Centre has agreed for procurement of additional 3 lakh metric tons of Ragi:ಮೂರು ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ ರಾಗಿ ಖರೀದಿಗೆ ಕೇಂದ್ರ ಸರ್ಕಾರದ ಒಪ್ಪಿಗೆ

NEW DELHI APR 30
ಮೂರು ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ ರಾಗಿ ಖರೀದಿಗೆ ಕೇಂದ್ರ ಸರ್ಕಾರದ ಒಪ್ಪಿಗೆ ನೀಡಿದೆ. ಈ ಮೂಲಕ ರಾಗಿ ಬೆಳೆಗಾರರ ದೊಡ್ಡ ಸಂಕಷ್ಟ ಬಗೆಹರಿಸಿದಂತಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ನವದೆಹಲಿಯಲ್ಲಿ ಮುಖ್ಯಮಂತ್ರಿಗಳ ಹಾಗೂ ಸಿಜೆಗಳ ಸಮ್ಮೇಳನದಲ್ಲಿ ಪಾಲ್ಗೊಂಡ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ರಾಜ್ಯದ ಐದಾರು ಜಿಲ್ಲೆಗಳಲ್ಲಿ ರಾಗಿ ಬೆಳೆದ ರೈತರಿಗೆ ಬೆಲೆ ಸಿಗಬೇಕೆಂಬ ಕಾರಣದಿಂದ ಮೊದಲು 2 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿ ಮಾಡಲಾಯಿತು. ಪುನ: ಬೇಡಿಕೆ ಬಂದ ಹಿನ್ನೆಲೆಯಲ್ಲಿ 485 ಕೋಟಿ ರೂ.ಗಳನ್ನು ಮಂಜೂರು ಮಾಡಿ 1.14 ಲಕ್ಷ ಮೆಟ್ರಿಕ್ ಟನ್ ಖರೀದಿ ಮಾಡಲಾಯಿತು. ರಾಗಿ ಹೆಚ್ಚು ಬೆಳೆದ್ದದ್ದರಿಂದ ಖರೀದಿಗೆ ರೈತರ ಒತ್ತಾಸೆಯ ಮೇರೆಗೆ ಕೇಂದ್ರ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೇಂದ್ರ ಸರ್ಕಾರ ಒಪ್ಪಿಗೆ ನೀಡಿರುವುದರಿಂದ ರಾಗಿ ಖರೀದಿಯನ್ನು ಪ್ರಾರಂಭಿಸಲಾಗುವುದು. ಇದಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಹಾಗೂ ಕೇಂದ್ರ ಆಹಾರ ಸಚಿವ ಪಿಯೂಶ್ ಗೋಯಲ್ ಅವರಿಗೆ ಧನ್ಯವಾದಗಳನ್ನು ಅರ್ಪಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

ಬಿರುಸಾಗಿ ಆಡಳಿತ ಮಾಡಿದರೆ ಡಿ.ಕೆ.ಶಿ ಅವರಿಗೆ ತಡೆದುಕೊಳ್ಳಲು ಸಾಧ್ಯವಿಲ್ಲ:

“ನಾನು ಬಹಳ ಸರಳವಾಗಿ ಆಡಳಿತ ಮಾಡಿದಾಗಲೇ ಡಿ.ಕೆ ಶಿವಕುಮಾರ್ ಅವರಿಗೆ ಇಷ್ಟು ತೊಂದರೆಯಾಗಿದೆ. ಇನ್ನು ಬಿರುಸಾಗಿ ಆಡಳಿತ ಮಾಡಿದರೆ ಅವರಿಗೆ ತಡೆದುಕೊಳ್ಳಲು ಸಾಧ್ಯವಿಲ್ಲ” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ನವದೆಹಲಿಯಲ್ಲಿ ಮುಖ್ಯಮಂತ್ರಿಗಳ ಹಾಗೂ ಸಿಜೆಗಳ ಸಮ್ಮೇಳನದಲ್ಲಿ ಪಾಲ್ಗೊಂಡ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ತಮ್ಮ ಬಗ್ಗೆ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತಾ ನನ್ನ ಆಡಳಿತದಲ್ಲಿ ಅವರಿಗೆ ಸಾಕಷ್ಟು ತೊಂದರೆಯಾಗಿದೆ. ಏನೇನೂ ಪ್ರಯತ್ನಗಳನ್ನು ಮಾಡಿದರು. ಯಾವುದೂ ಯಶಸ್ವಿಯಾಗಲಿಲ್ಲ ಎಂದರು.

ಕಾಂಗ್ರೆಸ್‍ನವರು ಹಿಟ್ ಅಂಡ್ ರನ್ ಮಾಡಲಾಗುವುದಿಲ್ಲ:

ಪಿಎಸ್‍ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ತನಿಖೆಗೆ ಒಂದು ವ್ಯವಸ್ಥೆ ಇದೆ. ಕಾನೂನಿನ ಪ್ರಕಾರವೇ ಆಗಬೇಕು. ನಿಮಗೆ ಅದನ್ನು ಎದುರಿಸಲು ತಾಕತ್ತು ಇಲ್ಲ ಎಂದರೆ ಈ ರೀತಿ ದಿಕ್ಕು ಬದಲಾಯಿಸಬಾರದು. ನೀವೇನೋ ಮಾಹಿತಿಯನ್ನು ಹೇಳಿದ್ದೀರಿ. ಅದರ ಪೂರ್ಣ ಮಾಹಿತಿಯನ್ನು ಕೊಡಿ ಎಂದಷ್ಟೇ ಕೇಳಿದ್ದೇವೆ. ಅದಕ್ಕಾಗಿ ಇಷ್ಟು ವಾದವಿವಾದ ಮಾಡುವ ಅಗತ್ಯವಿಲ್ಲ. ತನಿಖೆಯಲ್ಲಿ ಯಾರ ಹೆಸರು ಬಂದರೂ ತನಿಖೆ ಮಾಡಬೇಕಾಗುತ್ತದೆ. ಹಿಂದೂ ಕೂಡ ಈ ರೀತಿಯಾಗಿದೆ. ಆದ್ದರಿಂದ ಕಾಂಗ್ರೆಸ್‍ನವರು ಹಿಟ್ ಅಂಡ್ ರನ್ ಮಾಡಲಾಗುವುದಿಲ್ಲ ಎಂದರು.

