ಎಚ್ಚರದಿಂದಿದ್ದರೆ ಷೇರುಪೇಟೆ ನೀಡುವುದು ಸಂಪತ್ತಿನ ಮೂಟೆ

0
388

ಷೇರುಪೇಟೆಯ ಇಂದಿನ ದಿನಗಳಲ್ಲಿ ಯಾವ ನಿಖರವಾದ ನಿಯಮಗಳಿಲ್ಲದೆ ಚಲಿಸುತ್ತಿರುವಂತಿದೆ. ವಹಿವಾಟುದಾರರು ನಡೆಸುವ ಚಟುವಟಿಕೆಯೇ ಅಂತಿಮ ಎಂಬಂತಿದೆ. ಷೇರುಪೇಟೆಗಳು ರಭಸದ ಏರಿಳಿತ ಪ್ರದರ್ಶಿಸುತ್ತಿರುವುದರ ಹಿಂದೆ ಯಾವುದೇ ಪ್ರಮುಖ ಕಾರಣಗಾಳಿಲ್ಲದಂತಿದೆ. ಆಂತರಿಕ ಸಾಧನೆ ಮೀರಿ ಸೂಚ್ಯಂಕಗಳು ಏರಿಕೆ ಕಂಪನಿಗಳ ಸಾಧನೆಗೂ ಷೇರಿನ ದರ ಏರಿಕೆಗೂ ಸಂಬಂಧವಿಲ್ಲದಂತಿದೆ. ಕೆಳಗಿನ ಉದಾಹರಣೆ ಈ ಅಂಶ ದೃಢಪಡಿಸುತ್ತದೆ.

ಆಂಧ್ರಾ ಪೇಪರ್‌ ಲಿಮಿಟೆಡ್‌ ಕಂಪನಿಯ ಷೇರಿನ ಬೆಲೆ ಗುರುವಾರದಂದು ಸುಮಾರು ೩೬ ರೂಪಾಯಿಗಳಷ್ಠು ಕುಸಿತಕ್ಕೊಳಗಾಯಿತು ಅದಕ್ಕೆ ಕಾರಣ ಕಂಪನಿಯ ಪ್ರವರ್ತಕರು ತಮ್ಮ ಭಾಗಿತ್ವದ ಶೇ.10 ರಷ್ಟನ್ನು ಆಫರ್‌ ಫಾರ್‌ ಸೇಲ್‌ ಮೂಲಕ ಮಾರಾಟಮಾಡಲಿರುವ ಅಂಶ ಪ್ರಕಟವಾಗಿದ್ದು. ಅಂದು ರೂ.194 ರ ಸಮೀಪಕ್ಕೆ ಕುಸಿದಿದ್ದ ಷೇರಿನ ಬೆಲೆ ಸೋಮವಾರ ದಿಢೀರನೆ ಶೇ.20 ರಷ್ಟರ ಏರಿಕೆಯಿಂದ ಮಿಂಚಿದೆ. ಅಂದರೆ ಕಂಪನಿಯ ಆಂತರಿಕ ಸಾಧನೆಗೆ ಸಂಬಂಧವಿಲ್ಲದ ಸುದ್ದಿಗೆ ಪೇಟೆ ಪ್ರದರ್ಶಿಸಿದ ರೀತಿ ಫಂಡಮೆಂಟಲ್ಸ ಆಧಾರದ ಹೂಡಿಕೆದಾರರಿಗೆ ಗೊಂದಲಮೂಡಿಸುವುದು ಸಹಜ. ಮೂರೇ ದಿನದಲ್ಲಿ ರೂ.60 ರಷ್ಟರ ಏರಿಕೆ ಕಂಡಿದೆ. ಕೇವಲ ವ್ಯಾಲ್ಯೂ ಪಿಕ್‌ ಅಧಾರದ ಮೇಲೆ ಕೊಂಡವರಿಗೆ ಉತ್ತಮ ಲಾಭದ ಅವಕಾಶ ಪೇಟೆ ಒದಗಿಸಿದೆ ಈ ಸಂದರ್ಭ ಹೇಗೆ ಅವಕಾಶ ಸೃಷ್ಟಿಸಿಕೊಟ್ಟಿದೆ ಎಂದರೆ S B I Mutual Fund ತನ್ನ ವಿವಿಧ ಯೋಜನೆಗಳಡಿಯಲ್ಲಿ ಒಟ್ಟು 31,33,000 ಷೇರುಗಳನ್ನು ಈ ಆಫರ್‌ ಫಾರ್‌ ಸೇಲ್‌ ಮೂಲಕ ಖರೀದಿಸಿದೆ. ಸೋಮವಾರ ನಡೆದ ವಹಿವಾಟಿನಲ್ಲಿ ಶೇ.28.07 ರಷ್ಟು ಮಾತ್ರ ವಿಲೇವಾರಿ ವಹಿವಾಟಾಗಿರುವುದು. ಪೇಟೆಯಲ್ಲಿ ನಡೆಯುತ್ತಿರುವ ವಿಲೇವಾರಿ ರಹಿತ ಚಟುವಟಿಕೆಗೆ ಹಿಡಿದ ಕನ್ನಡಿಯಾಗಿದೆ.

