ಆರ್ಟ್ ಫಾರ್ ಹಾರ್ಟ್ -ರೇಖೆಗಳ ಓಟ, ಕಲಾತ್ಮಕ ನೋಟ

ವಿ ಎಸ್ ನಾಯಕ ಬಳಕೂರು

ಮಕ್ಕಳಲ್ಲಿ ಅಗಾಧವಾದ ಶಕ್ತಿಯಿದೆ. ಅವರಲ್ಲಿ ಅಡಗಿರುವ ಅಗಾಧವಾದ ಶಕ್ತಿಯನ್ನು ಹೊರತರಬೇಕಾದರೆ ಸರಿಯಾದ ಮಾರ್ಗದರ್ಶನ ನೀಡಿದರೆ ಅವರು ತಮ್ಮ ಜೀವನದಲ್ಲಿ ಸಾಧನೆಯ ಶಿಖರದಲ್ಲಿ ಮುಂದುವರಿಯುತ್ತಾರೆ. ಅದೇ ರೀತಿ ಕಲೆಯೆಂಬುದು ಒಂದಲ್ಲ ಒಂದು ರೀತಿಯಲ್ಲಿ ಮಕ್ಕಳಲ್ಲಿ ಅಡಗಿರುತ್ತದೆ. ಸರಿಯಾದ ಸಂದರ್ಭಕ್ಕೆ ಸರಿಯಾದ ಮಾರ್ಗದರ್ಶನ ಗುರಿ ತೋರಿದರೆ ಜೀವನದಲ್ಲಿ ಯಾರು ಊಹಿಸಲಾರದ ಕಲಾವಿದರಾಗಿ ಹೊರ ಹೊಮ್ಮುವುದರಲ್ಲಿ ಸಂದೇಹವಿಲ್ಲ.

ಕಲಾವಿದ ವಿಜಯ್ ಕುಮಾರ್ ಯಾದವ್

ಇಂತಹ ಎಳೆಯ ಮಕ್ಕಳಲ್ಲಿ ಅಡಗಿದ ಕಲಾಪ್ರತಿಭೆಯನ್ನು ಹೊರಹೊಮ್ಮಿಸಲು ಬೆಂಗಳೂರಿನ ಮಲ್ಲೇಶ್ವರದ ಮಾರ್ಗೋಸಾ ರಸ್ತೆಯಲ್ಲಿ ಆರ್ಟ್ ಫಾರ್ ಹಾರ್ಟ್ ಎಂಬ ಕಲಾ ಸಂಸ್ಥೆಯನ್ನು ಪ್ರಾರಂಭಿಸಿದ ಕೀರ್ತಿ ಕಲಾವಿದ ವಿಜಯ್ ಕುಮಾರ್ ಯಾದವ್ ಅವರಿಗೆ ಸಲ್ಲಬೇಕು. ಇವರು ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಅಧ್ಯಯನವನ್ನು ಮುಗಿಸಿ ಉತ್ತಮ ಕಲಾಕಾರರಾಗಿ ಹೊರಹೊಮ್ಮಿ ತಾವು ಕೂಡ ಹಲವಾರು ಕಲಾ ಪ್ರತಿಭೆಗಳನ್ನು ತರುವ ಪ್ರಯತ್ನವನ್ನು ಮಾಡಿದ್ದಾರೆ.

