DASARA MUSIC FESTIVAL :ದೇವಕಿ ನಂದನ ನಂದ ಮುಕುಂದ

ಕನ್ನಡಪ್ರೆಸ್.ಕಾಮ್ ದಸರಾ ಸಂಗೀತೋತ್ಸವ ಇಂದು ವಿಶಿಷ್ಟ ಗೀತೆಗಳೊಂದಿಗೆ ಪ್ರಸ್ತುತವಾಗುತ್ತಿದೆ. ಕನ್ನಡ ದಾಸ ಸಾಹಿತ್ಯದ ಮಹನೀಯರ ಕೃತಿಗಳನ್ನು ಡಾ. ಸುಚೇತಾ ಸುಶ್ರಾವ್ಯವಾಗಿ ಹಾಡು ಮೂಲಕ ನಮ್ಮ ಸಂಗೀತೋತ್ಸವನ್ನು ಮತ್ತೊಂದು ಎತ್ತರಕ್ಕೆ ತಲುಪಿಸಿದ್ದಾರೆ.

ವೃತ್ತಿಯಿಂದ ದಂತ ವೈದ್ಯೆಯಾಗಿರುವ ಡಾ. ಸುಚೇತಾ ಅವರಿಗೆ ಸಂಗೀತದಲ್ಲಿ ಆಸಕ್ತಿ. ಹೀಗಾಗಿ ಪತಿಯ ಜೊತೆ ಸೇರಿ ಸಾರಂಗ ಸಂಗೀತ ಶಾಲೆ ನಡೆಸುತ್ತಿದ್ದಾರೆ. ವಿದ್ವಾನ್ ಪಲ್ಲವಿ ಸಿ ವರದರಾವ್, ಸರೋಜ ಸಿದ್ಧಾಂತಿ ಮತ್ತು ವಿದುಷಿ ವೃಂದಾ ಆಚಾರ್ಯ ಅವರ ಬಳಿ ಸಂಗೀತ ಅಭ್ಯಾಸ ಮಾಡಿದ್ದಾರೆ.

ಇಂದಿನ ಸಂಚಿಕೆಯನ್ನು ಶ್ರೀವ್ಯಾಸರಾಯರ ಗಜಮುಖನೆ ಸಿದ್ಧಿದಾಯಕನೆ ವಂದಿಸೆ ಶರಣು ಎನ್ನುವವ ಕೃತಿಯ ಮೂಲಕ ಆರಂಭಿಸುವ ಸುಚೇತಾ ಮುಂದೆ ಶ್ರೀ ನಾರಾಯಣ ತೀರ್ಥರ ಸಕಲಲೋಕ ಧಾರಾ ಕೃತಿಯನ್ನು ಭಾವತುಂಬಿ ಹಾಡಿದ್ದಾರೆ.

ಮೈಸೂರಿನ ಶ್ರೀಗಣಪತಿ ಸಚ್ಚಿದಾನಂದ ಸ್ವಾಮಿಗಳ ತ್ರಿಪುರ ಮಾಲಿನಮ್ ವಂದೇ ಕೃತಿಯನ್ನು ಹಾಡಿದ ನಂತರ ಹೆಳವನಕಟ್ಟೆ ಗಿರಿಯಮ್ಮನ ಈತ ರಂಗನಾಥ ಹರಿಯು ಆತ ಲಿಂಗನಾಥ ಹರನು ಎಂಬ ಗೀತೆಯನ್ನು ಹಾಡಿ ಭಕ್ತಿಪೂರ್ವಕವಾಗಿ ನಮಿಸುತ್ತಾರೆ. ನಂತರ ಶ್ರೀಅಣ್ಣಮಾಚಾರ್ಯರ ಭಾವಮು ಲೋನ ಭಾಹ್ಯಮುಲಂದುನು ಎಂದು ಭಾವ ತುಂಬಿ ಹಾಡುತ್ತಾರೆ.

ಇದಾದ ನಂತರ ಶ್ರೀವಾದಿರಾಜ ತೀರ್ಥರ ಸಾರಿದೆನೋ ನಿನ್ನ ವೆಂಕಟರನ್ನ ಎಂದು ಹರಿಯನ್ನು ಕೊಂಡಾಡುತ್ತಾ ಶ್ರೀ ಶ್ರೀಪಾದರಾಜರ ಬಾರೋ ನಮ್ಮ ಮನೆಗೆ ಎಂದು ಶ್ರೀಮನ್ನಾರಾಯಣನನ್ನು ಮನೆಗೆ ಕರೆಯುತ್ತಾರೆ.

ದಾಸ ಶ್ರೇಷ್ಠ ಶ್ರೀಪುರಂದರದಾಸರ ದೇವಕಿ ನಂದನ ನಂದ ಮುಕುಂದ ಹಾಡಿನೊಂದಿಗೆ ಇಂದಿನ ಕಛೇರಿಗೆ ಮಂಗಳ ಹಾಡುತ್ತಾರೆ.

ಆಲಿಸಿ. ವೀಕ್ಷಿಸಿ ಹಾಗೆಯೇ ನಮ್ಮ ಯೂ ಟ್ಯೂಬ್ ಚಾನಲ್ ಗೆ subscribe ಮಾಡಿ.

2 COMMENTS

  1. ಎಲ್ಲಾ ದಾಸರ ಹಾಡುಗಳನ್ನು ಬಹಳ ಮಧುರವಾಗಿ ಹಾಡಿದ್ದಾರೆ. ಕೇಳಿ ಮನಸ್ಸಿಗೆ ತುಂಬಾ ಸಂತೋಷ ವಾಯಿತು.👌👌

LEAVE A REPLY

Please enter your comment!
Please enter your name here