ಮಾಧ್ಯಮ ಅಕಾಡೆಮಿಗೆ ಸದಾಶಿವ ಶೆಣೈ, ಕೂಡ್ಲಿ ಗುರುರಾಜ ,ಗೋಪಾಲ್ ಯಡಗೆರೆ ನೇಮಕ

ಕೆ ಕೆ ಮೂರ್ತಿ, ಶಿವಕುಮಾರ ಬೆಳ್ಳಿತಟ್ಟೆ ಸದಾಶಿವ ಶೆಣೈ ಮತ್ತು ಶಿವಾನಂದ ತಗಡೂರು.

ಕೊನೆಗೂ ರಾಜ್ಯ ಸರಕಾರ ಕರ್ನಾಟಕ ಮಾಧ್ಯಮ ಅಕಾಡೆಮಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸಿ ಇಂದು ಆದೇಶ ಹೊರಡಿಸಿದೆ. ಹಿರಿಯ ಪತ್ರಕರ್ತ ಹಾಗೂ ಪ್ರೆಸ್ ಕ್ಲಬ್ ಅಧ್ಯಕ್ಷರೂ ಆಗಿರುವ ಸದಾಶಿವ ಶೆಣೈ ಅಕಾಡೆಮಿಯ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ. ಆದೇಶ ಹೊರಬಿದ್ದ ಬೆನ್ನಲ್ಲೆ ಸದಾಶಿವ ಶೆಣೈ ಅಧ್ಯಕ್ಷರಾಗಿ ಅಧಿಕಾರವನ್ನು ಸ್ವೀಕರಿಸಿದ್ದಾರೆ.

ನಾಡಿನ ಹಿರಿಯ ರಾಜಕೀಯ ವಿಶ್ಲೇಷಕ ಕೂಡ್ಲಿ ಗುರುರಾಜ ಮತ್ತು ಮಲೆನಾಡು ಭಾಗದ ಸೂಕ್ಷ್ಮ ಸಂವೇದನೆಯ ವರದಿಗಾರ, ಲೇಖಕ ಗೋಪಾಲ್ ಯಡಗೆರೆ ಅಕಾಡೆಮಿಯ ಸದಸ್ಯರಾಗಿ ನೇಮಕವಾಗಿರುವರಲ್ಲಿ ಪ್ರಮುಖರಾಗಿದ್ದಾರೆ.

ಮತ್ತೊಬ್ಬ ಹಿರಿಯ ಪತ್ರಕರ್ತ ಮಲೆನಾಡು ಭಾಗದ ಕೆ ಕೆ ಮೂರ್ತಿ ಮತ್ತು ಶಿವಕುಮಾರ ಬೆಳ್ಳಿತಟ್ಟೆ ಸದಸ್ಯರಾಗಿ ನೇಮಕವಾಗಿದ್ದಾರೆ.

ಕೆಯುಡಬ್ಲುಜೆ ಪ್ರತಿನಿಧಿಗಳಾಗಿ ಅಧ್ಯಕ್ಷರಾದ ಶಿವಾನಂದ ತಗಡೂರು, ಮೈಸೂರಿನ ಸಿ. ಕೆ ಮಹೇಂದರ್,ಮಂಗಳೂರಿನ ಜಗನ್ನಾಥ ಬಾಳ, ಕಲಬುರ್ಗಿಯ ದೇವೇಂದ್ರಪ್ಪ ಕಪನೂರು ಮತ್ತು ಶಿವಮೊಗ್ಗದ ಕೆ.ವಿ ಶಿವಕುಮಾರ್ ನೇಮಕವಾಗಿದ್ದಾರೆ.

LEAVE A REPLY

Please enter your comment!
Please enter your name here