ಬಿಎಸ್ ವೈ ರಾಜಿನಾಮೆ ಘೋಷಣೆ

ಎರಡು ವರ್ಷದ ಸಾಧನಾ ಸಮಾವೇಶದಲ್ಲಿ ವಿದಾಯ ಭಾಷಣ ಮಾಡಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಇಂದು ಊಟದ ನಂತರ ರಾಜಭವನಕ್ಕೆ ತೆರಳಿ ರಾಜಿನಾಮೆ ನೀಡುವುದಾಗಿ ಘೋಷಿಸಿದರು.

ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಭಾವಪರವಶರಾಗಿ ವಿದಾಯ ಭಾಷಣ ಮಾಡಿದ ನಂತರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದರು.

ಈ ಮೂಲಕ ಕಳೆದ ಕೆಲ ದಿನಗಳಿಂದ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಉಂಟಾಗಿದ್ದ ಹಗ್ಗಜಗ್ಗಾಟದಲ್ಲಿ ತೀವ್ರ ಬೇಸರಕ್ಕೆ ಗುರಿಯಾಗಿದ್ದಂತೆ ಕಂಡು ಬಂದ ಅವರು ತಮ್ಮ ಪದತ್ಯಾಗದ ಘೋಷಣೆ ಮಾಡಿದರು.

ಎರಡು ವರ್ಷಗಳ ವರ್ಷಾಚರಣೆ ವೇಳೆ ಅತ್ಯಂತ ಭಾವುಕರಾಗಿ ವಿದಾಯದ ಭಾಷಣ ಮಾಡಿದ ಅವರು, ಈ ಕಾರ್ಯಕ್ರಮದಲ್ಲಿ ಭಾಗಿಯಾದ ಎಲ್ಲರೂ ಊಟ ಮಾಡಿ. ನೀವೆಲ್ಲರೂ ಊಟ ಮಾಡಿದ ನಂತರ ರಾಜಭವನಕ್ಕೆ ತೆರಳಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೋಡಲು ನಿರ್ಧರಿಸಿದ್ದೇನೆ ಎಂದು ಹೇಳಿದರು.

ತಮ್ಮ ರಾಜಕೀಯ ಜೀವನದ ಬಗ್ಗೆ ಸುದೀರ್ಘವಾಗಿ ಮಾತನಾಡಿದ ಬಿಎಸ್ ವೈ ಭಾಷಣದ ಕೊನೆಯಲ್ಲಿ ಭಾವುಕ ವಿದಾಯ ಘೋಷಿಸಿದರು.

LEAVE A REPLY

Please enter your comment!
Please enter your name here