ಬದಲಾವಣೆ ಹಾಗೂ ಸುಧಾರಣೆ ತರಬೇಕೆಂದು ಸೂಚನೆ
ನೇಮಕಾತಿ ಪ್ರಕ್ರಿಯೆಯಲ್ಲಿ ಆಗಿರುವ ಅಕ್ರಮ ಸರ್ಕಾರದ ವೈಫಲ್ಯ ಅಲ್ಲ. ಹಿಂದೂ ಕೂಡ ಯು.ಪಿ.ಎಸ್.ಸಿ ಮಾದರಿಯಲ್ಲೇ ನೇಮಕಾತಿ ಆಗುತ್ತಾ ಬಂದಿದೆ. ಮೊದಲ ಬಾರಿಗೆ ಬ್ಲೂಟೂತ್ ತಂತ್ರಜ್ಞಾನವನ್ನು ಈ ರೀತಿ ಕುಲಬುರಗಿಯ ಶಿಕ್ಷಣ ಸಂಸ್ಥೆಯಲ್ಲಿ ಆಗಿದೆ. ಚಾಪೆ ಕೆಳಗೆ ಹೋಗುವಂಥವರಿಗೆ ರಂಗೋಲಿ ಕೆಳಗೆ ಹೋಗುವ ಪರೀಕ್ಷಾ ವ್ಯವಸ್ಥೆಯನ್ನು ತರುವ ಅವಶ್ಯಕತೆ ಇದೆ. ಹಿಂದೂ ಕೂಡ ಬೇಕಾದಷ್ಟು ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಪೊಲೀಸ್ ಆಯ್ಕೆಯಲ್ಲಿಯೂ ಎರಡು ಮೂರು ಬಾರಿ ಮುಂದೂಡಿರುವ ಪ್ರಕರಣಗಳೂ ಆಗಿವೆ. ಪರೀಕ್ಷಾ ವಿಧಾನದಲ್ಲಿ ಬದಲಾವಣೆ ಹಾಗೂ ಸುಧಾರಣೆ ತರಬೇಕು ಎಂದು ಸೂಚನೆ ನೀಡಿದ್ದೇನೆ. ಯಾವುದೇ ಅಕ್ರಮಗಳು ನಡೆಯದಂತೆ ಮರುಪರೀಕ್ಷೆಯನ್ನು ಅತಿಶೀಘ್ರದಲ್ಲಿಯೇ ಮಾಡಬೇಕೆಂದು ಸೂಚಿಸಲಾಗಿದೆ.

ಆಧಾರರಹಿತ ಆರೋಪಗಳು

ವಿರೋಧಪಕ್ಷ ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಇದು ಪೂರ್ಣ ಆಧಾರರಹಿತ. ಇಂಥ ಆಧಾರರಹಿತ ಆರೋಪಗಳನ್ನು ಮಾಡಿ ತನಿಖೆಯ ದಿಕ್ಕುತಪ್ಪಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಸಂಪೂರ್ನವಾಗಿ ಎಫ್.ಎಸ್.ಎಲ್ ವರದಿ ಬಂದಿದೆ. ಅದರ ಆಧಾರದ ಮೇಲೆ ದಾಳಿಯಾಗಿದೆ. ಯಾವುದೇ ಪಕ್ಷವಿರಲಿ, ಯಾರೇ ಆಗಲಿ ನಿಷ್ಪಕ್ಷಪಾತ ತನಿಖೆಯಾಗುತ್ತಿದೆ. ಇದನ್ನು ಅವರಿಗೆ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಅವರ ಬುಡಕ್ಕೆ ನಿರು ಬಂದಾಗ ಹೀಗೆಲ್ಲ ಮಾತನಾಡುತ್ತಾರೆ. ಪಿಯುಸಿ, ಎಸ್.ಎಸ್.ಎಲ್ ಸಿ ಅಥವಾ ಯಾವುದೇ ಪರೀಕ್ಷೆ ಇರಲಿ ಪ್ರಶ್ನೆಪತ್ರಿಕೆ ಸೋರಿಕೆಯಾದಾಗ ಮರುಪರೀಕ್ಷೆ ಆಗಿದೆ. ಆ ನೀತಿ ಇಂದಿನದಲ್ಲ. 30-40 ವರ್ಷಗಳಿಂದ ಇದೆ. ಅದನ್ನೇ ಮಾಡಿದ್ದೇವೆ. ಹೊಸ ಪರೀಕ್ಷೆ ಅಂದರೆ ಅಧಿಸೂಚನೆ ರದ್ದು ಮಾಡಿಲ್ಲ. ಯಾರಿಗೆ ಅವಕಾಶ ಸಿಕ್ಕಿತ್ತೊ ಅವರಿಗಷ್ಟೇ ಅವಕಾಶ ಕಲ್ಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು.

LEAVE A REPLY

Please enter your comment!
Please enter your name here