ಇವರ ಕಲಾ ಸಂಸ್ಥೆ ವಿಭಿನ್ನವಾದ ಕಲಾ ಕಾಳಜಿಯನ್ನು ಬೆಳೆಸುವುದರ ಮೂಲಕ ಚಿಣ್ಣರಲ್ಲಿ ಅಡಗಿರುವ ಕಲಾಪ್ರತಿಭೆಯನ್ನು ಹೊರಹೊಮ್ಮಿಸಲು ಅದ್ಭುತವಾದ ಪ್ರಯತ್ನವನ್ನು ಮಾಡಿರುವುದು ಶ್ಲಾಘನೀಯ. ಇಲ್ಲಿ ಬರುವ ಚಿಕ್ಕ ಮಕ್ಕಳು ತಮಗೆ ಅರಿವಿಲ್ಲದಂತೆ ವಿಭಿನ್ನ ಕಲಾಕೃತಿಗಳನ್ನು ರಚಿಸುವುದರ ಮೂಲಕ ಕಲಾಸಕ್ತರ ಮಡಿಲಿಗೆ ವಿಶೇಷವಾದ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ. ಇವರ ಕಲಾ ಸಂಸ್ಥೆಯಲ್ಲಿ ಮೂರು ವಿಭಾಗದ ಲ್ಲಿ ವಿದ್ಯಾರ್ಥಿಗಳನ್ನು ವಿಂಗಡಿಸಿ ಅವರವರ ಬುದ್ಧಿ ಮಟ್ಟದಲ್ಲಿ ಕಲಾ ತರಬೇತಿಯನ್ನು ಕೊಡುವುದರ ಮೂಲಕ ಎಲ್ಲರೂ ಹುಬ್ಬೇರಿಸುವ ನಿಟ್ಟಿನಲ್ಲಿ ಕಲಾವಿದರನ್ನು ಹೊರ ತರುವ ಪ್ರಯತ್ನವನ್ನು ಮಾಡಿರುವುದು ನಿಜವಾಗಿಯೂ ಮೆಚ್ಚಲೇಬೇಕು.

ಚಿಕ್ಕಮಕ್ಕಳಿಗೆ ಕಲಾ ತರಬೇತಿಯನ್ನು ಕೊಡುವುದು ಸುಲಭದ ಕೆಲಸವಲ್ಲ ಬಹಳ ತಾಳ್ಮೆಯಿಂದ ಅವರಿಗೆ ಕಲಾ ತರಬೇತಿಯನ್ನು ಮೂಲಕ ಸಮಾಜಕ್ಕೆ ಒಳ್ಳೆಯ ಅವರನ್ನು ಪರಿಚಯಿಸುವ ಕಾರ್ಯವನ್ನು ಮಾಡಿದ್ದಾರೆ. ಇಲ್ಲಿ ಕಲಿತ ಹಲವಾರು ಕಲಾ ವಿದ್ಯಾರ್ಥಿಗಳು ರಾಜ್ಯ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಕಲಾಕಾರರಾಗಿ ಹೊರಹೊಮ್ಮಿದ್ದಾರೆ ಇವರು ರಚಿಸಿದ ಒಂದೊಂದು ಕಲಾಕೃತಿಗಳು ಕೂಡ ಪ್ರತಿಯೊಬ್ಬರನ್ನು ನಿಬ್ಬೆರಗಾಗಿಸುತ್ತದೆ. ಉತ್ತಮ ಕಲಾತ್ಮಕ ನೋಟ ಉಳ್ಳ ವಿಭಿನ್ನ ಕಲಾಕೃತಿಗಳ ಸರಮಾಲೆಗಳು ಪ್ರತಿಯೊಬ್ಬ ಚಿಕ್ಕ ಮಕ್ಕಳಿಂದ ಹಿಡಿದು ಕಲೆಯನ್ನು ಕಲಿಯಲು ಬರುವ ಎಲ್ಲರಿಗೂ ಕೂಡ ಪೂರ್ತಿಯ ಸೆಲೆಯಾಗಿ ಹೊರಹೊಮ್ಮಲಿದೆ.

