ಶಿವಗಂಗೆ ಕೋತಿ ಉಳಿಸುವ ಅಭಿಯಾನ: ಕನ್ನಡಪ್ರೆಸ್ ವರದಿಗೆ ಉತ್ತಮ ಸ್ಪಂದನೆ

ಕನ್ನಡ ಪ್ರೆಸ್.ಕಾಮ್ ನಲ್ಲಿ ನಿನ್ನೆ ಪ್ರಕಟವಾದ ಶಿವಗಂಗೆ ಕೋತಿ ಉಳಿಸುವ ಟೆಕ್ಕಿಗಳ ಅಭಿಯಾನ ವರದಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ಹಲವಾರು ಮಂದಿ ತಾವು ಕೂಡ ಈ ಅಭಿಯಾನದ ಭಾಗವಾಗುವುದಕ್ಕೆ ಮುಂದೆ ಬಂದಿದ್ದಾರೆ.

ಕೋತಿಗಳ ಆಹಾರದ ಕೊರತೆ ನೀಗಿಸಲು ಟೆಕ್ಕಿಗಳ ರಚನಾತ್ಮಕ ಯೋಜನೆಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಧನ ಸಹಾಯ ನೀಡಲು ಮುಂದಾಗಿರುವುದು ಶ್ಲಾಘನೀಯ. ವನ್ಯ ಜೀವಿಗಳ ಸಂರಕ್ಷಣೆಗೆ ಕಾಳಜಿ ವಹಿಸಿರುವುದು ಗಮನಾರ್ಹ.

ಹಲವು ಪರಿಸರ ಪ್ರೇಮಿಗಳು ಹಾಗೂ ಪ್ರಾಣಿ ಪ್ರಿಯರು ವಿವಿಧ ಸ್ಥಳಗಳಿಂದ ಪ್ರೇರಣೆ ನೀಡಿದ್ದಾರೆ. ಅಭಿನಂದನಗಳನ್ನು ಸಲ್ಲಿಸಿದ್ದಾರೆ ಎಂದು ಖಡ್ಗ ಸಂಘದ ರಾಜ್ಯಾಧ್ಯಕ್ಷ ರಘು ಮಾಹಿತಿ ನೀಡಿದರು. ಇದಕ್ಕೆ ಕಾರಣವಾದ ಕನ್ನಡಪ್ರೆಸ್.ಕಾಮ್ ಗೆ ಅವರು ಧನ್ಯವಾದ ತಿಳಿಸಿದರು.

ಇದನ್ನೂ ಓದಿ : ಕೋತಿ ಉಳಿಸಲು ಟೆಕ್ಕಿಗಳ ಅಭಿಯಾನ

2 COMMENTS

LEAVE A REPLY

Please enter your comment!
Please enter your name here