‘ಸನ್ನಿ’ಯನ್ನು ಕಳೆದು ಕೊಂಡ ಗೃಹ ಸಚಿವರ ಕುಟುಂಬ ದುಃಖ ತಪ್ತ

ಸಾಕು ಪ್ರಾಣಿಗಳ ಹಾಗೆ. ಮನುಷ್ಯರನ್ನು ತುಂಬಾ ಹಚ್ಚಿಕೊಳ್ಳುತ್ತವೆ. ಹಾಗೆ ಮನುಷ್ಯರು ಕೂಡ ಅವನ್ನು ತಮ್ಮ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾರೆ. ಮನುಷ್ಯರಿಗೆ ಹೋಲಿಸಿದಾಗ ಅವುಗಳ ಜೀವಿತಾವಧಿ ಕಡಿಮೆ. ಹೀಗಾಗಿ ಅವುಗಳ ಅಗಲಿಕೆ ತೀವ್ರ ನೋವು ಸಂಕಟ ತರುತ್ತವೆ.

ರಾಜ್ಯದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಮನೆಯಲ್ಲೂ ಹೀಗೆ ಆಗಿದೆ. ಅವರ ಕುಟುಂಬದವರೆಲ್ಲಾ ಪ್ರೀತಿ ಪಾತ್ರವಾಗಿದ್ದ ಸಾಕು ನಾಯಿ ಸನ್ನಿ ಇದು ವಯೋಸಹಜವಾಗಿ ಮೃತ ಪಟ್ಟಿದೆ. ಹೀಗಾಗಿ ಗೃಹ ಸಚಿವರ ಇಡೀ ಕುಟಂಬ ದುಃಖ ತಪ್ತವಾಯಿತು.

ತಮ್ಮ ಕುಟುಂಬದ ಒಬ್ಬ ಸದಸ್ಯನಂತೆ ಇದ್ದ ಸನ್ನಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಇಡೀ ಕುಟುಂಬ ಸಂಪ್ರದಾಯ ಬದ್ಧವಾಗಿ ಅಂತಿಮ ವಿದಾಯ ಹೇಳಿದೆ.

LEAVE A REPLY

Please enter your comment!
Please enter your name here