ಬೇರೆ ಜಿಲ್ಲೆಯಲ್ಲಿ ವಾಸ ಇರುವ ಶಿಕ್ಷಕರಿಗೂ ಮನೆಯಿಂದಲೇ ಕೆಲಸ

ನಾಳೆಯಿಂದ ಶಿಕ್ಷಕರು ಶಾಲೆಗಳಿಗೆ ಹಾಜರಾಗಬೇಕೆನ್ನುವ ವಿಷಯಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ಮತ್ತೊಂದು ಪರಿಷ್ಕೃತ ಆದೇಶ ಹೊರಡಿಸಿದೆ. ಈ ಆದೇಶದ ಪ್ರತಿಯನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಮ್ಮ ಫೇಸ್ ಬುಕ್ ಪುಟದಲ್ಲಿ ಪೋಸ್ಟ್ ಮಾಡಿದ್ದಾರೆ.

ಮೊದಲ ಆದೇಶದಲ್ಲಿ ಲಾಕ್ ಡೌನ್ ಇರುವ 11 ಜಿಲ್ಲೆಗಳ ಶಿಕ್ಷಕರು ಮನೆಯಿಂದಲೇ ಕೆಲಸ ನಿರ್ವಹಿಸುವಂತೆ ತಿಳಿಸಲಾಗಿತ್ತು.ಈಗಿನ ಆದೇಶದಲ್ಲಿ, ಲಾಕ್ ಡೌನ್ ತೆರವುಗೊಳಿಸಲಾಗಿರುವ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಆದರೆ ಲಾಕ್ ಡೌನ್ ಇರುವ ಜಿಲ್ಲೆಯಲ್ಲಿ ಸಧ್ಯ ವಾಸಿಸುತ್ತಿರುವವರಿಗೆ ಕೂಡ ಜೂನ್ 21ರ ವರಗೆ ಶಾಲೆಗೆ ಹಾಜರಾಗುವುದರಿಂದ ವಿನಾಯಿತಿ ನೀಡಲಾಗಿದೆ.

ಲಾಕ್ ಡೌನ್ ಇರದಿದ್ದರೂ ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ಈ ಆದೇಶ ಹೊರಟಿದೆ. ಲಾಕ್ ಡೌನ್ ಇರದ ಜಿಲ್ಲೆಗಳಲ್ಲಿ ಇರುವ ಶಿಕ್ಷಕರು ಅದೇ ಜಿಲ್ಲೆಯಲ್ಲಿ ಇದ್ದ ಪಕ್ಷದಲ್ಲಿ ಶಾಲೆಗಳಿಗೆ ಹಾಜರಾಗಬೇಕು.

ಆದೇಶದ ಪ್ರತಿ ಇಲ್ಲಿದೆ.

LEAVE A REPLY

Please enter your comment!
Please enter your name here