Dasara Music Fest: ಮರೆಯಬೇಡ ಮನವೆ ನೀನು ಹರಿಯ ಸ್ಮರಣೆಯ

ಕನ್ನಡಪ್ರೆಸ್.ಕಾಮ್ ನ ನವರಾತ್ರಿ ಸಂಗೀತೋತ್ಸವದ ಎರಡನೇ ದಿನವಾದ ಇಂದಿನ ಸಂಗೀತ ಕಚೇರಿಯನ್ನು ಮೈಸೂರಿನ ಪ್ರಖ್ಯಾತ ವೈದ್ಯ ಡಾ. ಸಿ. ಜಿ ಪ್ರಹ್ಲಾದರಾವ್ ನಡೆಸಿಕೊಡುತ್ತಿದ್ದಾರೆ.

ವೃತ್ತಿಯಿಂದ ವೈದ್ಯರಾದರು ತಮ್ಮ ಬಿಡುವಿನ ವೇಳೆಯಲ್ಲಿ ಸಂಗೀತ ಅಭ್ಯಾಸ ಮಾಡಿದ್ದಾರೆ. ಶಾಸ್ತ್ರೀಯವಾಗಿ ಸಂಗೀತ ಅಭ್ಯಾಸ ಆಗಿಲ್ಲವಾದರು ಗುರು ಮಡಿಕೇರಿಯ ನಾಗೇಂದ್ರ ಅವರಿಂದ ಸುಗಮ ಸಂಗೀತ ಕಲಿತ್ತಿದ್ದಾರೆ.

ಗೀತೆಗಳಲ್ಲಿ ಭಾವ ತುಂಬಿ ಹಾಡುವುದು ಇವರ ವೈಶಿಷ್ಟ್ಯ. ಇಂದಿನ ಕಾರ್ಯಕ್ರಮದಲ್ಲಿ ಸತತ ಗಣನಾಥ ಎಂದು ಗಣಪನನ್ನು ಆರಂಭಿಸಿ ಮುಂದೆ ವೀಣಾ ಪಾಣಿ ಬ್ರಹ್ಮಾಣಿ ಎಂದು ಶಾರದೆಯನ್ನು ಸ್ತುತಿಸುತ್ತಾರೆ. ಮುಂದೆ ಮರೆಯಬೇಡ ಮನವೆ ನೀನು ಹರಿಯಾ ಸ್ಮರಣೆಯ ಎಂದು ಹಾಡುತ್ತಾ ಶ್ರೀ ಮಹಾಲಕುಮಿ ದೇವಿಯೇ ಎಂದು ಮಹಾಲಕ್ಷ್ಮಿಯನ್ನು ಕೊಂಡಾಡುತ್ತಾ ಕಾರ್ಯಕ್ರಮ ಮುಗಿಸುತ್ತಾರೆ.

ಅದನ್ನು ವೀಕ್ಷಿಸಿ ಆಲಸಿ ಪ್ರತಿಕ್ರಿಯಿಸಿ.

ಸೌಭಾಗ್ಯ ಪಂಚದಶೀ

ಇದಕ್ಕೂ ಮೊದಲು ಇಂದು ಗಾಯಕಿ ಗೀತಾ ಗಣೇಶ್ ಅವರು ಸೌಭಾಗ್ಯ ಪಂಚದಶೀಯನ್ನು ನಮ್ಮ ವೀಕ್ಷಕರಿಗಾಗಿ ಪ್ರಸ್ತುತ ಪಡಿಸಿದ್ದರು. ಗೀತಾ ಗಣೇಶ್ ಅವರ ಗಾಯನ ಭಕ್ತಿ ಭಾವದಿಂದ ತುಂಬಿತ್ತು. ಅದನ್ನು ಕೂಡ ಆಲಿಸಿ. ವೀಕ್ಷಿಸಿ ಧನ್ಯರಾಗಿ.

8 COMMENTS

  1. ಡಾಕ್ಟರ್ ಪ್ರಹ್ಲಾದ ರಾವ್ ರವರ ಸುಶ್ರಾವ್ಯವಾದ ಗಾಯನವನ್ನು ಕೇಳಿ ಸಂತೋಷವಾಯಿತು.

  2. ಡಾ.. ಪ್ರಹ್ಲಾದ ರಾವ್ ಅವರ ಗಾಯನ ಉತ್ತಮ ವಾಗಿತ್ತು. ಅವರಿಗೆ ಅಭಿನಂದನೆಗಳು.

LEAVE A REPLY

Please enter your comment!
Please enter your name here