30.2 C
Karnataka
Tuesday, May 14, 2024

    ಮಕ್ಕಳಿಗೆ ಪರಿಸರದ ಪಾಠ ಹೇಳಿಕೊಟ್ಟಾಗಲೇ ಪರಿಸರ ದಿನಾಚರಣೆಗೆ ಅರ್ಥ

    Must read

    ವಿಶಾಲಾರ್ಥದಲ್ಲಿ ಜೀವಿಗಳ ಬದುಕು, ಬೆಳವಣಿಗೆಯ ಮೇಲೆ ಪ್ರಭಾವ ಬೀರುವ ಸುತ್ತಲಿನ ಸ್ಥಿತಿ ಹಾಗೂ ಘಟಕಗಳ ಒಟ್ಟಾರೆ ಅಂಶಗಳ ಮೊತ್ತವೇ ಪರಿಸರ. ಸೃಷ್ಟಿ ಉಗಮದ ನಂತರ ಭೌಗೋಳಿಕ ಬದಲಾವಣೆಯಲ್ಲಿನ ಸಹಜ ಪರಿಸ್ಥಿತಿಯಲ್ಲಿ ಜೀವಿಗಳ ಉಗಮ. ಏಕಕೋಶ ಜೀವಿಯಿಂದ ಮಿಲಿಯನ್ ಮಿಲಿಯನ್ ವರ್ಷಗಳ ನಂತರ ಆದಿಮಾನವನ ಅಸ್ತಿತ್ವದ ಆರಂಭ. ಸ್ವಾಭಾವಿಕ ಪರಿಸರ ಜೀವಿಯಾಗಿದ್ದ ಮಾನವನಲ್ಲಿ ಆಧುನಿಕತೆ ಜಾಗೃತಿಯೇ ಪರಿಸರದ ವಿನಾಶದ ಮೊದಲ ಹೆಜ್ಜೆ.

    ವಿಜ್ಞಾನ, ತಾಂತ್ರಿಕತೆಯ ಸೋಗಿನಲ್ಲಿ ಪರಿಸರ ವಿನಾಶದ ತೀವ್ರತೆ ಪಡೆಯಿತು. 21ನೇ ಶತಮಾನದ ವೇಳೆಗೆ ಭೂ ಭಾಗದ ಶೇ.80 ಕಾಡು ನಾಶವಾಗಿದೆ ಎಂಬುದು ಒಂದು ಅಂದಾಜು. ರಾಷ್ಟ್ರೀಯ ಅರಣ್ಯ ನೀತಿ ಪ್ರಕಾರ ಶೇ.33 ರಷ್ಟು ಅರಣ್ಯವಿದ್ದರೆ ಅಗತ್ಯ ಪ್ರಮಾಣದ ಮಳೆ ಬೀಳುವುದು. ಸದ್ಯ ಇತ್ತೀಚಿನ ವರದಿಯ ಪ್ರಕಾರ ಭಾರತದಲ್ಲಿ ಶೇ.25 ಭಾಗ ಅರಣ್ಯ ವ್ಯಾಪಿಸಿದೆ. ಅಲ್ಪ ಪ್ರಮಾಣದಲ್ಲಿ ಅರಣ್ಯ ಪ್ರದೇಶ ವೃದ್ಧಿಸಿರುವುದು ಸಮಾಧಾನಕರ ಅಂಶ.

    ಅರಣ್ಯ ನಾಶಕ್ಕೆ ಪ್ರಮುಖ ಕಾರಣಗಳು:

