DASARA MUSIC FEST: ಗಜಮುಖನೆ ಸಿದ್ಧಿದಾಯಕನೇ ವಂದಿಪೆ ಶರಣು

ಇಂದಿನಿಂದ ಎಲ್ಲೆಡೆ ನವರಾತ್ರಿ ಸಂಭ್ರಮ. ಈ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ಕಳೆದ ವರ್ಷದಂತೆ ಈ ವರ್ಷವೂ ನಿಮ್ಮ ನೆಚ್ಚಿನ ಕನ್ನಡ ಪ್ರೆಸ್.ಕಾಮ್ ಇಂದಿನಿಂದ ನವರಾತ್ರಿ ಸಂಗೀತೋತ್ಸವವನ್ನು-Dasara Music Festival- ಸಾದರ ಪಡಿಸುತ್ತಿದೆ.

ಮೊದಲ ದಿನದ ಸಂಗೀತ ಕಚೇರಿಯನ್ನು ಬೆಂಗಳೂರಿನ ದಂತ ವೈದ್ಯೆ ಡಾ. ಆಶಾ ಜೋಶಿ-Dr Asha Joshi- ನಡೆಸಿಕೊಟ್ಟಿದ್ದಾರೆ. ಇವರ ಸಂಗೀತ ಗುರು ವಿದೂಷಿ ಶಾರದ ಅವರು. ಕರ್ನಾಟಕ ಸಂಗೀತದಲ್ಲಿ ಜ್ಯೂನಿಯರ್ ಪಾಸಾಗಿದ್ದಾರೆ. ದೇವರ ನಾಮ ಮತ್ತು ಭಗವದ್ಗೀತೆಯನ್ನು ಲತಾ ಕುಲಕರ್ಣಿ ಅವರಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಗುರು ಭಾರತಿ ವಿಠ್ಠಲ್ ಅವರಿಂದ ಇದೀಗ ಕಥಕ್ ಅಭ್ಯಾಸ ಮಾಡುತ್ತಿದ್ದಾರೆ.

ಗಜಮುಖನೆ ಸಿದ್ಧಿದಾಯಕನೇ ವಂದಿಪೆ ಶರಣು ಎಂದು ವಿನಾಯಕ ಸ್ತುತಿಯಿಂದ ಆರಂಭವಾಗುವ ಈ ಕಚೇರಿ ಮುಂದೆ ನೋಡಿದೆ ವೆಂಕಣರಮಣನ ಎಂದು ತಿಮ್ಮಪ್ಪನನ್ನು ಕೊಂಡಾಡುತ್ತದೆ. ವೇಣಿ ಮಾಧವನ ತೋರಿಸೆ ಎಂದು ಹಾಡುತ್ತಾ ಬಾರಯ್ಯ ಶ್ರೀನಿವಾಸ ಭಕ್ತರ ಮನೆಗೆ ಎಂದು ಭಗವಂತನನ್ನು ಕರೆಯಲಾಗುತ್ತದೆ. ಬಾರೇ ಭಾಗ್ಯದ ನಿಧಿಯೇ ಶ್ರೀಜಾನಕಿಯೇ ಎಂಬ ಹಾಡಿನ ಮೂಲಕ ಮಂಗಳವಾಗುತ್ತದೆ.

ನಿರೂಪಣೆ ಭಾರತಿ ಶ್ರೀನಿವಾಸ್ ಅವರದ್ದು. ಆಲಿಸಿ, ವೀಕ್ಷಿಸಿ ಪ್ರತಿಕ್ರಿಯಿಸಿ.

2 COMMENTS

  1. ಕಾರ್ಯಕ್ರಮ ಸೊಗಸಾಗಿ ಮೂಡಿ ಬಂದಿದೆ.

  2. ಕಾರ್ಯಕ್ರಮದಲ್ಲಿ ಗಾಯನ, ನಿರೂಪಣೆ ಸೊಗಸಾಗಿ ಮೂಡಿ ಬಂದಿದೆ.

LEAVE A REPLY

Please enter your comment!
Please enter your name here