ಉತ್ತರಾಯಣ ಪರ್ವಕಾಲ

ರತ್ನಾ ಶ್ರೀನಿವಾಸ್

ಇಂದು ಸಂಕ್ರಾಂತಿ ಹಬ್ಬ. ಉತ್ತರಾಯಣ ಪರ್ವಕಾಲ. ಹಬ್ಬಗಳೆಂದರೆ
ಹಲವು ಸಂಪ್ರದಾಯದ ಮೊತ್ತ. ಇಡೀ ಮನುಷ್ಯ ಸಮೂಹಕ್ಕೆ ಸಡಗರ, ಸಂತೋಷ, ಸಂಭ್ರಮವನ್ನು ಹಬ್ಬಗಳು ಕೊಡುತ್ತವೆ.

ಇಂಥ ಸಡಗರದ ಹಬ್ಬಗಳಲ್ಲಿ ಕರ್ನಾಟಕ , ಆಂಧ್ರಪ್ರದೇಶ, ತಮಿಳು ನಾಡು ಗಳಲ್ಲಿ ಸಂಕ್ರಾಂತಿ/ಪೊಂಗಲ್ ಹೆಸರಲ್ಲಿ ಆಚರಿಸುವ ಸುಗ್ಗಿ ಹಬ್ಬವೂ ಒಂದು. ಸೂರ್ಯ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶ ಮಾಡುವ ದಿನವನ್ನು ಸಂಕ್ರಾಂತಿ ಎಂದು ಕರೆಯುತ್ತಾರೆ.
ಪ್ರತಿವರ್ಷ ಜನವರಿ 14 ಅಥವ 15 ರಂದು ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ. ನಂತರ ಆತ ಉತ್ತರಾಭಿಮುಖವಾಗಿ ಚಲಿಸಲು ಪ್ರಾರಂಭ ವಾಗುತ್ತದೆ. ಈ ಸಮಯದಲ್ಲಿ ಬೆಳಕು ಹೆಚ್ಚು. 6 ತಿಂಗಳ ಕಾಲ ಉತ್ತರಾಯಣ ನಂತರದು ದಕ್ಷಿಣಾಯಣ.

ಮೊದಲ ಹಬ್ಬ

ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಸುಗ್ಗಿ ಹಬ್ಬವಾಗಿರುವ ಸಂಕ್ರಾಂತಿಯನ್ನು ಜನ ಸಡಗರದಿಂದ ಆಚರಿಸುತ್ತಾರೆ.ಕೊಯ್ಲು ಮುಗಿದು ಸುಗ್ಗಿಕಾಲ ಇದಾಗಿರುವುದರಿಂದ ಎಲ್ಲರೂ ಸಂಭ್ರಮ ದಿಂದ ಆಚರಿಸು ತ್ತಾರೆ. ಮನೆ ಮುಂದೆ ಸುಂದರವಾದ ರಂಗೋಲಿ ಬಿಡಿಸಿ ತಳಿರು ತೋರಣ ಗಳನ್ನು ಕಟ್ಟುವರು. ಎತ್ತುಗಳನ್ನು ಸಿಂಗರಿಸಿ ಮೆರವಣಿಗೆ ಮಾಡುವರು.

ಸಂಕ್ರಾಂತಿಯಲ್ಲಿ ಎಳ್ಳನ್ನು ತಯಾರಿಸಿ ತಮ್ಮ ಸ್ನೇಹಿತರು, ಬಂಧುಗಳಿಗೆ ಹಂಚುವರು. ಇದನ್ನು ಎಳ್ಳು ಬೀರುವುದು ಅಂತಲೇ ಕರೆಯುವರು.ಹೊಸ ಬಟ್ಟೆ ಧರಿಸಿ ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡೋ ಣ ಎಂದು ಹೇಳುತ್ತಾ ತಮ್ಮ ಆತ್ಮೀಯರಲ್ಲಿ ಎಳ್ಳನ್ನು ವಿನಿಮಯ ಮಾಡಿ ಕೊಳ್ಳು ತ್ತಾರೆ.
ಕರ್ನಾಟಕದಲ್ಲಿ ಹೊಸದಾಗಿ ಮದುವೆ ಆದ ಮಹಿಳೆಯರು ಮದುವೆಯಾದ ಮೊದಲ ವರ್ಷ ದಿಂದ 5 ವರ್ಷ ಗಳು ಬಾಳೆಹಣ್ಣು ಗಳ ಸಂಖ್ಯೆಯನ್ನು ಐದರಿಂದ ಹೆಚ್ಚಿಸುತ್ತ ಎಳ್ಳು ಬೀರುತ್ತಾರೆ. ಎಳ್ಳಿನ ಜೊತೆ ಸಕ್ಕರೆ ಅಚ್ಚು, ಕಬ್ಬಿನ ತುಂಡು, ಹಣ್ಣನ್ನು ಬೀರುವರು.ಕೊಬ್ಬರಿ, ಹುರಿಗಡಲೆ, ಬೆಲ್ಲ, ಕಡಲೆಕಾಯಿ ಬೀಜ ಹುರಿದು ಎಳ್ಳನ್ನು ಸೇರಿಸಿ ತಯಾರಿಸಿರುತ್ತಾರೆ.