    ವ್ಯವಸಾಯಕ್ಕಾಗಿ ಕಾಡು ನಾಶ. ವಾಣಿಜ್ಯ ಉದ್ದೇಶಕ್ಕಾಗಿ ಮರದಿಮ್ಮಿಗಳ ರವಾನೆ. ಗಣಿಗಾರಿಕೆ, ಜನಸಂಖ್ಯಾ ಸ್ಪೋಟ, ನಗರೀಕರಣ, ಔದ್ಯೋಗಿಕರಣ, ಜಲಾಶಯಗಳ ನಿರ್ಮಾಣ, ಅರಣ್ಯ ಬೆಂಕಿಗಾಹುತಿಗಳಿಂದ ಅರಣ್ಯ ತೆರವುಗಳ್ಳುತ್ತಿದೆ. 2018 ರಲ್ಲಿ ಭಾರತದಲ್ಲಿ 19310 ಹೆಕ್ಟೇರ್ ಅರಣ್ಯ ನಾಶವಾಗಿದೆ. ಜನಸಂಖ್ಯೆ ಹೆಚ್ಚಾದಂತೆ ಕಾಡು ನಾಶಗೊಳಿಸಿ ವ್ಯವಸಾಯ ಭೂಮಿಗೆ ಪರಿವರ್ತನೆ ಹೆಚ್ಚುತ್ತಿದೆ. ಅರಣ್ಯದ ಸಾಂದ್ರತೆ ಕುಂಠಿತಗೊಳ್ಳುತ್ತಿದೆ. ವನ್ಯ ಜೀವಿಗಳು ನಾಡು ಪ್ರವೇಶಿಸುತ್ತಿರುವುದೇ ಇದಕ್ಕೆ ಸ್ಪಷ್ಟ ಉದಾಹರಣೆ.

    ಅರಣ್ಯದ ಪ್ರಯೋಜನಗಳು

    ಆಹಾರ, ಅರಿವೆಯ ಮೂಲಾಧಾರ, ಭೂ ಸವಕಳಿ ತಡೆಯುವುದರ ಮೂಲಕ ಮಣ್ಣಿನ ಫಲವತ್ತತೆ ಕಾಪಾಡುವುದು. ಪ್ರವಾಹ ನಿಗ್ರಹಿಸುವುದು. ಮರಗಳ ಬೇರು ನೀರು ಹೀರಿ ನೀರಾವಿ ಮೂಲಕ ವಾತಾವರಣ ಸೇರುಸುವುದು. ವಾತಾವರಣ ನಿಯಂತ್ರಿಸುವುದು. ಇಂಗಾಲದ ಡೈ ಆಕ್ಸ್ಯೆಡ್ ಹೀರುವ ಮೂಲಕ ಜಾಗತಿಕ ತಾಪಮಾನ ಸ್ಥಿರವಾಗಿರಿಸುವುದು. ಹಸಿರು ಮನೆ ಅನಿಲಗಳ ಮೂಲಕ ದ್ಯುತಿ ಸಂಶ್ಲೇಷಣೆ ಕ್ರಿಯೆಗೆ ಪೂರಕ. ಕಡಲ ತೀರದ ತೆಂಗಿನ ಮರಗಳು ಬಿರುಗಾಳಿ ತಿರುಗಿಸುವುವು. ಜೀವಿಗಳ ಜೀವಾನಿಲ ಆಮ್ಲಜನಕ ಉತ್ಪಾದಿಸುವ ಕಾರ್ಖಾನೆಗಳು.

    ಅರಣ್ಯ ನಾಶ ತಡೆಯಲು ಕ್ರಮಗಳು

    ಕಾಡು ಕಡಿಯುವುದನ್ನು ನಿಯಂತ್ರಿಸಬೇಕು. ಅರಣ್ಯ ಬೆಂಕಿ ತಡೆಯಬೇಕು. ಮರು ಅರಣ್ಯೀಕರಣಕ್ಕೆ ಕ್ರಮ. ಕೃಷಿ ಭೂಮಿ ಪರಿವರ್ತನೆಗೆ ತಡೆ. ಅರಣ್ಯ ರಕ್ಷಣೆಗೆ ಸಾರ್ವಜನಿಕ ತಿಳಿವಳಿಕೆ ರೂಪಿಸುವುದು. ಅರಣ್ಯಗಳ್ಳರನ್ನು ಶಿಕ್ಷಿಸುವುದು. ಹೆದ್ದಾರಿ ನಿರ್ಮಾಣಗಳನ್ನು ತಡೆಯುವುದು. ವಿದ್ಯುತ್ ಸಂಪರ್ಕಕ್ಕಾಗಿ ಮರಗಳ ಮಾರಣ ಹೋಮ ತಡೆಯುವದು.

    ಪರಿಸರ ಉಳಿಸಲು ಪ್ರಮುಖ ಕರ್ತವ್ಯಗಳು

    ಜಲ ವಿದ್ಯುತ್ ಬದಲು ಸೌರ ವಿದ್ಯುತ್ ಬಳಸಬೇಕು. ಅನಗತ್ಯವಾಗಿ ಶಕ್ತಿ ಪೋಲು ಮಾಡದೆ ಸಂರಕ್ಷಣೆ ಮಾಡಲು ಶಿಕ್ಷಣ ನೀಡಬೇಕು.

