Sri Jagannatha Daasaru:ಹರಿದಾಸ ಚರಿತೆಯ ಅನಾವರಣದ ಅಸ್ತಿಭಾರ

ವಾದಿರಾಜ ದೇಸಾಯಿ

ಕನ್ನಡ ನಾಡಿನಲ್ಲಿ ಹರಿದಾಸ ಪರಂಪರೆಗೆ ದೊಡ್ಡ ಇತಿಹಾಸವೇ ಇದೆ. ಕನ್ನಡಕ್ಕೆ ಹರಿದಾಸ ಸಾಹಿತ್ಯದ ಕೊಡುಗೆಯೂ ಅನನ್ಯ. ಇದನ್ನು ಪರಿಚಯಿಸುವುದಕ್ಕೆ ಚಿತ್ರ ಮಾಧ್ಯಮವನ್ನು ಸಾಧನವನ್ನಾಗಿ ಬಳಸಿಕೊಳ್ಳುವ ಪ್ರಯೋಗ ಇದೀಗ ಶುರುವಾಗಿದೆ.
ಹೊಸ ಕಲಾವಿದರಿಗೆ ಅವಕಾಶ ನೀಡುವ ಮೂಲಕವೇ ಅಂತಹ ಪ್ರಯೋಗಕ್ಕೆ ಮಧುಸೂದನ ಹವಾಲ್ದಾರ್ ಮುಂದಾಗಿದ್ದಾರೆ.

ತ್ರಿವಿಕ್ರಮ ಜೋಷಿ (ವಿಜಯದಾಸರು), ಪ್ರಭಂಜನ ದೇಶಪಾಂಡೆ (ಗೋಪಾಲ ದಾಸರು).

ಹರಿದಾಸ ಸಾಹಿತ್ಯವನ್ನು ಸರಳವಾಗಿ, ಕನ್ನಡದಲ್ಲಿ ಜನಸಾಮಾನ್ಯರಿಗೆ ತಲುಪಿಸುವಲ್ಲಿ ಪುರಂದರದಾಸರು, ಕನಕದಾಸರು, ವಿಜಯದಾಸರು, ಗೋಪಾಲ ದಾಸರು, ಜಗನ್ನಾಥ ದಾಸರ ಪಾತ್ರ ಬಲು ದೊಡ್ಡದು.
ಈ ನಿಟ್ಟಿನಲ್ಲಿ, ಆರಂಭದಲ್ಲಿ ಜಗನ್ನಾಥ ದಾಸರ ಜೀವನ ಚರಿತ್ರೆಯನ್ನು ದೃಶ್ಯ ಮಾಧ್ಯಮದ ಮೂಲಕ ಪ್ರಸ್ತುತಪಡಿಸುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ.

ಡಾ. ಮಧುಸೂದನ ಹವಾಲ್ದಾರ್, ನಿರ್ದೇಶಕ (ಬಲಬದಿಗೆ)

ಚಿತ್ರಕತೆ, ನಿರೂಪಣೆ ಪ್ರೇಕ್ಷಕರನ್ನು ಹಿಡಿದಿಡುತ್ತದೆ. ಸಂಭಾಷಣೆಯಲ್ಲಿ ಇನ್ನಷ್ಟು ಸುಧಾರಣೆಯ ಅಗತ್ಯವಿತ್ತು .ಜಗನ್ನಾಥ ದಾಸರ ಪಾತ್ರದಲ್ಲಿ ಶರತ್ ಜೋಷಿ, ಅದರಲ್ಲೂ ಅಂತಿಮ ದೃಶ್ಯದಲ್ಲಿ ಭಾವತನ್ಮಯರಾಗಿ ನಟಿಸಿದ್ದನ್ನು ನೋಡಿದರೆ, ಎರಡನೇ ಭಾಗದಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುವ ನಿರೀಕ್ಷೆ ಹುಟ್ಟಿಸುತ್ತಾರೆ.

ಗೋಪಾಲ ದಾಸರಾಗಿ ಪ್ರಭಂಜನ ದೇಶಪಾಂಡೆ ಲವಲವಿಕೆಯಿಂದ ನಟಿಸಿ, ಪಾತ್ರಕ್ಕೆ ಜೀವ ತುಂಬಿದ್ದಾರೆ.ವಿಜಯ ದಾಸರಾಗಿ ತ್ರಿವಿಕ್ರಮ ಜೋಷಿ ಅವರು ಪಾತ್ರದ (ಗುರುವಾಗಿ) ಗಾಂಭೀರ್ಯವನ್ನು ಅರಿತು ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ.

ಹಾಡುಗಳು ಚಿತ್ರದ ಹೈಲೈಟ್ಸ್. ಕೊನೆಯಲ್ಲಿ, “ಜಗನ್ನಾಥ ವಿಠ್ಠಲ” ಎಂಬ ಅಂಕಿತ ಸಿಗುವ ಸನ್ನಿವೇಶದ ಮೂಲಕ ನಿರ್ದೇಶಕರು ಮುಂದಿನ ಭಾಗದ ಬಗ್ಗೆ ಕುತೂಹಲವನ್ನು ಮೂಡಿಸುತ್ತಾರೆ.


ಕನ್ನಡಪ್ರಭ , ವಿಜಯ ಕರ್ನಾಟಕ ಸೇರಿದಂತೆ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ವಾದಿರಾಜ ದೇಸಾಯಿ ನಾಡಿನ ಹಿರಿಯ ಪತ್ರಕರ್ತರು

LEAVE A REPLY

Please enter your comment!
Please enter your name here