನಿಕ ಹಾಗೂ ವ್ಯಕ್ತಿತ್ವ ವಿಕಸನ ಬರಹಗಳನ್ನು ಸೊಗಸಾಗಿ ಬರೆಯುತ್ತಾರೆ.
    spot_img

    More articles

    2 COMMENTS

    LEAVE A REPLY

    Please enter your comment!
    Please enter your name here

    Latest article

    error: Content is protected !!