ವೈದ್ಯರ ಶ್ರಮ, ಅಭಿಮಾನಿಗಳ ಪ್ರಾರ್ಥನೆ ಫಲಿಸಲಿಲ್ಲ

ಕೊನೆ ಕ್ಷಣದಲ್ಲಿ ಪವಾಡ ನಡೆದು ಕಲಾವಿದ ಸಂಚಾರಿ ವಿಜಯ್ ಅವರ ಮೆದುಳು ಕೆಲಸ ಮಾಡಲು ಆರಂಭಿಸುತ್ತದೆ ಎಂಬ ಸಹಸ್ರಾರು ಅಭಿಮಾನಿಗಳ ಆಶಯ, ಪ್ರಾರ್ಥನೆ ಫಲಿಸಲಿಲ್ಲ.ಈಗ್ಗೆ ಸ್ವಲ್ಪ ಹೊತ್ತಿಗೆ ಮತ್ತೊಮ್ಮೆ ಪರೀಕ್ಷೆ ನಡೆಸಿದ ವೈದ್ಯರ ತಂಡ ಮೆದುಳು ಸಂಪೂರ್ಣ ಡೆಡ್ ಆಗಿದೆ ಎಂಬ ವಿಷಯವನ್ನು ಖಚಿತ ಪಡಿಸಿದ್ದಾರೆ.

ಹೀಗಾಗಿ ಅವರ ಕುಟುಂಬದ ಆಶಯದಂತೆ ಸಂಚಾರಿ ವಿಜಯ್ ಅವರ ಅಂಗಾಂಗ ದಾನಕ್ಕೆ ಎಲ್ಲವೂ ಸಿದ್ಧವಾಗಿದೆ. ಜೀವನ ಸಾರ್ಥಕತೆ ತಂಡ ಇನ್ನು ಸ್ವಲ್ಪ ಹೊತ್ತಿನ ನಂತರ ಅಂಗಾಗಗಳನ್ನು ತೆಗೆಯುವ ಕೆಲಸವನ್ನು ಆರಂಭಿಸುತ್ತದೆ.

ಸತ್ತನಂತರವೂ ಈ ಕಲಾವಿದನ ದೇಹದ ಅಂಗಾಂಗಳು ಮತ್ತೊಂದು ಜೀವಕ್ಕೆ ಆಸರೆಯಾಗಲಿವೆ.

2 COMMENTS

  1. ‘ ಸಂಚಾರಿ ವಿಜಯ್ ಇಹಲೋಕದ ತಮ್ಮ ಸಂಚಾರವನ್ನು ನಿಲ್ಲಿಸಿ, ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಭಗವಂತ ಅವರ ಆತ್ಮಕ್ಕೆ ಶಾಂತಿಯನ್ನು ನೀಡಲಿ. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ನೀಡಲೆಂದು ಪ್ರಾಥಿ೯ಸುವೆ.’ 🙏

LEAVE A REPLY

Please enter your comment!
Please enter your name here