ಈ ಕಂಪನಿಯ ಇತ್ತೀಚಿನ ವಹಿವಾಟಿನ ರೀತಿ ಈ ಕೆಳಕಂಡಂತಿದೆ.

ಈ ಷೇರಿನಲ್ಲಿ ಒಂದು ವಾರದ ಹೂಡಿಕೆ ಶೇ.2.7 ರಷ್ಟು ಏರಿಕೆ ಕಂಡಿದೆ.
ಒಂದು ತಿಂಗಳಲ್ಲಿನ ಹೂಡಿಕೆ ಶೇ.45 ರಷ್ಟು ಏರಿಕೆ ಕಂಡಿದೆ.
ಆರು ತಿಂಗಳಲ್ಲಿ ಈ ಕಂಪನಿ ಹೂಡಿಕೆ ಶೇ.18.67ರಷ್ಟು ಹಾನಿ ಕಂಡಿದೆ.
ಒಂದು ವರ್ಷದ ಹೂಡಿಕೆಯು ಶೇ.40.57 ರಷ್ಟು ಹಾನಿ ಕಂಡಿದೆ.

ಅಂದರೆ ಇತ್ತೀಚಿನ ದಿನಗಳಲ್ಲಿ ಈ ಷೇರು ಹೆಚ್ಚು ಹೆಚ್ಚು ಏರಿಕೆ ಕಂಡಿದೆ ಎಂಬುದು ಗಮನಿಸಬೇಕಾದ ಅಂಶ. 2011 ರ ನಂತರದಲ್ಲಿ ಈ ಕಂಪನಿ ಯಾವುದೇ ಡಿವಿಡೆಂಡ್‌ ನೀಡಿರದ ಈ ಕಂಪನಿ ಎಂತಹ ಮಟ್ಟದ ಲಾಭ ಗಳಿಸಿಕೊಟ್ಟಿದೆ. ಇಂತಹ ಸ್ಮಾಲ್‌ ಕ್ಯಾಪ್‌ ಕಂಪನಿಗಳಲ್ಲಿ ಚಟುವಟಿಕೆ ನಡೆಸುವಾಗ ಅಪಾಯದ ಮಾಟ್ಟವನ್ನರಿತು ನಡೆಸುವುದು ಒಳಿತು.

ಬಂಡವಾಳ ಸುರಕ್ಷತೆಗೆ ವ್ಯಾಲ್ಯೂ ಪಿಕ್‌ – ಪ್ರಾಫಿಟ್‌ ಬುಕ್‌ ಗಳು ಜೊತೆ ಜೊತೆ ಇರಲೇಬೇಕು

Previous articleಭಾರತದ ಘಾತಕ್ ಕಮಾಂಡೋಗಳಿಗೆ ಬೆದರಿದ ಚೀನಾ
Next articleಮಳೆಗಾಲದಲ್ಲಿ ಅರಳುವ ರುಚಿ ಮೊಗ್ಗುಗಳು
ಕೆ ಜಿ ಕೃಪಾಲ್
ಕೆ ಜಿ ಕೃಪಾಲ್ ಆರ್ಥಿಕ ಚಿಂತಕ ಮತ್ತು ಷೇರು ಪೇಟೆ ತಜ್ಞ. ಬೆಂಗಳೂರು ಷೇರು ವಿನಿಮಯ ಕೇಂದ್ರದ ಹಲವು ಸುಧಾರಣ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಷೇರು ಮಾರುಕಟ್ಟೆಯ ಆಳ . ಅಗಲಗಳನ್ನು ಸುಲಭವಾಗಿ ವಿವರಿಸಿ ಸರಳ ಕನ್ನಡದಲ್ಲಿ ಬರೆಯುವ ಕೆಲವೇ ಕೆಲವು ಬರಹಗಾರರಲ್ಲಿ ಇವರೂ ಒಬ್ಬರು. ನಾಡಿನ ಹಲವು ಮುಂಚೂಣಿ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ನಾಡಿನ ಜನತೆಗೆ ಚಿರಪರಿಚಿತ. ಟೀವಿ ಚಾನಲ್ ಗಳು ಸೇರಿದಂತೆ ನೇರ ಸಂಪರ್ಕ ಕಾರ್ಯಕ್ರಮಗಳ ಮೂಲಕ ಷೇರು ಮಾರುಕಟ್ಟೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ.

LEAVE A REPLY

Please enter your comment!
Please enter your name here