ಇಸ್ಕಾನ್: ಈ ಬಾರಿಯೂ ಆನ್ ಲೈನ್ ಜನ್ಮಾಷ್ಟಮಿ

BENGALURU AUG 27

ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿಯೂ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಭಕ್ತರು ಆನ್ ಲೈನ್ ನಲ್ಲೇ ವೀಕ್ಷಿಸಬೇಕೆಂದು ಬೆಂಗಳೂರಿನ ಇಸ್ಕಾನ್ ವಿನಂತಿಸಿದೆ. ಆಗಸ್ಟ್ 29 ಮತ್ತು 30ರಂದು ದೇವಸ್ಥಾನಕ್ಕೆ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ ಎಂದೂ ಇಸ್ಕಾನ್ ಪ್ರಕಟಿಸಿದೆ.

ಹಬ್ಬದ ವೇಳಾಪಟ್ಟಿಯ ಪ್ರಕಾರ ಎಲ್ಲ ಸೇವೆಗಳನ್ನೂ ದೇವರಿಗೆ ಅರ್ಪಿಸಲಾಗುವುದು. ಆದರೆ ಭಕ್ತರು ಭೌತಿಕವಾಗಿ ಮಂದಿರಕ್ಕೆ ಆಗಮಿಸದೆ ಆನ್ ಲೈನ್‌ ನಲ್ಲಿ ಭಾಗವಹಿಸಬೇಕೆಂದು ಇಸ್ಕಾನ್ ನ ಸಾರ್ವಜನಿಕ ಸಂಪರ್ಕ ಮತ್ತು ಯೋಜನೆಗಳ ಮುಖ್ಯಸ್ಥ ನವೀನ ನೀರದ ದಾಸ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. www.iskconbangalore.org ಈ ಜಾಲ ತಾಣದಲ್ಲಿ ನೇರ ಪ್ರಸಾರ ಇರುತ್ತದೆ.

LEAVE A REPLY

Please enter your comment!
Please enter your name here