ಕೊಡಗಿನಲ್ಲಿ ಮಳೆ: ಹಾರಂಗಿ ಜಲಾಶಯ ಭರ್ತಿ

ಕೊಡಗಿನಲ್ಲಿ ಮುಂಗಾರು ಅಬ್ಬರಿಸುತ್ತಿದ್ದು ಕಾವೇರಿ ಕಣಿವೆಯ ಪ್ರಸಿದ್ಧ ಜಲಾಶಯಗಳಲ್ಲಿ ಒಂದಾದ ಹಾರಂಗಿ ಜಲಾಶಯ ಭತಿ೯ಯಾಗಿದೆ. ಇಂದು ಜಲಾಶಯಕ್ಕೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಪ್ರಥಮವಾಗಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ನಂತರ ಜಲಾಶಯಕ್ಕೆ ಬಾಗಿನ ಅಪಿ೯ಸಿದರು.

ಈ ಸಂದಭ೯ದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸಚಿವರು 1859 ಅಡಿಗಳ ಸಾಮಥ್ಯ೯ ಹೊಂದಿರುವ ಈ ಜಲಾಶಯ 1857 ಅಡಿಗಳಷ್ಟು ಭತಿ೯ ಯಾಗಿದ್ದು, ಈ ದಿನ 16000 ಕ್ಕೂ ಅಧಿಕ ಕ್ಯೂಸೆಕ್ಸ್ ಒಳ ಹರಿವಿದೆ. ಹಾಗಾಗಿ ಇಂದು ನೀರಾವರಿ ಸಲಹಾ ಸಮಿತಿಯ ತೀಮಾ೯ನದಂತೆ 2021-22 ನೇ ಸಾಲಿನ ಖಾರೀಫ್ ಬೆಳೆಗಳು ಮತ್ತು ಕೆರೆ ಕಟ್ಟೆಗಳಿಗೆ ಹರಿಸುವ ಕಾಯ೯ಕ್ಕೆ ಚಾಲನೆ ನೀಡಿದರು. ಈ ಮೂಲಕ ಕೊಡಗು ಜಿಲ್ಲೆಯ ಸೋಮವಾರಪೇಟೆ, ಮೈಸೂರಿನ ಪಿರಿಯಾಪಟ್ಟಣ, ಕೆ ಆರ್. ನಗರ, ಹುಣಸೂರು ಹಾಗೂ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ವ್ಯಾಪ್ತಿಯ ಸುಮಾರು 1. 60 ಲಕ್ಷ ಎಕರೆಗೆ ನೀರಿನ ಸೌಲಭ್ಯ ಸಿಗಲಿದೆ ಎಂದರು.

LEAVE A REPLY

Please enter your comment!
Please enter your name here