ಪ್ರಶಾಂತ್ ನೀಲ್ ಹಿಂದೆ ಬಿದ್ದಿರುವ ತೆಲುಗು ನಿರ್ಮಾಪಕರು

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಜನ ಪ್ರತಿಭಾವಂತ ನಿರ್ದೇಶಕರಿದ್ದಾರೆ, ಆದರೆ ಕೆಲವರ ಹೆಸರು ಮಾತ್ರ ಎಲ್ಲ ಭಾಷೆಯ ಇಂಡಸ್ಟ್ರಿಗೂ ಗೊತ್ತಾಗುತ್ತದೆ. ಆ ಸಾಲಿಗೆ ಕೆಜಿಎಫ್‌ ಖ್ಯಾತಿಯ ಪ್ರಶಾಂತ್‌ ನೀಲ್‌ ಹೆಸರು ಸೇರಿದೆ ಏಕೆಂದರೆ ಇವರ ಕಾಲ್‌ಶೀಟ್‌ಗಾಗಿ ಪಕ್ಕದ ತೆಲುಗು ಚಿತ್ರರಂಗದಿಂದ ಭಾರಿ ಡಿಮಾಂಡ್‌ ಬಂದಿದೆ.

ಸಾಮಾನ್ಯವಾಗಿ ನಾಯಕರ ಹುಟ್ಟು ಹಬ್ಬಕ್ಕೆ ಪುಟಗಟ್ಟಲೇ ಜಾಹಿರಾತು ನೀಡುವ ನಿರ್ಮಾಪಕರು ನಿರ್ದೇಶಕ ಪ್ರಶಾಂತ್‌ ನೀಲ್‌ ಅವರ ಹುಟ್ಟು ಹಬ್ಬಕ್ಕೆ ಕನ್ನಡದ ಖ್ಯಾತ ದಿನಪತ್ರಿಕೆಗಳಿಗೆ ಪೂರ್ಣ ಪುಟ, ಅರ್ಧಪುಟಗಳ ಜಾಹಿರಾತನ್ನು ನೀಡಿದೆ. ಅದು ಯಾರ್ಯಾರು ಅಂತೀರಾ.  ‘ರಂಗಸ್ಥಳಂ’ , ‘ಶ್ರೀಮಂತುಡು’, ‘ಜನತಾ ಗ್ಯಾರೇಜ್‌’ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ, ಸದ್ಯ ಅಲ್ಲು ಅರ್ಜುನ್‌ ನಟನೆಯ ‘ಪುಷ್ಪ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವ ಮೈತ್ರಿ ಮೂವಿ ಮೇಕರ್ಸ್‌ ಮತ್ತು ‘ಭರತ್‌ ಅನೇ ನೇನು’ , ‘ಆರ್‌ಆರ್‌ಆರ್‌’ ಸಿನಿಮಾ ನಿರ್ಮಾಪಕ ಡಿವಿವಿ ಪ್ರೊಡಕ್ಷನ್‌ ಹೌಸ್‌ಗಳಿಂದ ಈ ಜಾಹಿರಾತು ಪ್ರಕಟವಾಗಿದೆ. ಅಲ್ಲದೆ ಸೆನ್ಸೇಶನಲ್ ಡೈರೆಕ್ಟರ್‌, ಬಾಕ್ಸ್‌ ಆಫೀಸ್‌ ಮಾನ್ ಸ್ಟರ್‌, ಹೀಗೆ ಸಿನಿಮಾ ಹೀರೋಗಳಿಗೆ ಕರೆಯಬಹುದಾದ ಟೈಟಲ್‌ಗಳನ್ನು ನಿರ್ದೇಶಕರೊಬ್ಬರಿಗೆ ನೀಡಲಾಗಿದೆ.

ಹೌದು ಸದ್ಯ ಕೆಜಿಎಫ್‌ ಚಾಪ್ಟರ್‌-2 ಚಿತ್ರದ ಕೆಲಸದಲ್ಲಿ ಬಿಝಿ ಇರುವ ಪ್ರಶಾಂತ್‌ ನೀಲ್‌ ಯಾವುದೇ ಸಿನಿಮಾವನ್ನು ಒಪ್ಪಿಕೊಂಡಿಲ್ಲ ಎಂಬ ಮಾಹಿತಿಯನ್ನು ಅವರ ಅಪ್ತರು ಹೇಳುತ್ತಾರೆ. ಅವರು ಒಪ್ಪಿಕೊಳ್ಳದೆ ಅಷ್ಟು ದೊಡ್ಡ ನಿರ್ಮಾಣ ಸಂಸ್ಥೆಗಳು ಜಾಹಿರಾತು ಯಾಕೆ ಕೊಡುತ್ತವೆ ಎಂಬ ಮಾತು ಗಾಂಧಿನಗರದಲ್ಲಿ ಕೇಳಿಬರುತ್ತಿದೆ. ಚಾಪ್ಟರ್‌-2 ಆದ ಮೇಲೆ ಶ್ರೀಮುರುಳಿ ಜತೆ ಸಿನಿಮಾ ಮಾಡುತ್ತಾರೆ ಎಂದು ಆದರೆ ಈಗ ಜೂ . ಎನ್‌ಟಿಆರ್‌ಗೆ ಮಾಡುತ್ತಾರೆ ಎಂದು ಸುದ್ದಿಯಾಗಿದೆ. ಇದರ ಬೆನ್ನಲ್ಲೆ ಜಾಹಿರಾತುಗಳು ಬಂದಿರುವುದು, ನೀಲ್‌ ಈ ವರ್ಷ ತೆಲುಗು ಇಂಡಸ್ಟ್ರಿಗೆ ಎಂಟ್ರಿ ಕೊಡುವುದು ಪಕ್ಕಾ ಎನ್ನುವ ಮಾತುಗಳು ಸಹ ಕೇಳಿ ಬರುತ್ತಿವೆ. ಒಬ್ಬ ನಿರ್ದೇಶಕನ ಬಗ್ಗೆ ಇಷ್ಟೆಲ್ಲಾ ಸುದ್ದಿಗಳು ಇದೇ ಮೊದಲಬಾರಿಗೆ ಹಬ್ಬಿದ್ದು, ಇದು ಕನ್ನಡದ ಹೆಮ್ಮೆ ಎಂದು ಸಹ ಹೇಳಲಾಗುತ್ತಿದೆ.

1 COMMENT

  1. ಓದಿ ಬಹಳ ಖುಷಿ ಮತ್ತು ಗರ್ವ….ಆದರೆ ಇದು ಮೊದಲು ಅಲ್ಲಾ ಕನ್ನಡದ ಶ್ರೇಷ್ಠ ನಿರ್ದೇಶಕ ಪುಟ್ಟಣ್ಣ ನವರ ಚಿತ್ರಗಳಿಗೂ ಇಡಿ ಭಾರತ ಚಿತ್ರ ತಂಡ ಕಾತುರತೆಯಿಂದ ಇರುತ್ತಿದ್ದವು… ಅನ್ನುವುದು ಸ್ಮರಣೀಯ.

    ಒಬ್ಬ ನಿರ್ದೇಶಕನ ಬಗ್ಗೆ ಇಷ್ಟೆಲ್ಲಾ ಸುದ್ದಿಗಳು ಇದೇ ಮೊದಲಬಾರಿಗೆ ಹಬ್ಬಿದ್ದು, ಇದು ಕನ್ನಡದ ಹೆಮ್ಮೆ ಎಂದು ಸಹ ಹೇಳಲಾಗುತ್ತಿದೆ.

LEAVE A REPLY

Please enter your comment!
Please enter your name here