ಇಂತಹ ನಿಟ್ಟಿನಲ್ಲಿ ವಿಜಯ್ ಕುಮಾರ್ ಯಾದವ್ ಅದ್ಭುತ ಕಲಾ ಕಾರ್ಯವನ್ನು ಮಾಡಿರುವುದು ಮೆಚ್ಚಲೇಬೇಕು. ಇವರು ಬೆಂಗಳೂರಿನ ಯಶವಂತಪುರದಲ್ಲಿ ಕೂಡ ಇನ್ನೊಂದು ಶಾಖೆಯನ್ನು ಆರಂಭಿಸಿದ್ದಾರೆ. ಇಲ್ಲಿ ವಿದ್ಯಾರ್ಥಿಗಳು ರಚಿಸಿದ ನಿಸರ್ಗ ಚಿತ್ರಗಳು. ಪುರಾಣ ಪುಣ್ಯ ಕಥೆಗಳಲ್ಲಿ ಬರುವ ದೇವರ ಚಿತ್ರಗಳು ಮಹಾನ್ ಸಾಧಕರ ಚಿತ್ರಗಳು ಹೀಗೆ ಒಂದಕ್ಕಿಂತ ಒಂದು ವಿಭಿನ್ನ ಕಲಾಕೃತಿಗಳು ಕಲಾಸಕ್ತರ ಮನಸೂರೆಗೊಳ್ಳುತ್ತದೆ

ವಿಜಯ್ ಕುಮಾರ್ ಯಾದವ್ ರವರು ಹೇಳುವ ಹಾಗೆ ಕಲೆ ಎಂಬುದು ತಪಸ್ಸು ಅದನ್ನು ಶ್ರದ್ಧೆಯಿಂದ ಮಾಡಿದರೆ ಯಶಸ್ಸು ನಿಜವಾಗಿಯೂ ಕೂಡ ಅವರ ಬೆನ್ನ ಹಿಂದೆ ಇರುತ್ತದೆ ಮುಖ್ಯವಾಗಿ ಅವರಿಗೆ ಬೇಕಾಗಿರುವುದು ಮಾಡುವ ಕೆಲಸದಲ್ಲಿ ಶ್ರದ್ಧೆ ಆಸಕ್ತಿ ಗುರಿ ಇದ್ದರೆ ಸಾಕು ಅಸಾಧ್ಯವಾದುದನ್ನು ಸಾಧಿಸಬಹುದಾಗಿದೆ ಎಂದು ಹೇಳುತ್ತಾರೆ.

ಉತ್ತಮ ನುರಿತ ಕಲಾ ಶಿಕ್ಷಕರ ತಂಡ ಭವಿಷ್ಯದ ಉತ್ತಮ ಕಲಾವಿದರನ್ನು ಗುರುತಿಸುವಲ್ಲಿ ರೂಪಿಸುವಲ್ಲಿ ಉತ್ತಮವಾದ ಕಾರ್ಯವನ್ನು ಮಾಡುತ್ತಿದೆ. ಇವರ ಕಲಾ ಸೇವೆಗೆ ನಿಜವಾಗಿಯೂ ಪಾಲಿಸಲೇಬೇಕು. ವಿಜಯ್ ಕುಮಾರ್ ರವರ ಕಲಾ ಸೇವೆ ಹೀಗೆ ಮುಂದುವರೆಯಲಿ ಉತ್ತಮ ಕಲಾವಿದರನ್ನು ನೀಡುವುದರ ಮೂಲಕ ಕಾರ್ಯವನ್ನು ಮುಂದುವರಿಸಲಿ ಎಂದು ಅಭಿನಂದಿಸಲು ದೂರವಾಣಿ ಸಂಖ್ಯೆ
9448687636.

ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಉಪನ್ಯಾಸಕರಾಗಿರುವ ವಿ. ಎಸ್ . ನಾಯಕರ ಪೂರ್ಣ ಹೆಸರು ವೆಂಕಟದಾಸ್ ಎಸ್ . ನಾಯಕ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಅನೇಕ ಸಂಸ್ಥೆಗಳಲ್ಲಿ ಕಾರ್ಯಕ್ರಮ ಸಂಯೋಜಕರಾಗಿಯೂ ಪರಿಚಿತರು. ದೂರದರ್ಶನದಲ್ಲಿ ಗಾಂಧೀ ವಿಚಾರಧಾರೆ ಕುರಿತು ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ಹಲವಾರು ಸಂಸ್ಥೆಗಳ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.

6 COMMENTS

LEAVE A REPLY

Please enter your comment!
Please enter your name here