ಕರೋನ ಜೊತೆಗಿನ ಜೀವನ, ವೈದ್ಯರು ಏನು ಹೇಳ್ತಾರೆ ಕೇಳೋಣ

ಕೊರೋನಾದ ಜೊತೆಗೆ ಜೆೊತೆ ಜೊತೆಗೆ ಜೀವನ ನಡೆಸಬೇಕಾದುದು ಅನಿವಾರ್ಯವಾಗಿದೆ. ಇಂಥ ಸಮಯದಲ್ಲಿ ಜನರಲ್ಲಿ ಹಲವಾರು ಪ್ರಶ್ನೆಗಳು ಏಳುತ್ತಿವೆ. ಮಾಸ್ಕ್ ಹೇಗೆ ಧರಿಸಬೇಕು, ಎಂಥ ಮಾಸ್ಕ್ ಧರಿಸಬೇಕು, ಅದನ್ನು ಹೇಗೆ ವಾಷ್ ಮಾಡಬೇಕು ಎಂಬ ಪ್ರಶ್ನೆಗಳಿಂದ ಹಿಡಿದು ತರಕಾರಿಯನ್ನು ಹೇಗೆ ಶುಚಿ ಗೊಳಿಸಬೇಕು, ವೈರಸ್ ಗೂ ಬ್ಯಾಕ್ಟೀರಿಯಾಗೂ ವ್ಯತ್ಯಾಸ, ಲಸಿಕೆ ಯಾವಾಗ ಬರುತ್ತದೆ ಎಂಬ ಹಲವಾರು ಪ್ರಶ್ನೆಗಳು ಏಳುತ್ತವೆ.

ಈ ಸಂದೇಹಗಳನ್ನು ದೂರ ಮಾಡಲು ಮೈಸೂರಿನ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನ ಅರಿವಿನ ಅಂಗಳ ಸಮೂಹ ಪ್ರಖ್ಯಾತ ವೈದ್ಯ ಡಾ. ಪ್ರಹ್ಲಾದರಾವ್ ಸಿ.ಜಿ ಅವರೊಂದಿಗೆ ಕರೋನ ಜೊತೆಗಿನ ಜೀವನ, ವೈದ್ಯರು ಏನು ಹೇಳ್ತಾರೆ ಕೇಳೋಣ ಎಂಬ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ಈ ಕಾರ್ಯಕ್ರಮದಲ್ಲಿ ಡಾ. ಪ್ರಹ್ಲಾದರಾವ್ ಜನಸಾಮಾನ್ಯರಲ್ಲಿ ಹುಟ್ಟುವ ಅನೇಕ ಪ್ರಶ್ನೆಗಳಿಗೆ ಸರಳವಾಗಿ ಉತ್ತರ ನೀಡುವ ಮೂಲಕ ಕರೋನಾ ಬಗೆಗಿನ ಅನಗತ್ಯ ಭಯವನ್ನು ದೂರ ಮಾಡಿದರು. ಕಾಲೇಜಿನ ಡಾ. ಶಿಲ್ಪಾ ಆರ್ ಮತ್ತು ಎ ಪಿ ಕಾವ್ಯ ಅವರು ಕಾರ್ಯಕ್ರಮನ್ನು ನಡೆಸಿಕೊಟ್ಟರು.

ಈ ಆಸಕ್ತಿದಾಯಕ ಕಾರ್ಯಕ್ರಮದ ವಿಡಿಯೋ ಇಲ್ಲಿದೆ. ಆಲಿಸಿ ಪ್ರತಿಕ್ರಿಯಿಸಿ. ಕರೋನಾ ಬಗ್ಗೆ ತಿಳಿದುಕೊಳ್ಳಿ.

2 COMMENTS

LEAVE A REPLY

Please enter your comment!
Please enter your name here