ತಮಿಳು ನಾಡಿನಲ್ಲಿ ಪೊಂಗಲ್ ಹಬ್ಬ ಎಂದು ವಿಶೇಷ ವಾಗಿ ಆಚರಿಸುವರು.ಪೊಂಗಲ್ ಸಮೃದ್ದಿಯ ಸಂಕೇತ ವಾಗಿ ಹಾಲು ಬೆಲ್ಲ ಕುದಿಸಿ ಉಕ್ಕಿಸುತ್ತಾರೆ. ಗೋಪೂಜೆ ಮಾಡ್ತಾರೆ. ಕೆಲವೆಡೆ ಜಲ್ಲಿಕಟ್ಟು ಎಂಬ ಗೂಳಿಯನ್ನು ಪಳಗಿಸುವ ಆಟ ನಡೆಯುತ್ತದೆ.

ಕೇರಳದಲ್ಲಿ ಮಕರ ಸಂಕ್ರಮಣಕ್ಕೆ ವಿಶೇಷ ಮಹತ್ವವಿದೆ. ಅಯ್ಯಪ್ಪ ಸನ್ನಿಧಾನದ ಶಬರಿಮಲೆಯಲ್ಲಿ ಕಂಡುಬರುವ ಸಂಕ್ರಮಣ ಜ್ಯೋತಿಯೇ ಪ್ರಮುಖವಾದುದು.ಮಹಾರಾಷ್ಟ್ರದಲ್ಲಿ ಎಳ್ಳು ಉಂಡೆ, ಕುಸುರಿ ಕಾಳನ್ನು ಹಂಚುವರು.

ಎಳ್ಳನ್ನು ಕೊಡುವಾಗ ಎಳ್ಳು ಬೆಲ್ಲ ತೆಗೆದು ಕೊಂಡು ಒಳ್ಳೆ ಮಾತಾಡಿ ಅಂತ. ಹೇಳುವರು.ಮಕರ ಸಂಕ್ರಾಂತಿ ಅಭಿವೃದ್ಧಿಯ ಸಂಕೇತ ವಾಗಿದೆ. ಮನುಷ್ಯನ ಕೆಟ್ಟ ಗುಣ ಗಳೆಲ್ಲಾ ಅಳಿದು ಬಾಳುವ ಬದಲಾವಣೆಯ ಪರ್ವ ಕಾಲ ಇದಾಗಿದೆ.

ಈ ಪರ್ವಕಾಲದಲ್ಲಿ ಕೋವಿಡ್ ಭೀತಿ ಎಲ್ಲಡೆಯೂ ಮಾಯವಾಗಿ ಸಂತಸ ಅರಳಲಿ ಎಂದು ಹಾರೈಕೆ.

ರತ್ನಾ ಶ್ರೀನಿವಾಸ್ ಅವರು ಮೂಲತಃ ಹಾಸನ ಜಿಲ್ಲೆ ಅರಸೀಕೆರೆ ಯವರು.  ಪ್ರಾಥಮಿಕ ಪದವಿಯನ್ನು ಅರಸೀಕೆರೆಯಲ್ಲಿ ಪಡೆದು ಮುಂಬಯಿನಲ್ಲಿ  ಎಂ.ಎ ಎಂ.ಫಿಲ್  ಪಡೆದು ಪ್ರಸ್ತುತ ಆದಿತ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ & ರಿಸರ್ಚ್, ಯಲಹಂಕ, ಇಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.  ಇವರ ಚಾರುವಸಂತದ ಆಯಾಮ ಅನನ್ಯತೆ ಸಂಪ್ರಬಂಧದ  ಪುಸ್ತಕವಾಗಿ ಅಭಿಜಿತ್ ಪ್ರಕಾಶನ ಮುಂಬೈನಿಂದ ಪ್ರಕಟವಾಗಿದೆ.

ಇದರೊಂದಿಗಿರುವ ರಂಗೋಲಿ ಕಲೆ ಮಮತಾ, ಸಂಧ್ಯಾ ಮತ್ತು ಉಮ

15 COMMENTS

  1. ಮೆಚ್ಚುಗೆ ವ್ಯಕ್ತಪಡಿಸಿ ರುವ ಎಲ್ಲಾ ಸಹೃದಯರಿಗೂ ಧನ್ಯವಾದಗಳು.🙏🙏

  2. ಈ ಹಬ್ಬದ ಕ್ರೀಡೆಯ ಬಗ್ಗೆ ಕೆಲವು ವಿಷಯ ತಿಳಿಸಬಹುದಿತ್ತು

LEAVE A REPLY

Please enter your comment!
Please enter your name here