ರಾಯಚೂರು, ಮಹಾರಾಣಿ, ನೃಪತುಂಗ, ಮಂಡ್ಯ ನೂತನ ವಿವಿಗಳಿಗೆ ಕುಲಪತಿಗಳ ನೇಮಕ

ರಾಜ್ಯದಲ್ಲಿ ಮೂರು ನೂತನ ಕ್ಲಸ್ಟರ್ ವಿಶ್ವವಿದ್ಯಾನಿಯ ಹಾಗೂ ರಾಯಚೂರು ವಿಶ್ವವಿದ್ಯಾಲಯಕ್ಕೆ ಕುಲಪತಿಗಳನ್ನು ನೇಮಿಸಿ ರಾಜ್ಯಸರಕಾರ ಅಧಿಸೂಚನೆ ಹೊರಡಿಸಿದೆ.

ಬೆಂಗಳೂರಿನ ಮಹಾರಾಣಿ ಮಹಿಳಾ ಕಾಲೇಜು,ಮಹಾರಾಣಿ ಕಲೆ ವಿಜ್ಞಾನ ಮತ್ತು ಮ್ಯಾನೇಜ್ಮೆಂಟ್ ಕಾಲೇಜು ಹಾಗೂ ಶ್ರೀಮತಿ ವಿಎಚ್ ಡಿ ಹೋಂ ಸೈನ್ಸ್ ಸೆಂಟ್ರಲ್ ಇನ್ಸ್ಟಿಟ್ಯೂಟ್ ಅನ್ನು ಸೇರಿಸಿ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯವನ್ನು(non affiliating university) ರಚಿಸಲಾಗಿದೆ. ಬೆಂಗಳೂರು ವಿಶ್ವವಿದ್ಯಾನಿಯದ ರಸಾಯನ ಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ.ಎಲ್ . ಗೋಮತಿ ದೇವಿ ಅವರನ್ನು ಈ ವಿವಿಯ ಮೊದಲ ಕುಲಪತಿಯನ್ನಾಗಿ ನೇಮಿಸಲಾಗಿದೆ.

ಅದೇ ರೀತಿ ಬೆಂಗಳೂರಿನ ಸರಕಾರಿ ವಿಜ್ಞಾನ ಕಾಲೇಜನ್ನು ಬೆಂಗಳೂರು ವಿವಿಯಿಂದ ಬೇರ್ಪಡಿಸಿ ನೃಪತುಂಗ ವಿಶ್ವವಿದ್ಯಾಲಯವನ್ನು (Unitary in nature) ಸ್ಥಾಪಿಸಲಾಗಿದೆ. ಬಾಗಲಕೋಟೆ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನ ಮೆಕಾನಿಕಲ್ ವಿಭಾಗದ ಮುಖ್ಯಸ್ಥ ಡಾ.ಶ್ರೀನಿವಾಸ ಎಸ್ . ಬಲ್ಲಿ ಅವರನ್ನು ಈ ವಿಶ್ವವಿದ್ಯಾಲದ ಮೊದಲ ಕುಲಪತಿಯಾಗಿ ನೇಮಿಸಲಾಗಿದೆ.

ಅದೇ ರೀತಿ ಮಂಡ್ಯ ಸರಕಾರಿ ಕಾಲೇಜನ್ನು ಮೈಸೂರು ವಿವಿಯಿಂದ ಬೇರ್ಪಡಿಸಿ ಮಂಡ್ಯ ವಿಶ್ವವಿದ್ಯಾಲಯವನ್ನು(non affiliating university) ಸ್ಥಾಪಿಸವಾಗಿದೆ. ಬೆಂಗಳೂರು ಎಸ್ ಜೆ ಬಿ ಇನ್ಸ್ ಸ್ಟಿಟ್ಯೂಟ್ ನ ಪ್ರಿನ್ಸಿಪಾಲ್ ಡಾ. ಪುಟ್ಟರಾಜು ಅವರನ್ನು ಈ ವಿವಿಯ ಮೊದಲ ಕುಲಪತಿಗಳಾಗಿ ನೇಮಿಸಲಾಗಿದೆ.

ರಾಯಚೂರು ವಿವಿ

ಗುಲ್ಬರ್ಗಾ ವಿವಿಯನ್ನು ವಿಭಜಿಸಿ ರಾಯಚೂರು ವಿವಿಯನ್ನು ಸ್ಫಾಪಿಸಲಾಗಿದ್ದು ಕರ್ನಾಟಕ ವಿವಿಯ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಹರೀಶ ರಾಮಸ್ವಾಮಿ ಅವರನ್ನು ಈ ವಿವಿಯ ನೂತನ ಕುಲಪತಿಗಳಾಗಿ ನೇಮಿಸಲಾಗಿದೆ. ಮೈಸೂರು ವಿವಿಯ ನಿವೃತ್ತ ಪ್ರಾಧ್ಯಾಪಕ ಡಾ. ಜಿ. ಕೊಟ್ರೇಶ್ವರ ಅವರನ್ನು ವಿಶೇಷ ಅಧಿಕಾರಿಯಾಗಿ ನೇಮಿಸಲಾಗಿದೆ.

LEAVE A REPLY

Please enter your comment!
Please enter your name here