ನಿನ್ನ ಮಡದಿಯ ಪರವಾಗಿ ನಾನಲ್ಲ.. ಯಾರೂ ನಿನ್ನನ್ನ ಕ್ಷಮಿಸೋದಿಲ್ಲ, ಅರ್ಧಕ್ಕೆ ಯಾತ್ರೆ ಮುಗಿಸಿದವನು ನೀನು ಅಂತ

ಇಂದು ನಿಧನರಾದ ಚಿರಂಜೀವಿ ಸರ್ಜಾ ಬಗ್ಗೆ ಅವರ ಬಾಲ್ಯದ ಗೆಳೆಯ ಕನ್ನಡಕ್ಕಾಗಿ ಒಂದನ್ನು ಒತ್ತಿ ಮತ್ತು ದಯವಿಟ್ಟು ಗಮನಿಸಿ ಸಿನಿಮಾ ಖ್ಯಾತಿಯ ಅವಿನಾಶ್ ಷಟಮರ್ಶನ ಅವರ ಆಪ್ತ ಬರಹ

ಚಿರು ಅಂದರೆ ಅವನ ಮುಗ್ಧತೆಗೇ ಫೇಮಸ್! ಇವತ್ತು ಅವನು ಇಲ್ಲ ಅನ್ನುವ ಸುದ್ದಿಯನ್ನು ನನ್ನ ಬುದ್ಧಿ ಒಪ್ಪದೇ ಇರುವಷ್ಟು ಮಂಕು ಕವಿದಿದೆ.
ಸರಳ, ಸಂಯಮ, ಸ್ನೇಹ ಎಲ್ಲದರಲ್ಲೂ ಅವನು ಧಾರಾಳಿ…

ಅವಿನಾಶ್ ಷಟಮರ್ಶನ

ನಾನು ಚಿಕ್ಕ ಹುಡುಗ ಇದ್ದಾಗ ಶಾಲೆಗೆ ರಜಾ ಬಂದರೆ, ಬೆಂಗಳೂರಿಗೆ ಬರ್ತಿದ್ದೆ. ಬೆಂಗಳೂರು ಅಂದರೆ, ಪನ್ನಗನ ಮನೆ. ನನಗೆ ಚೆನ್ನಾಗಿ ನೆನಪಿದೆ ಚಿರು ಹತ್ತಿರ ಪಲ್ಸರ್ 150 ಇತ್ತು. ಕಾದ ಅವನ ಗಾಡಿ ಸೈಲೆನ್ಸರ್ ಗೆ ನಾನು ಕಾಲು ಕೊಟ್ಟು ಸುಟ್ಟು ಕೊಂಡಿದ್ದೆ. ಇದನ್ನು ಗೇಲಿ ಮಾಡಿಕೊಂಡು ಎಲ್ಲರೂ ನಗ್ತಿದ್ದಾಗ ಚಿರು ಅಯ್ಯೋ ಪಾಪ ಅಂತ ಅನುಕಂಪ ತೋರಿಸಿದ್ದ. ಅವನ ಅಂತಃಕರಣ ಮೆರೆದಿದ್ದ!

ನನಗೆ ಬಹಳ ಮರೆವು ಇದೆ ಅಂದುಕೊಂಡಿದ್ದೆ ಆದರೆ ನಿನ್ನ ಅಗಲಿಕೆ ನನ್ನ ನೆನಪಿನ ತೀವ್ರತೆಯನ್ನ ತೋರಿಸ್ತಾ ಇದೆ.

ಮೊದಲ ಪಿಯು ನಲ್ಲಿ ಇದ್ದಾಗ ಚಿರು ಹೋಗ್ತಿದ್ದ ಜಿಮ್ ಗೆ ನಾನೂ ಹೋಗ್ತಿದ್ದೆ. ಧ್ರುವನೂ ಅಲ್ಲೇ ಜಿಮ್ ಮಾಡ್ತಾ ಇದ್ದದ್ದು.ಜಿಮ್ ನಲ್ಲೂ ಅಷ್ಟೇ ನನ್ನ ಸಾಮರ್ಥ್ಯದ ಬಗ್ಗೆ ನನಗೆ ತಿಳಿವಳಿಕೆ ತುಂಬಿದ ಮೊದಲಿಗ ಚಿರು ಅಂತ ಹೇಳಬಹುದು!

ಅವನು ಸಿನಿಮಾ ಮಾಡೋಕಿಂತ ಮೊದಲು ನಾನು ಅವನನ್ನ ಹೇಗೆ ನೋಡಿದ್ದೆ ಅದೇ ನಗು ಮುಖ, ಅದೇ ಪ್ರಸನ್ನತೆ ಹ್ಯಾಪಿ ನ್ಯೂ ಯಿಯರ್ ಸಿನಿಮಾ ಆಡಿಯೋ ಲಾಂಚ್ ನಲ್ಲೂ ನೋಡಿದ್ದೆ. ನಾನು ಅವನನ್ನ ಕಡೆಯದಾಗಿ ನೋಡಿದ್ದು ಅಲ್ಲೇ…..

ನಿನ್ನಲ್ಲಿದ್ದ ಎಷ್ಟೋ ಗುಣಗಳು ನನಗೆ ಹಿಡಿಸಿತ್ತು ಅನ್ನೋದೇ ನನಗೆ ಗೊತ್ತಿರಲಿಲ್ಲ.ನಿಜ ಹೇಳಬೇಕಂದರೆ ಇವತ್ತು ಬೆಳಗ್ಗೆ ಟೀವಿಯಲ್ಲಿ ನಿನ್ನ ಹಾಡು ನೋಡಿದೆ ಕಣೋ… ನನ್ನ ಹಾಡೇ ನಾನು ನೋಡಲ್ಲ, ಟಿ.ವಿ ನೋಡೋದೇ ಇಲ್ಲ….

ನಿನ್ನ ಇಚ್ಛೆಯನ್ನ ನಿಮ್ಮ ಕುಟುಂಬ, ಸ್ನೇಹಿತರು, ನಿನ್ನ ಪರಿವಾರವರು ಪೂರ್ಣಗೊಳಿಸುವ ಸಾಮರ್ಥ್ಯ ನೀನೇ ಕೊಟ್ಟು ಎಲ್ಲರಿಗೂ ವಿದಾಯ ಹೇಳಬೇಕು.

ಕೊನೆಯದಾಗಿ, ನಿನ್ನ ಮಡದಿಯ ಪರವಾಗಿ ನಾನಲ್ಲ ಯಾರೂ ನಿನ್ನನ್ನ ಕ್ಷಮಿಸೋದಿಲ್ಲ, ಅರ್ಧಕ್ಕೆ ಯಾತ್ರೆ ಮುಗಿಸಿದವನು ನೀನು ಅಂತ.

ಇದನ್ನೂ ಓದಿ:ಇಷ್ಟು ಬೇಗ ಹೊರಟು ಹೋಗಲು ಅವಸರ ಏನಿತ್ತು

LEAVE A REPLY

Please enter your comment!
Please enter your name here