    ಜಲ ಮೂಲಗಳನ್ನು ಉಳಿಸಬೇಕು. ಮಳೆ ನೀರನ್ನು ಸಂರಕ್ಷಿಸಬೇಕು. ಮಳೆಕೊಯ್ಲು ವಿಧಾನ ಕಡ್ಡಾಯಗೊಳಿಸಬೇಕು.

    ಪರಿಸರ ಸ್ನೇಹಿ ಉತ್ಪನ್ನಗಳನ್ನು ಬಳಸುವುದು. ಪ್ಲಾಸ್ಟಿಕ್ ಬಳಕೆಗೆ ಕಡಿವಾಣ. ಅನಗತ್ಯ ವಾಹನ ಬಳಕೆ ನಿರ್ಬಂಧಿಸಬೇಕು.

    ಸಾವಯವ ಗೊಬ್ಬರ ಬಳಕೆ ಹೆಚ್ಚಿಸಬೇಕು.

    ಮರಗಿಡಗಳ ನೆಡಲು ಶಿಕ್ಷಣ ನೀಡಬೇಕು. ರಿಸೈಕಲ್ ಹಾಗೂ ಪುನರ್ ಉಪಯೋಗಿಸವ ತಂತ್ರಜ್ಞಾನ ಅಭಿವೃದ್ಧಿ ಪಡಿಸಬೇಕು.

    ಮಳೆ ಕಾಡುಗಳನ್ನು ರಕ್ಷಿಸಬೇಕು. ಸರ್ಕಾರ, ಅರಣ್ಯ ಇಲಾಖೆಯೊಂದಿಗೆ ಸಾರ್ವಜನಿಕರ ಸಹಭಾಗಿತ್ವದಿಂದ ಪರಿಸರ ಉಳಿವು ಸಾಧ್ಯ.

    ಪರಿಸರದಲ್ಲಿ ಸಿಕ್ಕಿದ್ದನ್ನೆಲ್ಲಾ ಬಾಚುವ ಪ್ರವೃತ್ತಿಯಿಂದ ವಿನಾಶದತ್ತ ಸಾಗುತ್ತಿದ್ದೇವೆ. ಮುಂದಿನ ಪೀಳಿಗೆಗೆ ಹಣ, ಅಂತಸ್ತಿಗಿಂತಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ನೀರು, ಶುದ್ಧಗಾಳಿ, ಫಲವತ್ತಾದ ಭೂಮಿ ಇಲ್ಲವಾದಲ್ಲಿ ಜೀವಿಗಳ ಅಸ್ತಿತ್ವವೇ ಇಲ್ಲ. ಬುದ್ದಿ ಜೀವಿಗಳಾದ ಮಾನವ ಪ್ರಬೇಧವೇ ಪರಿಸರದ ಬಗ್ಗೆ ಮುಂದಾಲೋಚನೆ ಇಲ್ಲ. ಮಕ್ಕಳಿಗೆ ಪರಿಸರದ ಪಾಠ ಹೇಳಿಕೊಟ್ಟಲ್ಲಿ ಪರಿಸರ ದಿನಾಚರಣೆಗೆ ಅರ್ಥವಿದೆ.

    Photo by Artem Podrez from Pexels

    ಕೆ ಎಸ್ ವೀರೇಶ ಪ್ರಸಾದ್
    ಕೆ ಎಸ್ ವೀರೇಶ ಪ್ರಸಾದ್https://kannadapress.com/
    ವೃತ್ತಿ ಯಿಂದ ವಿಜ್ಞಾನ ಶಿಕ್ಷಕ . ಪ್ರವೃತ್ತಿಯಿಂದ ಪತ್ರಕರ್ತ.
    spot_img

    More articles

    2 COMMENTS

    1. ವಾಸ್ತವಕ್ಕೆ ಕೈಗನ್ನಡಿ ನಿನ್ನ ಬರಹ. ಸಲಹೆ ಕ್ರಮಗಳು ವೈಜ್ಞಾನಿಕವಾಗಿವೆ.

    LEAVE A REPLY

    Please enter your comment!
    Please enter your name here

    Latest article

    error: Content is protected !!