ರಾಜಕೀಯ ಸಂಘಟನೆ ವಿಸರ್ಜಿಸಿದ ರಜನೀಕಾಂತ್

ತಾವು ಪುನಃ ರಾಜಕೀಯ ಪ್ರವೇಶಿಸುವ ಸಾಧ್ಯತೆಗಳನ್ನು ತಳ್ಳಿ ಹಾಕಿರುವ ನಟ ರಜನೀಕಾಂತ್ ತಾವು ಸ್ಥಾಪಿಸಿದ್ದ ರಜನಿ ಮಕ್ಕಳ್ ಮಂಡ್ರಮ್ (RMM) ಅನ್ನು ವಿಸರ್ಜಿಸಿರುವುದಾಗಿ ಸೋಮವಾರ ಪ್ರಕಟಿಸಿದ್ದಾರೆ.

ಆದರೆ ಮುಂದಿನ ದಿನಗಳಲ್ಲಿ ಈ ಸಂಘಟನೆಯನ್ನು ಅಭಿಮಾನಿಗಳ ಸಂಘಟನೆಯಾಗಿ ಪುನರ್ ರೂಪಿಸಲಾಗುವುದು ಎಂದು ಹೇಳಿದ್ದಾರೆ.

ನಾವು ಏನು ನಿರೀಕ್ಷೆ ಮಾಡಿದ್ದೆವೋ ಅದು ಹಲವಾರು ಕಾರಣಗಳಿಂದ ಸಾಧ್ಯ ಆಗಲಿಲ್ಲ. ನನಗೆ ಮುಂದೆಯೂ ರಾಜಕೀಯ ಪ್ರವೇಶಿಸುವ ಯಾವ ಯೋಜನಗೆಳು ಇಲ್ಲ ಎಂದು ಸಂಘಟನೆಯ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ರಜನೀಕಾಂತ್ ಹೇಳಿದರು.

LEAVE A REPLY

Please enter your comment!
Please enter your name here